• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ವಿದ್ಯುತ್‌ ಕೊರತೆ ನೀಗಿಸುತ್ತಾ 8,500 ಕೋಟಿ ವೆಚ್ಚದ ಯೋಜನೆ..?

Krishna Mani by Krishna Mani
February 12, 2024
in ಅಂಕಣ, ಇತರೆ / Others
0
ವಿದ್ಯುತ್‌ ಕೊರತೆ ನೀಗಿಸುತ್ತಾ 8,500 ಕೋಟಿ ವೆಚ್ಚದ ಯೋಜನೆ..?
Share on WhatsAppShare on FacebookShare on Telegram

ರಾಜ್ಯದಲ್ಲಿ ಕಾಂಗ್ರೆಸ್‌(Congress) ಸರ್ಕಾರ ಅಸ್ತಿತ್ವಕ್ಕೆ ಬಂದಾಗ ವಿದ್ಯುತ್(Electric) ಸಮಸ್ಯೆ ನಿವಾರಣೆ ಮಾಡಲು ದೊಡ್ಡ ದೊಡ್ಡ ಯೋಜನೆ ಕೈಗೊಳ್ಳುತ್ತಲೇ ಇದೆ ಎನ್ನುವುದು ಸುಳ್ಳಲ್ಲ. ಕಳೆದ ಬಾರಿ ಡಿ.ಕೆ ಶಿವಕುಮಾರ್‌(DKShivakumar) ಇಂಧನ ಸಚಿವರಾಗಿದ್ದ ವೇಳೆ ತುಮಕೂರಿನ ಪಾವಗಡದಲ್ಲಿ ಬಹುದೊಡ್ಡ ಸೋಲಾರ್‌ ಪಾರ್ಕ್‌(Solarpark) ನಿರ್ಮಾಣ ಮಾಡಿದ್ದರು. ಜೊತೆಗೆ ಸಾರ್ವಜನಿಕರು ಕೂಡ ಸೋಲಾರ್‌ ಪ್ಯಾನಲ್‌(Solar panel) ಬಳಸಿ ವಿದ್ಯುತ್‌ ತಯಾರಿಸಿದ ಬಳಿಕ ಸರ್ಕಾರದ ಗ್ರಿಡ್‌ಗೆ ವಾಪಸ್‌ ಕೊಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಇದೀಗ ಇಂಧನ ಸಚಿವರಾಗಿರುವ ಕೆ.ಜೆ ಜಾರ್ಜ್‌ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಇದು 8500 ಕೋಟಿ ವೆಚ್ಚದ ಯೋಜನೆ ಆಗಿದ್ದು, ರಾಜ್ಯದ ವಿದ್ಯುತ್‌ ಬವಣೆ ನೀಗಿಸುವ ನಿರೀಕ್ಷೆ ಮೂಡಿಸಿದೆ. ಆದರೆ ಆರಂಭದಲ್ಲೇ ಅಪಸ್ವರ ಕೇಳಿಬಂದಿದೆ.

ADVERTISEMENT

ಶರಾವತಿ(Sharavathi) ಕಣಿವೆಯಲ್ಲಿ 8500 ಕೋಟಿ ವೆಚ್ಚದಲ್ಲಿ ಪಂಪ್ಡ್‌ ಸ್ಟೋರೇಜ್ ಪ್ರೊಜೆಕ್ಟ್(pumped storage project) ಜಾರಿಗೆ ಮುಂದಾಗಿದೆ ರಾಜ್ಯ ಸರ್ಕಾರ. ಆದರೆ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗೆ ಆರಂಭದಲ್ಲೇ ಅಪಸ್ವರ ಕೇಳಿ ಬಂದಿದೆ. ಶರಾವತಿ ಕಣಿವೆಯಲ್ಲಿ ರಿವರ್ಸ್ ಪಂಪ್ಡ್ ಯೋಜನೆ ಜಾರಿಗೆ ಆರಂಭದಲ್ಲೇ ಅಪಸ್ವರ ಕೇಳಿಬಂದಿದ್ದು, ಪರಿಸರ ಹೋರಾಟಗಾರರು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನದಿಯ ಸಹಜ ಹರಿವಿಗೆ ಅಡ್ಡಿ ಆಗಲಿದೆ ಎಂದು ವಾದ ಮಂಡಿಸುತ್ತಿದ್ದಾರೆ ಹೋರಾಟಗಾರರು. ಈ ಯೋಜನೆ ಜಾರಿಯಿಂದ ಶರಾವತಿ ಕಣಿವೆ ಪ್ರದೇಶದ ಪರಿಸರದ ಮೇಲೆ ಪರಿಣಾಮ ಆಗಲಿದೆ ಎಂದು ಆರೋಪಿಸಿದ್ದಾರೆ.

ಶರಾವತಿ ನದಿಯನ್ನೇ ನಂಬಿಕೊಂಡಿರುವ ಕೆಳಭಾಗದ ಜನರ ಜೀವನ ಹಾಗೂ ಜಲಚರಗಳ ಅಸ್ತಿತ್ವವೇ ನಾಶವಾಗಲಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಯೋಜನೆ ಜಾರಿಯಿಂದ ನದಿಯನ್ನೇ ನಂಬಿ ಬದುಕುತ್ತಿರುವ ಹೊನ್ನಾವರ ಭಾಗದ ರೈತರು(Farmers) ಹಾಗೂ ಬೆಸ್ತರ ಬದುಕು ಬೀದಿಗೆ ಬರಲಿದೆ ಎಂದು ಪರಿಸರವಾದಿಗಳು ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಯೋಜನೆ ಜಾರಿಯಿಂದಾಗಿ ಕಡಲ ಕೊರೆತ ಹೆಚ್ಚಳವಾಗುವ ಜೊತೆಗೆ ಜಲಚರ ಪ್ರಾಣಿಗಳ ಸಂತಾನೋತ್ಪತಿಗೆ ಹೊಡೆತ ಬೀಳಲಿದೆ ಎನ್ನುವ ಆಂಶವೂ ಸೇರಿಕೊಂಡಿದೆ. ಕಣಿವೆ ಪ್ರದೇಶದ ಜೀವ ವೈವಿಧ್ಯತೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ ಪರಿಸರವಾದಿ ಅಖಿಲೇಶ್ ಚಪ್ಲಿ(Akihlesh Chipli) . ಯೋಜನೆ ಜಾರಿಗೂ ಮುನ್ನ ಪರಿಸರ ತಜ್ಞರ ಸಲಹೆ ಪಡೆದು ಮುನ್ನಡೆಯುವಂತೆ ಆಗ್ರಹಿಸಿದ್ದಾರೆ.

ಏನಿದು ಶರಾವತಿ ರಿವರ್ಸ್ ಪಂಪ್ಡ್ ಸ್ಟೋರೇಜ್…?

ಶರಾವತಿ ಅಂತರ್ಗತ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ ರಾಜ್ಯ ಸರ್ಕಾರ. ಶರಾವತಿ ನದಿಗೆ ಅಡ್ಡಲಾಗಿ ಗೇರುಸೊಪ್ಪ ಬಳಿ ಕಟ್ಟಿರುವ ಡ್ಯಾಮ್‌ನಿಂದ ನೀರನ್ನು ಬಳಸಿಕೊಂಡು ಮರು ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರ ಯೋಜನೆ ಕೈಗೆತ್ತಿಕೊಂಡಿದೆ. ಗುರುತ್ವಾಕರ್ಷಣ ನಿಯಮಕ್ಕೆ ವಿರುದ್ಧವಾಗಿ ಯೋಜನೆ ಜಾರಿಗೆ ಮುಂದಾಗಿದೆ ರಾಜ್ಯ ಸರ್ಕಾರ ಎನ್ನುವುದು ಆರೋಪ. ಆದರೆ ಈ ಯೋಜನೆ ಜಾರಿ ಆದರೆ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ ಎನ್ನುವುದು ರಾಜ್ಯ ಸರ್ಕಾರದ ಲೆಕ್ಕಾಚಾರ. ಈ ಸಂಬಂಧ ಟೆಂಡರ್(Tender) ಪ್ರಕ್ರಿಯೆಗೆ ಮುಂದಾಗಿದೆ ರಾಜ್ಯ ಸರ್ಕಾರ. ಯೋಜನೆ ಜಾರಿ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಈಗಾಗಲೇ ಇಂಧನ ಸಚಿವ ಕೆ ಜೆ ಚಾರ್ಜ್(KJ George) ಚರ್ಚಿಸಿದ್ದಾರೆ.

ಪಂಪ್ಡ್‌ ಸ್ಟೋರೇಜ್ ಮೂಲಕ ಸುಮಾರು ಆರು ಕಿ.ಮೀಟರ್‌ಗಳಷ್ಟು ದೂರದ ತಳಕಳಲೆ ಡ್ಯಾಮ್‌ಗೆ ನೀರನ್ನು ಪಂಪ್ ಮಾಡುವುದು. ಈ ಮೂಲಕ ವಿದ್ಯುತ್ ಉತ್ಪಾದನೆ ಆದ ಬಳಿಕ ಸಮುದ್ರ ಸೇರುತ್ತಿರುವ ನೀರನ್ನು ಪುನರ್ಬಳಕೆ ಮಾಡಿಕೊಂಡು ಮತ್ತೆ ವಿದ್ಯುತ್‌ ಉತ್ಪಾದನೆ ಮಾಡಲು ಸರ್ಕಾರ ಚಿಂತಿಸಿದೆ. ರಾಜ್ಯದಲ್ಲಿರುವ ವಿದ್ಯುತ್ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ಮುಂದಡಿ ಇಟ್ಟಿದೆ. ಯೋಜನೆಯ ಅನುಷ್ಠಾನದಿಂದ ವಿದ್ಯುತ್ ಅಭಾವ ನೀಗಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

ಯಾವುದೇ ಒಂದು ಯೋಜನೆಯಲ್ಲಿ ಲಾಭ ಪಡೆಯುವ ಉದ್ದೇಶ ಇದ್ದಾಗ ಸಣ್ಣ ಪ್ರಮಾಣದಲ್ಲಿ ಅದರಿಂದ ಅನಾನುಕೂಲ ಆಗುವುದು ಶತಸಿದ್ದ. ಈ ಯೋಜನೆಯಿಂದ ಲಾಭ ಎಷ್ಟರ ಮಟ್ಟಿಗೆ ಆಗಲಿದೆ ಅನ್ನೋದ್ರ ಜೊತೆಗೆ ನಷ್ಟದ ಪ್ರಮಾಣವನ್ನು ಸರ್ಕಾರ ಜನರ ಮುಂದೆ ತೆರೆದಿಡಬೇಕು. ಪರಿಸರವಾದಿಗಳ ಪ್ರಮುಖ ಧ್ಯೇಯ ಪರಿಸರವನ್ನು ರಕ್ಷಣೆ ಮಾಡುವುದೇ ಆಗಿರುತ್ತದೆ ಹೊರತು ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದಿಲ್ಲ. ಒಂದು ಆಯ್ಕೆಯಾದ ಸರ್ಕಾರ ಪರಿಸರವಾದಿಗಳ ಕೂಗಿಗೂ ದನಿಯಾಗಬೇಕು. ಅದೇ ರೀತಿ ಅಭಿವೃದ್ಧಿ ಕಾರ್ಯಗಳಿಗೂ ಮನ್ನಣೆ ಕೊಡಬೇಕು. ಹಾಗಾಗಿ ಲಾಭ ನಷ್ಟದ ಪ್ರಮಾಣವನ್ನು ಲೆಕ್ಕಾಚಾರ ಮಾಡಿ ಜನತೆ ಮುಂದಿಟ್ಟು ಯೋಜನೆ ಜಾರಿಗೆ ಚಿಂತನೆ ನಡೆಸಿದರೆ ಉತ್ತಮ.

#DKShivakumar #PowerSupply #Electric #Sharavathi #Karnataka

Previous Post

ಕರ್ನಾಟಕದಲ್ಲಿ ಅವರ ಸ್ಟ್ರ್ಯಾಟರ್ಜಿ ಏನೂ ವರ್ಕ್ ಔಟ್: ಚಲುವರಾಯಸ್ವಾಮಿ ಹೇಳಿಕೆ…

Next Post

ರಾಜ್ಯಪಾಲರ ಭಾಷಣ ಸರ್ಕಾರದ ಯಶೋಗಾಥೆಯ ಸಂಯಕ್ ನೋಟ: ಈಶ್ವರ ಖಂಡ್ರೆ

Related Posts

Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
0

ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ (Karnataka High Court) ಇತ್ಯರ್ಥಗೊಳಿಸಿದೆ. ಮನೆ ಕೆಲಸದಾಕೆ...

Read moreDetails

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025
Next Post
ರಾಜ್ಯಪಾಲರ ಭಾಷಣ ಸರ್ಕಾರದ ಯಶೋಗಾಥೆಯ ಸಂಯಕ್ ನೋಟ: ಈಶ್ವರ ಖಂಡ್ರೆ

ರಾಜ್ಯಪಾಲರ ಭಾಷಣ ಸರ್ಕಾರದ ಯಶೋಗಾಥೆಯ ಸಂಯಕ್ ನೋಟ: ಈಶ್ವರ ಖಂಡ್ರೆ

Please login to join discussion

Recent News

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 
Top Story

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

by Chetan
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada