ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಕಳೆದ ಒಂದು ದಶಕದಿಂದ ಎಲ್ಲವನ್ನೂ ಕೇಸರಿಕರಣ ಮಾಡುವ ಆರೋಪವಿದೆ. ಈ ಹಿಂದೆ ಮಕ್ಕಳ ಪಠ್ಯದಿಂದ ಹಿಡಿದು ಕ್ರಿಕೆಟ್ ತಂಡದ ಜರ್ಸಿಯವರಿಗೆ ಕೇಸರಿ ಕರಣ ಮಾಡಲು ಹೊರಟಿದ್ದ ಆರೋಪಗಳು ಸಾರ್ವಜನಿಕರ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು. ಇದೀಗ ಇಂತಹ ಆರೋಪಕ್ಕೆ ಪೂರಕ ಎಂಬಂತೆ ಮತ್ತೊಂದು ಮಹತ್ತರ ಮತ್ತು ಜನಪ್ರಿಯ ಯೋಜನೆಯದ ವಂದೇ ಭಾರತ್ ರೈಲು ಯೋಜನೆಯನ್ನು ಇದೀಗ ಕೇಂದ್ರ ಸರ್ಕಾರ ಕೇಸರಿ ಕರಣ ಮಾಡಲು ಹೊರಟಿದೆ

ಹೌದು ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಸ್ವತಃ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಹೊಸ ಒಂದೇ ಭಾರತ ರೈಲುಗಳ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಚೆನ್ನಿನಲ್ಲಿರುವ ಇಂಟೆಗ್ರಾಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ ಅಲ್ಲಿ ತಯಾರಾಗಿರುವ ಹೊಸ ಕೇಸರಿ ಬಣ್ಣದ ವಂದೇ ಭಾರತ ರೈಲುಗಳನ್ನು ವೀಕ್ಷಿಸಿದ ನಂತರ ಅವರು ಈ ಫೋಟೋಗಳನ್ನ ಹಂಚಿಕೊಂಡಿದ್ದಾರೆ

ಸದ್ಯಕ್ಕೆ ನೀಲಿ ಮತ್ತು ಬಿಳಿ ಬಣ್ಣದಲ್ಲಿರುವ ಒಂದೇ ಭಾರತ ರೈಲುಗಳ ಇನ್ನು ಮುಂದೆ ಕೇಸರಿ ಮತ್ತು ಕಡುಬುದು ಬಣ್ಣದಲ್ಲಿ ಬರಲಿವೆ ಅದರಲ್ಲೂ ಹೇಗಿರುವ ನೀಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೇಸರಿ ಬಣ್ಣದಲ್ಲಿ ಇರಲಿ ಎಂಬ ಮಾಹಿತಿ ರೈಲ್ವೆ ಇಲಾಖೆಯ ಮೂಲಗಳಿಂದ ಬಂದಿದೆ
ಆದರೆ ಸದ್ಯದ ಮಟ್ಟಿಗೆ ಸ್ವತಹ ಅಶ್ವಿನಿ ವೈಷ್ಣವ್ ಅವರೇ ಇದೀಗ ಕೇಸರಿ ಬಣ್ಣದ ವಂದೇ ಭಾರತ ರೈಲಿನ ಫೋಟೋಗಳನ್ನ ಹಂಚಿಕೊಂಡಿರುವುದಕ್ಕೆ ಒಂದು ಕಡೆಯಲ್ಲಿ ಸಾರ್ವಜನಿಕರಿಂದ ಮತ್ತು ಬಿಜೆಪಿ ಅನುಯಾಯಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಸಾರ್ವಜನಿಕರು ಹಾಗೂ ವಿರೋಧ ಪಕ್ಷದ ಮುಖಂಡರುಗಳು ಕೇಂದ್ರ ಸರ್ಕಾರದ ಈ ನಿಲುವಿನ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ