ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕಾವೇರುತ್ತಿರುವ ನಡುವೆಯೇ ಸಚಿವ ಸೋಮಣ್ಣ ಅವರು ಮುಂದಿನ 2023ರ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.
Also Read: ಮಂಡಿ ನೋವಿಗೆ ‘ಪದತ್ಯಾಗ’ ಮದ್ದು; ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರ ಬೊಮ್ಮಾಯಿ?
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಸಚಿವ ಸೋಮಣ್ಣ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಮುಕ್ತ ಮಾಡಬೇಕು ಎಂಬ ಹುಚ್ಚರಿದ್ದಾರೆ. ಆದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. 2023ರ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ. ಸಂಪುಟ ಪುನರ್ ರಚನೆ ಇನ್ನಿತರೆ ನಿರ್ಧಾರವನ್ನು ಬೊಮ್ಮಾಯಿ ಅವರೇ ತೆಗೆದುಕೊಳ್ಳಬಹುದು. ಅದು ಅವರ ಪರಮಾಧಿಕಾರ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಈತರ ಗೊಂದಲಗಳಲ್ಲೇ ಮಾಧ್ಯಮ ಹಾಗೂ ನಮ್ಮ ನಡುವೇ ಯಾವುದೇ ಗೊಂದಲ ಇಲ್ಲ. ನಮ್ಮ ಬಿಜೆಪಿ ಪಕ್ಷ ಈತರದಕ್ಕೆ ಮಣ್ಣನೆ ಕೂಡ ನೀಡುವುದಿಲ್ಲ ಎಂದು ತಿಳಿಸಿದರು.