• Home
  • About Us
  • ಕರ್ನಾಟಕ
Thursday, November 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಪ್ರಧಾನಿ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಸುಲಿಗೆ ಮಾಡುವ ಪಿಎಂ ಸ್ವನಿಧಿ ಎಂಬ ಬಡ್ಡಿ ಯೋಜನೆ!

ಪ್ರತಿಧ್ವನಿ by ಪ್ರತಿಧ್ವನಿ
March 29, 2022
in ದೇಶ, ವಾಣಿಜ್ಯ
0
ಪ್ರಧಾನಿ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಸುಲಿಗೆ ಮಾಡುವ ಪಿಎಂ ಸ್ವನಿಧಿ ಎಂಬ ಬಡ್ಡಿ ಯೋಜನೆ!
Share on WhatsAppShare on FacebookShare on Telegram

ಗೃಹ ಸಾಲಗಳ ಮೇಲಿನ ಬಡ್ಡಿ ಶೇ.6.5ರಷ್ಟಿದೆ. ವಾಹನಗಳ ಸಾಲಗಳ ಮೇಲಿನ ಬಡ್ಡಿ ಶೇ.7.5-8ರಷ್ಟಿದೆ. ಗೃಹೋಪಯೋಗಿ ವಸ್ತುಗಳ ಸಾಲದ ಮೇಲಿನ ಬಡ್ಡಿ ಶೇ.10ರಷ್ಟಿದೆ. ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ಶೇ.12-14ರಷ್ಟಿದೆ.

ADVERTISEMENT

ಶೇ.24ರಷ್ಟು ಬಡ್ಡಿ ಇರುವುದನ್ನು ಎಲ್ಲಾದರೂ ಕೇಳಿದ್ದೀರಾ?

ಅದೂ ಪ್ರಧಾನಿ ಹೆಸರಿನಲ್ಲಿ, ಬೀದಿ ಬದಿ ಜನರನ್ನು ಉದ್ಧಾರ ಮಾಡುವ ಯೋಜನೆಗಳಲ್ಲಿ? ಹೌದು ಅಂತಹದ್ದೊಂದು ಯೋಜನೆ ಇದೆ. ಅದೇ ಪಿಎಂ- ಸ್ವನಿಧಿ. ಅರ್ಥಾತ್ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ. ಪಿಎಂ ಸ್ವನಿಧಿ ಎಂದರೆ- PM Street Vendor’s AtmaNirbhar Nidhi ಎಂದರ್ಥ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಬೀದಿ ವ್ಯಾಪಾರಿಗಳಿಗೆ ಸಾಲವನ್ನು ನೀಡುವುದರ ಮೂಲಕ ಅವರನ್ನು ಸಬಲೀಕರಣಗೊಳಿಸುವುದು ಮತ್ತು ಅವರ ಸಮಗ್ರ ಅಭಿವೃದ್ಧಿ ಮತ್ತು ಆರ್ಥಿಕ ಉನ್ನತಿಗಾಗಿ ನೆರವಾಗುವುದು ಈ ಯೋಜನೆ ಉದ್ದೇಶ.

ಅಂದಾಜು 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಒಂದು ವರ್ಷದ ಅವಧಿಯ 10,000 ರೂಪಾಯಿಗಳನ್ನು ಸಾಲವಾಗಿ ನೀಡಲಾಗುತ್ತದೆ. ಸರ್ಕಾರದ ಯೋಜನೆಯಲ್ಲಿ ಘೋಷಿಸಿರುವಂತೆ ಇದು ಬೀದಿ ಬದಿ ವ್ಯಾಪಾರಿಗಳಿಗೆ ದುಡಿಯುವ ಬಂಡವಾಳದ ರೂಪದಲ್ಲಿ ಒದಗಿಸಲಾಗುತ್ತದೆ.

ನಗರ/ಗ್ರಾಮೀಣ ಪ್ರದೇಶಗಳು ಸೇರಿದಂತೆ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಸಹಾಯ ಮಾಡಲು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯು ಪ್ರೋತ್ಸಾಹವನ್ನು ನೀಡುತ್ತದೆ.

ಬಡ್ಡಿದರ ವಾರ್ಷಿಕ ಶೇ.24. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಯಾವುದೇ ಸಾಲ ಯೋಜನೆಗಳಲ್ಲಿ ಇಷ್ಟು ದುಬಾರಿ ಬಡ್ಡಿ ವಿಧಿಸುವುದಿಲ್ಲ. ಅಷ್ಟರ ಮಟ್ಟಿಗೆ ಪಿಎಂ ಸ್ವನಿಧಿ ಯೋಜನೆ ದಾಖಲೆ ಮಾಡಿದೆ.

ವ್ಯಾಪಾರಿಗಳು ಬೇರೆ ಬೇರೆ ರೀತಿಯಲ್ಲಿ ಬಡ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಿ ಬಡ್ಡಿ ಹೇರಿ ವಂಚಿಸುವಂತೆಯೇ ಸರ್ಕಾರವೂ ನಿಭಾಯಿಸಲಾಗದಂತಹ ಷರತ್ತುಗಳನ್ನು ವಿಧಿಸಿ ಅಧಿಕೃತವಾಗಿ ಸುಲಿಗೆ ಮಾಡುತ್ತಿದೆ.

ಪಡೆದ ಸಾಲವನ್ನು ಪ್ರತಿ ತಿಂಗಳೂ ತಪ್ಪದೇ ಪಾವತಿ ಮಾಡಿದರೆ ಶೇ.24ರ ಬಡ್ಡಿಯ ಪೈಕಿ ಶೇ. 7% ಬಡ್ಡಿ ಸಬ್ಸಿಡಿ ದೊರೆಯುತ್ತದೆ.

ಸರ್ಕಾರವೇ ನಿಗದಿ ಪಡಿಸಿರುವ ಡಿಜಿಟಲ್ ಪ್ಲಾಟ್ ಫಾರಂಗಳ ಮೂಲಕ ವಹಿವಾಟು ನಡೆಸಿದರೆ ವಾರ್ಷಿಕ 1,200 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಈ ಎರಡನ್ನೂ ಯಶಸ್ವಿಯಾಗಿ ಮಾಡಿದ ಸಾಲಗಾರರು ಮುಂದಿನ ಸುತ್ತಿನಲ್ಲಿ ಸಾಲ ಪಡೆಯಲು ಅರ್ಹರಾಗುತ್ತಾರೆ.

ಸರ್ಕಾರಿ ವೆಬ್ಸೈಟಿನಲ್ಲಿರುವ ಮಾಹಿತಿ ಪ್ರಕಾರವೇ, ಈ ಯೋಜನೆಯಡಿ ಸುಮಾರು 20 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಈ ಪೈಕಿ 7,52,191 ಮಂಜೂರು ಮಾಡಲಾಗಿದೆ ಮತ್ತು 2,18,751 ಸಾಲಗಳನ್ನು ಈಗಾಗಲೇ ವಿತರಿಸಲಾಗಿದೆ. ಒಂದು ಸ್ವೀಕರಿಸಲ್ಪಟ್ಟ ಅರ್ಜಿಗಳ ಪೈಕಿ ಶೇ.50ರಷ್ಟೂ ಸಾಲ ಮಂಜೂರಾಗಿಲ್ಲ. ಮಂಜೂರಾದ ಪೈಕಿ ಶೇ.22ರಷ್ಟು ಮಾತ್ರ ಸಾಲ ವಿತರಿಸಲಾಗಿದೆ.

ಸುಲಿಗೆಯ ಮೂಲ

ಬೀದಿ ಬದಿವ್ಯಾಪಾರಿಗಳು ಪಡೆದ ಸಾಲವನ್ನು ನಿಗದಿತ ದಿನದಂದೇ ಪಾವತಿಸಬೇಕು. ಪಾವತಿಸಲಾಗದಿದ್ದರೆ ಶೇ.7ರಷ್ಟು ಸಬ್ಸಿಡಿ ದೊರೆಯುವುದಿಲ್ಲ. ಅಂದರೆ ಶೇ.24ರಷ್ಟೇ ಬಡ್ಡಿ ತೆರಬೇಕಾಗುತ್ತದೆ.

ಕ್ಯಾಶ್ ಬ್ಯಾಕ್ ಎಂಬುದು ಖಾಸಗಿ ಪೇಮೆಂಟ್ ಪ್ಲಾಟ್ ಫಾರಂಗಳ ಉದ್ದಾರಕ್ಕೆ ಮಾಡಿರುವ ಯೋಜನೆ ಇದು. ಭಿಮ್, ಪೇಟಿಎಂ, ಗೂಗಲ್ ಪೇ, ಭಾರತ್ ಪೇ, ಅಮೆಜಾನ್ ಪೇ, ಫೋನ್ ಪೇ ಇತ್ಯಾದಿಗಳು ಸಾಮಾನ್ಯ ಜನರು ರೀಚಾರ್ಜ್ ಮಾಡಿದಾಗ ಪ್ರತಿ ರೀಚಾರ್ಜಿಗೆ ಕನಿಷ್ಠ 25ರಿಂದ 100 ರೂಪಾಯಿಗಳಷ್ಟು ಕ್ಯಾಶ್ ಬ್ಯಾಕ್ ನೀಡುತ್ತವೆ.

ಆದರೆ, ಬೀದಿ ಬದಿ ಸಾಲಗಾರರಿಗೆ ನೀಡುವ ಕ್ಯಾಶ್ ಬ್ಯಾಕ್ ಪ್ರತಿ ವಹಿವಾಟಿಗೆ 25 ಪೈಸೆಯಿಂದ 1 ರೂಪಾಯಿ ಮಾತ್ರ.

ಐವತ್ತು ವಹಿವಾಟುಗಳನ್ನು ಈ ಡಿಜಿಟಲ್ ಫ್ಲಾಟ್ ಫಾರಂ ಮೂಲಕ ಮಾಡಿದರೆ, 50 ರೂಪಾಯಿ ಕ್ಯಾಶ್ ಬ್ಯಾಕ್, ನಂತರದ ಐವತ್ತು ವಹಿವಾಟುಗಳನ್ನು ಮಾಡಿದರೆ 25 ರೂಪಾಯಿ. ನಂತರ 100 ವಹಿವಾಟುಗಳನ್ನು ಮಾಡಿದರೆ 75 ರೂಪಾಯಿ ಕ್ಯಾಶ್ ಬ್ಯಾಕ್. ಅದಾದ ನಂತರ ಮತ್ತೆ 100 ವಹಿವಾಟುಗಳನ್ನು ಮಾಡಿದರೆ 25 ರೂಪಾಯಿ ಕ್ಯಾಶ್ ಬ್ಯಾಕ್. ಕ್ಯಾಶ್ ಬ್ಯಾಕ್ ಪಡೆಯಬೇಕಾದರೆ ಪ್ರತಿ ವಹಿವಾಟು 25 ರೂಪಾಯಿ ಮೇಲ್ಪಟ್ಟಿರಬೇಕು.

ಸಮಸ್ಯೆ ಇರುವುದು ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್ ವಹಿವಾಟು ನಡೆಸುವುದು ಕಷ್ಟ. ವ್ಯಾಪಾರಿಗಳೇನೋ ಡಿಜಿಟಲ್ ವಹಿವಾಟು ನಡೆಸಲು ಸಿದ್ದರಿರುತ್ತಾರೆ ಎಂದುಕೊಳ್ಳೋಣ, ಆದರೆ, ಖರೀದಿ ಮಾಡಿದವರು ನಗದು ರೂಪದಲ್ಲೇ ಪಾವತಿಸಿದರೆ ಏನು ಮಾಡುವುದು?

ಭಿಮ್, ಪೇಟಿಎಂ, ಗೂಗಲ್ ಪೇ, ಭಾರತ್ ಪೇ, ಅಮೆಜಾನ್ ಪೇ, ಫೋನ್ ಪೇ ಇತ್ಯಾದಿ ಪ್ಲಾಟ್ ಫಾರಂಗಳು ಪ್ರತಿಯೊಬ್ಬ ಗ್ರಾಹಕನನ್ನು ಪಡೆಯಲು ನೂರಾರು ರೂಪಾಯಿಗಳಷ್ಟು ವಿನಿಯೋಗ ಮಾಡುತ್ತವೆ. ಸರ್ಕಾರದ ಈ ಯೋಜನೆ ಮೂಲಕ ಅತ್ಯಂತ ಕಡೆ ವೆಚ್ಚದಲ್ಲಿ ಗ್ರಾಹಕರು ಪಡೆಯುತ್ತಿವೆ.

ಒಂದು- ಸಕಾಲದಲ್ಲಿ ಸಾಲ ಮರುಪಾವತಿ ಮಾಡದಿದ್ದರೆ, ಶೇ.7ರಷ್ಟು ಸಬ್ಸಿಡಿ ಸಿಗುವುದಿಲ್ಲ. ಸರ್ಕಾರ ಘೋಷಿಸಿರುವಂತೆ 200 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಬೇಕಾದರೆ, ಕನಿಷ್ಠ 400 ಡಿಜಿಟಲ್ ವಹಿವಾಟು ನಡೆಸಬೇಕು. ಈ ಎರಡೂ ಸಾಧ್ಯವಾಗದ ಕಾರಣ ರಸ್ತೆ ಬದಿ ವ್ಯಾಪಾರಿಗಳು ಅಂತಿಮವಾಗಿ ಶೇ.24ರಷ್ಟು ಬಡ್ಡಿ ಪಾವತಿಸ ಬೇಕಾಗುತ್ತದೆ.

ಸರ್ಕಾರಕ್ಕೆ ಕಾಳಜಿ ಇದ್ದರೆ ಬಡ್ಡಿ ದರವನ್ನು ತಗ್ಗಿಸಬೇಕು ಇಲ್ಲವೇ ಬಡ್ಡಿ ರಹಿತ ಸಾಲ ನೀಡಬೇಕು. ಖಾಸಗಿ ಪೇಮೆಂಟ್ ಕಂಪನಿಗಳ ವಹಿವಾಟು ಹೆಚ್ಚಿಸಲು ಇಷ್ಟೆಲ್ಲ ಸರ್ಕಸ್ ಮಾಡಬೇಕಿರಲಿಲ್ಲ.

Tags: BJPCongress PartyCovid 19ನರೇಂದ್ರ ಮೋದಿಪಿಎಂ ಸ್ವನಿಧಿಪ್ರಧಾನಿ ಮೋದಿಬಡ್ಡಿ ಯೋಜನೆಬಿಜೆಪಿಬೀದಿ ಬದಿ ವ್ಯಾಪಾರಿಸುಲಿಗೆ
Previous Post

ಹಿಂದೂ ಅಲ್ಲವೆಂದು ದೇಗುಲದ ಉತ್ಸವದಲ್ಲಿ ನೃತ್ಯ ಪ್ರದರ್ಶನಕ್ಕೆ ನಕಾರ : ಎಲ್ಲಿದೆ ‘ವಸುದೈವ ಕುಟುಂಬಕಂ’? ಎಂದ ಸಂಸದ ಶಶಿ ತರೂರ್!

Next Post

50 ವರ್ಷಗಳ ಐತಿಹಾಸಿಕ ಗಡಿ ವಿವಾದ ಬಗೆಹರಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ ಅಸ್ಸಾಂ – ಮೇಘಾಲಯ

Related Posts

Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
0

"ಜೆಡಿಎಸ್ ಅವರ ಯೋಗ್ಯತೆಗೆ ಒಂದು ಕೆಲಸ ಮಾಡಿಲ್ಲ. ತುಂಗಭದ್ರಾ ಅಣೆಕಟ್ಟಿನ ಗೇಟ್ ಕಿತ್ತು ಹೋದಾಗ ಒಂದೇ ವಾರದಲ್ಲಿ ಗೇಟ್ ದುರಸ್ತಿ ಮಾಡಲಾಗಿದೆ. ಜೆಡಿಎಸ್ ಅವರಿಗೆ ಏನೂ ಮಾಡಲು...

Read moreDetails

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

November 19, 2025
ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

November 19, 2025

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025
Next Post
50 ವರ್ಷಗಳ ಐತಿಹಾಸಿಕ ಗಡಿ ವಿವಾದ ಬಗೆಹರಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ ಅಸ್ಸಾಂ – ಮೇಘಾಲಯ

50 ವರ್ಷಗಳ ಐತಿಹಾಸಿಕ ಗಡಿ ವಿವಾದ ಬಗೆಹರಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ ಅಸ್ಸಾಂ - ಮೇಘಾಲಯ

Please login to join discussion

Recent News

Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
Top Story

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

by ಪ್ರತಿಧ್ವನಿ
November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ
Top Story

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

by ಪ್ರತಿಧ್ವನಿ
November 19, 2025
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR
Top Story

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

by ಪ್ರತಿಧ್ವನಿ
November 19, 2025
ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ
Top Story

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

November 19, 2025

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada