• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

15 ಆನೆಗಳ ಜಾಗದಲ್ಲಿ 25 ಆನೆ, ಸಕ್ರೆಬೈಲ್‌ ಬಿಡಾರದ ಕಣ್ಣೀರ ಕಥೆ

by
December 16, 2019
in ಕರ್ನಾಟಕ
0
15 ಆನೆಗಳ ಜಾಗದಲ್ಲಿ 25 ಆನೆ
Share on WhatsAppShare on FacebookShare on Telegram

ಕೆಲವು ದಿನಗಳ ಹಿಂದೆ ಚಿತ್ರದುರ್ಗದ ಜೋಗಿಮಟ್ಟಿಯಲ್ಲಿ ಸೆರೆಹಿಡಿದ ಆನೆ, ಕ್ಯಾಂಪ್‌ಗಳಲ್ಲಿ ಪಳಗಿಸಿದ ಆನೆಗಿಂತಲೂ ಸೌಮ್ಯ ಸ್ವಭಾವದ್ದು, ಹೆಚ್ಚೆಂದರೆ ಇಪ್ಪತ್ತು ವರ್ಷ ವಯಸ್ಸು, ನಿರರ್ಗಳವಾಗಿ ಸುತ್ತುವುದಕ್ಕೆ ಹೋಗಿ ಅನಾಯಾಸವಾಗಿ ಸಕ್ರೆಬೈಲಿನಲ್ಲಿ ಬಂಧಿಯಾಯ್ತು, ಭದ್ರಾ ಸಂರಕ್ಷಿತ ವಲಯದಿಂದ ಚಿತ್ರದುರ್ಗ ಗಡಿಯ ಜೋಗಿಮಟ್ಟಿ ಅರಣ್ಯದಲ್ಲಿ ನಿರಾಳವಾಗಿ ಬಂದ ಆನೆಯನ್ನ ಕಂಡ ಜನರು ಅಧಿಕಾರಿಗಳಿಗೆ ದೂರು ನೀಡಿದ್ರು, ಅಲ್ಲಿ ಮಟ್ಟಿ ಮುರಿದಿದೆ, ಇಲ್ಲಿ ಸೊಪ್ಪು ತಿಂದಿದೆ, ಹೆಜ್ಜೆ ಗುರುತುಗಳು ನೋಡಿ ಎಂದು ಅದರ ಜಾಡು ಹಿಡಿದು ಹೊರಟರು ಅದು ಸಾಗುತ್ತಲೇ ಇತ್ತು, ಅಲ್ಲಲ್ಲಿ ಜೋಳ ತಿಂದು, ಬೇಲಿ ಮುರಿದು ಕಣ್ಮರೆಯಾಗುತ್ತಿತ್ತು, ಒಂದೇ ರಾತ್ರಿಯಲ್ಲಿ ಹದಿನೈದು ಇಪ್ಪತ್ತು ಕಿಲೋಮೀಟರ್‌ ಸಾಗಿತ್ತು, ಕೊನೆಗೆ ಅಹೋಬಲ ನರಸಿಂಹಸ್ವಾಮಿ ದೇಗುಲದ ಸಮೀಪದ ಅರಣ್ಯದಲ್ಲಿ ಅಧಿಕಾರಿಗಳಿಗೆ ಇದರ ಸುಳಿವು ಸಿಕ್ಕಿಬಿಡ್ತು.

ADVERTISEMENT

ನಂದಿಪುರ ಎಂಬ ಗ್ರಾಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಆನೆಯನ್ನ ನಾಗರಹೊಳೆ ಹಾಗೂ ಸಕ್ರೆಬೈಲ್‌ನಿಂದ ತಂದ ಆನೆಗಳಿಂದ ಮಣಿಸಿ, ಅರಿವಳಿಕೆಗೆ ಮೈಯೊಡ್ಡುವಂತೆ ಮಾಡಲಾಯ್ತು, ಈಗ ಆ ಆನೆ ಸಕ್ರೆಬೈಲ್‌ ಬಿಡಾರ ಸೇರಿಕೊಂಡಿದೆ. ಇದರೊಂದಿಗೆ ಇಲ್ಲಿನ ಆನೆಗಳ ಸಂಖ್ಯೆ ಇಪ್ಪತ್ತೈದಕ್ಕೇರಿದೆ. ಜೋಗಿಮಟ್ಟಿ ಆನೆ ಸ್ವಲ್ಪವೂ ತೊಂದರೆ ನೀಡದೇ ಲಾರಿ ಏರಿ, ಇಳಿದು ಕ್ರಾಲ್‌ನಲ್ಲಿ ಸೇರಿ ತನಗೇನು ಅರಿವಿಲ್ಲದ ನಿಂತುಬಿಡುತ್ತೆ. ಪಕ್ಕದಲ್ಲಿಯೇ ಇರುವ ಆನೆ ಅದರೊಂದಿಗೆ ನಡೆಸುವ ಮೂಖ ಸಂಭಾಷಣೆ ನೋಡಿದರೆ, ನೀನು ಇಲ್ಲಿಗೆ ಬಂದು ಬಂಧಿಯಾದೆ ಎಂಬಂತೆ ಕಾಣುತ್ತೆ.

ಹೆಚ್ಚೆಂದರೆ ಹದಿನೈದು ಆನೆಗಳನ್ನ ಸಾಕಬಹುದಾದ ಈ ಕ್ಯಾಂಪ್‌ನಲ್ಲಿ ಇಪ್ಪತ್ತೈದು ಆನೆಗಳಾಗಿವೆ, ಇಷ್ಟೊಂದು ಆನೆಗಳನ್ನ ಕೂಡಿಹಾಕುವ ಅಗತ್ಯತೆ ಏನಿದೆ, ಇಪ್ಪತ್ತರ ಹರೆಯದ ಆನೆಯನ್ನ ಕ್ಯಾಂಪ್‌ನಲ್ಲಿ ಐವತ್ತು ವರ್ಷ ಸರ್ಕಾರದ ಹಣದಲ್ಲಿ ಸಾಕಬೇಕು, ಪ್ರತೀ ಆನೆಗೆ ಕಾವಾಡಿ, ಮಾವುತ ಅಂತ ಸಾಕಷ್ಟು ಸಿಬ್ಬಂದಿಗಳು ಬೇಕು, ಕಾಡಾನೆ ಪಳಗಿಸಲು ಕನಿಷ್ಟ ಎರಡು ಆನೆಗಳನ್ನ ನಿಯೋಜಿಸಬೇಕು, ಅವುಗಳಿಗೆ ಮೇವು ಅಂತ ಪ್ರತೀ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು, ವೈದ್ಯಕೀಯ ವೆಚ್ಚವೂ ದುಬಾರಿ, ಹರ್ಪಿಸ್‌ ತರಹದ ವೈರಸ್‌ ದಾಳಿ ಇಟ್ಟರೆ ಕ್ಯಾಂಪ್‌ಗಳಲ್ಲಿ ಆನೆಗಳೇ ಖಾಲಿಯಾಗುತ್ತವೆ.

ತಾತ್ಕಾಲಿಕವಾಗಿ ಆನೆಗಳನ್ನ ಇಡಬಹುದಾದ ಜಾಗದಲ್ಲಿ ಹಿಂಡನ್ನ ತಂದು ಬಿಟ್ಟರೆ ಮುಂದೆ ಆನೆ ಸಂತತಿಗಳೇ ನಾಶವಾಗಬಹುದು ಎಂಬ ಆತಂಕವನ್ನ ರಾಜ್ಯ ಉಚ್ಛನ್ಯಾಯಾಲಯ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ಹೊರಹಾಕಿತ್ತು, ನೀಲಗಿರಿ ಪರ್ವತದಂಚಿನಲ್ಲಿ ಆನೆ ಕಾರಿಡಾರ್‌ಗಳ ಜಾಗವನ್ನ ಆಕ್ರಮಿಸಿಕೊಂಡಿದ್ದ ಹೋಟೆಲ್‌ ಹಾಗೂ ರೆಸಾರ್ಟ್‌ಗಳನ್ನ ತೆರವುಗೊಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿತ್ತು. ಆದರೆ ಕಾರಿಡಾರ್‌ ಹಿಡಿದು ಹಾದಿತಪ್ಪುವ ಆನೆಗಳನ್ನ ಕ್ಯಾಂಪ್‌ಗಳಲ್ಲಿ ಕೂಡುವುದು ಮಾತ್ರ ಮುಗಿಯುತ್ತಿಲ್ಲ.

ಸಕ್ರೆಬೈಲು ಆನೆಬಿಡಾರ ಆರಂಭವಾಗಿದ್ದು 1954ರಲ್ಲಿ, ಅಂದು ಆನೆಗಳನ್ನ ಪಳಗಿಸಿದರೆ ಸಾಕಷ್ಟು ಕೆಲಸಕ್ಕೆ ಉಪಯೋಗವಾಗುತ್ತಿದ್ದವು, ದಿಮ್ಮಿಗಳನ್ನ ಸಾಗಿಸಲು ಆನೆಗಳೇ ಆಸರೆಯಾಗಿದ್ದವು, ಆನೆಗಳನ್ನ ಕಂಡರೆ ಜನ ದೇವರಂತೆ ನೋಡುವ ಕಾಲ ಮರೆಯಾಯ್ತು, ಅರಣ್ಯ ಕ್ಷೀಣಿಸುತ್ತಾ, ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ಗುಂಪು ಕಟ್ಟಿಕೊಂಡು ತಿರುಗುವ ಆನೆಗಳಲ್ಲಿ ಕೆಲವು ಕಾರಿಡಾರ್‌ ನಲ್ಲಿ ಸಂಚರಿಸಿ ಹೊರ ಬರುತ್ತಿವೆ, ಅವುಗಳನ್ನ ಕಾಡಿಗೆ ಅಟ್ಟಿದರೂ ವಿರಳ ಅರಣ್ಯದಾಚೀಚೆ ರೈತರ ಜಮೀನಿಗೆ ಲಗ್ಗೆ ಇಡುತ್ತಲೇ ಇರುತ್ತವೆ, ಹಾಗಾಗಿ ಮೇಲಧಿಕಾರಿಗಳ ನಿರ್ದೇಶನ ಹಾಗೂ ರಾಜಕಾರಣಿಗಳ ಕಾಟಕ್ಕೆ ಅವುಗಳು ಕ್ಯಾಂಪ್‌ ಸೇರುತ್ತವೆ.

ಹೀಗೆ ಸೇರಿದ ಆನೆಗಳು ಮುಂದೆ ನರಕ ಅನುಭವಿಸುತ್ತವೆ. ಶಿವಮೊಗ್ಗ ವ್ಯಾಪ್ತಿಯ ಆನೆಗಳನ್ನ ತಂದು ಕ್ರಾಲ್‌ನಲ್ಲಿ ಇಡುವುದಾದರೆ ಸರಿ ಆದರೆ, ಭದ್ರಾ ತರಹದ ಗೋಂಡಾರಣ್ಯದ ಆಸುಪಾಸಿನಲ್ಲಿ ಸುಳಿದಾಡುವ ಆನೆಗಳನ್ನೆಲ್ಲಾ ತಂದು ತುಂಬಿಸುವುದು ಸರಿಯಲ್ಲ ಎಂಬುದನ್ನ ಸ್ವತಃ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪಸಂರಕ್ಷಣಾಧಿಕಾರಿ ನಾಗರಾಜ್‌ ಒಪ್ಪಿಕೊಳ್ಳುತ್ತಾರೆ. ರಾಜ್ಯಾದ್ಯಂತ ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡಿ ಅಪಾರ ಅನುಭವವಿರುವ ನಾಗರಾಜ್‌, ಮೇಲಧಿಕಾರಿಗಳ ಜೊತೆ ಚರ್ಚಿಸಿ ಜೋಗಿಮಟ್ಟಿಯಲ್ಲಿ ಸೆರೆಸಿಕ್ಕ ಆನೆಯನ್ನ ಸಂರಕ್ಷಿತ ಅರಣ್ಯಕ್ಕೆ ಪುನಃ ಬಿಡುವ ಯೋಚನೆಯಲ್ಲೂ ಇದ್ದಾರೆ, ಆದರೆ ಕ್ಯಾಂಪ್‌ನಲ್ಲಿ ಈಗಿರುವ ಆನೆಗಳನ್ನೂ ಕಡಿಮೆಗೊಳಿಸುವ ಕೆಲಸವೂ ಆಗಬೇಕಿದೆ.

Tags: Bhadra Reserve ForestChitradurga DistrictElephantsForest DestroyForest ProtectionSakrebyle Elephant CampShimogga Districtಅರಣ್ಯ ನಾಶಅರಣ್ಯ ಸಂರಕ್ಷಣೆಆನೆಗಳುಚಿತ್ರದುರ್ಗ ಜಿಲ್ಲೆಭದ್ರಾ ಸಂರಕ್ಷಿತ ವಲಯಶಿವಮೊಗ್ಗ ಜಿಲ್ಲೆಸಕ್ರೆಬೈಲು ಆನೆ ಬಿಡಾರ
Previous Post

CAB: ಹಿಂಸಾಚಾರವೂ, ಹಠಮಾರಿ ಕೇಂದ್ರವೂ!

Next Post

ಟ್ವಿಟ್ಟರ್‌ನಲ್ಲಿ #ResignAmitShah ಹ್ಯಾಶ್‌ಟ್ಯಾಗ್‌ 63 ಸಾವಿರ ದಾಟುತ್ತಿದೆ

Related Posts

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
0

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಗೆ (KS Eshwarappa) ಲೋಕಾಯುಕ್ತ (Lokayukta) ಶಾಕ್ ಎದುರಾಗಿದೆ. ಈ ಹಿಂದೆ ಬಿಜೆಪಿ (Bjp) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಈಶ್ವರಪ್ಪ ಅವರ...

Read moreDetails
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025
Next Post
ಟ್ವಿಟ್ಟರ್‌ನಲ್ಲಿ #ResignAmitShah ಹ್ಯಾಶ್‌ಟ್ಯಾಗ್‌ 63 ಸಾವಿರ ದಾಟುತ್ತಿದೆ

ಟ್ವಿಟ್ಟರ್‌ನಲ್ಲಿ #ResignAmitShah ಹ್ಯಾಶ್‌ಟ್ಯಾಗ್‌ 63 ಸಾವಿರ ದಾಟುತ್ತಿದೆ

Please login to join discussion

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada