ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆ, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ಮಾಡುವ ವಿಚಾರ ಪ್ರಸ್ತಾವ ಮಾಡಿದ್ದರ ಪರಿಣಾಮ, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಸಚಿವ ಆರ್.ಅಶೋಕ್ ಕೂಡ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ʻಹನುಮಂತ ಸುಮ್ಮನೇ ಕೂತ್ತಿದ್ದ. ಅವನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ. ಹನುಮಂತನನ್ನು ಕಟ್ಟಿಹಾಕಲು ಸಾಧ್ಯವೇ. ಇಡೀ ಕಾಂಗ್ರೆಸ್ ಅನ್ನು ಸುಟ್ಟು ಹಾಕುತ್ತಾನೆ ಅಂತ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿ ಬಜರಂಗದಳ ಇದೆ. ಲವ್ ಜಿಹಾದ್ ವಿರುದ್ಧ ಹೋರಾಟ ಮಾಡಲು ಬಜರಂಗದಳ ಇದೆ. ದೇಶ ಪ್ರೇಮಿಗಳು ಬಜರಂಗದಳದವರು. ಕಾಂಗ್ರೆಸ್ನವರು ಇದ್ದಾಗ 60 ಕೇಸ್ಗಳು ಬಿದ್ದಿದ್ದವು. ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಒಂದು ಕೇಸ್ ಇಲ್ಲ ಅಂತ ಆರ್.ಅಶೋಕ್ ಹೇಳಿದ್ರು.