ಚೊಚ್ಚಲ ಟೆಸ್ಟ್(Test Match) ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ನಿಂದ ಅಬ್ಬರಿಸುತ್ತಿದ್ದ ಯುವ ಬ್ಯಾಟರ್ ಸರ್ಫರಾಜ್ ಖಾನ್(Sarfaraz Khan) ಅವರನ್ನ ರನೌಟ್ ಮಾಡಿಸಿದ್ದಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ಕ್ಷಮಿಯಾಚಿಸಿದ್ದಾರೆ.

ರಾಜ್ಕೋಟ್(Rajkot) ನಲ್ಲಿ ಗುರುವಾರ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಸರ್ಫರಾಜ್ ಖಾನ್ ಪ್ಲೇಯಿಂಗ್ ಇಲವೆನ್ ನಲ್ಲಿ ಆಡುವ ಅವಕಾಶ ಪಡೆದು, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಅಲ್ಲದೇ ಮೊದಲ ಇನ್ನಿಂಗ್ಸ್ನಲ್ಲೇ ಬ್ಯಾಟಿಂಗ್(Batting) ಮಾಡುವ ಅವಕಾಶ ಪಡೆದ ಸರ್ಫರಾಜ್, ಅಬ್ಬರದ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಆದರೆ ಆಕರ್ಷಕ ಅರ್ಧಶತಕ ಬಾರಿಸಿದ್ದ ಸರ್ಫರಾಜ್ ಖಾನ್ ವೈಯಕ್ತಿಕ 66 ರನ್ಗಳಸಿದ್ದ ವೇಳೆ ರನ್ಔಟ್ ಆಗಿ ಪೆವಿಲಿಯನ್ ಸೇರಿದರು.

ಆದರೆ ಚೊಚ್ಚಲ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಮೂಲಕ 66 ಬಾಲ್ ಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್ ಮೂಲಕ ಮಿಂಚಿದರು. ಆದರೆ ಈ ಹಂತದಲ್ಲಿ ಮತ್ತೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ರವೀಂದ್ರ ಜಡೇಜಾ, ಶತಕ ಬಾರಿಸುವ ತವಕದಲ್ಲಿ ಇಲ್ಲದ ರನ್ ಕದಿಯುವ ಪ್ರಯತ್ಕಕ್ಕೆ ಮುಂದಾದ ಪರಿಣಾಮ ಸರ್ಫರಾಜ್ ರನ್ಔಟ್ ಆದರು. ಇದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿ ಇತರೆ ಆಟಗಾರರಲ್ಲಿ ನಿರಾಸೆ ಮೂಡಿಸಿತ್ತು.

ಈ ನಡುವೆ ವೈಯಕ್ತಿಕ ದಾಖಲೆಗಾಗಿ ಉತ್ತಮವಾಗಿ ಆಡುತ್ತಿದ್ದ ಸರ್ಫರಾಜ್ ಖಾನ್ ಅವರನ್ನು ರನ್ಔಟ್ ಮಾಡಿಸಿದ್ದಕ್ಕಾಗಿ ರವೀಂದ್ರ ಜಡೇಜಾ ಅವರ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ತಮ್ಮ ತಪ್ಪನ್ನು ಅರಿತ ಆಲ್ರೌಂಡರ್, ಸರ್ಫರಾಜ್ ಖಾನ್ ಅವರ ಕ್ಷಮೆ ಕೋರಿದಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ “Feeling Bad for Sarfaraz Khan, it was my wrong call, well played” ಎಂದು ಬರೆಯುವ ಮೂಲಕ ಕ್ಷಮೆ ಯಾಚಿಸಿದ್ದಾರೆ.
#TeamIndia #RavindraJadeja #SarfarazKhan #England #Cricket