ರಾಜ್ಯಸಭಾ(Rajya Saba) ಚುನಾವಣೆ(Election) ನಂತರದಲ್ಲಿ ರಾಜ್ಯದಲ್ಲಿ(Karnataka) ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್(Pakistan) ಜಿಂದಾಬಾದ್ ಘೋಷಣೆ ಮೊಳಗಿ ಅದಿನ್ನು ತನಿಖೆ ಹಂತದಲ್ಲಿರುವಾಗ್ಲೇ ಇತ್ತ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಬಾಂಬ್ ಬ್ಲಾಸ್ಟ್(Bomb Blast) ನಡೆದು ಹೋಗಿದೆ. ಇನ್ನೆರಡು ತಿಂಗಳಲ್ಲಿ ಲೋಕಸಭಾ(Loka Saba) ಚುನಾವಣೆ ಇರೋದ್ರಿಂದರ ಇದು ಸಂಪೂರ್ಣ ರಾಜಕೀಯ ತಿರುವ ಪಡೆದುಕೊಳ್ಳೋದ್ರಲ್ಲಿ ಸಂಶಯವೇ ಇಲ್ಲ. ಇದು ಚುನಾವಣೆಯ ಹೊತ್ತಿಗೆ ಇನ್ಯಾವ ದಿಕ್ಕೆಗೆ ತಿರುಗಲಿದ್ಯೋ ಗೊತ್ತಿಲ್ಲ.
ಬಿಜೆಪಿಗೆ ಈ ಎರಡು ವಿಚಾರಗಳು ಚುನಾವಣೆ ಟೈಮಲ್ಲಿ ವರದಾನವಾಗಿ ಪರಿಣಮಿಸಿದ್ದು, ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗೂ ಮತ್ತು ಈ ಬಾಂಬ್ ಬ್ಲಾಸ್ಟ್ ಗೂ ಲಿಂಕ್ ಮಾಡೋ ಪ್ರಯತ್ನ ಮಾಡಿದೆ. ಘಟನೆ ಕುರಿತು ಮಾತನಾಡಿರುವ ಬಿಜೆಪಿ ನಾಯಕರು, ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದಾಗಲೇ ಇಂಥವರನ್ನ ಮಟ್ಟ ಹಾಕಿದ್ರೆ ಇಂದು ಬೆಂಗಳೂರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದ್ರೆ ಕಾಂಗ್ರೇಸ್ ಸರ್ಕಾರದ ನಿರ್ಲಕ್ಷ್ಯ ಮತ್ತು ತುಷ್ಟೀಕರಣದ ಧೋರಣೆಯಿಂದ ಬೆಂಗಳೂರು ಮತ್ತು ರಾಜ್ಯಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ಬಿಂಬಿಸಲು ಹೊರಟಂತಿದೆ.

ಈ ಘಟನೆ ಕುರಿತು ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಹಾದಿಯಾಗಿ ಎಲ್ಲಾ ಬಿಜೆಪಿ ನಾಯಕರು ಇದನ್ನ ಚುನಾವಣಾ ವಿಷಯ ಮಾಡುವ ಪ್ರಯತ್ನ ಮಾಡಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಬೆಂಗಳೂರು ಸೇಫ್ ಇತ್ತು. ದೇಶದ್ರೋಹಿ ಮನಸ್ಥಿತಿಗಳನ್ನ ಮಟ್ಟ ಹಾಕಾಲಾಗಿತ್ತು. ಆದ್ರೆ ಈಗಿನ ಕಾಂಗ್ರೇಸ್ ಸರ್ಕಾರ ಓಟ್ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಮುಸ್ಲಿಂ ಸಮುದಾಯಕ್ಕೆ ಹೆದರಿ ಈ ರೀತಿಯ ದೇಶದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ನೀಡ್ತಿದೆ. ಇದು ತುಷ್ಟೀಕರಣದ ಪರಮಾವಧಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ಸಂದರ್ಭದಲ್ಲಿ, ಅವರ ಬೆಂಬಲಿಗರು ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋ಼ಷಣೆಗಳನ್ನ ಕೂಗಿದಾಗಲೂ ಈ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನಾಮಕಾವಸ್ಥೆಗೆ ತನಿಖೆ ನಡೆಸುವ ಹಾಗೇ ಈ ಸರ್ಕಾರ ನಟನೆ ಮಾಡುತ್ತಿದೆ ಅಷ್ಟೆ. ಸ್ವತಃ ಸಚಿವರೇ ಯಾರೂ ಆ ರೀತಿ ಕೂಗಿಲ್ಲ ಎಂದು ಹೇಳೋ ಮೂಲಕ ದೇಶದ್ರೋಹಿಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅದರ ಪರಿಣಾಮವೇ ಇಂದು ಬೆಂಗಳೂರಿನಲ್ಲಿ ಈ ಬಾಂಬ್ ಬ್ಲಾಸ್ಟ್ ನಡೆಯಲು ಕಾರಣ.. ಅಂದೇ ಆ ದೇಶದ್ರೋಹಿಗಳ ಹೆಡೆಮುರಿಕಟ್ಟಿದ್ದರೆ ಇಂಥ ಕೃತ್ಯ ನಡೆಯುತ್ತಿರಲಿಲ್ಲ . ಹಾಗಾಗಿ ಸಂಪೂರ್ಣ ಈ ದಾಳಿಯ ಜವಾಬ್ದಾರಿಯನ್ನ ಮುಖ್ಯಮೊಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಹೊರಬೇಕು ಮತ್ತು ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
#RajyaSaba #Karnataka #BombBlast #Bangalore #Congress