ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಔರಂಗಾಬಾದ್ನಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು 5 ದಿನಗಳವರೆಗೆ ಮುಚ್ಚಿದೆ. ಸಮಾಧಿಗೆ ಸಂಬಂಧಿಸಿದಂತೆ ನಿರಂತರ ರಾಜಕೀಯ ವಿವಾದ ಎದ್ದ ಹಿನ್ನೆಲೆಯಲ್ಲಿ ಸಮಾಧಿಗೆ ಧಕ್ಕೆಯಾಗದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ದರ್ಗಾ ಸಮಿತಿಯವರು ಸಮಾಧಿಗೆ ಬೀಗ ಹಾಕಲು ಯತ್ನಿಸಿದ್ದರು. ಇದಾದ ಬಳಿಕ ಎಎಸ್ಐ ಈ ಕ್ರಮ ಕೈಗೊಂಡಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ವಕ್ತಾರ ಗಜಾನನ ಕಾಳೆ ಅವರು ಔರಂಗಜೇಬ್ ಸಮಾಧಿಯ ಅಗತ್ಯವಿಲ್ಲ ಮತ್ತು ಜನರು ಅಲ್ಲಿಗೆ ಹೋಗದಂತೆ ಅದನ್ನು ಕೆಡವಬೇಕು ಎಂದು ಮಂಗಳವಾರ ಹೇಳಿದ್ದರು. ಇದಾದ ನಂತರ, ಔರಂಗಾಬಾದ್ನ ಖುಲ್ದಾಬಾದ್ ಪ್ರದೇಶದಲ್ಲಿ ಮಸೀದಿ ಸಮಿತಿಯು ಗೋರಿಗೆ ಬೀಗ ಹಾಕಲು ಪ್ರಯತ್ನಿಸಿತು. ಸಮಾಧಿಯು ಖುಲ್ದಾಬಾದ್ ಪ್ರದೇಶದಲ್ಲಿದೆ. ಈ ಇಡೀ ಪ್ರಸಂಗದ ನಂತರ ಎಎಸ್ಐ ಸಮಾಧಿಯ ಭದ್ರತೆಯನ್ನು ಹೆಚ್ಚಿಸಿದ್ದರು.
“ಹಿಂದೆ, ಮಸೀದಿ ಸಮಿತಿಯು ಗೋರಿಗೆ ಬೀಗ ಹಾಕಲು ಪ್ರಯತ್ನಿಸಿತ್ತು, ಆದರೆ ನಾವು ಅದನ್ನು ತೆರೆದಿದ್ದೇವೆ. ಆದಾಗ್ಯೂ, ಮುಂದಿನ ಐದು ದಿನಗಳವರೆಗೆ ಅದನ್ನು ಸ್ಥಗಿತಗೊಳಿಸಲು ನಾವು ಬುಧವಾರ ನಿರ್ಧರಿಸಿದ್ದೇವೆ.” ಎಂದು ಎಎಸ್ಐನ ಔರಂಗಾಬಾದ್ ವಲಯದ ಸೂಪರಿಂಟೆಂಡೆಂಟ್ ಮಿಲನ್ ಕುಮಾರ್ ಚೌಲೆ ಪಿಟಿಐಗೆ ತಿಳಿಸಿದರು.
‘ನಾವು ಪರಿಸ್ಥಿತಿಯನ್ನು ನಿರ್ಣಯಿಸುತ್ತೇವೆ ಮತ್ತು ನಂತರ ಅದನ್ನು ತೆರೆಯಬೇಕೆ ಅಥವಾ ಮುಂದಿನ ಐದು ದಿನಗಳವರೆಗೆ ಮುಚ್ಚಬೇಕೆ ಎಂದು ನಿರ್ಧರಿಸುತ್ತೇವೆ’ ಎಂದು ಅಧಿಕಾರಿ ಹೇಳಿದರು.
ಈ ತಿಂಗಳ ಆರಂಭದಲ್ಲಿ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್ ಮುಸ್ಲಿಮೀನ್ (AIMEM) ನಾಯಕ ಅಕ್ಬರುದ್ದೀನ್ ಓವೈಸಿ, ಔರಂಗಜೇಬ್ ಸಮಾಧಿಗೆ ಭೇಟಿ ನೀಡಿದ್ದರು, ಈ ಕ್ರಮವನ್ನು ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಹಾಗೂ ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಟೀಕಿಸಿದೆ.
ಓವೈಸಿ ಅವರ ಸಮಾಧಿಗೆ ಭೇಟಿ ನೀಡಿದ ನಂತರ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರದ ಶಾಂತಿಯುತ ಆಡಳಿತಕ್ಕೆ ಭಂಗ ತರಲು ಓವೈಸಿ ಬಯಸುತ್ತಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದರು.