ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಶನಿವಾರ ಬನಶಂಕರಿ ಲೇಔಟ್ನಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿರುವ ಪ್ರಧಾನಿ ಮೋದಿ ನಾಳೆ ಕೂಡ ಬೃಹತ್ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ನಾಳೆ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿಗೆ ಬನಶಂಕರಿ ದೇವಸ್ಥಾನದ ಮಂಡಳಿಯಿಂದ ಸಿಂಹವಾಹಿನಿಯಾಗಿರುವ ಬನಶಂಕರಿ ದೇವಿಯ ಬೆಳ್ಳಿ ಮೂರ್ತಿಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ. ಬಿಜೆಪಿ ಮುಖಂಡರು ಪ್ರಧಾನಿ ಮೋದಿಗೆ ಈ ಉಡುಗೊರೆ ನೀಡಲಿದ್ದಾರೆ.
ಸಿಂಹವಾಹಿನಿಯಾಗಿರುವ ಈ ಬನಶಂಕರಿ ದೇವರ ಮೂರ್ತಿಯು 1900 ಗ್ರಾಂ ತೂಕವನ್ನು ಹೊಂದಿದ್ದು ಎಂಟೂವರೆ ಇಂಚು ಎತ್ತರವಿದೆ ಹಾಗೂ ಐದು ಅಗುಲ ಅಗಲವಿದೆ ಎಂದು ತಿಳಿದು ಬಂದಿದೆ.