14 ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಕೈಯಲ್ಲಿ ಎಲ್ಲವೂ ಇತ್ತು. ಚನ್ನಪಟ್ಟಣ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದಿತ್ತು. ಆದರೆ, ಚನ್ನಪಟ್ಟಣದ ಕಡೆ ಅವರು ತಿರುಗಿಯೂ ಸಹ ನೋಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೀಶ್ವರ್ ಎಚ್ಡಿಕೆ ವಿರುದ್ದ ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, 14 ತಿಂಗಳು ಸಿಎಂ ಆಗಿದ್ದಾಗ ಕ್ಷೇತ್ರ ಅಭಿವೃದ್ಧಿ ಮಾಡದ ಅವರು, ಈಗ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುತಿದ್ದಾರೆ. ಎಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ ಎಂದು ಜನ ನನ್ನನ್ನ ತಿರಸ್ಕಾರ ಮಾಡಿದರು. ಆದರೆ, ನನ್ನನ್ನು ಗೆಲ್ಲಿಸಿದರೆ ಅದರ ಶಕ್ತಿಯೇ ಬೇರೆ ಇರ್ತಿತ್ತು ಎಂದು ಹೇಳಿದರು.
![](https://pratidhvani.com/wp-content/uploads/2022/03/cp-yogeshwar-1024x768.jpg)
ಈಗ ಪಂಚರಾಜ್ಯ ಚುನಾವಣೆ ಫಲಿತಾಂಶ ಬಂದಿದ್ದು ಅಲ್ಲಿ ಯಾವ ರೀತಿ ಬಿಜೆಪಿ ಗೆದ್ದಿದೆ ಎಂದು ಎಲ್ಲರಿಗೂ ಗೊತ್ತಿದೆ. 2023ಕ್ಕೆ ಕರ್ನಾಟಕದಲ್ಲಿಯೂ ಸಹ ಬಿಜೆಪಿಗೆ ಬಹುಮತ ಬರಲಿದೆ. ಹಾಗಾಗಿ ಈ ಬಾರಿ ನನಗೂ ಆರ್ಶೀವಾದ ಮಾಡಿ ಎಂದು ಸಿಪಿ ಯೋಗೀಶ್ವರ್ ಜನರಲ್ಲಿ ಮನವಿ ಮಾಡಿದರು.