ಅದಾನಿ ಸಮೂಹದ ಬಗ್ಗೆ ಸಂಸತ್ನಲ್ಲಿ ಪ್ರಶ್ನೆ ಕೇಳೋಕೆ ಹಣ ಪಡೆದಿರೋ ಆರೋಪ ಹೊತ್ತಿರುವ ಸಂಸದೆ ಮಹುವಾ ಮೊಯಿತ್ರ ಪಾರ್ಲಿಮೆಂಟ್ನ ನೈತಿಕ ಸಮಿತಿಗೆ ಪತ್ರ ಬರೆದಿದ್ದಾರೆ.
ಹೌದು, ಅದಾನಿ ಗ್ರೂಪ್ಸ್ ಬಗ್ಗೆ ಸಂಸತ್ ನಲ್ಲಿ ಮಾತಾಡಲು ಹಿರನಂದನಿ ಗ್ರೂಪ್ ಬಳಿ ಸಂಸದೆ ಮಹುವ ಮೊಯಿತ್ರ ಹಣ ಪಡೆದಿದ್ದಾರೆ. ಇದಕ್ಕೆ ಆಧಾರ ಇದೆ ಅಂತ ಸುಪ್ರೀ ಕೋರ್ಟ್ ಲಾಯರ್ ʻಜೈ ಅನಂತ್ ದೆಹದ್ರಾಯ್ʼ ಹೇಳಿಕೆ ನೀಡಿದ್ದರು. ಇದೇ ವಿಚಾರವಾಗಿ ಈಗ ಪಾರ್ಲಿಮೆಂಟ್ನ ನೈತಿಕ ಸಮಿತಿಗೆ ಮಹುವಾ ಮೊಯಿತ್ರ ಪತ್ರ ಬರೆದಿದ್ದಾರೆ.
ಅಲ್ಲದೆ ಮಹುವ ಅವರು ಸಂಸತ್ನ ಲಾಗ್ ಇನ್ ಡೀಟೇಲ್ಸನ್ನ ನನಗೆ ಕೊಟ್ಟಿದ್ರು ಅಂತ ಉದ್ಯಮಿ ದರ್ಶನ್ ಹಿರನಂದನಿ ಸಹ ಅಫಿಡವಿಟ್ ಸಲ್ಲಿಸಿದ್ದರು. ಈ ಇಬ್ಬರನ್ನು ಈಗ ಮತ್ತೊಮ್ಮೆ ಕ್ರಾಸ್ ಎಕ್ಸಮೈನ್ ಮಾಡ್ಬೇಕು ಅಂತ ಮಹುವಾ ಮೊಯಿತ್ರಾ ಅವರು ಸಮಿತಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಪತ್ರದ ಪ್ರತಿಯನ್ನ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದಲ್ಲದೆ, “ಸಂಸತ್ನಲ್ಲಿ ಬೃಹತ್ ಮೆಜಾರಿಟಿ ಎಂಜಾಯ್ ಮಾಡ್ತಿರೊ ಮೋದಿ ಸರ್ಕಾರ ನೈತಿಕ ಸಮಿತಿಯನ್ನ ದುರ್ಬಳಕೆ ಮಾಡ್ಕೊಂಡರು ಆಶ್ಚರ್ಯ ಇಲ್ಲ. ಇಂತಹ ಅಪರಾಧಗಳ ವಿಚಾರಣೆಯನ್ನ ಕಾನೂನು ಜಾರಿ ಏಜೆನ್ಸಿಗಳಿಗೆ ಕೊಟ್ಟರು ತಪ್ಪಾಗಲ್ಲ” ಅಂದಿದ್ದಾರೆ.