ವಿಧಾನಸಭೆಯಲ್ಲಿ ಕಾಂಗ್ರೆಸ್ ಧರಣಿ ಮಧ್ಯೆಯೇ ಮುಖ್ಯ ಮಂತ್ರಿ , ಸಚಿವರ ವೇತನ, ಭತ್ಯೆ ಗಳನ್ನು ಹೆಚ್ಚಿಸುವ ವಿಧೇಯಕಗಳು ಮಂಡನೆಯಾಗಿ ಅಂಗೀಕಾರವೂ ಆಯಿತು. ವೇತನ, ಭತ್ಯೆಗಳನ್ನು ಹೆಚ್ಚಿಸುವ ವಿಧೇಯಕ ಅಂಗೀಕಾರವಾಗಿದ್ದರಿಂದ ಮುಖ್ಯಮಂತ್ರಿ, ಮಂತ್ರಿಗಳು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರ ಸಂಬಳ ಬರೋಬ್ಬರಿ ಶೇಕಡಾ 50%ರಷ್ಟು ಸಂಬಳ, ಭತ್ಯೆ ಹೆಚ್ಚಳ ಆಗಿದೆ.
ಮುಖ್ಯಮಂತ್ರಿಯವರ ಸಂಬಳ ₹ 50 ಸಾವಿರ ದಿಂದ ₹ 75 ಸಾವಿರಕ್ಕೂ , ಸಚಿವರ ವೇತನ ₹ 40 ಸಾವಿರದಿಂದ ₹ 60 ಸಾವಿರಕ್ಕೆ ಹೆಚ್ಚಿ ಸಲಾಗಿದೆ. ಪ್ರ ತಿ ವರ್ಷ ನೀಡುವ ಆತಿಥ್ಯ ಭತ್ಯೆ ₹ 3 ಲಕ್ಷದಿಂದ ₹ 4.50 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಮನೆ ಬಾಡಿಗೆಯನ್ನು ₹ 90 ಸಾವಿರದಿಂದ ₹ 1.20 ಲಕ್ಷಕ್ಕೆ ಹೆಚ್ಚಿ ಸಲಾಗಿದೆ. ತೋಟಗಳ ನಿರ್ವಹಣೆ ಮತ್ತು ವಿನ್ಯಾ ಸಕ್ಕೆ ₹ 20 ಸಾವಿರದಿಂದ ₹ 30 ಸಾವಿರಕ್ಕೆ ಹೆಚ್ಚಿ ಸಲಾಗಿದೆ. ಪೆಟ್ರೋ ಲ್ ಭತ್ಯೆ ತಿಂಗಳಿಗೆ 1 ಸಾವಿರ ಲೀಟರ್ ಬದಲು 2 ಸಾವಿರ ಲೀಟರ್ಗೆ ಹೆಚ್ಚಿ ಸಲಾಗಿದೆ.
ಸಭಾಧ್ಯಕ್ಷರು/ ಸಭಾಪತಿ ವೇತನ, ಭತ್ಯೆ ಸಂಬಳ ಹೆಚ್ಚಳ : 50 ಸಾವಿರ ರೂ. ದಿಂದ 75 ಸಾವಿರ ರೂ ಹೆಚ್ಚಳವಾದರೆ. ಆತಿಥ್ಯ ವೇತನ ವಾರ್ಷಿಕ: 3 ಲಕ್ಷ ರೂ. ದಿಂದ 4 ಲಕ್ಷ ರೂ. ಹೆಚ್ಚಳವಾಗಿದೆ. ಮನೆ ಬಾಡಿಗೆ: 80 ಸಾವಿರ ರೂ. ದಿಂದ 1,60,000ರೂ. ಇಂಧನ: 1000 ಲೀಟರ್ರಿಂದ 2000 ಲೀಟರ್ ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ. ದಿಂದ 40ರೂ. ದಿನ ಭತ್ಯೆ(ಪ್ರಯಾಣ): ದಿನಕ್ಕೆ2000ರೂ. ದಿಂದ 3000ರೂ. ಹೊರ ರಾಜ್ಯ ಪ್ರವಾಸ: ದಿನಕ್ಕೆ 2500ರೂ. +5000ರೂ. ದಿಂದ 3000ರೂ.+7000ರೂ. ಹೆಚ್ಚಳವಾಗಿದೆ.
ವಿಪಕ್ಷ ನಾಯಕರ ವೇತನ, ಭತ್ಯೆ ಸಂಬಳ ಹೆಚ್ಚಳ :40 ಸಾವಿರ ರೂ. ದಿಂದ ? 60 ಸಾವಿರ ರೂ. ಹೆಚ್ಚಳವಾದರೆ. ವಿಪಕ್ಷ ನಾಯಕರ ಆತಿಥ್ಯ ವೇತನ ವಾರ್ಷಿಕ: 2 ಲಕ್ಷ ರೂ. ದಿಂದ 2,50 ಲಕ್ಷ ರೂ. ಹೆಚ್ಚಳವಾಗಿದೆ. ಇನ್ನು ಇಂಧನ: 1000 ಲೀಟರ್ ರಿಂದ 2000 ಲೀಟರ್. ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ. ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 3000ರೂ. ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ. ಹೆಚ್ಚಳವಾಗಿದೆ.
ಶಾಸಕರ ವೇತನ, ಭತ್ಯೆ : ಸಂಬಳ ಹೆಚ್ಚಳ : 20 ಸಾವಿರ ರೂ. ದಿಂದ 40 ಸಾವಿರ ರೂ. ಕ್ಷೇತ್ರ ಭತ್ಯೆ: 40 ಸಾವಿರ ರೂ. ರಿಂದ 60 ಸಾವಿರ ರೂ. ಹೆಚ್ಚಳವಾದರೆ. ಆತಿಥ್ಯ ವೇತನ (ವಾರ್ಷಿಕ): 2 ಲಕ್ಷ ರೂ. ದಿಂದ 2 ಲಕ್ಷ 50 ಸಾವಿರ ರೂ. ಹೆಚ್ಚಳವಾಗಿದೆ. ಇನ್ನು ಇಂಧನ: 1000 ಲೀಟರ್ ರಿಂದ 2000 ಲೀಟರ್. ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 25ರೂ. ದಿಂದ 30ರೂ. ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 2500ರೂ. ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ. ದೂರವಾಣಿ ವೆಚ್ಚ: ಯಥಾಸ್ಥಿತಿ ತಿಂಗಳಿಗೆ 20,000ರೂ. ಕಾಯ್ದಿರಿಸಲಾಗಿದೆ. ಶಾಸಕರ ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10 ಸಾವಿರ ರೂ. ರಿಂದ 20 ಸಾವಿರ ರೂ. ಹೆಚ್ಚಳವಾಗಿದೆ.

ವೇತನ ಹೆಚ್ಚಳದ ಮಸೂದೆಯನ್ನು ಸಮರ್ಥಿಸಿಕೊಂಡ ಸಚಿವ ಮಾಧುಸ್ವಾಮಿ
ವೇತನ ಹೆಚ್ಚಳದ ಮಸೂದೆಯನ್ನು ಸಮರ್ಥಿಸಿಕೊಂಡ ಸಚಿವ ಮಾಧುಸ್ವಾಮಿ, ಕೋವಿಡ್ ಸಂದರ್ಭದಲ್ಲಿ ಬಹಳ ಕಷ್ಟ ಆಗಿದೆ. ಡಿಸೇಲ್, ಪೆಟ್ರೋಲ್ ಕೂಡ ಜಾಸ್ತಿ ಆಗಿದೆ. ಮನೆ ಬಾಡಿಗೆ ಕೂಡ ಜಾಸ್ತಿ ಆಗಿದೆ. ಹಾಗಾಗಿ ಮುಖ್ಯಮಂತ್ರಿ, ಸಚಿವರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಶಾಸಕರ ಸಂಬಳ ಹೆಚ್ಚಳ ಮಾಡಲು ಬಿಲ್ ತಂದಿದ್ದೇವೆ ಎಂದು ಹೇಳಿದ್ದಾರೆ.
ದುಂದು ವೆಚ್ಚ ಮಾಡಲ್ಲ ಎಂದು ಸಿಎಂ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಘೋಷಣೆ ಮಾಡಿದ್ದರು. ಆದರೆ ಈಗ ಸಚಿವರು, ಮುಖ್ಯಮಂತ್ರಿಗಳ ಸಂಬಳ ಹೆಚ್ಚಳಕ್ಕೆ ಬಿಲ್ ತಂದು ಅಂಗೀಕಾರ ಪಡೆದುಕೊಂಡಿದೆ.







