• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ದಲಿತರು – ದಲಿತ ರಾಜಕಾರಣದ ವರ್ತಮಾನದ ಸವಾಲುಗಳು | ಭಾಗ – 4

Any Mind by Any Mind
October 17, 2023
in ಅಂಕಣ, ಅಭಿಮತ, ಕರ್ನಾಟಕ
0
ದಲಿತರು – ದಲಿತ ರಾಜಕಾರಣದ ವರ್ತಮಾನದ ಸವಾಲುಗಳು | ಭಾಗ – 4
Share on WhatsAppShare on FacebookShare on Telegram

ದಿನಾಂಕ 1 ಅಕ್ಟೋಬರ್‌ 2023ರಂದು ನಂಜನಗೂಡಿನ ಅಂಬೇಡ್ಕರ್‌ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕೆಎಸ್‌ಡಿಎಸ್‌ಎಸ್) ಅಧ್ಯಯನ ಶಿಬಿರದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ:-

ADVERTISEMENT

ನಾ ದಿವಾಕರ ಅವರ ಬರಹ

ದಲಿತ ರಾಜಕಾರಣದ ವರ್ತಮಾನದ ಸವಾಲುಗಳು

ಒಂದು ವಿಷಯ ಸವಾಲು ಆಗುವುದು ಯಾವಾಗ ? ಮೊದಲು ನಮ್ಮ ಮನಸ್ಸಿಗೆ ನಾಟುವ ಒಂದು ವಿಚಾರ ಅಥವಾ ವಿಷಯ ಸಹಜವಾಗಿಯೇ ಆರಂಭದಲ್ಲಿ ಜಿಜ್ಞಾಸೆಯಾಗಿ ಕಾಡುತ್ತದೆ. ಈ ಜಿಜ್ಞಾಸೆಯನ್ನು ಭೇದಿಸುವ ನಮ್ಮ ಪ್ರಯತ್ನದಲ್ಲಿ ಅದು ಪ್ರಶ್ನೆಯಾಗಿ ಎದ್ದು ನಿಲ್ಲುತ್ತದೆ. ಚಿಂತನ-ಮಂಥನಗಳ ಮೂಲಕ ಈ ಪ್ರಶ್ನೆಗಳನ್ನು ಶೋಧಿಸುವುದರ ಮೂಲಕ ನಾವು ಉತ್ತರಗಳನ್ನು ಕಂಡುಕೊಳ್ಳುತ್ತೇವೆ. ಜಟಿಲ-ಸಂಕೀರ್ಣ ಪ್ರಶ್ನೆಗಳನ್ನು ಭೇದಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುತ್ತೇವೆ. ಈ ಪ್ರಕ್ರಿಯೆಯನ್ನೇ ವಿಶಾಲ ಸಮಾಜದ ನೆಲೆಯಲ್ಲಿ ಅಥವಾ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿನಲ್ಲಿ ಒರೆಹಚ್ಚಿ ನೋಡಿದಾಗ ನಮಗೆ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯದಿರುವುದು ಕಂಡುಬರುತ್ತದೆ. ನಮ್ಮ ಜಿಜ್ಞಾಸೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯುತ್ತವೆ. ಏಕೆ ? ಹೇಗೆ ? ಏತಕ್ಕಾಗಿ ? ಯಾವಾಗ ? ಅಥವಾ ಏಕೆ ಹೀಗಾಯಿತು ? ಹೀಗೇಕೆ ಮಾಡಬಾರದಿತ್ತು ? ಎಡವಿದ್ದೆಲ್ಲಿ-ಎಡತಾಕಿದ್ದೆಲ್ಲಿ ? ಮುಂತಾದ ಪ್ರಶ್ನೆಗಳು ಎಡಬಿಡದೆ ಕಾಡುತ್ತವೆ. ಯಾವುದೇ ಸಮಾಜಮುಖಿ ಮನಸ್ಥಿತಿಯಲ್ಲಿ ಈ ಪ್ರಶ್ನೆಗಳು ಕಾಡಲೇಬೇಕು. ಇಂತಹ ಕಾಡುವ ಪ್ರಶ್ನೆಗಳು, ಬಗೆಹರಿಯದ ಜಿಜ್ಞಾಸೆಗಳು ನಮ್ಮ ಮುಂದೆ ವರ್ತಮಾನದ ಸವಾಲುಗಳಾಗಿ ನಿಲ್ಲುತ್ತವೆ.

ದಲಿತ ರಾಜಕಾರಣದ ವರ್ತಮಾನದ ಸವಾಲುಗಳು ಏನು ಎಂದು ಯೋಚಿಸುವಾಗ ಈ ಎಳೆಯನ್ನು ನಾವು ಗಮನಿಸಬೇಕಿದೆ. ಈವರೆಗೂ ಮಂಡಿಸಿದ ರಾಜಕಾರಣದ ಮೂರು ಆಯಾಮಗಳಲ್ಲೂ ನಮಗೆ ಈ ಬಗೆಹರಿಯದ ಜಿಜ್ಞಾಸೆಗಳು, ಪ್ರಶ್ನೆಗಳು ಕಂಡುಬರುತ್ತವೆ. ಪ್ರಯತ್ನಗಳು ಇಲ್ಲವೆಂದೇನಿಲ್ಲ ಆದರೆ ಸಾಲದು ಅಥವಾ ಅಪೂರ್ಣ ಎನ್ನುವುದು ಕಟು ವಾಸ್ತವ. ಈ ಆತ್ಮವಿಮರ್ಶೆಯೊಂದಿಗೇ ದಲಿತ ರಾಜಕಾರಣದ ಭವಿಷ್ಯದ ದಿಕ್ಸೂಚಿಗಳನ್ನು ನಾವು ಗ್ರಹಿಸಬೇಕಿದೆ. ಈ ಸವಾಲುಗಳನ್ನೂ ಮೇಲೆ ಹೇಳಿದಂತೆಯೇ ಅಧಿಕಾರ ರಾಜಕಾರಣ-ಸಾಮಾಜಿಕ ರಾಜಕಾರಣ ಮತ್ತು ಸಾಂಸ್ಕೃತಿಕ-ರಾಜಕಾರಣದ ನೆಲೆಗಳಲ್ಲೇ ನಾವು ಪರಾಮರ್ಶಿಸಬೇಕಿದೆ. ನಮ್ಮ ಮುಂದಿರುವ ಯಾವ ಸವಾಲುಗಳೂ ಹೊಸದಾಗಿ ಹುಟ್ಟಿಕೊಂಡಿರುವುದಲ್ಲ. ಹೊಸದಾಗಿ ಕಾಣುವ ಸವಾಲುಗಳೂ ಸಹ ರೂಪಾಂತರಗೊಂಡ ಗತಕಾಲದ ಸಿಕ್ಕುಗಳೇ ಆಗಿರುತ್ತವೆ. ರಾಜಕೀಯವಾಗಿ, ಆರ್ಥಿಕವಾಗಿ ಮೇಲ್ನೋಟಕ್ಕೆ ಸವಾಲುಗಳು ನವೀನ ಎನಿಸಿದರೂ, ಆಳದಲ್ಲಿ ಅದರ ಮೂಲ ಚರಿತ್ರೆಯ ನಡಿಗೆಯಲ್ಲೇ ಇರುತ್ತದೆ. ಈವರೆಗಿನ ಹಾದಿಯಲ್ಲಿ ನಾವು ಬಗೆಹರಿಸಲಾಗದೆ ಉಳಿದಿರುವ ಜಟಿಲ-ಸಂಕೀರ್ಣ ಪ್ರಶ್ನೆಗಳೇ ಭವಿಷ್ಯದ ಸವಾಲುಗಳಾಗಿ ನಮ್ಮ ಮುಂದೆ ನಿಂತಿದೆ. ಹಾಗಾಗಿ ಈ ಮುನ್ನ ನಾನು ಪ್ರಸ್ತಾಪಿಸಿದ ವಿಚಾರಗಳನ್ನೇ ಪುನರ್‌ ಮನನ ಮಾಡಿಕೊಳ್ಳುತ್ತಾ ನಾವು ಎಡವಿರುವುದೆಲ್ಲಿ ಅಥವಾ ವಿಫಲವಾಗಿರುವುದೆಲ್ಲಿ ಎಂದು ಗುರುತಿಸುತ್ತಾ, ಮುನ್ನಡೆಯ ಹಾದಿಯನ್ನು ಸರಿಪಡಿಸಿಕೊಳ್ಳುವುದು ಇವತ್ತಿನ ದಲಿತ ರಾಜಕಾರಣದ ಮುಂದಿನ ಸವಾಲು.

ಅಂಬೇಡ್ಕರ್‌ ಅವರು, ಇವತ್ತು ನಾವು ದಲಿತರು ಎನ್ನುವ ಜನಸಮೂಹವನ್ನು Depressed Classes, ದಮನಿತ ವರ್ಗಗಳು ಎಂದು ಕರೆಯುತ್ತಿದ್ದರು. ಪ್ರತಿಯೊಂದು ಜಾತಿಯೂ ಒಂದು enclosed class, ಸುತ್ತುವರಿಯಲ್ಪಟ್ಟ ವರ್ಗ ಎಂದು ಅಂಬೇಡ್ಕರ್‌ ವ್ಯಾಖ್ಯಾನಿಸಿರುವುದನ್ನು, ಹಾಗೆಯೇ ಭಾರತದಲ್ಲಿರುವುದು ಶ್ರಮ ವಿಭಜನೆಯಲ್ಲ ಶ್ರಮಿಕರ ವಿಭಜನೆ ಎಂಬ ಅಂಬೇಡ್ಕರರ ಮಾತುಗಳನ್ನೂ ಇಂದಿಗೂ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಸುತ್ತುವರಿಯಲ್ಪಟ್ಟ ವರ್ಗಗಳಿಗೆ ಅಂದರೆ ಭಾರತದ ಶೋಷಿತ ತಳ ಸಮುದಾಯಗಳಿಗೆ ರಾಜಕೀಯ ಅಧಿಕಾರ ಗಳಿಸುವುದರಿಂದಲೇ ಜಾತಿ ವ್ಯವಸ್ಥೆಯ ಸಂಕೋಲೆಗಳನ್ನು ತೊಡೆದುಹಾಕಲು ಸಾಧ್ಯ ಎಂದು ಅಂಬೇಡ್ಕರ್‌ ನಂಬಿದ್ದರು. ಇಲ್ಲಿ ನಾವು “ ರಾಜಕೀಯ ಅಧಿಕಾರ ” ಮತ್ತು “ ಅಧಿಕಾರ ರಾಜಕಾರಣ” ಇವೆರಡರ ನಡುವೆ ಇರುವ ವ್ಯತ್ಯಾಸವನ್ನು ಮನಗಾಣುವುದು ಅಗತ್ಯ.

ರಾಜಕೀಯ ಸಿದ್ಧಾಂತದ ಕೊರತೆ

ʼಅಧಿಕಾರ ರಾಜಕಾರಣʼ ಎನ್ನುವುದು ಆಳ್ವಿಕೆಯಲ್ಲಿ ಕೊನೆಗೊಳ್ಳಬಹುದಾದ ಒಂದು ಗುರಿ. ಇದನ್ನು ಸಾಧಿಸಬೇಕೆಂದರೆ ವರ್ತಮಾನದ ರಾಜಕೀಯ ವಾತಾವರಣದಲ್ಲಿ ಹೊಂದಾಣಿಕೆಯ ರಾಜಕಾರಣ ಅವಶ್ಯವಾಗಿ ಬೇಕಾಗುತ್ತದೆ. ಹಾಗೆಯೇ ಭಾರತದ ಆಡಳಿತ ವ್ಯವಸ್ಥೆ ಮತ್ತು ಆಳ್ವಿಕೆಯ ಬೇರುಗಳು ಪೋಷಿಸಿರುವ ಶೋಷಕ ಬಂಡವಾಳಶಾಹಿ-ಪಿತೃಪ್ರಧಾನ ಧೋರಣೆಯೊಂದಿಗೆ ರಾಜಿ ಮಾಡಿಕೊಂಡು, ಆಳ್ವಿಕೆಗೆ ಮುಂದಾಗಬೇಕಾಗುತ್ತದೆ. ಈ ಎರಡೂ ಧೋರಣೆಗಳನ್ನು ನಾಶಪಡಿಸಿ, ಅಂಬೇಡ್ಕರ್‌ ಆಶಿಸಿದ ಸಮಾನತೆಯ ಸಮಾಜವನ್ನು ಕಟ್ಟಬೇಕಾದರೆ ಕ್ರಾಂತಿಕಾರಿ ಬದಲಾವಣೆಯತ್ತ ಯೋಚಿಸಬೇಕಾಗುತ್ತದೆ. ಈ ಅಧಿಕಾರ ರಾಜಕಾರಣದ ಪ್ರಯತ್ನಗಳು ಎಷ್ಟರ ಮಟ್ಟಿಗೆ ಶೋಷಿತರನ್ನು ಶೋಷಣೆ ಮುಕ್ತರನ್ನಾಗಿಸುವಲ್ಲಿ ಯಶಸ್ವಿಯಾಗಿದೆ ಎನ್ನುವುದು ಚರ್ಚೆಗೊಳಗಾಗಬೇಕಾದ ವಿಚಾರ.

ಆದರೆ ʼರಾಜಕೀಯ ಅಧಿಕಾರʼ ಎನ್ನುವುದು ಆಳ್ವಿಕೆಯ ಚೌಕಟ್ಟುಗಳಿಂದಾಚೆಗೆ , ಜನಸಾಮಾನ್ಯರ ನಡುವೆ, ಸಂಸದೀಯ ಮಾರ್ಗಗಳ ಮೂಲಕ ಹಾಗೂ ಸಾಂವಿಧಾನಿಕ ಪ್ರಯತ್ನಗಳ ಮೂಲಕ ಗಳಿಸಬಹುದಾಗಿದೆ. ಶಾಸನಸಭೆಗಳಿಂದಾಚೆಗೂ ರಾಜಕೀಯ ಅಧಿಕಾರವನ್ನು ಶೋಷಿತ ಸಮುದಾಯಗಳಿಗೆ ನೀಡುವ ಒಂದು ಸಾಮಾಜಿಕ ವ್ಯವಸ್ಥೆಯನ್ನು ನಾವು ಚುನಾವಣೆಗಳ ಮೂಲಕ, ಮತದಾನದ ಮೂಲಕ, ಪ್ರಜಾಸತ್ತಾತ್ಮಕ ಹೋರಾಟಗಳ ಮೂಲಕ ಗಳಿಸಲು ಸಾಧ್ಯವಾಗುತ್ತದೆ. ಚುನಾಯಿತ ಪ್ರತಿನಿಧಿಗಳನ್ನು ಸಂವಿಧಾನದ ನಿಯಮಗಳಿಗೆ ಕಟ್ಟಿಹಾಕುವ ಹಾಗೂ ನಿರ್ಬಂಧಿಸುವ ನಿರಂತರ ಹೋರಾಟಗಳ ಮೂಲಕ ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದೆ. ದಲಿತ ಚಳುವಳಿಯ ಐದು ದಶಕಗಳ ಇತಿಹಾಸವನ್ನು ಮೆಲುಕು ಹಾಕುವಾಗ ನಮಗೆ ಇಲ್ಲಿ ಹಲವು ವೈಫಲ್ಯಗಳು ಕಾಣುತ್ತವೆ. ಸಾಂವಿಧಾನಿಕ ಹಕ್ಕುಗಳನ್ನು ಸಂಪಾದಿಸಲು ಅಥವಾ ಸವಲತ್ತುಗಳನ್ನು ಪಡೆಯಲು “ ಅಧಿಕಾರ ರಾಜಕಾರಣದೊಡನೆ ” ರಾಜಿ ಮಾಡಿಕೊಳ್ಳುವ ಒಂದು ಪ್ರವೃತ್ತಿ ದಲಿತ ಚಳುವಳಿಯ ವಿಘಟನೆಗೆ ಕಾರಣವಾಗಿರುವುದಷ್ಟೇ ಅಲ್ಲದೆ ತಳಮಟ್ಟದಲ್ಲಿ ದಲಿತ ಪ್ರಜ್ಞೆಯನ್ನು ಹಂತಹಂತವಾಗಿ ನಿಷ್ಕ್ರಿಯಗೊಳಿಸುತ್ತಾ ಬಂದಿದೆ.

ಐದು ದಶಕಗಳಷ್ಟು ಹಿಂದಕ್ಕೆ ನೋಡಿದಾಗ ಕರ್ನಾಟಕದ ದಲಿತ ಚಳುವಳಿ ಒಮ್ಮೆಲೆ ರಾಜ್ಯವ್ಯಾಪಿಯಾಗಿ ಭುಗಿಲೆದ್ದು ಶೋಷಿತ ಸಮುದಾಯಗಳನ್ನು ಹೋರಾಟದ ಸಾಗರವನ್ನಾಗಿ ಮಾಡಿದ ಸಂದರ್ಭದಲ್ಲಿ ಈ ಆಂದೋಲನಗಳಿಗೆ ನಾಯಕತ್ವ ನೀಡಿದ್ದು ದಲಿತ ಸಮುದಾಯದೊಳಗಿದ್ದ ಕಲಿತ ವರ್ಗ. ಸಾಮಾಜಿಕವಾಗಿ-ಶೈಕ್ಷಣಿಕವಾಗಿ ಕೊಂಚ ಮಟ್ಟಿಗೆ ಆರ್ಥಿಕವಾಗಿ ಮೇಲ್‌ಚಲನೆಯನ್ನು ಕಂಡಿದ್ದ ಒಂದು ವರ್ಗ. ಸಾಹಿತಿಗಳು, ಕಲಾವಿದರು, ಬೌದ್ಧಿಕ ವಲಯದ ಪರಿಚಾರಕರು ಹಾಗೂ ನಗರೀಕರಣದ ಪರಿಚಯದೊಂದಿಗೆ ತಮ್ಮ ಗ್ರಾಮೀಣ ಹಿನ್ನೆಲೆಯ ಅನುಭವಗಳೊಂದಿಗೆ ದಲಿತ ಸಮುದಾಯಗಳ ಏಳಿಗೆಯನ್ನು ಬಯಸಿದವರು. ಭಾರತದ ಜಾತಿ ವ್ಯವಸ್ಥೆ ಹಾಗೂ ಅರೆ ಊಳಿಗಮಾನ್ಯ-ಪಿತೃಪ್ರಧಾನ ವ್ಯವಸ್ಥೆಯ ಕ್ರೂರ ಬಾಹುಗಳಲ್ಲಿ ಬಂಧಿಯಾಗಿ, ಆಗ ತಾನೇ ತೆರೆದುಕೊಳ್ಳುತ್ತಿದ್ದ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಮಾರುಕಟ್ಟೆ ಕ್ರೌರ್ಯಕ್ಕೆ ಬಲಿಯಾಗುತ್ತಿದ್ದ ಗ್ರಾಮೀಣ ಶ್ರಮಜೀವಿಗಳು ಅಂದಿನ ನಾಯಕತ್ವವನ್ನು ವಹಿಸಿಕೊಳ್ಳಲಿಲ್ಲ. ಆದರೆ ಈ ಕೊರತೆಯು ದಲಿತ ಚಳುವಳಿಯ ಮುನ್ನಡೆಯನ್ನಾಗಲೀ, ಸಾಧನೆಗಳನ್ನಾಗಲೀ ಯಾವುದೇ ರೀತಿಯಲ್ಲೂ ಬಾಧಿಸಲಿಲ್ಲ ಎನ್ನುವುದು ವಾಸ್ತವ. ಆದರೆ ಭೂಮಿಯನ್ನೇ ನಂಬಿ ಬದುಕುವ ಆದರೆ ಭೂ ಸಂಬಂಧಗಳನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದ ಶೋಷಿತ ಸಮುದಾಯಗಳ ಅಪಾರ ಜನಸಂಖ್ಯೆಯಿಂದ ನಾಯಕತ್ವ ಹೊರಹೊಮ್ಮಲಿಲ್ಲ ಎನ್ನುವುದೂ ಸತ್ಯ. ಇಂದಿಗೂ ಅಂತಹ ಮುಂಚೂಣಿ ನಾಯಕತ್ವ ವಿರಳವಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಲ್ಲವೇ ?

ಅಂದಿನಿಂದ ಇಂದಿನವರೆಗೂ ದಲಿತರಿಗೆ ಭೂಮಿಯೇ ಪ್ರಧಾನ ಪ್ರಶ್ನೆಯಾಗಿ ಕಾಡುತ್ತಿರುವುದನ್ನು ಗಮನಿಸಿದಾಗ, ದಲಿತ ಚಳುವಳಿ 1980-90ರ ದಶಕಗಳ ನಂತರ ಭೂ ಹೋರಾಟಗಳಿಂದ ವಿಮುಖವಾಗಿದ್ದು ಏಕೆ ಎಂಬ ಪ್ರಶ್ನೆ ನಮ್ಮನ್ನು ಕಾಡದಿರುವುದಿಲ್ಲ. ಭೂಮಿಯಿಂದ ಬೇರ್ಪಟ್ಟ ಶೋಷಿತ ಸಮುದಾಯಗಳ ಅವಕಾಶವಂಚಿತ ಜನತೆ ನಗರಗಳಲ್ಲಿ ವಲಸಿಗರಾಗಿ, ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವ ಯಂತ್ರಗಳಾಗಿ, ಸಣ್ಣಪುಟ್ಟ ನಗರಗಳಲ್ಲಿ ದುಡಿಮೆಯ ಕೈಗಳಾಗಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಯಿತು. ಈ ಪ್ರಕ್ರಿಯೆಯಲ್ಲೇ ಬಹುಪಾಲು ಶ್ರಮಿಕರು ಹಿಂದುತ್ವ ರಾಜಕಾರಣದ ಕಾಲಾಳುಗಳಾಗಿ, ಕಾವಲುಪಡೆಗಳಾಗಿ ಅಂಬೇಡ್ಕರರ ಆಶಯಕ್ಕೆ ವಿಮುಖರಾಗಿ ನಡೆದಿದ್ದನ್ನು ಇಂದಾದರೂ ಗುರುತಿಸಬೇಕಿದೆ. ಅತ್ತ ಸಾಮಾಜಿಕ ಮೇಲ್‌ ಚಲನೆಯೂ ಇಲ್ಲದೆ ಇತ್ತ ಸಾಂಸ್ಕೃತಿಕ ಮುಂಚಲನೆಯೂ ಇಲ್ಲದೆ ನಗರೀಕರಣಕ್ಕೊಳಗಾದ ಶೋಷಿತರ ಅಪಾರ ಜನಸ್ತೋಮ ಬಂಡವಾಳಶಾಹಿ-ನವಉದಾರವಾದ-ಕಾರ್ಪೋರೇಟ್‌ ಮಾರುಕಟ್ಟೆ ಹಾಗೂ ಇದಕ್ಕೆ ಪೂರಕವಾಗಿ ರೂಪುಗೊಂಡ ಹಿಂದುತ್ವ ರಾಜಕಾರಣದ ಹಿಂಬಾಲಕರಾಗಿದ್ದು ಈಗ ಇತಿಹಾಸ.

ಸವಾಲುಗಳ ದೊಡ್ಡ ಸಾಗರ

ದಲಿತ ರಾಜಕಾರಣದ ವರ್ತಮಾನದ ಸವಾಲುಗಳನ್ನು ಗುರುತಿಸುವಾಗ ನಮಗೆ ಬೃಹತ್ತಾಗಿ ಕಾಣಬೇಕಿರುವುದು ಈ ನವ ಉದಾರವಾದ ಮತ್ತು ಬಂಡವಾಳಶಾಹಿ ಆರ್ಥಿಕತೆಯ ಕಬಂಧ ಬಾಹುಗಳು. ಆದಿವಾಸಿ/ಬುಡಕಟ್ಟು ಸಮುದಾಯಗಳನ್ನೂ ಒಳಗೊಂಡಂತೆ ನಾವು ದಲಿತ ರಾಜಕಾರಣವನ್ನು ನೋಡುವುದೇ ಆದರೆ ನವ ಉದಾರವಾದ ಸೃಷ್ಟಿಸುತ್ತಿರುವ ಕಾರ್ಪೋರೇಟ್‌ ಪ್ರಪಂಚವು ಹೇಗೆ ನಮ್ಮ ನಡುವಿನ ಸಾಂಸ್ಕೃತಿಕ ನೆಲೆಗಳನ್ನು, ಸಾಮಾಜಿಕ ಕೊಂಡಿಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎನ್ನುವುದು ನಮ್ಮ ಮುಂದಿನ ಪ್ರಥಮ ಸವಾಲಾಗಿ ಕಾಣಬೇಕಿದೆ. ಶಿಕ್ಷಣ ಆರೋಗ್ಯ ಮತ್ತು ಉದ್ಯೋಗ ವಲಯದಲ್ಲಿ , ಔದ್ಯಮಿಕ-ಔದ್ಯೋಗಿಕ ಕ್ಷೇತ್ರದಲ್ಲಿ ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಎಲ್ಲ ಮಾರ್ಗಗಳನ್ನೂ ಆಕ್ರಮಿಸಿರುವ ಬಂಡವಾಳಶಾಹಿಯು ಬಲಪಂಥೀಯ ಬಹುಸಂಖ್ಯಾವಾದದ ನೆರವಿನೊಂದಿಗೆ ಧಾವಿಸುತ್ತಿದೆ. ಪ್ರಜಾಪ್ರಭುತ್ವದ ಎಲ್ಲ ಸ್ತಂಭಗಳನ್ನೂ ಶಿಥಿಲಗೊಳಿಸುತ್ತಾ, ಸಾಂಸ್ಕೃತಿಕ ಲೋಕವನ್ನೂ ಆಕ್ರಮಿಸಿಕೊಂಡು, ರಂಗಭೂಮಿಯಂತಹ ಸ್ವಾಯತ್ತ ನೆಲೆಗಳನ್ನೂ ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳಲು ಕಾರ್ಪೋರೇಟ್‌ ಮಾರುಕಟ್ಟೆ ಸಜ್ಜಾಗುತ್ತಿದೆ. ಹಾಗಾಗಿಯೇ ಶೋಷಿತ ಸಮುದಾಯಗಳಿಗೆ ಶಿಕ್ಷಣ ಒಂದು ಮರೀಚಿಕೆಯಾಗುತ್ತಿದೆ. ಉದ್ಯೋಗ ಮಾಯಾಜಿಂಕೆಯಂತೆ ಕಾಡುತ್ತಿದೆ. ಭ್ರಮಾಧೀನ ಮಿಲೆನಿಯಂ ಜನಸಂಖ್ಯೆಯು ಇತ್ತ ಇತಿಹಾಸವನ್ನೂ ಅರಿಯದೆ ಅತ್ತ ವರ್ತಮಾನವನ್ನೂ ಅರ್ಥಮಾಡಿಕೊಳ್ಳದೆ ನವ ಉದಾರವಾದ ಮತ್ತು ಮತೀಯವಾದದ ಬಲಪಂಥೀಯ ತಾತ್ವಿಕ ನೆಲೆಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ

ಈ ಮಿಲೆನಿಯಂ ಜನಸಂಖ್ಯೆಯನ್ನು (21ನೆಯ ಶತಮಾನದ ಶಿಶುಗಳು) ಅಂದರೆ 20-30 ವರ್ಷದ ವಯೋಮಾನದ ಯುವ ಸಮೂಹವನ್ನು ಭ್ರಮಾಲೋಕದಿಂದ ಹೊರತರಬೇಕಿದೆ. ಹಾಗೆಯೇ ಭವಿಷ್ಯದ ಪೀಳಿಗೆಗೆ ಸುಸ್ಥಿರ ಬದುಕನ್ನು ರೂಪಿಸಲು ಬೇಕಾದ ಉದ್ಯೋಗಾವಕಾಶಗಳು, ಸಾಂಸ್ಕೃತಿಕ ಭೂಮಿಕೆಗಳನ್ನು ಸಿದ್ಧಪಡಿಸಬೇಕಿದೆ. ಇದು ಸಾಧ್ಯವಾಗಬೇಕಾದರೆ ಇವತ್ತಿನ ನವ ಉದಾರವಾದಿ ಆರ್ಥಿಕತೆಯ ವಿರುದ್ಧ ಹೋರಾಡಬೇಕಿದೆ. ಇಲ್ಲಿ ಮತ್ತೆ ನಮಗೆ ಮಾರ್ಕ್ಸ್‌ವಾದದೊಡನೆ ಮುಖಾಮುಖಿಯಾಗಬೇಕಾಗುತ್ತದೆ. ಅಂಬೇಡ್ಕರ್‌ ಮತ್ತು ಮಾರ್ಕ್ಸ್‌ನನ್ನು ಪರಸ್ಪರ ವಿರೋಧಿ ಧೃವಗಳಲ್ಲಿ ನಿಲ್ಲಿಸಿ Binary ಆಯ್ಕೆಗಳ ಮೂಲಕ ನಿರಾಕರಿಸುವ ಪ್ರಯತ್ನಗಳಿಂದ ಹೊರಬಂದು, ತಾತ್ವಿಕವಾಗಿ ಸ್ವೀಕರಿಸಿ ಅಂಬೇಡ್ಕರ್‌ ಮತ್ತು ಮಾರ್ಕ್ಸ್‌ನ ಅನುಸಂಧಾನ ನಡೆಸುವ ಪ್ರಯತ್ನಗಳು ದಲಿತ ರಾಜಕಾರಣದ ಮತ್ತೊಂದು ಪ್ರಬಲ ಸವಾಲಾಗಿದೆ. ಇದಕ್ಕಾಗಿ ನಾವು ಸ್ವತಃ ನಿರ್ಮಿಸಿಕೊಂಡಿರುವ ಸಿದ್ದಾಂತದ ಬೇಲಿಗಳನ್ನು ತೆಗೆದುಹಾಕಿ, ತಾತ್ವಿಕ ಗೋಡೆಗಳನ್ನು ಕೆಡವಿ, ಸಮ ಸಮಾಜದ ಸಮಾನತೆಯ ನೆಲೆಗಳನ್ನು ಸ್ಥಾಪಿಸಲು ಶ್ರಮಿಸಬೇಕಿದೆ.

ವರ್ತಮಾನದ ದೃಷ್ಟಿಯಿಂದ, ಭವಿತವ್ಯದ ದೃಷ್ಟಿಯಿಂದ ಉತ್ತರ ಕಂಡುಕೊಳ್ಳಲಾಗದ ಅನೇಕ ಪ್ರಶ್ನೆಗಳು ನಮ್ಮೆದುರು ಇನ್ನೂ ಇರುವುದೇ ಆದರೆ ಅವೆಲ್ಲವೂ ಇವತ್ತಿನ ಸವಾಲುಗಳೆಂದೇ ಪರಿಗಣಿಸಬೇಕಾಗುತ್ತದೆ. ಆರಂಭದಲ್ಲಿ ಉಲ್ಲೇಖಿಸಿದ ಅಂಕಿಅಂಶಗಳು ಮತ್ತು ಆನಂತರ ಚರ್ಚಿಸಿದ ದಲಿತ ರಾಜಕಾರಣದ ಮೂರು ಆಯಾಮಗಳಲ್ಲಿ ನೀವು ಗುರುತಿಸಬಹುದಾದ ಎಲ್ಲ ವೈಫಲ್ಯಗಳೂ ಇಂದಿನ ಸವಾಲುಗಳಾಗುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ ಈ ಹಲವು ಪ್ರಶ್ನೆಗಳಿಗೆ, ಸವಾಲುಗಳಿಗೆ ನಾವು ಉತ್ತರ ಶೋಧಿಸಬೇಕಿದೆ :-

ಸಂವಿಧಾನ ನೀಡಿರುವ ಪ್ರತಿರೋಧದ ಹಕ್ಕುಗಳೂ ಶಿಥಿಲವಾಗುತ್ತಿರುವುದನ್ನು ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ? ಭೂ ಹೋರಾಟಗಳು ಏಕೆ ನಮ್ಮ ಆದ್ಯತೆಯಾಗುತ್ತಿಲ್ಲ ? ಶ್ರಮಿಕರ ಬದುಕನ್ನೇ ಕಸಿಯುವ ಕರಾಳ ಕಾರ್ಮಿಕ ಕಾಯ್ದೆಗಳು ನಮ್ಮನ್ನೇಕೆ ಕಾಡುತ್ತಿಲ್ಲ ? ಮೀಸಲಾತಿಯೇ ಮುಂತಾದ ಸಾಂವಿಧಾನಿಕ ಹಕ್ಕು/ಸವಲತ್ತುಗಳು ಲಭ್ಯವಾಗುತ್ತಿದ್ದರೂ ತಳಮಟ್ಟಕ್ಕೆ ಏಕೆ ತಲುಪುತ್ತಿಲ್ಲ ? ಈ ಸವಲತ್ತುಗಳ ಫಲಾನುಭವಿಗಳು ಏಕೆ ತಾವು ಬಿಟ್ಟುಬಂದ ಕಡೆ ಹಿಂದಿರುಗಿ ನೋಡುತ್ತಿಲ್ಲ ? ಮೇಲು ಕೀಳುಗಳನ್ನು ದಾಟಬಹುದಾದ ನಮ್ಮ ಮನಸ್ಥಿತಿಗಳು ಎಡ-ಬಲವನ್ನು ಏಕೆ ದಾಟಲಾಗುತ್ತಿಲ್ಲ ? “ ಅನ್ಯರನ್ನು” ಸೃಷ್ಟಿಸುವ ಮೂಲಕ ಸಮಾಜವನ್ನು ವಿಭಜಿಸಿ, ತಳಸಮುದಾಯಗಳ ನಡುವೆಯೂ ದ್ವೇಷದ ಗೂಡುಗಳನ್ನು ಕಟ್ಟುತ್ತಿರುವ ಮತೀಯ ರಾಜಕಾರಣವನ್ನು ತಳಸಂಸ್ಕೃತಿಯ ನೆಲೆಯಿಂದಲೇ ಏಕೆ ಹಿಮ್ಮೆಟ್ಟಿಸಲಾಗುತ್ತಿಲ್ಲ ? ಒಳಗೊಳ್ಳುವ ಸಂಸ್ಕೃತಿಯನ್ನು (Inclusive culture) ಪೋಷಿಸಬೇಕಾದ ಅಂಬೇಡ್ಕರ್‌ವಾದ ರಾಜಕೀಯ ನೆಲೆಯಲ್ಲಿ ಹೊರಗಿಡುವ ಸಂಸ್ಕೃತಿಗೆ (Culture of Exclusion) ಏಕೆ ಬಳಕೆಯಾಗುತ್ತಿದೆ ? ಅಸ್ಪೃಶ್ಯತೆ-ಮಹಿಳಾ ದೌರ್ಜನ್ಯ-ಮರ್ಯಾದೆಗೇಡು ಹತ್ಯೆ-ಅತ್ಯಾಚಾರ ಮುಂತಾದ ನಡವಳಿಕೆಗಳು ಏಕೆ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಲಾಗುತ್ತಿಲ್ಲ ? ಒಂದು ಶ್ರೇಷ್ಠ ಸಂವಿಧಾನದ ಅಡಿಯಲ್ಲೇ ಆಳ್ವಿಕೆಯನ್ನು ನಡೆಸಲಾಗುತ್ತಿದ್ದರೂ ಆದಿವಾಸಿಗಳನ್ನೂ ಒಳಗೊಂಡಂತೆ ಮಹಿಳೆಯರು-ದಲಿತ ಸಮುದಾಯಗಳು ದೌರ್ಜನ್ಯ-ತಾರತಮ್ಯ-ಅಸಮಾನತೆಯ ನೆಲೆಗಳಲ್ಲಿ ಬಹಿಷ್ಕೃತ ಭಾವನೆಯಿಂದ ಬದುಕುತ್ತಿದ್ದಾರೆ ? ಶೋಷಿತರ ಆಹಾರದ ಹಕ್ಕು ಏಕೆ ದಾಳಿಗೊಳಗಾಗುತ್ತಿದೆ ? ಜಾತಿ ವಿನಾಶದ ಮಾತಿರಲಿ, ಜಾತಿ ಪ್ರಜ್ಞೆಯ ವಿನಾಶಕ್ಕೂ ಏಕೆ ನಾವು ಮುಂದಾಗುತ್ತಿಲ್ಲ ?

ಈ ಎಲ್ಲ ಸವಾಲುಗಳನ್ನು ದಲಿತ ರಾಜಕಾರಣದ ಮೂರು ಆಯಾಮಗಳ ನಡುವೆ ಇಟ್ಟು ನಾಲ್ಕನೆಯ ಆಯಾಮವಾಗಿ ನೋಡಿದರೆ ಬಹುಶಃ ನಿಮ್ಮೊಳಗಾಗುವ ಚಿಂತನ-ಮಂಥನದ ಪ್ರಕ್ರಿಯೆ ಭವಿಷ್ಯದಲ್ಲಿ ಉತ್ತಮ ಫಲ ನೀಡಬಹುದು ಎಂದು ಆಶಿಸುತ್ತೇನೆ. ಎಲ್ಲರಿಗೂ ಶುಭವಾಗಲಿ.

ಜೈ ಭೀಮ್‌ – ಇನ್‌ಕ್ವಿಲಾಬ್‌ ಜಿಂದಾಬಾದ್

(ಸುಮಾರು 75 ನಿಮಿಷಗಳ ಭಾಷಣದಲ್ಲಿ ಮಂಡಿಸಿದ ವಿಚಾರಧಾರೆಯನ್ನು, ಜಿಜ್ಞಾಸೆಗಳನ್ನು ಲೇಖನ ರೂಪಕ್ಕೆ ಇಳಿಸಲಾಗಿದೆ. ವಿಷಯ ಮಂಡನೆಯ ನಂತರ ಶಿಬಿರಾರ್ಥಿಗಳೊಡನೆ ನಡೆದ ಸಂವಾದ-ವೈಯುಕ್ತಿಕ ಚರ್ಚೆಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸೇರಿಸಲಾಗಿದೆ. ಶಿಬಿರದಲ್ಲಿದ್ದ ದಲಿತ ಚಳುವಳಿಯ ಯುವ ಸಮೂಹದ ನಡುವೆ ವಿಚಾರ ಮಂಥನವಾಗಲಿ ಎಂಬ ದೃಷ್ಟಿಯಿಂದ ಮಂಡಿಸಲಾಗಿರುವ ಈ ವಿಚಾರಗಳು ಪ್ರಶ್ನಾತೀತವೇನಲ್ಲ, ಚರ್ಚಾತೀತವೂ ಅಲ್ಲ ಎಂಬ ವಿಶ್ವಾಸದೊಂದಿಗೆ ಭಾಷಣವನ್ನು ಲೇಖನ ರೂಪಕ್ಕೆ ಇಳಿಸಿದ್ದೇನೆ.)

-೦-೦-೦-

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ರೈತರಿಗೆ 5 ತಾಸು ನಿರಂತರ ವಿದ್ಯುತ್‌ ಒದಗಿಸಲು ಬದ್ಧ:ಇಂಧನ ಸಚಿವ ಕೆ.ಜೆ.ಜಾರ್ಜ್‌

Next Post

ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಅಕ್ಟೋಬರ್ 19 ರಂದು ತೆರೆಗೆ

Related Posts

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
0

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್ಖರ್ಗೆ ಭಾಗಿ - ಏವಿಯೇಷನ್ ನಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದ ಪ್ರಿಯಾಂಕ್ https://youtu.be/hWOHlkSh63g ParisAirShow ನಲ್ಲಿ ಭಾರತ ಮತ್ತು ವಿಶೇಷವಾಗಿ...

Read moreDetails

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

June 17, 2025
Next Post
ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಅಕ್ಟೋಬರ್ 19 ರಂದು ತೆರೆಗೆ

ಬಹು ನಿರೀಕ್ಷಿತ "ಘೋಸ್ಟ್" ಚಿತ್ರ ಅಕ್ಟೋಬರ್ 19 ರಂದು ತೆರೆಗೆ

Please login to join discussion

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada