• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸ್ವಾತಂತ್ರ್ಯೋತ್ಸವದ ನಂತರ ಪ್ರಧಾನಿ ಮೋದಿ ಪೆಟ್ರೋಲ್ ರೇಟ್ ಎಷ್ಟು ಏರಿಸಿದ್ದಾರೆ?

by
August 25, 2020
in ದೇಶ
0
ಸ್ವಾತಂತ್ರ್ಯೋತ್ಸವದ ನಂತರ ಪ್ರಧಾನಿ ಮೋದಿ ಪೆಟ್ರೋಲ್ ರೇಟ್ ಎಷ್ಟು ಏರಿಸಿದ್ದಾರೆ?
Share on WhatsAppShare on FacebookShare on Telegram

ದೇಶದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಹೇಳುತ್ತಿದ್ದಾರೆ. ಅವರು ಮಾರ್ಮಿಕವಾಗಿ ಈ ಮಾತನ್ನು ಹೇಳುತ್ತಿದ್ದಾರೋ? ಅಥವಾ ಸುಳ್ಳು ಹೇಳಿ ಜನರನ್ನು ನಂಬಿಸುತ್ತಿದ್ದಾರೋ? ಎಂಬುದು ಚರ್ಚಾರ್ಹ ವಿಷಯ. ಮುಖ್ಯ ಪ್ರಶ್ನೆ ಏನೆಂದರೆ- ‘ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ’ ಎಂದು ಪ್ರಧಾನಿ ಮೋದಿ ಏಕೆ ಪದೇ ಪದೇ ಹೇಳುತ್ತಿದ್ದಾರೆ ಎಂಬುದು.

ADVERTISEMENT

ನಮ್ಮ ಗ್ರಾಹಕರ “ಖರೀದಿ ಶಕ್ತಿ”ಯನ್ನು ಆಧರಿಸಿ ಪ್ರಧಾನಿ ಮೋದಿ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ಹೇಳುತ್ತಿರಬಹುದೇ? ಏಕೆಂದರೆ ನಮ್ಮ ಗ್ರಾಹಕರ “ಖರೀದಿ ಶಕ್ತಿ” ಪ್ರಬಲವಾಗಿದೆ ಎಂಬುದನ್ನು ಮೋದಿ ಅವರು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ಜನರ ಖರೀದಿ ಶಕ್ತಿ ಪ್ರಬಲವಾಯಿತೆಂದರೆ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದೇ ತಾನೆ ಅರ್ಥ!?

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜುಲೈ ತಿಂಗಳಲ್ಲಿ ಚಿಲ್ಲರೆ ದರ ಹಣದುಬ್ಬರವು ಶೇ.6.99ಕ್ಕೆ ಜಿಗಿದಿದೆ. ಅಂದರೆ, ಗ್ರಾಹಕರು ನೇರವಾಗಿ ಖರೀದಿಸುವ ಸರಕು, ಸೇವೆಗಳ ದರಗಳು ತೀವ್ರವಾಗಿ ಏರಿಕೆಯಾಗಿವೆ. ಈ ದರ ಏರಿಕೆಯ ನಡುವೆಯೂ ಜನರು ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ ಎಂದರೆ ಜನರು ಸಂತೃಪ್ತವಾಗಿಯೇ ಇದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವಿಸಿರಲೂ ಬಹುದು.

ಅದೇ ಖುಷಿಯಲ್ಲಿ ಪ್ರಧಾನಿ ಮೋದಿ ಸರ್ಕಾರ ಮಾಡಿದ್ದೇನು ಗೊತ್ತೇ? ಸುಮಾರು 15 ದಿನಗಳ ಕಾಲ ಸ್ಥಿರವಾಗಿದ್ದ ಪೆಟ್ರೋಲ್ ದರವನ್ನು ಏರಿಕೆ ಆಗಸ್ಟ್ 15ರ ಮಧ್ಯರಾತ್ರಿಯಿಂದ ಮತ್ತೆ ಏರಿಕೆ ಮಾಡಲು ಆರಂಭಿಸಿದ್ದು. ಮೋದಿ ಸರ್ಕಾರವು ಪೆಟ್ರೋಲ್ ದರ ಏರಿಕೆ ಮಾಡಲು ವಿವಿಧ ತೆರಿಗೆಗಳನ್ನು ಹೇರುತ್ತಿರುವುದರ ಬಗ್ಗೆ ಆಗಾಗ್ಗೆ ಬೆಳಕು ಚೆಲ್ಲುತ್ತಿರುವ “ಪ್ರತಿಧ್ವನಿ” ಸ್ವಾತಂತ್ರ್ಯೋತ್ಸವದ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ದರ ಏರಿಕೆ ಮಾಡಿದ್ದನ್ನೂ ವರದಿ ಮಾಡಿತ್ತು.

Also Read: ಪೆಟ್ರೋಲ್ ದರ ಏರಿಕೆ ಮತ್ತೆ ಆರಂಭ! ಸ್ವಾತಂತ್ರ್ಯೋತ್ಸವಕ್ಕೆ ಪ್ರಧಾನಿ ಮೋದಿ ಕೊಡುಗೆ?!

ಮೋದಿ ಸರ್ಕಾರ ಪೆಟ್ರೋಲ್ ದರ ಏರಿಕೆ ಆರಂಭಿಸಿ ಈಗ ಹತ್ತು ದಿನಗಳು ಕಳೆದಿವೆ. ಈ ಹತ್ತು ದಿನಗಳಲ್ಲಿ ಪೆಟ್ರೋಲ್ ದರವನ್ನು ನಿತ್ಯವೂ 10 ರಿಂದ 20 ಪೈಸೆ ಆಜುಬಾಜಿನಲ್ಲಿ ಸತತವಾಗಿ ಏರಿಸಲಾಗಿದೆ. ಈ ರೀತಿ ಏರಿಸುವ ಹಂತದಲ್ಲಿ ಮೋದಿ ಸರ್ಕಾರವು ದಾಖಲೆಯೊಂದನ್ನು ಮಾಡಿದೆ. ಅದೆಂದರೆ ದೇಶದ ಜನರು ಈಗ ಪೆಟ್ರೋಲ್ ಗೆ ಪಾವತಿಸುತ್ತಿರುವ ದರವು ಸರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಅಂದರೆ, ಮೋದಿ ಸರ್ಕಾರವೇ ಈ ಹಿಂದೆ 2018 ಸೆಪ್ಟೆಂಬರ್ ತಿಂಗಳಲ್ಲಿ ಪೆಟ್ರೋಲ್ ದರವನ್ನು 83.84 ರುಪಾಯಿಗಳಿಗೆ (ಬೆಂಗಳೂರಿನ ದರ) ಏರಿಸಿದ್ದು ಸರ್ವಕಾಲಿಕ ಗರಿಷ್ಠ ದರವಾಗಿತ್ತು. ಈಗ ಸ್ವಾತಂತ್ರ್ಯೋತ್ಸವದ ನಂತರದಲ್ಲಿ ಸತತವಾಗಿ ಪೆಟ್ರೋಲ್ ದರ ಏರಿಸಿರುವ ಮೋದಿ ಸರ್ಕಾರವು ಹಿಂದಿನ ಸರ್ವಕಾಲಿಕ ಗರಿಷ್ಠ ದರದ ದಾಖಲೆಯನ್ನು ಮುರಿದಿದೆ. ಪ್ರಸ್ತುತ ಬೆಂಗಳೂರಿನಲ್ಲಿ (ಆಗಸ್ಟ್ 25 ರಂದು) ಪ್ರತಿ ಲೀಟರ್ ಪೆಟ್ರೋಲ್ ದರವು 84.39 ರುಪಾಯಿಗೆ ಜಿಗಿದಿದೆ. ಇದು ಮತ್ತೊಂದು ಸರ್ವಕಾಲಿಕ ಗರಿಷ್ಠ ದರವೆಂಬ ದಾಖಲೆಯಾಗಿದೆ.

ಅಷ್ಟಕ್ಕೂ ಈ ದಾಖಲೆ ಸ್ಥಿರವಾಗಿರುತ್ತದಾ? ಖಂಡಿತವಾಗಿಯೂ ಇಲ್ಲಾ. ದಾಖಲೆ ಮಾಡುವುದರಲ್ಲಿ ಪ್ರಧಾನಿ ಮೋದಿ ಸರ್ಕಾರವು ಸದಾ ಮುಂದು. ಈ ದಾಖಲೆಯನ್ನು ಮೋದಿ ಸರ್ಕಾರವೇ ಮುರಿಯಲಿದೆ. ಏಕೆಂದರೆ ಆಗಸ್ಟ್ 25ರಂದು ದಾಖಲಾಗಿರುವ 84.39 ರುಪಾಯಿ ಸರ್ವಕಾಲಿಕ ಗರಿಷ್ಠ ದರವೇ ಸ್ಥಿರವಾಗುವುದಿಲ್ಲ. ಅಥವಾ ಆಗಸ್ಟ್ 26ರಿಂದ ಪೆಟ್ರೋಲ್ ದರವನ್ನು ಮೋದಿ ಸರ್ಕಾರ ಇಳಿಸುವ ಸಾಧ್ಯತೆಯೂ ಇಲ್ಲ ಹೀಗಾಗಿ ಮೋದಿ ಸರ್ಕಾರವು ಪೆಟ್ರೋಲ್ ದರ ಏರಿಕೆಯಲ್ಲಿ ಮತ್ತೆ ಮತ್ತೆ ಹೊಸ ಹೊಸ ಸರ್ವಕಾಲಿಕ ದಾಖಲೆಯನ್ನು ಮಾಡುತ್ತಲೇ ಇರುತ್ತದೆ. ಭಾರತದ “ಸಶಕ್ತ ಗ್ರಾಹಕರು” ಈ ದಾಖಲೆಯನ್ನು ಸಂಭ್ರಮಿಸಬೇಕಷ್ಟೇ!

ಸ್ವಾತಂತ್ರ್ಯೋತ್ಸವದ ನಂತರದ ಹತ್ತು ದಿನಗಳಲ್ಲಿ ಪೆಟ್ರೋಲ್ ದರ ಏರಿದ್ದೆಷ್ಟು ಎಂಬುದರ ಅಂಕಿ ಅಂಶಗಳನ್ನು ಗಮನಿಸಿ. ಆಗಸ್ಟ್ 15ರಂದು ಪೆಟ್ರೋಲ್ ದರವು 83.11 ರುಪಾಯಿ ಇತ್ತು. ಆಗಸ್ಟ್ 15ರವರೆಗೂ ಇದೇ ದರವನ್ನು ಕಾಯ್ದುಕೊಳ್ಳಲಾಗಿತ್ತು. ಆಗಸ್ಟ್ 15ರಂದು ಪ್ರಧಾನಿ ನರೇಂದ್ರಮೋದಿ ಕೆಂಪುಕೋಟೆಯಲ್ಲಿ ನಿಂತು ದೇಶವನ್ನುದ್ದೇಶಿಸಿ ಮಾತನಾಡಿ, ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದರು. ಅಂದು ರಾತ್ರಿಯಿಂದಲೇ ಪೆಟ್ರೋಲ್ ದರ ಏರಿಕೆ ಆರಂಭವಾಯಿತು. ಈ ಹತ್ತು ದಿನಗಳ ಅವಧಿಯಲ್ಲಿ 10 ಪೈಸೆಯಿಂದ 20 ಪೈಸೆಯವರೆಗೆ ನಿತ್ಯವೂ ಏರಿಕೆ ಮಾಡಲಾಗಿದೆ. ಈ ಹತ್ತುದಿನಗಳ ಒಟ್ಟು ಏರಿಕೆಯು 1.28 ರುಪಾಯಿಗಳು. ಸರಾಸರಿ 13 ಪೈಸೆ ಏರಿಕೆ ಮಾಡಲಾಗಿದೆ. ಒಟ್ಟಾರೆ ಏರಿಕೆಯ ಪ್ರಮಾಣವು ಶೇ.1.50 ರಷ್ಟಾಗಿದೆ.

ಮೋದಿ ಸರ್ಕಾರ ಇದೇ ವೇಗದಲ್ಲಿ ದರ ಏರಿಸಿಕೊಂಡು ಬಂದರೆ ಇನ್ನು ಐದು ದಿನಗಳಲ್ಲಿ ಅಂದರೆ ಆಗಸ್ಟ್ ತಿಂಗಳು ಮುಗಿಯುವುದರೊಳಗೆ ಪೆಟ್ರೋಲ್ ದರವು 85 ರುಪಾಯಿ ದಾಟುತ್ತದೆ. ಜುಲೈ- ಆಗಸ್ಟ್ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬಹುತೇಕ ಸ್ಥಿರವಾಗಿ ವಹಿವಾಟಾಗಿದೆ. ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರೆಲ್ ಗೆ 42-46 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗಿದ್ದರೆ, ಡಬ್ಲ್ಯೂಟಐ ಕ್ರೂಡ್ 40-44 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗಿದೆ. ಆದರೆ, ಬರುವ ದಿನಗಳಲ್ಲಿ ಕಚ್ಚಾ ತೈಲ ದರ ಏರುವ ನಿರೀಕ್ಷೆ ಇದೆ. ಬ್ರೆಂಟ್ ಕ್ರೂಡ್ 55-60 ಡಾಲರ್ ಮತ್ತು ಡಬ್ಲ್ಯೂಟಿಐ ಕ್ರೂಡ್ 50-55 ಡಾಲರ್ ಗೆ ಏರಬಹುದು. ವರ್ಷಾಂತ್ಯಕ್ಕೆ 70 ಡಾಲರ್ ಗಡಿ ದಾಟಲೂ ಬಹುದೆಂಬ ಮುನ್ನಂದಾಜು ಇದೆ.

ಈಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ಸರಾಸರಿ ಹತ್ತುವರ್ಷಗಳ ಲೆಕ್ಕದಲ್ಲಿ ಕನಿಷ್ಠಮಟ್ಟದಲ್ಲಿ ವಹಿವಾಟಾಗುತ್ತಿರುವಾಗಲೇ ಮೋದಿ ಸರ್ಕಾರವು ಪೆಟ್ರೋಲ್ ದರವನ್ನು ಸರ್ವಾಕಾಲಿಕ ಗರಿಷ್ಠ ದರದಲ್ಲಿ ಮಾರಾಟ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಕಚ್ಚಾ ತೈಲ ದರ ತ್ವರಿತವಾಗಿ ಏರಿಕೆಯಾದರೆ ಪೆಟ್ರೋಲ್ ದರ ಯಾವ ಮಟ್ಟದಲ್ಲಿ ಏರಬಹುದು?

ಮೋದಿ ಸರ್ಕಾರದ ಇದುವರೆಗಿನ ದರ ಏರಿಕೆಯ ದಾಖಲೆಯನ್ನು ಗಮನಿಸಿದರೆ, 2021ರಲ್ಲಿ ಪೆಟ್ರೋಲ್ ದರವು ಮೂರಂಕಿ ಮುಟ್ಟಿದರೆ ಅಂದರೆ ಶತಕ ಬಾರಿಸಿದರೆ ಅಚ್ಚರಿಯಿಲ್ಲ. ಈಗಾಗಲೇ ಹೆಚ್ಚುಕಮ್ಮಿ 85 ರುಪಾಯಿ ನೀಡುತ್ತಿರುವ ಭಾರತದ “ಸಶಕ್ತ ಗ್ರಾಹಕ”ರಿಗೆ ಇನ್ನು 15 ರುಪಾಯಿ ಹೆಚ್ಚಿಗೆ ಕೊಡಲು ಕಷ್ಟವೇ?

ಅಂದ ಹಾಗೆ ಈ ಅವಧಿಯಲ್ಲಿ ಡಿಸೇಲ್ ದರ ಏರಿಕೆಯಾಗಿಲ್ಲ. ಸ್ವಾತಂತ್ರ್ಯೋತ್ಸವದ ದಿನದಂದು ಇದ್ದಷ್ಟೇ ಇದೆ. ಡಿಸೇಲ್ ಗ್ರಾಹಕರ ಮೇಲೆ ಮೋದಿ ಸರ್ಕಾರ ಕರುಣೆ ತೋರಿದೆಯೇ? ಖಂಡಿತಾ ಇಲ್ಲಾ. ಈ ಮೊದಲೇ ಡಿಸೇಲ್ ದರವನ್ನು ಗರಿಷ್ಠ ಮಟ್ಟಕ್ಕೆ ಏರಿಸಲಾಗಿದೆ. ಅದು ಈಗಾಗಲೇ ಸರ್ವಕಾಲಿಕ ಗರಿಷ್ಠ ಮಟ್ಟದಲ್ಲೇ ಇದೆ. ಈ ಹಿಂದಿನ ಗರಿಷ್ಠ ಮಟ್ಟವು 76.16 ರುಪಾಯಿಗಳಾಗಿತ್ತು. ಆದರೆ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಪೆಟ್ರೋಲ್ ದರ ಸ್ಥಿರವಾಗಿದ್ದಾಗಲೂ ಡಿಸೇಲ್ ದರ ಏರಿಕೆಯಾಗಿದ್ದು 77.88 ರುಪಾಯಿಗೆ ಜಿಗಿದು ಸ್ಥಿರವಾಗಿದೆ. ಅಂದರೆ, ಡಿಸೇಲ್ ದರ ಕೂಡಾ ಸರ್ವಕಾಲಿಕ ಗರಿಷ್ಠ ಮಟ್ಟದಲ್ಲೇ ಮಾರಾಟವಾಗುತ್ತಿದೆ.

ಇದೆಲ್ಲಾ ಓದಿದ ನಂತರ “ವಾಹ್ಹ್ ಮೋದಿಜಿ ವಾಹ್ಹ್” ಎಂಬ ಮಾತು ನಿಮಗರಿವಿಲ್ಲದಂತೆ ನಿಮ್ಮ ಬಾಯಿಂದ ಹೊರಹೊಮ್ಮಿದರೆ ಅದಕ್ಕೆ ನಾವು ಜವಾಬ್ದಾರರಲ್ಲಾ!!

Tags: ಪೆಟ್ರೋಲ್‌ ಬೆಲೆ ಏರಿಕೆಪೆಟ್ರೋಲ್-ಡೀಸೆಲ್‌ ದರ ಏರಿಕೆಪ್ರಧಾನಿ ನರೇಂದ್ರ ಮೋದಿ
Previous Post

ಉತ್ತರ ಕರ್ನಾಟಕಕ್ಕೆ ಸಿಎಂ ಭೇಟಿ: ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ

Next Post

ನ್ಯಾಯಾಂಗ ನಿಂದನೆ ಪ್ರಕರಣ; ಕ್ಷಮೆ ಕೇಳಲು ಪ್ರಶಾಂತ್‌ ಭೂಷಣ್‌ ಮತ್ತೆ ನಿರಾಕರಣೆ

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ನ್ಯಾಯಾಂಗ ನಿಂದನೆ ಪ್ರಕರಣ; ಕ್ಷಮೆ ಕೇಳಲು ಪ್ರಶಾಂತ್‌ ಭೂಷಣ್‌ ಮತ್ತೆ ನಿರಾಕರಣೆ

ನ್ಯಾಯಾಂಗ ನಿಂದನೆ ಪ್ರಕರಣ; ಕ್ಷಮೆ ಕೇಳಲು ಪ್ರಶಾಂತ್‌ ಭೂಷಣ್‌ ಮತ್ತೆ ನಿರಾಕರಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada