ಬೆಳಗಾವಿ: ಟ್ರಾಫಿಕ್ ಜಾಮ್ ಸಮಸ್ಯೆಯಲ್ಲಿ ಸಿಲುಕಿದ ಸಚಿವ ಮುರುಗೇಶ್ ನಿರಾಣಿ ದ್ವಿಚಕ್ರ ವಾಹನದಲ್ಲಿ ಸುವರ್ಣಸೌಧಕ್ಕೆ ತೆರಳುವ ಮೂಲಕ ಗಮನ ಸೆಳೆದಿದ್ದಾರೆ.ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸುವ ಸಲುವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಾರಿಯಲ್ಲಿ ಹೊರಟ್ಟಿದ್ದರು. ಈ ನಡುವೆ ಮಾರ್ಗಮಧ್ಯದಲ್ಲಿ ಸಚಿವರಿಗೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಯಿತು. ಹೀಗಾಗಿ ಕಾರಿನಿಂದ ಇಳಿದ ಸಚಿವ ಮುರುಗೇಶ್ ನಿರಾಣಿ, ದ್ವಿಚಕ್ರ ವಾಹನವನ್ನೇರಿ ಸುವರ್ಣಸೌಧಕ್ಕೆ ತೆರಳಿದರು.
ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರು ಇಂದು ನೇರವಾಗಿ ಸುವರ್ಣ ಸೌಧ ಒಳಗಡೆ ಪ್ರವೇಶಿಸಲು ಮುಂದಾಗಿದ್ದರು. ಭಾರೀ ಸಂಖ್ಯೆಯಲ್ಲಿ ವಕೀಲರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಮಧ್ಯಾಹ್ನ ಸುವರ್ಣ ಸೌಧದಿಂದ ಹೊರಗಡೆ ತೆರಳಿದ್ದ ನಿರಾಣಿ ಮರಳಿ ಅಧಿವೇಶನಕ್ಕೆ ಬರುವಾಗ ಸಂಚಾರ ದಟ್ಟಣೆಯಿಂದಾಗಿ ಕಾರಿನಲ್ಲಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸಚಿವರು ಬೈಕನ್ನು ಏರಿ ಸುವರ್ಣ ಸೌಧಕ್ಕೆ ಮರಳಿದರು.