• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಜೂನ್‌ ಮಧ್ಯದಲ್ಲೇ ಆರೋಪಿಗಳಿಗೆ ಸಿಕ್ಕಿತ್ತು ದಾಳಿಯ ಮಾಹಿತಿ

by
September 11, 2020
in ಕರ್ನಾಟಕ
0
ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಜೂನ್‌ ಮಧ್ಯದಲ್ಲೇ ಆರೋಪಿಗಳಿಗೆ ಸಿಕ್ಕಿತ್ತು ದಾಳಿಯ ಮಾಹಿತಿ
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ, ಡ್ರಗ್ಸ್ ಸಿಕ್ಕಿದ ಬಳಿಕ ಸ್ಯಾಂಡಲ್‌ವುಡ್ ಕಡೆಗೆ ನಶೆಯ ಗಾಳಿ ಬೀಸಿತ್ತು. ಸ್ವತಃ ಸಿನಿಮಾ ನಟಿಯರು ಡ್ರಗ್ಸ್ ಸೇವನೆ ಹಾಗೂ ಮಾರಾಟ ಆರೋಪಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ಸಿಟಿ ಕ್ರೈಂ ಬ್ರಾಂಚ್ ಗೆ ಪ್ರಕರಣ ವರ್ಗಾವಣೆ ಆಗಿದ್ದು, ಜಾಲದಲ್ಲಿ ಇರುವ‌ ಆರೋಪದಲ್ಲಿ ಒಬ್ಬಬ್ಬೊರನ್ನೇ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಸರ್ಕಾರ ಕೂಡ ಯಾರನ್ನೂ ಬಿಡುವುದಿಲ್ಲ, ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ, ಎಲ್ಲರ ಬಣ್ಣ ಬಯಲಾಗುತ್ತೆ ನೋಡುತ್ತಿರಿ ಎಂದು ಸ್ವಯಂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಧ್ಯಮಗಳ ಮೂಲಕ ಎದೆಯುಬ್ಬಿಸಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಈ ನಡುವೆ ಪತ್ರಕರ್ತರಿಗೆ ಸಿಕ್ಕಿರುವ ಸುದ್ದಿ ಇಡೀ ಪೊಲೀಸ್ ಇಲಾಖೆಯನ್ನೇ ಅವಮಾನಕ್ಕೆ ದೂಡುವಂತಿದೆ.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸ್ಯಾಂಡಲ್‌ವುಡ್ ನಟಿಯರು ಎಷ್ಟೊಂದು ಪ್ರಭಾವಿಯಾಗಿದ್ದಾರೆ ಇದ್ದಾರೆ ಎನ್ನುವುದಕ್ಕೆ ಇಲ್ಲೊಂದು ನಿದರ್ಶನವಿದೆ. ಡ್ರಗ್ ದಂಧೆ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡುವ ವಿಚಾರ ಜೂನ್ ಮಧ್ಯದಲ್ಲೇ ಮಾಹಿತಿ ಸಿಕ್ಕಿದ್ದು, ಅಂದಿನಿಂದಲೇ ಆರೋಪಿಗಳು ಜಾಗೃತರಾಗಿದ್ದಾರೆ ಎನ್ನುವ ವಿಚಾರ ಬಯಲಾಗಿದೆ. ರವಿಶಂಕರ್ ಸ್ನೇಹಿತ ಪ್ರಶಾಂತ್ ರಾಂಕಾ ನಡುವೆ ಮೆಸೇಜ್ ಮಾತುಕತೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಇನ್ನುಮೇಲೆ ಪೆಡ್ಲರ್ ಗಳಿಗೆ ಕರೆ ಮಾಡಬೇಡ, ನಮ್ಮನ್ನು ಪೊಲೀಸರು ಟ್ರ್ಯಾಕ್ ಮಾಡುತ್ತಿದ್ದಾರೆ ಎನ್ನುತ್ತಾನೆ. ಅದಕ್ಕೆ ಹೇಗೆ ಗೊತ್ತಾಯ್ತು ಎಂದಿದ್ದಕ್ಕೆ, ತುಂಬಾ ಸಮಯದಲ್ಲಿ ನಿಗಾ ವಹಿಸಿದ್ದಾರೆ, ಸಂದೀಪ್ ಪಾಟೀಲ್ ಸರ್ ಎಂದು ಉತ್ತರಿಸಿದ್ದಾನೆ. ಅಂದರೆ ನಟಿ ರಾಗಿಣಿ ಆಪ್ತ ರವಿಶಂಕರ್ ಗೆ ಪೊಲೀಸರು ದಾಳಿ ಮಾಡೋ ವಿಚಾರ ಮೊದಲೇ ತಿಳಿದಿತ್ತು ಎನ್ನುವುದು ಬಯಲಾಗಿದೆ.

ಪೊಲೀಸರು ಡ್ರಗ್ಸ್ ಕೇಸ್ ಮೇಲೆ ನಿಗಾ ವಹಿಸಿದ್ದಾರೆ ಎನ್ನುವ ಮಾಹಿತಿ ಆರೋಪಿಗಳಿಗೆ ಸಿಕ್ಕಿದೆ ಎಂದಾದರೆ ಅಂದಿನಿಂದ ಇಲ್ಲಿಯವರೆಗೂ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದಿಲ್ಲ. ಇದೀಗ ಗುರುವಾರ (10/09/2020) ಸಿಸಿಬಿ ಪೊಲೀಸರು ಡೋಪಿಂಗ್ ಟೆಸ್ಟ್, ಹೇರ್ ಫಾಲಿಕಲ್‌ ಟೆಸ್ಟ್ ಮಾಡಿಸುತ್ತಿದ್ದಾರೆ. ಆದರೆ ಯಾವುದನ್ನೇ ಪರೀಕ್ಷೆ ಮಾಡಿದರೂ ಫಲಪ್ರದ ಆಗುವುದು ತೀರಾ ಕಡಿಮೆ ಎನ್ನಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯುವ ಮುನ್ನ ನ್ಯಾಯಾಧೀಶರಿಗೆ ಮನವಿ ಮಾಡಿದ್ದ ಪತ್ರದಲ್ಲಿ ಸಿಸಿಬಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ.

ಯಾವುದೇ ಡ್ರಗ್ಸ್ ಸೇವಿಸಿದ್ದರೂ ಮೂತ್ರ ಪರೀಕ್ಷೆಯನ್ನು 10 ರಿಂದ 12 ದಿನದ ಒಳಗೆ ಮಾಡಿದರೆ ಮಾತ್ರ ಪತ್ತೆಯಾಗುತ್ತದೆ. ರಕ್ತ ಪರೀಕ್ಷೆಯನ್ನು 24 ಗಂಟೆಯೊಳಗೆ ಮಾಡಬೇಕು. ಎಂಜಲು ಮಾದರಿ ಟೆಸ್ಟ್ 4 ದಿನದಲ್ಲಿ ಮಾಡಿದರೆ ಮಾತ್ರ ಫಲಿತಾಂಶ ಸಿಗುತ್ತದೆ ಇಲ್ಲದಿದ್ದರೆ ಪತ್ತೆ ಮಾಡುವುದು ಕಷ್ಟ. ಇನ್ನೂ ಹೇರ್ ಫಾಲಿಕಲ್ ಟೆಸ್ಟ್ ನಲ್ಲಿ 90 ದಿನಗಳ ಹಿಂದೆ ಡ್ರಗ್ಸ್ ಸೇವನೆ ಮಾಡಿದ್ದರೂ ಪತ್ತೆ ಮಾಡಬಹುದು. ಆದರೆ ಬೆಂಗಳೂರಿನ FSLನಲ್ಲಿ ಕೂದಲು ಮಾದರಿ ಪರೀಕ್ಷೆ ಮಾಡುವ ಸೌಲಭ್ಯ ಇಲ್ಲ. ಹೈದರಾಬಾದ್ FSL ಟೀಂ ಸಂಪರ್ಕಿಸುವ ಬಗ್ಗೆ ಸಿಸಿಬಿ ಪೊಲೀಸರು ಚಿಂತಿಸುತ್ತಿದ್ದಾರೆ. ಹೇರ್ ಕಲೆಕ್ಟ್ ಮಾಡಲು ಲ್ಯಾಬ್ ಟೆಕ್ನಿಶಿಯನ್ಸ್ ಕೂಡ ಅವರೇ ಬರಬೇಕಿದ್ದು, ಎಲ್ಲಿ ಪರೀಕ್ಷೆ ಮಾಡುತ್ತಾರೆ ಅವರ ಜೊತೆ ಸಂಪರ್ಕ ಸಾಧಿಸಿ ನಂತರ ಹೇರ್ ಫಾಲಿಕಲ್ ಟೆಸ್ಟ್ ಮಾಡಬೇಕಿದೆ. ಆದರೆ ಅದಕ್ಕೂ 90 ದಿನಗಳ ಕಾಲಾವಧಿ ಇರಲಿದ್ದು, ಕೂದಲು ಮಾದರಿ ಟೆಸ್ಟ್ ಮಾಡುವ ವೇಳೆಗೆ ಆ ಗಡುವು ಕೂಡ ಮುಗಿಯಲಿದೆ ಎನ್ನಲಾಗುತ್ತಿದೆ.

ಒಟ್ಟಾರೆ, ರಾಜಕಾರಣಿಗಳನ್ನು ಉಳಿಸುವುದಕ್ಕಾಗಿ ಹೀಗೆ ಮಾಡಿದ್ದರೋ ಅಥವಾ ಚಿತ್ರನಟಿಯರನ್ನೇ ಪಾರು ಮಾಡಲು ಮಾಹಿತಿ ಸೋರಿಕೆ ಮಾಡಿದ್ದಾರೋ ಎನ್ನುವುದು ಮತ್ತೊಂದು ತನಿಖೆ ಮೂಲಕ ಬಯಲಾಗಬೇಕಿದೆ.

Tags: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ
Previous Post

ಅಧಿಕಾರದ ಕಡೇ ಗಳಿಗೆಯಲ್ಲೂ ವಿವಾದ ಸೃಷ್ಟಿಸಿದ BBMP ಮೇಯರ್‌ ‌

Next Post

ಬೆಂಗಳೂರು ಮಳೆಗೆ ಮತ್ತಷ್ಟು ಹದೆಗೆಟ್ಟ ವೃಷಭಾವತಿ ತಡೆ ಗೋಡೆ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಬೆಂಗಳೂರು ಮಳೆಗೆ ಮತ್ತಷ್ಟು ಹದೆಗೆಟ್ಟ ವೃಷಭಾವತಿ ತಡೆ ಗೋಡೆ

ಬೆಂಗಳೂರು ಮಳೆಗೆ ಮತ್ತಷ್ಟು ಹದೆಗೆಟ್ಟ ವೃಷಭಾವತಿ ತಡೆ ಗೋಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada