ಕಳೆದ ಭಾನುವಾರ ಶಿವಮೊಗ್ಗ ನಗರದ ಭಾರತಿ ಕಾಲನಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟಂಬಕ್ಕೆ ಮುಂದಿನ 2023ರ ಚುನಾವಣೆಗೆ ಶಿವಮೊಗ್ಗ ನಗರದಿಂದ ಮೃತ ಹರ್ಷನ ಕುಟುಂಬ ಸದಸ್ಯರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದರ ಬೆನ್ನಲೇ ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರನ್ನು ಪ್ರತಿಧ್ವನಿ.ಕಾಂನೊಂದಿಗೆ ನೀಡಿದ ಸಂದರ್ಶನವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು, ನೂತನವಾಗಿ ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆಯಾದ ಬಿ.ಕೆ ಹರಿಪ್ರಸಾದ್ ಅವರ ಸಂದರ್ಶನವನ್ನು ಪ್ರತಿಧ್ವನಿ.ಕಾಂ ನಿನ್ನೆ ಮದ್ಯಾಹ್ನ ತೆಗೆದುಕೊಂಡಿದ್ದು, ಹಲವು ಪ್ರಶ್ನೆಗಳನ್ನು ಹರಿಪ್ರಸಾದ್ ಅವರ ಮುಂದಿರಿಸಿತ್ತು. ಅದರಲ್ಲಿ ಹರ್ಷನ ವಿಚಾರವಾಗಿ ಈಶ್ವರಪ್ಪನವರ ರಾಜಕೀಯ ನೋಡಿದರೆ ನಿಮಗೆ ಏನ್ ಅನ್ನಿಸುತ್ತೆ? ಎಂಬ ಪ್ರಶ್ನೆ ಉತ್ತರಿಸಿದ ಅವರು, ‘ಹರ್ಷನ ಹತ್ಯೆ ಘಟನೆ ಬಳಿಕ ಅವರ ಸಹೋದರಿ ಅಷ್ಟೊಂದು ಚೆನ್ನಾಗಿ ಮಾನವೀಯತೆಯ ದೃಷ್ಟಿಯಿಂದ ಮಾತನಾಡಿದ್ದಾರೆ. ಹರ್ಷನ ಕುರಿತು ಅಷ್ಟೆಲ್ಲ ಮಾತನಾಡುವ ಸಚಿವ ಈಶ್ವರಪ್ಪ ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಟಿಕೆಟ್ ಅನ್ನು ಹಿಂದುತ್ವಕ್ಕೆ ಪ್ರಾಣ ಕೊಟ್ಟ ಹರ್ಷನ ಕುಟುಂಬಕ್ಕೆ ಬಿಟ್ಟು ಕೊಡಲಿ, ನಾವು ಅವರ ವಿರುದ್ಧ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಬಿಕೆ ಹರಿಪ್ರಸಾದ್ ಸಚಿವ ಈಶ್ವರಪ್ಪಗೆ ಸವಾಲು ಹಾಕಿದ್ದಾರೆ’.

ಇದೀಗ ಪ್ರತಿಧ್ವನಿ.ಕಾಂ ಸಂದರ್ಶನ ಮಾಡಿರುವ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗುತ್ತಿದೆ. ಹೇಳಿಕೆಯ ಕುರಿತು ಹಲವಾರು ಪೋಸ್ಟರ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದೆ..