ಕಾಂಗ್ರೆಸ್ ಎಂಎಲ್ಸಿ ಆಗಿದ್ದ ಜಗದೀಶ್ ಶೆಟ್ಟರ್ (Jagadish shetter) ಕಾಂಗ್ರೆಸ್ ಬಿಟ್ಟು ಮಾತೃ ಪಕ್ಷ ಬಿಜೆಪಿಗೆ (BJP) ವಾಪಸ್ ಆಗಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಪಕ್ಷಕ್ಕೆ ಶೆಟ್ಟರ್ ವಾಪಸ್ ಆದರೂ ದೆಹಲಿಯಲ್ಲೇ ಇದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahald joshi) ಸ್ವಾಗತಕ್ಕೆ ಬಂದಿರಲಿಲ್ಲ. ಆದರೆ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿರುವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿರೋದು ಸಂತೋಷ ಎಂದಿದ್ದಾರೆ. ಶೆಟ್ಟರ್ ಘರ್ ವಾಪ್ಸಿಯಿಂದ ನಾನು ಬಹಳ ಖುಷಿಯಾಗಿದ್ದೇನೆ. ಅವತ್ತು ಶೆಟ್ಟರ್ ಘರ್ ವಾಪ್ಸಿ ಕುರಿತು ನನಗೆ ಹೇಳಿದ್ರು, ಆದರೆ ನನಗೆ ದೊಡ್ಡವರ ಜೊತೆ ಮೀಟಿಂಗ್ ಇತ್ತು. ಹಾಗಾಗಿ ಸೇರ್ಪಡೆ ವೇಳೆ ಹೋಗೋಕೆ ಆಗಿಲ್ಲ. ನಾವು ಈ ಬಾರಿ 28 ಕ್ಕೆ 28 ಕ್ಷೇತ್ರದಲ್ಲೂ ಗೆಲ್ಲಬೇಕು. ಅಕಸ್ಮಾತ್ ಜಗದೀಶ್ ಶೆಟ್ಟರ್ ಸೇರ್ಪಡೆಗೆ ನನ್ನ ವಿರೋಧ ಇಲ್ಲ, ವಿರೋಧ ಇದ್ರೆ ನಾನು ನಿಮಗೆ ಹೇಳುತ್ತಿದ್ದೆ. ನಾನು ಆರು ತಿಂಗಳ ಹಿಂದೆ ವಾಪಸ್ ಬರೋದಾಗಿ ಹೇಳಿದ್ದೆ. ಶೆಟ್ಟರ್ ಬಂದಿರೋದು ಸಂತೋಷ. ಉಳದಿರೋದು ಅವರನ್ನೇ ಕೇಳಿ ಎಂದಿದ್ದಾರೆ.
ಶೆಟ್ಟರ್ ವಾಪಸ್ ಬರುವ ಬಗ್ಗೆ ಸ್ಥಳೀಯ ನಾಯಕರಿಗೆ ಮಾಹಿತಿ ಇತ್ತು. ನಾನು ದೆಹಲಿಯಲ್ಲಿದ್ದೆ, ಅರವಿಂದ ಬೆಲ್ಲದ್ ನನ್ನ ಜೊತೆ ಇರಲಿಲ್ಲ. ಹಿಂದಿನ ದಿನ ಬೆಲ್ಲದ್ ನನ್ನ ಜೊತೆ ಇದ್ರು. ನಮಗೆ ಲಿಂಗಾಯತ ಸೇರಿ ಎಲ್ಲರೂ ಬೇಕು. ಸವದಿ ಅವರಲ್ಲಿ ನಮ್ಮ ವೈಚಾರಿಕತೆ ರಕ್ತವಿದೆ. ಅವರು ಬಂದರೂ ಸ್ವಾಗತ ಕೋರುತ್ತೇನೆ. ಧಾರವಾಡ ಲೋಕಸಭೆ ಚುನಾವಣೆ ಟಿಕೆಟ್ ವಿಚಾರದ ಬಗ್ಗೆ ಕೇಳಿದ್ದಕ್ಕೆ ಜೋಶಿ ಬಿಟ್ರೆ ಮತ್ತಿನ್ನೇನು..? ಎನ್ನುವ ಮೂಲಕ ನಾನೇ ಅಭ್ಯರ್ಥಿ ಎಂದಿದ್ದಾರೆ ಪ್ರಹ್ಲಾದ್ ಜೋಶಿ. ಟಿಕೆಟ್ ವಿಚಾರವಾಗಿ ಜೋಶಿ ಸ್ಪರ್ಧೆ ಕೇಳಿದ್ರೆ, ಅವರೇ ರೀ ಅವರನ್ನ ಬಿಟ್ಟು ಯಾರು ಎಂದಿದ್ದಾರೆ ಶಾಸಕ ಅರವಿಂದ್ ಬೆಲ್ಲದ್. ಪ್ರಹ್ಲಾದ್ ಜೋಶಿಗೆ ಕೇಳಿದ ಪ್ರಶ್ನೆಗೆ ಮದ್ಯ ಪ್ರವೇಶ ಮಾಡಿ ಯಾವ ಚರ್ಚೆ ಇಲ್ಲ, ಸಾಹೇಬರೇ ಅಭ್ಯರ್ಥಿ ಎಂದಿದ್ದಾರೆ ಬೆಲ್ಲದ್. ನಮ್ಮ ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ. ಅಭ್ಯರ್ಥಿ ಹೆಸರು ಘೋಷಣೆ ಮುನ್ನ ನಾನು ಏನೂ ಮಾತಾಡಲ್ಲ. ಆದ್ರೆ ನಾನು ಚುನಾವಣೆ ತಯಾರಿ ನಡೆಸಿದ್ದೇನೆ. ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದಿದ್ದಾರೆ ಜೋಶಿ.
ಇನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಕೂಡಾ ಒರಿಜನಲ್ ಬಿಜೆಪಿ ನಾಯಕ. ಅವರು ಬಿಜೆಪಿಗೆ ಬರಬಹುದು. ಇವತ್ತು ಜಗದೀಶ್ ಶೆಟ್ಟರ್ ಕಾರ್ಯಕಾರಿಣಿಯಲ್ಲಿ ಸಿಕ್ಕಿದ್ರು. ವೆಲಕಮ್ ಬ್ಯಾಕ್ ಎಂದು ಹೇಳಿದ್ದೇನೆ. ರಾಜ್ಯ ಸರ್ಕಾರ ಐದು ವರ್ಷ ನಡೆಸಬೇಕು. ಆದ್ರೆ ಅವರು ಐದು ವರ್ಷ ಸರ್ಕಾರ ಸರಿಯಾಗಿ ನಡೆಸ್ತಿಲ್ಲ ಅನ್ನೋ ಆಕ್ರೋಶ ಇದೆ. ಜನರಿಗೂ ಆಕ್ರೋಶ ಇದೆ ಎಂದಿದ್ದಾರೆ. ಇನ್ನು ಪ್ರಹ್ಲಾದ ಜೋಶಿ ಅವರೇ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದಿರುವ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಹೈಕಮಾಂಡ್ ನಿರ್ಧಾರವನ್ನು ನಾವು ಸ್ವಾಗತ ಮಾಡ್ತೀವಿ. ಆದರೆ ಧಾರವಾಡ ಲೋಕಸಭೆ ಟಿಕೆಟ್ ವಿಚಾರದಲ್ಲಿ ಯಾವ ಉಹಾಪೋಹ ಇಲ್ಲ. ನಮ್ಮ ನಾಯಕರು ಜೋಶಿ ಅವರು. ಅವರೇ ನಮ್ಮ ಲೋಕಸಭೆ ಅಭ್ಯರ್ಥಿ ಎಂದಿದ್ದಾರೆ ಅರವಿಂದ್ ಬೆಲ್ಲದ್. ಟಿಕೆಟ್ ಅವರಿಗೆ ಸಿಗಲಿದೆ ದೊಡ್ಡ ಅಂತರದಿಂದ ಅವರು ಗೆಲ್ಲಲ್ಲಿದ್ದಾರೆ. ಹಾಗಾಗಿ ಯಾವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಜಗದೀಶ್ ಶೆಟ್ಟರ್ ನಿಮ್ಮ ನಾಯಕರು ಅಲ್ವಾ..? ಅನ್ನೋ ಪ್ರಶ್ನೆಗೆ ನಾನು ಹಾಗೆ ಹೇಳಿಲ್ಲ. ಆದರೆ ನಾನು ಹೇಳೋದ ಪ್ರಹ್ಲಾದ್ ಜೋಶಿ ಬಿಟ್ಟರೆ ಯಾರೂ ಇಲ್ಲ ಎಂದಿದ್ದಾರೆ ಬೆಲ್ಲದ್. ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಗೆ ನನಗೆ ಅಸಮಾಧಾನ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಶೆಟ್ಟರ್ ಘರ್ ವಾಪ್ಸಿ ನಂತರ ಯಾವ ಬಣಗಳು ಆಗೋದಿಲ್ಲ. ಶೆಟ್ಟರ್ ವಾಪಸ್ ಬರೋ ಬಗ್ಗೆ ನಾವೇ ಯೋಚನೆ ಮಾಡಿರಲಿಲ್ಲ. ಬರ್ತೀದಾರೆ ಅಂತಾ ನಾಯಕರು ಹೇಳಿದ್ರು, ಸ್ವಾಗತ ಮಾಡಿದ್ದೇವೆ ಅಷ್ಟೆ ಎನ್ನುವ ಮೂಲಕ ಶೆಟ್ಟರ್ ಮರಳಿ ಬಿಜೆಪಿಗೆ ಬಂದಿದ್ದರ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಶೆಟ್ಟರ್ಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎನ್ನುವ ಮಾತುಗಳ ನಡುವೆ ಪ್ರಹ್ಲಾದ್ ಜೋಶಿ ಟೀಂ ಆಕ್ಟೀವ್ ಆಗಿದ್ದು, ಪ್ರಹ್ಲಾದ್ ಜೋಶೊಯವರೇ ನಮ್ಮ ನಾಯಕರು. ಅವರಿಗೇ ಟಿಕೆಟ್ ಸಿಗಲಿದ್ದು, ಬೇರೆ ಯಾರೂ ನಾಯಕರಿಲ್ಲ ಎನ್ನುವ ಮೂಲಕ ಅಸಮಾಧಾನ ಹೊರಹಾಕುತ್ತಿದೆ.
ಕೃಷ್ಣಮಣಿ