• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ವಲಸೆ ವರಸೆ-1: ಕರೋನಾ ಸೃಷ್ಟಿಸಿರುವ ದುರ್ದಿನಗಳಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ

by
May 24, 2020
in ಅಭಿಮತ
0
ವಲಸೆ ವರಸೆ-1: ಕರೋನಾ ಸೃಷ್ಟಿಸಿರುವ ದುರ್ದಿನಗಳಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ
Share on WhatsAppShare on FacebookShare on Telegram

ಪ್ರತಿ ದುರಂತವೂ ತನ್ನ ಗರ್ಭದ ಒಳಗೊಂದಿಷ್ಟು ಪಾಠಗಳನ್ನು ಅಡಗಿಸಿಕೊಂಡಿರುತ್ತದೆ. ಕರೋನಾ ಕೂಡ‌. ಕಣ್ಣಿಗೆ ಕಾಣದ ಕರೋನಾ ವೈರಾಣು, ಕಣ್ಣಿಗೆ ಕಾಣುವ ವಾಸ್ತವವೂ ಹೌದು. ಹಿಂದೆಯೂ ಇಂಥ ಹತ್ತು ಹಲವು ವೈರಾಣುಗಳು ಹುಟ್ಟಿವೆ, ಅವುಗಳಲ್ಲಿ ಕೆಲವು ಉಳಿದಿವೆ, ಕೆಲವು ಅಳಿದಿವೆ. ಕರೋನಾ ಉಳಿಯಲೂಬಹುದು, ಅಳಿಯಲೂಬಹುದು. ಈಗಂತೂ ಕರೋನಾ ಕಾಲ. ಹಾಗಾಗಿ ಕರೋನಾದೊಂದಿಗೇ ಬದುಕುಬೇಕು. ಕರೋನಾ ವಿರುದ್ಧವೇ ಹೋರಾಡಬೇಕು. ಅದಕ್ಕಾಗಿ ಕರೋನಾದಿಂದಲೇ ಕಲಿಯಬೇಕು.

ADVERTISEMENT

ಕರೋನಾದಿಂದ ಕಲಿಯಬೇಕಿರುವ ಪಾಠಗಳು ಬಹಳಷ್ಟಿವೆ. ಸದ್ಯ ವಲಸೆ ಕಾರ್ಮಿಕರ ಬಗ್ಗೆ ಚರ್ಚಿಸೋಣ. ವಲಸೆ ಸದ್ಯದ ಸಮಸ್ಯೆ ಮಾತ್ರವಲ್ಲ.‌ ಅದಕ್ಕೆ ಶತಮಾನಗಳ ಇತಿಹಾಸವಿದೆ. ಆದರೆ ಆ ಇತಿಹಾಸವನ್ನು ಮರೆತಿದ್ದೇವೆ. ವಲಸಿಗರಲ್ಲಿ ಹಲವು ವಿಧ. ಆದರೆ ಆಳುವ ಸರ್ಕಾರಗಳಿಗೆ ಅದರ ಸ್ಪಷ್ಟ ಕಲ್ಪನೆಯೇ ಇಲ್ಲ. ವಲಸಿಗರ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದೇವೆ. ಅತ್ಯಂತ ನಿರ್ದಯಿಯಾಗಿ ನಡೆದುಕೊಂಡಿದ್ದೇವೆ. ಬೇಜವಾಬ್ದಾರಿಯಿಂದ ವರ್ತಿಸಿದ್ದೇವೆ. ಇದೆಲ್ಲದರ ಪರಿಣಾಮವಾಗಿ ಇಂದು ವಲಸೆ ಕಾರ್ಮಿಕರೂ ಅನಾಥ, ವಲಸೆ ಕಾರ್ಮಿಕರನ್ನು ನಂಬಿಕೊಂಡ ಹಲವು ಔದ್ಯೋಗಿಕ ಕ್ಷೇತ್ರಗಳೂ ಅನಾಥ.

ಕೃಷಿ, ಗ್ರಾಮೀಣ ಬದುಕು, ಜನಸಂಖ್ಯಾ ಬೆಳವಣಿಗೆಗಳಂತೆ ವಲಸೆ ಕೂಡ ನಮ್ಮ ನಡುವಿನ‌ ಅತ್ಯಂತ ಜಟಿಲವಾದ ಸಮಸ್ಯೆ. ಈಗ ಲಾಕ್‌ಡೌನ್‌ ಸಂದರ್ಭದಲ್ಲಿ ವಲಸಿಗರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಬೀದಿಗೆ ಬಿದ್ದ ಸಂದರ್ಭದಲ್ಲಾದರೂ ಅವರತ್ತ ನೋಡಬೇಕು. ರೈತನ ಸಮಸ್ಯೆ, ಹಳ್ಳಿಗನ ಸಮಸ್ಯೆ, ಜನಸಂಖ್ಯಾ ತೀವ್ರತೆಯ ಸಮಸ್ಯೆಗಳು ಅವರವರ ವೈಯಕ್ತಿಕ ಸಮಸ್ಯೆಗಳು ಮಾತ್ರವಲ್ಲ. ಈ ಘನ ಸಮಾಜದ ಸಮಸ್ಯೆ. ದೇಶದ ಸಮಸ್ಯೆ. ಹಾಗೆಯೇ ವಲಸಿಗರ ಸಮಸ್ಯೆ.

ಈ ವಲಸೆ ಸಮಸ್ಯೆಯನ್ನು ಆಳುವ ಸರ್ಕಾರಗಳು ಮೊದಲಿಗೆ ಸರಿಯಾಗಿ ಅರಿಯಬೇಕು. ಸಮಸ್ಯೆಯನ್ನು ಸರಿಯಾಗಿ ಗ್ರಹಿಸದಿದ್ದಾಗ ಪರಿಹಾರೋಪಾಯ ಕಂಡುಹಿಡಿಯಲು ಸಾಧ್ಯವಿಲ್ಲ. ಇಷ್ಟು ದಿನ ಆಗಿದ್ದೆ ಅದು. ಅದೇ ಕಾರಣಕ್ಕೆ ಆಗಾಗ ತಂದ ಕೆಲವೇ ಕೆಲವು ಸುಧಾರಣಾ ಕ್ರಮಗಳಿಂದ ಪರಿಣಾಮಕಾರಿಯಾದುದೇನೂ ಆಗಿಲ್ಲ. ಈಗಲಾದರೂ ವಲಸೆ ಎಂಬ‌ ಬೃಹತ್ ಸಮಸ್ಯೆಯ ಆಳ-ಅಗಲವನ್ನು ಶೋಧಿಸಬೇಕಿದೆ.

ಮೊದಲಿಗೆ ವಲಸಿಗರ ಸ್ಪಷ್ಟ ವರ್ಗೀಕರಣ ಆಗಬೇಕಿದೆ. ಸಮಾಜದ ವಿವಿಧ ವರ್ಗದ ಜನ ಅನ್ನ, ಅಕ್ಷರ, ಉದ್ಯೋಗ, ವೈಭೋಗ, ಆರೋಗ್ಯ ಅರಸಿ ನಗರಗಳಿಗೆ ಬಂದಿದ್ದಾರೆ. ಉನ್ನತ ವರ್ಗದವರು ಎಂದುಕೊಂಡವರ ಉನ್ನತಿಗೇನೂ ಧಕ್ಕೆಯಾಗಿಲ್ಲ. ಕೆಳ, ಮಧ್ಯಮ ವರ್ಗದವರ ಕಷ್ಟ ಮಾತ್ರ ಕರಗಿಲ್ಲ. ಸಾಮಾಜಿಕವಾಗಿ ಉನ್ನತ ಜಾತಿಯವರು ಎನಿಸಿಕೊಳ್ಳುವವರ ಉನ್ನತಿಗೂ ಚ್ಯುತಿ ಬಂದಿಲ್ಲ. ಕೆಳ‌ ಜಾತಿಯವರು, ಕೀಳು ಜಾತಿಯವರು ಎನಿಸಿಕೊಂಡವರ ಪಾಡು ಕ್ರಾಂತಿಕಾರಕ ಬದಲಾವಣೆಗಳನ್ನು ಕಂಡಿಲ್ಲ.

ದೇಶದ ಎಲ್ಲಾ ಮಹಾನಗರಗಳಿಗೆ ಪಕ್ಕದ ಊರುಗಳಿಂದ, ದೂರದ ಹಳ್ಳಿಗಳಿಂದ, ನೆರೆಯ ರಾಜ್ಯಗಳಿಂದ, ದೂರದ ದೇಶಗಳಿಂದ ಬಂದು ನೆಲೆಸಿದ್ದಾರೆ. ಇವರಲ್ಲಿ ದಿನಗೂಲಿ ಮಾಡುವವರು, ನಿರ್ದಿಷ್ಟವಾಗಿ ಸಂಬಳ ಪಡೆಯುವವರು, ನಗರಗಳಲ್ಲಿ ಗಳಿಸಿ ಅದರಲ್ಲೇ ಅಳೆದು ತೂಗಿ ಜೀವನ ಮಾಡುವವರು, ಸರ್ಕಾರಿ ನೌಕರಿ ಮತ್ತು ಖಾಸಗಿ ನೌಕರಿಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ವ್ಯಾಪಾರಕ್ಕಾಗಿ ಬಂದವರು, ವ್ಯಾಪಾರದಲ್ಲೂ ತಾತ್ಕಾಲಿಕವಾಗಿ, ಶಾಶ್ವತವಾಗಿ ನೆಲೆನಿಂತವರು ಹಲವಾರು ರೀತಿಯವರಿದ್ದಾರೆ. ಎಲ್ಲರೂ ವಲಸಿಗರು ಆದರೆ ಸಮಸ್ಯೆಗಳು ಮಾತ್ರ ಭಿನ್ನವಾದವು.

ಹೀಗೆ ಹಲವು‌ ಕಾರಣಗಳಿಗೆ, ಹಲವು ರೀತಿಯ ಜನ ಬಂದಿದ್ದಾರೆ. ಭಾರತದಲ್ಲಿ 2011ರ ಜನಗಣತಿಯ ಪ್ರಕಾರ 2001ರಿಂದ 2011ರಲ್ಲಿ ಅತಿಹೆಚ್ಚು ವಲಸೆ ಆಗಿದೆ. ಇದು ಜನಸಂಖ್ಯೆಗೆ ಅನುಗುಣವಾಗಿಯೂ ಆಗಿದೆ. ಔದ್ಯೋಗಿಕ ಕ್ಷೇತ್ರ ವಿಸ್ತಾರವಾಗಿದ್ದಕ್ಕೂ ಆಗಿದೆ. ಹಿಂದಿನ‌ ದಶಕಗಳಲ್ಲೂ ಹೀಗೆ ದಶಕದಿಂದ ದಶಕಕ್ಕೆ ಏರಿಕೆಯಾಗಿದೆ.

ಈ ರೀತಿಯ ವಲಸೆ ಟ್ರೆಂಡ್ ಭಾರತದಲ್ಲಿ ಮಾತ್ರ ಇಲ್ಲ. ಜಗತ್ತಿನಾದ್ಯಂತ ಇದೆ. ಕೆಲವು‌ ದೇಶಗಳು ನಗರಗಳಿಗೆ ಆಗುವ ವಲಸೆಯನ್ನು ಸಮರ್ಥವಾಗಿ ನಿಭಾಯಿಸಿವೆ. ಭಾರತದ್ದು ವಿಫಲ ನಗರೀಕರಣ. ಉದಾಹರಣೆಗೆ ಒಂದು ಅಂದಾಜಿನ ಪ್ರಕಾರ ಭಾರತ ಶೇಕಡಾ 70ರಷ್ಟು ಹಳ್ಳಿಗಳನ್ನು‌ ಹೊಂದಿದೆ. ಅಮೇರಿಕಾದ ಹಳ್ಳಿಗಳ ಪ್ರಮಾಣ ಶೇಕಡಾ 5ರಷ್ಟು. ಅಮೇರಿಕಾದಲ್ಲಿ ಶೇಕಡಾ 5ರಷ್ಟು ಮಾತ್ರ ಹಳ್ಳಿಗಳು ಉಳಿದಿವೆ ಎಂದರೆ ಉಳಿದದ್ದೆಲ್ಲವೂ ನಗರೀಕರಣವಾಗಿದೆ ಎಂದೇತಾನೇ ಅರ್ಥ. ‌ಹಾಗಂತ ಅಲ್ಲಿನ ಕೃಷಿ ಉತ್ಪಾದನಾ ಸಾಮರ್ಥ್ಯ ಕುಸಿದಿಲ್ಲ. ಶೇಕಡಾ 70ರಷ್ಟು ಹಳ್ಳಿಗಳಿರುವ ಮಾತ್ರಕ್ಕೆ ಭಾರತದ ಕೃಷಿ ಉತ್ಪಾದನಾ ಸಾಮರ್ಥ್ಯ ಬಹಳ ಪ್ರಗತಿಯನ್ನೇನೂ ಸಾಧಿಸಿಲ್ಲ.

ತಾತ್ಪರ್ಯ ಇಷ್ಟೇ; ಕೆಲ ದೇಶಗಳಲ್ಲಿ ವಲಸೆಯನ್ನು ಸಮರ್ಥವಾಗಿ ನಿಭಾಯಿಸಿ ವಲಸಿಗರ ಬದುಕನ್ನು ಹಸನಾಗಿಸಲಾಗಿದೆ. ಭಾರತದ ವಲಸಿಗರ ಪೈಕಿ ಬಹುತೇಕರದ್ದು ಇದ್ದಲ್ಲಿ ಇರಲಾಗದ, ವಾಪಸ್ ಊರಿಗೆ ಹೋಗಲಾಗದ ತ್ರಿಶಂಕು ಪರಿಸ್ಥಿತಿ. ಈಗ ಕರೋನಾ ಬಂದಿದೆ. ಇದರಿಂದ ವಲಸಿಗರು ಮತ್ತಷ್ಟು ಅತಂತ್ರರೂ ಅಧೀರರೂ ಆಗಿದ್ದಾರೆ. ಈ ದುರ್ದಿನಗಳಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

Tags: ಕರೋನಾಲಾಕ್‌ಡೌನ್‌ವಲಸೆ ಕಾರ್ಮಿಕರು
Previous Post

ಮಧ್ಯಪ್ರದೇಶ: ಕಾಂಗ್ರೆಸ್ ಪರ ಕಾರ್ಯತಂತ್ರ ರೂಪಿಸಲಿರುವ ಚುನಾವಣಾ ಚಾಣಕ್ಯ

Next Post

30 ವರ್ಷಗಳಿಂದ ಇದೇ ಮೊದಲ ಬಾರಿಗೆ ವಾರ್ಷಿಕ ಜಿಡಿಪಿ ಗುರಿ ಪ್ರಕಟಿಸುವುದನ್ನು ನಿಲ್ಲಿಸಿದ ಚೀನಾ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
30 ವರ್ಷಗಳಿಂದ ಇದೇ ಮೊದಲ  ಬಾರಿಗೆ  ವಾರ್ಷಿಕ ಜಿಡಿಪಿ ಗುರಿ ಪ್ರಕಟಿಸುವುದನ್ನು ನಿಲ್ಲಿಸಿದ ಚೀನಾ

30 ವರ್ಷಗಳಿಂದ ಇದೇ ಮೊದಲ ಬಾರಿಗೆ ವಾರ್ಷಿಕ ಜಿಡಿಪಿ ಗುರಿ ಪ್ರಕಟಿಸುವುದನ್ನು ನಿಲ್ಲಿಸಿದ ಚೀನಾ

Please login to join discussion

Recent News

Top Story

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 20, 2025
ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 20, 2025
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada