• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಂರಕ್ಷಿತ ಪ್ರದೇಶದಲ್ಲಿ ಜಾಕ್ವೆಲ್ ಯೋಜನೆ: ವನ್ಯಜೀವಿ ಪ್ರೇಮಿಗಳ ಪ್ರತಿಭಟನೆ

by
November 20, 2019
in ಕರ್ನಾಟಕ
0
ಸಂರಕ್ಷಿತ ಪ್ರದೇಶದಲ್ಲಿ ಜಾಕ್ವೆಲ್ ಯೋಜನೆ: ವನ್ಯಜೀವಿ ಪ್ರೇಮಿಗಳ ಪ್ರತಿಭಟನೆ
Share on WhatsAppShare on FacebookShare on Telegram

ಕೊಪ್ಪಳ ಜಿಲ್ಲೆಯ ಹಲವು ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಬೇಕೆಂದು ಹಾಗೂ ಅಧಿಕ ಹಾರ್ಸ್ ಪವರ್ ಶಕ್ತಿ ಯಂತ್ರಗಳ ಮೂಲಕ ನೂರಾರು ಕಿ.ಮೀಗಳಷ್ಟು ದೂರ ಇರುವ 13 ಕೆರೆಗಳನ್ನು ತುಂಬಿ ಅಂರ್ತಜಲ ಹೆಚ್ಚಿಸುವ ಉದ್ದೇಶದಿಂದ ಗಂಗಮ್ಮನ ಮಡುಗು ಎಂಬ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆದರೆ ಸದರಿ ಕಾಮಗಾರಿಯು ಈ ಗಂಗಮ್ಮನ ಮಡುಗು ಜಲಾಯನ ಪ್ರದೇಶದಲ್ಲಿ ಜಾರಿಯಾದರೆ ಹಲವು ಜಲಚರಗಳಿಗೆ ಹಾನಿಯಾಗುತ್ತದೆ ಎಂದು ಅದೇ ಪ್ರದೇಶದಲ್ಲಿ ವನ್ಯ ಜೀವಿ ಪ್ರೇಮಿಗಳು ನಿಂತು ಮೌನ ಪ್ರತಿಭಟನೆ ಮಾಡುತ್ತಿದ್ದಾರೆ.

ADVERTISEMENT

ಅವರ ಪ್ರಕಾರ ಈ ಜಾಕ್ ವೆಲ್ ಅಪರೂಪದ ವನ್ಯ ಜೀವಿ ಸಂಕುಲಕ್ಕೆ ಕಂಟಕ ಪ್ರಾಯವಾಗಲಿದೆ. ಈ ಕಾಮಗಾರಿಯನ್ನು ಇಲ್ಲಿ ಸ್ಥಗಿತಗೊಳಿಸಿ ಬೇರೆ ಪ್ರದೇಶದಲ್ಲಿ ಆರಂಭಿಸಬಹುದು ಎಂಬುದು ನಿಸರ್ಗ ಪ್ರೇಮಿಗಳ ಆಶಯ.

ಯಾಕೆ? ಇಲ್ಲಿ ಏಕೆ ಬೇಡ?

ತುಂಗಭದ್ರಾ ನದಿ ತೀರದ ಇದೇ ಭಾಗದಲ್ಲಿ ಬರುವ ಕೆಲವು ಪ್ರದೇಶಗಳನ್ನು ನೀರು ನಾಯಿ ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ವನ್ಯ ಜೀವಿ ಮಂಡಳಿಯಿಂದ ಆಕ್ರಮವಾಗಿ ಕಾಮಗಾರಿ ಕೈಗೊಂಡಿದ್ದು ಇದು 1972 ರ ವನ್ಯ ಜೀವಿ ಕಾಯ್ದೆಯ ಉಲ್ಲಂಘನೆಯಾಗಿದ್ದು ತಕ್ಷಣವೇ ಕಾಮಗಾರಿಯನ್ನು ನಿಲ್ಲಿಸಬೇಕು.

ಈ ಜಲಾಯನ ಪ್ರದೇಶದಲ್ಲಿ ಏನೇನಿವೆ?

ಈ ಜಲಾಯನ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಮೊಸಳೆಗಳು, ನೀರು ನಾಯಿಗಳು, ಆಮೆಗಳು ಹಾಗೂ ವಿವಿಧ ಪ್ರಭೇದದ ಮೀನುಗಳು ವಾಸಿಸುತ್ತಿವೆ ಹಾಗೂ ಸಂತಾನೋತ್ಪತ್ತಿ ಮಾಡುತ್ತಿವೆ. ಇಲ್ಲಿ ವಿವಿಧ ಬಗೆಯ ಏಡಿಗಳಿವೆ. ಇಂತಹ ಪ್ರದೇಶದಲ್ಲಿ ಜಾಕ್ ವೆಲ್ ನಿರ್ಮಾಣ ಮಾಡುವುದರಿಂದ ಈ ಜಲಚರಗಳು ನಶಿಸಿಹೋಗುತ್ತವೆ. ಇವುಗಳನ್ನೆಲ್ಲ ಕಾಪಾಡುವುದು ವನ್ಯಜೀವಿ ಪ್ರೇಮಿಗಳಷ್ಟೇ ಅಲ್ಲ, ಎಲ್ಲ ಸಾರ್ವಜನಿಕರ ಕರ್ತವ್ಯವೂ ಆಗಿದೆ.

ಈ ಪ್ರತಿಭಟನೆಯ ಸುದ್ದಿ ತಿಳಿದ ತಕ್ಷಣ ಬಳ್ಳಾರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮಂಗಳವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ವನ್ಯಜೀವಿ ಪ್ರೇಮಿಗಳಿಂದ ಮನವಿ ಸ್ವೀಕರಿಸಿದರು.

ಇದೇ ಸಮಯದಲ್ಲಿ ಮಾತನಾಡಿದ ವನ್ಯ ಜೀವಿ ಸಂಶೋಧಕ ಡಾ ಸಮದ್ ಕೊಟ್ಟೂರ ಇದು ವಿವಿಧ ಬಗೆಯ ಜಲಚರಗಳು ವಾಸಿಸುವ ಅದ್ಭುತ ಪ್ರದೇಶ. ಇಲ್ಲಿರುವ ಜಲಚರಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕೆಲಸ. ವನ್ಯ ಜೀವಿಗಳನ್ನು ನಾಶಪಡಿಸಿ ಯೋಜನೆ ಪ್ರಾರಂಭಿಸುವ ಅಗತ್ಯವಾದರೂ ಏನಿದೆ. ಮೊದಲು ಜಲಚರಗಳ ರಕ್ಷಣೆ ಮುಖ್ಯ. ಈ ಕಾರ್ಯವನ್ನು ಶಿವಪುರ ಆಣೆಕಟ್ಟಿನಿಂದ ಮಾಡಿದರೆ ಯಾವುದೇ ತೊಂದರೆಗಳು ಇರುವುದಿಲ್ಲ”.

ನೀರು ನಾಯಿ

ಎಲ್ಲಿದೆ ಇದು?

ನೀರು ನಾಯಿ ಸಂರಕ್ಷಿತ ಪ್ರದೇಶವು ಮುದ್ಲಾಪುರ ಗ್ರಾಮದಿಂದ ಬಳ್ಳಾರಿಯ ಕಂಪ್ಲಿವರೆಗೂ 34 ಕಿ.ಮೀಗಳಷ್ಟು ಉದ್ದ ಜಲಾಯನ ಪ್ರದೇಶ. ಇದು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಇದೆ. ಈ ಪ್ರದೇಶದಲ್ಲಿ ಕಂಡು ಬರುವ ನೀರು ನಾಯಿಗಳನ್ನು ರಕ್ಷಿಸುವ ಉದ್ದೇಶದಿಂದ ಇದನ್ನು ಸಂರಕ್ಷಿತ ಪ್ರದೇಶದ ಪಟ್ಟಿಗೆ ಸೇರಿಸಲಾಯಿತು. ಇಲ್ಲಿ ಮೀನುಗಾರರು ಮೀನು ಹಿಡಿಯುವುದಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಜಲಾಯನದ ಪ್ರದೇಶ ಉದ್ದವಾಗಿರುವುದರಿಂದ ಇಲ್ಲಿ ಮೀನು ಹಿಡಿಯುವವರನ್ನು ತಡೆಯುವುದೇ ಅರಣ್ಯ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಆದರೂ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಹಾಗೂ ಸಾರ್ವಜನಿಕರ ಸಹಯೋಗದಿಂದ ಅರಣ್ಯ ಸಿಬ್ಬಂದಿಗಳು ಜಲಚರಗಳನ್ನು ರಕ್ಷಿಸುತ್ತ ಬಂದಿರುವುದು ಸ್ವಾಗತಾರ್ಹ.

ಕೊಪ್ಪಳದ ಅರಣ್ಯಾಧಿಕಾರಿ ಯಶಪಾಲ್ ಕ್ಷೀರಸಾಗರ ಹೇಳುವ ಪ್ರಕಾರ, “ಕೆಲವು ಜಲಾನಯನ ಪ್ರದೇಶಗಳು ಅರಣ್ಯ ಇಲಾಖೇಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದನ್ನು ಕೊಪ್ಪಳದ ಜಿಲ್ಲಾಧಿಕಾರಗಳ ಜೊತೆಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಲ್ಲ ವಿವರಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು”.

ಇಲ್ಲಿರುವ ನೀರು ನಾಯಿಗಳ ಸಂರಕ್ಷಣೆಯ ಕೂಗು ಇಂದಿನದಲ್ಲ. ಮೊದಲು ಸಿಂಧನೂರ ಕಡೆಗೆ ವಲಸೆ ಬಂದು ಕೆಲವು ಜನರು ಇವುಗಳನ್ನು ಬೇಟೆಯಾಡುತ್ತಿದ್ದರು. ಅದ್ಕಕೆ ಈಗ ಸಾಕಷ್ಟು ಕಡಿವಾಣ ಹಾಕಲಾಗಿದೆ. ಆದರು ಹೊಂಚು ಹಾಕಿ ಸಂಚು ಮಾಡಿ ಇವುಗಳನ್ನು ಕೊಲ್ಲುತ್ತಿದ್ದಾರೆ. ಇದರ ಬಗ್ಗೆ ವನ್ಯ ಜೀವಿ ಪ್ರೇಮಿಗಳು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ನೀರಿನ ಯೋಜನೆ ಒಂದು ಇಲ್ಲಿ ಬಂದರೆ ಅವುಗಳಿಗೆ ಹಾನಿಯಾಗುವುದಂತೂ ಖಚಿತ. ಇವುಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವೂ ಅಲ್ಲವೇ….

ಗದಗ ಜಿಲ್ಲೆಯ ಮಂಜುನಾಥ ನಾಯಕ, ಜೀವಿ ಸಂಶೋಧಕರ ಅಭಿಪ್ರಾಯ, “ಗಂಗಮ್ಮನ ಮಡುಗು ,ಕರಿಯಮ್ಮನ ಮಡುಗು ಹಾಗೂ ಜೋಗೆಮ್ಮನ ಮಡುಗು ಈ ಪ್ರದೇಶವು ಕೊಪ್ಪಳ ಜಿಲ್ಲೆಯ ಹುಲಿಗಿ ಭಾಗದಲ್ಲಿ ಕಂಡು ಬರುವ ಐತಿಹಾಸಿಕ ಹಾಗು ನೀರು ನಾಯಿ ಸಂರಕ್ಷಿತ ಪ್ರದೇಶ. ಮೊಸಳೆ ,ನೀರುನಾಯಿ , ಆಮೆಗಳು ,ಹಾವುಗಳ ಹಾಗು ಇನ್ನಿತರ ಜಲಚರಗಳು ಕಂಡು ಬರುವ ವಿಶಿಷ್ಟ ತಾಣ. ಸರಕಾರವು ಇಂತಹ ಸಂರಕ್ಷಿತ ಪ್ರದೇಶದಿಂದಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆಕೈಗೊಂಡಿರುವದು ವಿಪರ್ಯಾಸ”.

ಬಳ್ಳಾರಿ ಜಿಲ್ಲೆಯ ವನ್ಯ ಜೀವಿ ಪ್ರೇಮಿ ಪಂಪಯ್ಯ ಮಳೀಮಠ “ನಮಗೆ ನೀರಿನ ಯೋಜನೆಯ ಬಗ್ಗೆ ಯಾವುದೇ ತಕರಾರಿಲ್ಲ. ಆ ಯೋಜನೆಯ ಪ್ರದೇಶವನ್ನು ಬದಲಿಸಿ ಜಲಚರಗಳಿಗೆ ಅನುಕೂಲ ಮಾಡಿದರೆ ಸಾಕು ಎಂಬುದಷ್ಟೇ ನಮ್ಮ ಆಶಯ”.

ಮುಂದೇನು ಮಾಡುವರು:

ಕೊಪ್ಪಳ ಮತ್ತು ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ಈ ಯೋಜನೆ ಸ್ಥಗಿತ ಗೊಳಿಸುವರೇ…..ಜಲಚರ ಜೀವಿಗಳನ್ನು ಉಳಿಸಲು ಸಹಕರಿಸುವರೇ…..ಯೋಜನೆಯನ್ನು ಬೇರೆಡೆ ಸ್ಥಳಾಂತರಿಸುವರೆ ಕಾದು ನೋಡೋಣ…ಒಟ್ಟಿನಲ್ಲಿ ಜಲಚರ ಜೀವಿಗಳಿಗೆ ಹಾನಿಯಾಗಬಾರದು….ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಬೇಕು ಹಾಗೂ ಕೆರೆಗಳನ್ನೂ ಭರ್ತಿ ಮಾಡಬೇಕು…ಇದೇ ಅಧಿಕಾರಿಗಳಿಗೆ ಮುಂದಿರುವ ಸವಾಲ್…ಅವರೂ ಸಭೆ ಸೇರಿ ಯೋಚಿಸಲಿ.., ಸೂಕ್ತ ತೀರ್ಮಾನ ತೆಗೆದುಕೊಂಡು ನಮಗೂ ತಿಳಿಸಲಿ ಎಂದು ಕಾಯೋಣ……

Tags: Bellary DistrictDrinking Water SupplyGadag DistrictKoppal DistrictMadagu JalayanaTungabhadra Riverwater Dogಕುಡಿಯುವ ನೀರಿನ ಪೂರೈಕೆಕೊಪ್ಪಳ ಜಿಲ್ಲೆಗದಗ ಜಿಲ್ಲೆತುಂಗಭದ್ರಾ ನದಿನೀರು ನಾಯಿಬಳ್ಳಾರಿ ಜಿಲ್ಲೆಮಡುಗು ಜಲಾಯನ
Previous Post

ತಾಮ್ರ ರಫ್ತು ಮಾಡುತ್ತಿದ್ದ ಭಾರತದಲ್ಲೇ ತಾಮ್ರದ ಕೊರತೆ!

Next Post

ಗಣಪತಿ ಆತ್ಮಹತ್ಯೆಗೆ ಜಾರ್ಜ್ ಕಾರಣರಲ್ಲ, ಡಿಪ್ರೆಶನ್ ಕಾರಣ: ಸಿಬಿಐ ರಿಪೋರ್ಟ್‌

Related Posts

Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
0

ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕರೆ “ನಮ್ಮ ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು...

Read moreDetails

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

July 30, 2025

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

July 30, 2025

UNTOLD STORY Of Lawyer Jagadish ಜಗದೀಶ್‌ ನೀವು ʻಫೇಕ್‌ʼ ಲಾಯರಾ..?

July 30, 2025
Next Post
ಗಣಪತಿ ಆತ್ಮಹತ್ಯೆಗೆ ಜಾರ್ಜ್ ಕಾರಣರಲ್ಲ, ಡಿಪ್ರೆಶನ್ ಕಾರಣ: ಸಿಬಿಐ ರಿಪೋರ್ಟ್‌

ಗಣಪತಿ ಆತ್ಮಹತ್ಯೆಗೆ ಜಾರ್ಜ್ ಕಾರಣರಲ್ಲ, ಡಿಪ್ರೆಶನ್ ಕಾರಣ: ಸಿಬಿಐ ರಿಪೋರ್ಟ್‌

Please login to join discussion

Recent News

Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
Top Story

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada