ಧಾರವಾಡ (Darvada): ಕಾರ್ಮಿಕ ಸಚಿವ ಸಂತೋಷ್ ಲಾಡ್ (Santhosh Lad) ಅವರ ಮಾನವೀಯ ಕಳಕಳಿಯ ಕೆಲಸಗಳು ಅಬಾಧಿತವಾಗಿ ಮುಂದುವರೆದಿದೆ. ಕಷ್ಟದಿಂದ ನೊಂದಿರುವ ಜನರ ಕಣ್ಣೀರು ಒರೆಸಲು ಸಚಿವ ಲಾಡ್ ಅವರು ಯಾವತ್ತಿಗೂ ಹಿಂದೇಟು ಹಾಕುವುದಿಲ್ಲ ಎಂಬುದಕ್ಕೆ ಮತ್ತೊಂದು ನಿದರ್ಶನವಿದು.

ಧಾರವಾಡದಲ್ಲಿಂದು ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಹೊರಬರುತ್ತಿದ್ದ ಸಚಿವ ಸಂತೋಷ್ ಲಾಡ್ ಅವರ ಬಳಿ ಕಣ್ಣೀರು ಹಾಕುತ್ತ ತನ್ನ ಕಷ್ಟ ಹೇಳಿಕೊಂಡ ಮಹಿಳಾ ಕ್ರೀಡಾ ಪ್ರತಿಭೆ ಒಬ್ಬರಿಗೆ ಸಮಾಧಾನದ ಮಾಡಿ, ಧೈರ್ಯ ಹೇಳಿದ ಸಚಿವರು ಕೂಡಲೇ ತಮ್ಮ ಸಂತೋಷ್ ಲಾಡ್ ಫೌಂಡೇಶನ್ ನ ಆನಂದ್ ಕಲಾಲ್ ಅವರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಸೂಚಿಸಿದರು. ಅಲ್ಲದೇ ಆ ಹುಡುಗಿಯ ಸಹೋದರಿಗೆ ಕೆಲಸ ಕೊಡಿಸುವಂತೆ, ಅಗತ್ಯ ಸಹಾಯ ಮಾಡುವಂತೆ ಸೂಚಿಸಿದರು.

ಸಚಿವ ಸಂತೋಷ್ ಲಾಡ್ ಅವರು ತಮ್ಮ ನಿರಂತರ ಕೆಲಸಗಳ ನಡುವೆಯೂ ಜನತೆಯೊಂದಿಗೆ ಸಮಾಧಾನದಿಂದ ಸ್ಪಂದಿಸುವ ಪರಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗುತ್ತಿದೆ.
#karnataka #daravada #santhoshlad #sportsman #helping





