
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ (Chinnaswamy stadium) ನಡೆದ ಕಾಲ್ತುಳಿತ (Bengaluru stampede case) ದುರಂತದಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಯಾವುದೇ ಸರಿಯಾದ ಆಲೋಚನೆ ಮತ್ತು ವ್ಯವಸ್ಥೆಗಳಿಲ್ಲದೆ ಸರ್ಕಾರ ಕೈಗೊಂಡ ಧಿಡೀರ್ ನಿರ್ಧಾರದಿಂದ ಈ ದುರಂತ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್ (Parameshwar) ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದೇ ಈ ದುರಂತಕ್ಕೆ ಕಾರಣ ಎಂದಿದ್ದಾರೆ. ನಿನ್ನೆ ನಮ್ಮ ಮೆಟ್ರೋ (Namma metro) ಹೇಳಿಕೊಂಡಿರುವಂತೆ 8 ಲಕ್ಷದ 70 ಸಾವಿರ ಟಿಕೆಟ್ ಗಳು ಮಾರಾಟವಾಗಿದೆ. ಈ ಪೈಕಿ ಶೇ.90 ರಷ್ಟು ಜನ ಚಿನ್ನಸ್ವಾಮಿ ಸ್ಟೇಡಿಯಂ ಗೆ ಬಂದವರಿದ್ದಾರೆ ಎಂದಿದ್ದಾರೆ.

ಈ ಲೆಕ್ಕಾಚಾರದ ಪ್ರಕಾರ ಸುಮಾರು 7 ರಿಂದ 8 ಲಕ್ಷ ಜನ ನಿನ್ನೆ ಚಿನ್ನ ಸ್ವಾಮಿ ಸ್ಟೇಡಿಯಂ ಬಳಿ ನೆರೆದಿದ್ದರು ಎಂದು ಅಂದಾಜಿಸಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ನ ಸಾಮರ್ಥ್ಯ ಕೇವಲ 35 ಸಾವಿರ ಮಾತ್ರ.ಆದ್ರೆ ಲಕ್ಷಾಂತರ ಸಂಖ್ಯೆಯಲ್ಲಿ ಜನಸಾಗರ ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.
ಆದ್ರೆ ಕೇವಲ 35 ಸಾವಿರ ಅಭಿಮಾನಿಗಳು ಬರಬಹುದು ಎಂದು ಸರ್ಕಾರ ನಿರೀಕ್ಷಿಸಿತ್ತ..? ಸರ್ಕಾರಕ್ಕೆ ಕನಿಷ್ಠ ಅಂದಾಜು ಕೂಡ ಇರಲಿಲ್ವಾ..? ಇದನ್ನ ಬೇಜವಾಬ್ದಾರಿ ಎನ್ನದೇ ಮತ್ತಿನ್ನೇನು ಹೇಳಬೇಕು ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.