ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿ ನಾಪತ್ತೆಯಾಗಿದ್ದಕ್ಕೆ ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.
ಶ್ರೀರಾಮಪ್ಪ(69), ಸರೋಜ(55), ಮನೋಜ್(25) ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಸ್ಥರು.
ಈ ಕುರಿತು ಡೆಟ್ ನೋಟ್ ಬರೆದಿರುವ ಕುಟುಂಬಸ್ಥರು ನನ್ನ ಮಗಳು ಅರ್ಚನಾ ನಮ್ಮ ಗ್ರಾಮದ ಅನ್ಯಕೋಮಿನ ಯುವಕ ನಾರಾಯಣಸ್ವಾಮಿ ಜೊತೆ ನನ್ನ ಮಗಳು ಹೊರಟು ಹೋಗಿದ್ದಾಳೆ. ಇದರಿಂದ ನಮ್ಮಗೆ ತುಂಬಾ ನೋವಾಗಿದ್ದು ನಮ್ಮ ಸಾವಿಗೆ ನಮ್ಮ ಮಗಳೇ ಕಾರಣ ಎಂದು ಡೆಟ್ ನೋಟ್ನಲ್ಲಿ ಬರೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಕಲ್ ಚೌಕ್ಸೆ, ಸಿಪಿಐ ನಂದನ್ ಕುಮಾರ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸತೀಶ್ ಮತ್ತು ಶಿಡ್ಲಘಟ್ಟ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.