ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಗೆ ಮರಳಿ ಕರೆತಂದಿದ್ದು, ವಿಜಯಪುರ ಟಿಕೆಟ್ ಕೊಡಿಸಿದ್ದು, ಸಚಿವರಾಗಿದ್ದು ಎಲ್ಲವೂ ಯಡಿಯೂರಪ್ಪನವರ ಕೃಪಾಕಟಾಕ್ಷದಿಂದಲೇ ಎಂದು ಹೊನ್ನಾಳಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಈ ಕುರಿತು ಬೆಂಗಳೂರಲ್ಲಿ ಮಾತನಾಡಿದ ಅವರು, ” ಪಕ್ಷದಿಂದ ಉಚ್ಚಾಟನೆ ಆದಾಗ ಬಿಜೆಪಿಗೆ ಯತ್ನಾಳ್ ಅವರನ್ನು ತೆಗೆದುಕೊಳ್ಳಬಾರದು ಎಂದು ಸಾಕಷ್ಟು ಜನ ಹೇಳಿದರು. ಯಡಿಯೂರಪ್ಪನವರೇ ಯತ್ನಾಳ್ ಅವರನ್ನು ಮತ್ತೆ ಸೇರಿಸಿಕೊಳ್ಳಲು ಪಟ್ಟು ಹಿಡಿದರು. ಆದರೆ, ಯತ್ನಾಳ್ ಯಾಕೆ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಮಾತಾಡುತ್ತಾರೆ ಗೊತ್ತಾಗ್ತಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಸಂಘರ್ಷ ಮಾಡಬೇಕು, ಆಡಳಿತ ಪಕ್ಷದ ವಿರುದ್ಧ ಸಂಘರ್ಷ ಮಾಡಬೇಕು, ಯಡಿಯೂರಪ್ಪ ಮೇಲೆ, ರಾಜ್ಯಾಧ್ಯಕ್ಷ ಮೇಲೆ ಸಂಘರ್ಷ ಮಾಡಿದ್ರೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ, ಪಕ್ಷಕ್ಕೆ ಬಿಟ್ಟವರನ್ನ ವಾಪಸ್ ಕರೆತಂದಿದ್ದು ಯಡಿಯೂರಪ್ಪ ಅವರು, ಹಾಗೆಯೇ ವಿಜಯಪುರದಲ್ಲಿ ಟಿಕೆಟ್ ಕೊಡುವುದು ಯಡಿಯೂರಪ್ಪ ಅನ್ನೋದು ಮರಿಬಾರದು ಎಂದು ಯತ್ನಾಳ್ಗೆ ಕಿವಿ ಮಾತು ಹೇಳಿದರು.






