• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರೈಲು ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕರೂ ವಲಸೆ ಕಾರ್ಮಿಕರ ಸಾವಿಗೆ ಕಡಿವಾಣ ಬೀಳಲಿಲ್ಲ ಯಾಕೆ..?

by
May 14, 2020
in ದೇಶ
0
ರೈಲು ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕರೂ ವಲಸೆ ಕಾರ್ಮಿಕರ ಸಾವಿಗೆ ಕಡಿವಾಣ ಬೀಳಲಿಲ್ಲ ಯಾಕೆ..?
Share on WhatsAppShare on FacebookShare on Telegram

ಕರೋನಾ ಸಂಕಷ್ಟದಲ್ಲಿ ಸಿಲುಕಿ ಬಳಲಿ ಬೆಂಡಾಗಿದ್ದು, ಕಾರ್ಮಿಕ ವರ್ಗ ಎಂಬುದರಲ್ಲಿ ಎರಡು ಮಾತಿಲ್ಲ. ಜೀವನ ಕಟ್ಟಿಕೊಳ್ಳುವ ಹುಮ್ಮಸ್ಸಿನಿಂದ ಸಾವಿರಾರು ಕಿಲೋ ಮೀಟರ್‌ ದೂರದ ಪಟ್ಟಣ ಸೇರಿದ್ದ ಅದೆಷ್ಟೋ ಬಡ ಜೀವಗಳು ಕರೋನಾ ಲಾಕ್‌ಡೌನ್‌ ವೇಳೆ ಕಣ್ಣೀರು ಸುರಿಸಿವೆ. ತಿನ್ನಲು ಅನ್ನವಿಲ್ಲದೆ ಪರಿತಪಿಸಿವೆ. ಕೆಲಸದ ಭರವಸೆಯಲ್ಲಿ ಕರೆದುಕೊಂಡು ಹಳ್ಳಿಗಳಿಂದ ಕರೆದುಕೊಂಡು ಬಂದಿದ್ದ ಗುತ್ತಿಗೆದಾರ ಬಿಟ್ಟು ಓಡಿಹೋದ ಬಳಿಕ ಜೀವನ ಮಾಡುವುದು ಸಾಧ್ಯವಾಗದೆ, ಹೆತ್ತ ಕಂದಮ್ಮಗಳ ಹಸಿವಿನ ಬಾಧೆ ತೀರಿಸಲಾಗದೆ ಒದ್ದಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಮಾತ್ರ ಮಾತಿನಲ್ಲೇ ಕೋಟಿಯ ಕೋಟೆ ಕಟ್ಟುವ ಮೂಲಕ ಜನರನ್ನು ಮೋಸಗೊಳಿಸುವುದನ್ನು ಕರಗತ ಮಾಡಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರಿಗಾಗಿ ಎಂದು ಶ್ರಮಿಕ್‌ ರೈಲನ್ನೇ ಬಿಟ್ಟಿದ್ದಾರೆ. ದೇಶದ ಅಭಿವೃದ್ಧಿಗಾಗಿ ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿ ಕೋವಿಡ್‌ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. ಆದರೆ ದೇಶದ ಜನರು ಕೋವಿಡ್‌-19 ಗೂ ಮೊದಲೇ ಬೇರೆ ಬೇರೆ ಕಾರಣಗಳಿಗಾಗಿ ಬಲಿಯಾಗುತ್ತಿರುವುದನ್ನು ತಡೆಯಲು ಸಾಧ್ಯವಾಗ್ತಿಲ್ಲ ಎನ್ನುವುದೇ ದುರಂತದ ವಿಚಾರ.

ADVERTISEMENT

ಮಹಾರಾಷ್ಟ್ರ ಎಂಬ ಮಹಾನಗರಿಯಲ್ಲಿ ಕೋಟ್ಯಂತರ ಜನರು ತುಂಬಿತುಳುಕುತ್ತಿದ್ದಾರೆ. ಅಲ್ಲಿನ ಜನವ್ಯವಸ್ಥೆ ಆ ಪರಿಸರಕ್ಕೆ ಒಗ್ಗಿಕೊಂಡಿದೆ. ಹೊಟ್ಟೆಗೆ ಊಟ, ಮಲಗೋಕೆ ಜಾಗ, ತಿಂಗಳಿಗೊಮ್ಮೆ ಸಂಬಳ ಸಿಕ್ಕೇ ಸಿಗುತ್ತದೆ ಎನ್ನುವ ದೇಶದ ನಗರಗಳಲ್ಲಿ ಮುಂಬೈ ಮಹಾನಗರಕ್ಕೆ ಮೊದಲ ಸ್ಥಾನ. ಹಾಗಾಗಿ ದೇಶದ ಮೂಲೇ ಮೂಲೆಯಿಂದಲೂ ಜನರು ಮುಂಬೈ ಪಟ್ಟಣದಲ್ಲಿ ಜೀವನ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಕನಿಷ್ಠ ಜೀವನ ನಡೆಸಿದರೂ ಗರಿಷ್ಠ ಆದಾಯ ಎಂಬುದೇ ಮುಂಬೈ ನಗರಕ್ಕೆ ಜನರು ಲಗ್ಗೆ ಇಡುವುದಕ್ಕೆ ಪ್ರಮುಖ ಕಾರಣ. ಇದೀಗ ಅದೇ ಮುಂಬೈ ಯಾರೀಗೂ ಬೇಡವಾದ ಕರೋನಾ ಸೋಂಕಿನ ಸ್ವರ್ಗ ಎಂದರೆ ತಪ್ಪಲ್ಲ. ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ. ದಿನನಿತ್ಯ ನೂರಾರು ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಸೋಂಕಿನ ಅಂಕಿಸಂಖ್ಯೆಯಂತೂ ಊಹೆಗೂ ನಿಲುಕದೆ ಮುನ್ನುಗ್ಗುತ್ತಿದೆ. ಇದೀಗ ವಲಸೆ ಹೋಗಿ ಜೀವನ ರೂಪಿಸಿಕೊಂಡ ಲಕ್ಷಾಂತರ ಜನರು ಹುಟ್ಟೂರುಗಳತ್ತ ಹೊರಡುತ್ತಿದ್ದಾರೆ, ಹೊರಡಲು ಸಿದ್ಧರಾಗ್ತಿದ್ದಾರೆ. ಹಾಗಾಗಿ ದುರಂತಗಳು ಸಂಭವಿಸುತ್ತಲೇ ಇವೆ.

ಬಲಸೆ ಕಾರ್ಮಿಕರು ಲಾಕ್‌ಡೌನ್‌ ವೇಳೆಯಲ್ಲಿ ವಿನಾಯ್ತಿ ಸಿಕ್ಕರೂ ಸಾಯುತ್ತಲೇ ಇದ್ದಾರೆ. ಮುಂಬೈನಿಂದ ಉತ್ತರಪ್ರದೇಶಕ್ಕೆ 1500 ಕಿಲೋ ಮೀಟರ್‌ ದೂರು ಕಾಲ್ನಡಿಗೆಯಲ್ಲಿ ತೆರಳಿದ ವ್ಯಕ್ತಿಯೊಬ್ಬರು ಸ್ಮಶಾಣ ಸೇರಿದ್ದಾರೆ. 1500 ಕಿಲೋ ಮೀಟರ್‌ ಕ್ರಮಿಸಿ ಮನೆ ತಲುಪಿದ ಬಳಿಕ ನಿತ್ರಾಣಗೊಂಡು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 65 ವರ್ಷದ ನತದೃಷ್ಟ ವಯೋವೃದ್ಧ ರಾಮ್‌ ಕೃಪಾಲ್‌ ಜೀವನ ಪ್ರಯಾಣ ಕಾಲ್ನಡಿಗೆಯಲ್ಲಿ ಕೊನೆಯಾಗಿದೆ. ಖಲಿಲಾಬಾದ್‌ ನಿವಾಸಿಯಾಗಿದ್ದ ರಾಮ್‌ ಕೃಪಾಲ್‌, ಮುಂಬೈನಲ್ಲಿ ದಿನಗೂಲಿ ನೌಕರಾಗಿ ಕೆಲಸ ಮಾಡುತ್ತಿದ್ದ, ಸಾವು ನೋವುಗಳ ಸಂಖ್ಯೆ ಹೆಚ್ಚಾಗ್ತಿದ್ದಂತೆ ಹುಟ್ಟೂರು ಸೇರಿಕೊಳ್ಳುವ ತವಕದಲ್ಲಿ ಕಾಲ್ನಡಿಗೆಯಲ್ಲೇ ಕ್ರಮಿಸಿ ಊರು ಸೇರಿದ್ದ. ಅದಾದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದ್ರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ರಾಮ್‌ ಕೃಪಾಲ್‌ ಉಸಿರು ನಿಂತಿತ್ತು ಎಂದು ಜಿಲ್ಲಾಧಿಕಾರಿ ರವೀಶ್‌ ಕುಮಾರ್‌ ಗುಪ್ತಾ ಮಾಹಿತಿ ನೀಡಿದ್ದಾರೆ. ಇದೀಗ ಕೋವಿಡ್‌ 19 ಟೆಸ್ಟ್‌ಗೆ ಗಂಟಲ ದ್ರವ ಕಳುಹಿಸಲಾಗಿದ್ದು, ಪೋಸ್ಟ್‌ ಮಾಟಂ ಕೂಡ ನಡೆಸಲಾಗಿದೆ.

ಕೇಂದ್ರ ಸರ್ಕಾರ ದೇಶದ ಒಳಗಿನ ಕಾರ್ಮಿಕರನ್ನು ಕರೆದುಕೊಂಡು ಹೋಗುವುದಕ್ಕೆ ಶ್ರಮಿಕ್‌ ರೈಲು ಆರಂಭಿಸಿದೆ. ಆದರೆ ದಿನನಿತ್ಯ ನೂರಾರು ಜನರು ಕಾಲ್ನಡಿಗೆಯಲ್ಲಿ ಸಾಗುವ ವರದಿಗಳು ಬರುತ್ತಲೇ ಇದೆ. ಅಲ್ಲಲ್ಲಿ ಜನರು ಸಾವನ್ನಪ್ಪುತ್ತಲೇ ಇದ್ದಾರೆ. ಸಾಕಷ್ಟು ದೂರ ಕ್ರಮಿಸಿದಾಗ ದೇಹದ ನೀರಿನ ಅಂಶ ಏರುಪೇರಾದರೆ ಸಾವು ಸಂಭವಿಸುತ್ತೆ ಎನ್ನುತ್ತಾರೆ ವೈದ್ಯರು. ರೈಲುಗಳ ಸಂಚಾರವೂ ಆರಂಭವಾಗಿದೆ. ಆದರೆ ಜನರು ಯಾಕೆ ಸಾವನ್ನಪ್ಪುತ್ತಿದ್ದಾರೆ ಎನ್ನುವುದು ಅರ್ಥವಾಗದ ವಿಷಯ ಎನ್ನಬಹುದು. ಆದರೆ ನಮ್ಮ ಸರ್ಕಾರ ಮಾಡಿರುವ ಕಾನೂನು ರೂಪಿಸಿರುವ ವ್ಯವಸ್ಥೆ ತಳಮಟ್ಟದ ಕಾರ್ಮಿಕನ ಕೈ ಹಿಡಿಯುವಲ್ಲಿ ವಿಫಲವಾಗಿದೆ. ನೀವು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆ ಅಥವಾ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಬೇಕು ಎಂದರೆ ಆನ್‌ಲೈನ್‌ನಲ್ಲಿ ಪಾಸ್‌ ಬುಕ್‌ ಮಾಡಬೇಕು. ಶ್ರಮಿಕ್‌ ರೈಲಿನಲ್ಲಿ ತೆರಳಲು ಆನ್‌ಲೈನ್‌ನಲ್ಲಿ ರಿಜಿಸ್ಟರ್‌ ಮಾಡಿಕೊಳ್ಳಬೇಕು. ಕೂಲಿ ಕಾರ್ಮಿಕರಲ್ಲಿ ಅದೆಷ್ಟು ಇಂಟರ್‌ನೆಟ್‌ ಸೇವೆ ಬಳಸುತ್ತಿದ್ದಾರೆ..? ಅದೆಷ್ಟು ಜನರು ಉತ್ತಮ ಅಂಡ್ರ್ಯಾಡ್‌ ಫೋನ್‌ ಬಳಕೆ ಮಾಡುತ್ತಿದ್ದಾರೆ ಎನ್ನುವ ಕನಿಷ್ಠ ಜ್ಞಾನ ಸರ್ಕಾರಕ್ಕೆ ಇದ್ದಂತಿಲ್ಲ.

ಆಂಡ್ರ್ಯಾಯ್ಡ್‌ ಫೋನ್‌ ಇದ್ದರೂ ಮೊಬೈಲ್‌ ಆಪ್‌ಗಳಲ್ಲಿ ಮಾಹಿತಿ ತುಂಬುವುದಿರಬಹುದು, ಅದರಲ್ಲಿ ಕೇಳುವ ಮಾಹಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೂ ಇರಬಹುದು ಸಾಮಾನ್ಯ ಕಾರ್ಮಿಕನಿಗೆ ಅರ್ಥವಾಗದ ಕಬ್ಬಿಣದ ಕಡಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ ರಾಜ್ಯ ಸರ್ಕಾರಗಳು ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್‌ ಪಡೆಯಲು ಆಟೋ ಡ್ರೈವರ್‌ ಸೇರಿದಂತೆ ಲಕ್ಷಾಂತರ ಮಂದಿ ಅಲೆದಾಡುತ್ತಿದ್ದಾರೆ. ಹೇಗೆ ಪರಿಹಾರ ಪಡೆಯಬೇಕು ಎನ್ನುವುದು ಅರ್ಥವಾಗ್ತಿಲ್ಲ. ಸರ್ಕಾರ ಕೇವಲ ಯೋಜನೆಯೊಂದನ್ನು ಘೋಷಣೆ ಮಾಡಿದಾಗ ಆಗುವ ದೊಡ್ಡ ಸಮಸ್ಯೆ ಅದನ್ನು ಸಾಮಾನ್ಯ ಸಂತ್ರಸ್ತನಿಗೆ ತಲುಪಿಸುವುದು. ಇದೀಗ ಕರೋನಾ ಸಂಕಷ್ಟ ಕಾಲದಲ್ಲಿ ಅನಿವಾರ್ಯವಾಗಿ ಆನ್‌ಲೈನ್‌ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ ಎನ್ನಬಹುದು. ಆದರೆ ತಲುಪಬೇಕಾದ ಜನರನ್ನು ಸರ್ಕಾರದ ಯೋಜನೆ ತಲುಪುವುದಿಲ್ಲ ಎನ್ನುವುದೂ ಕೂಡ ಅಷ್ಟೇ ಸತ್ಯ. ಇಲ್ಲದಿದ್ದರೆ ಕರ್ನಾಟಕದಲ್ಲಿ ಓರ್ವ ಮಹಿಳೆ, ಮಹಾರಾಷ್ಟ್ರದಲ್ಲಿ ಗೂಡ್ಸ್‌ ರೈಲಿಗೆ ಸಿಲುಕಿ 16 ಮಂದಿ ಬಡ ಕಾರ್ಮಿಕರು, ದೆಹಲಿಯಲ್ಲಿ ಕೂಲಿ ಕಾರ್ಮಿಕ ಕಾಲ್ನಡಿಗೆಯಲ್ಲಿ ನಡೆದು ಸಾವನ್ನಪ್ಪುವ ದುಸ್ಥಿತಿ ಬರುತ್ತಿರಲಿಲ್ಲ.

Tags: ‌ ಲಾಕ್‌ ಡೌನ್‌Covid 19LockdownMigrant Workersshramik trainಕೋವಿಡ್-19ವಲಸೆ ಕಾರ್ಮಿಕರುಶ್ರಮಿಕ್‌ ರೈಲು
Previous Post

ಸ್ವಾವಲಂಬಿ ಭಾರತ ಪ್ಯಾಕೇಜಿನಲ್ಲಿ ನಗರವಾಸಿ ಮಧ್ಯಮವರ್ಗಕ್ಕೆ ಮೊದಲ ಆದ್ಯತೆ!

Next Post

20 ಲಕ್ಷ ಕೋಟಿ ಪ್ಯಾಕೇಜ್: ಅಂಕಿ-ಸಂಖ್ಯೆ ಗಿಮಿಕ್ ಮಾಡಿ ಜನರ ಹಾದಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ!

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
20 ಲಕ್ಷ ಕೋಟಿ ಪ್ಯಾಕೇಜ್: ಅಂಕಿ-ಸಂಖ್ಯೆ ಗಿಮಿಕ್ ಮಾಡಿ ಜನರ ಹಾದಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ!

20 ಲಕ್ಷ ಕೋಟಿ ಪ್ಯಾಕೇಜ್: ಅಂಕಿ-ಸಂಖ್ಯೆ ಗಿಮಿಕ್ ಮಾಡಿ ಜನರ ಹಾದಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada