ನಟ ದರ್ಶನ್ ವಿರುದ್ಧ ಸದ್ಯ ಕೊಲೆ ಆರೋಪ ಕೇಳಿಬಂದಿದ್ದು, ಇತ್ತದುರ್ಗಾ ಮೂಲದ ರೇಣುಕಾ ಸ್ವಾಮಿಯನ್ನ ಭೀಕರವಾಗಿ ಹಲ್ಲೆ ಮಾಡಿ ಕೊಂದ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದಾರೆ. ನಟ ದರ್ಶನ್ ಸತ್ತಾ ಸದಾ ಒಂದಿಲ್ಲೊಂದು ವಿವಾದಗಳು ಸುತ್ತಿತ್ತಲೇ ಇರುತ್ತದೆ. ಹಾಗೇ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿರೋದು, ಪೋಲಿಸ್ ವಿಚಾರಣೆಗೆ ಒಳಪಟ್ಟಿರೋದು ಇದೇ ಮೊದಲೇನಲ್ಲಾ. 2011 ರಿಂದ ಇಲ್ಲಿವರೆಗೂ ದರ್ಶನ್ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ.
![](https://pratidhvani.com/wp-content/uploads/2024/06/IMG_8183.jpeg)
ಮೊದಲ ಬಾರಿಗೆ ನಟ ದರ್ಶನ್ ಜೈಲು ಪಾಲಾಗಿದ್ದು 2011 ರಲ್ಲಿ. ಪತ್ನಿ ವಿಜಯಲಕ್ಷ್ಮಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದ ಆರೋಪದಡಿ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್ 28 ದಿನ ಜೈಲಿನಲ್ಲಿದ್ರು. ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲಾಗಿದ್ರು. ನಂತರ ನಾವಿಬ್ಬರೂ ಇದನ್ನ ಬಗೆಹರಿಸಿಕೊಳ್ತಿವಿ ಅಂತ ಈ ಕೇಸ್ನ ವಿಜಯಲಕ್ಷ್ಮಿ ಹಿಂಪಡೆದುಕೊಂಡಿದ್ದರು.
![](https://pratidhvani.com/wp-content/uploads/2024/06/IMG_8187.jpeg)
ಇದಾದ ನಂತರ 2019 ರಲ್ಲಿ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ತನ್ನ ಸಹ ನಟನ ಮೇಲೆ ದರ್ಶನ್ ಹಲ್ಲೆ ಮಾಡಿದ್ದರು ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದ್ರೆ ಈ ಪ್ರಕರಣದಲ್ಲಿ ಯಾವುದೇ ದೂರೂ ದಾಖಲಾಗಲಿಲ್ಲ.
![](https://pratidhvani.com/wp-content/uploads/2024/06/IMG_8184.jpeg)
ಇನ್ನು 2021ರಲ್ಲಿ ನಿರ್ಮಾಪಕ ಉಮಾಪತಿ ಮತ್ತು ನಟ ದರ್ಶನ್ ನಡುವೆ ಆಸ್ತಿ ವಿಚಾರವೊಂದಕ್ಕೆ ರಂಪ ರಾಮಾಯಣವೇ ನಡೆದುಹೋಗಿತ್ತು. 25 ಕೋಟಿ ಸಾಲದ ವಿಚಾರ, ಎಲ್ಲಿಂದಲೋ ಶುರುವಾಗಿ ಎಲ್ಲೆಲ್ಲಿಗೋ ಹೋಗಿ ತಲುಪಿತ್ತು.
![](https://pratidhvani.com/wp-content/uploads/2024/06/IMG_8185.jpeg)
ನಂತರ ಒಂದೆರೆಡು ವರ್ಷದ ಹಿಂದೆ, ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ರಾತ್ರಿ ಹೋಟೆಲ್ ಸಿಬ್ಬಂಧಿ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು. ಆ ಸಂಧರ್ಭದಲ್ಲಿ ಪೋಲಿಸರು ಹೋಟೆಲ್ ಗೆ ತೆರಳಿ ತನಿಖೆ ನಡೆಸಿದ್ದರು. ಈ ಪ್ರಕರಣ ಕೂಡ ಭಾರಿ ಸದ್ದು ಮಾಡಿತ್ತು.
ಇನ್ನು ಇತ್ತೀಚೆಗೆ ದರ್ಶನ್ ಮನೆಯ ನಾಯಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದೆ ಎಂದು ದೂರು ದಾಖಲಾಗಿತ್ತು. ಆ ನಂತರ ಕಾಟೇರ ಸಿನಿಮಾದ ಸಕ್ಸಸ್ ಸಂದರ್ಭದಲ್ಲಿ ಅವಧಿಗೆ ಮೀರಿ ಮಧ್ಯ ರಾದ್ರಿವರೆಗೂ ಪಬ್ನಲ್ಲಿ ಪಾರ್ಟಿಇ ಮಾಡಿದ್ದರು ಎಂದು ದರ್ಶನ್ ಮತ್ತು ಕೆಲ ಕಲಾವಿದರ ವಿರುದ್ಧ ಸುಬ್ರಹ್ಮಣ್ಯ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಲೂ ದರ್ಶನ್ರನ್ನ ಪೋಲಿಸರು ವಿಚಾರಣೆ ನಡೆಸಿದ್ದರು.
ಇದೀಗ ಜೂನ್ 11ನೇ ತಾರಿಖೂ ಕೊಲೆ ಕೇಸ್ನಲ್ಲಿ ಸದ್ಯ ದರ್ಶನ್ ಅರೆಸ್ಟ್ ಆಗಿದ್ದಾರೆ.