• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ರೈತ ಚಳವಳಿ ಮತ್ತು ಹತಾಶ ಸರ್ಕಾರದ ದಮನಕಾರಿ ನೀತಿ

by
December 2, 2020
in ಅಭಿಮತ
0
ರೈತ ಚಳವಳಿ ಮತ್ತು ಹತಾಶ ಸರ್ಕಾರದ ದಮನಕಾರಿ ನೀತಿ
Share on WhatsAppShare on FacebookShare on Telegram

ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿರುವ ಆರ್ಥಿಕ ವರದಿಯೊಂದರ ಪ್ರಕಾರ 2019-20 ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಮೌಲ್ಯ ವರ್ಧನೆಯ ಪ್ರಮಾಣ ಶೇಕಡಾ 16.5. ಇದು 2014-15ರಲ್ಲಿದ್ದ 18.2ಕ್ಕಿಂತ 1.7ಶೇಕಡಾ ಕಡಿಮೆ. ಸರಕಾರಿ ದಾಖಲೆಗಳ ಪ್ರಕಾರ ಹೇಳುವುದಾದರೆ ಈ ಕುಸಿತಕ್ಕೆ ಮುಖ್ಯ ಕಾರಣ ಬೆಳೆಗಳಿಂದ ಬರುತ್ತಿದ್ದ ಮೌಲ್ಯ ವರ್ಧನೆಯು 2014-15ರಲ್ಲಿ ಶೇಕಡಾ 11.2ರಷ್ಟಿದ್ದುದು 2017-18ರ ವೇಳೆಗೆ ಶೇಕಡಾ ಹತ್ತಕ್ಕೆ ಕುಸಿದದ್ದು. ಅಂದರೆ ಸರಕಾರದ ತಿಳಿಗೇಡಿತನದ ನೀತಿ ನಿಯಮಗಳಿಂದ ಕೃಷಿ ವಲಯ ಈಗಾಗಲೇ ಹಿನ್ನಡೆ ಅನುಭವಿಸುತ್ತಿದೆ. ಹಾಗಾಗಿಯೇ ಸರಕಾರ ಹೊಸದಾಗಿ ತರಲಿಚ್ಛಿಸಿರುವ ಮೂರು ಕಾನೂನುಗಳ ವಿರುದ್ಧ ಇಡೀ ದೇಶದ ರೈತ ಸಮೂಹ ಇಷ್ಟು ತೀವ್ರವಾಗಿ ಸಿಡಿದೆದ್ದದ್ದು.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಏಳು ದಿನಗಳಿಂದ ಕೃಷಿ ಕಾನೂನು ವಿರೋಧಿ ಹೋರಾಟ ನಡೆಯುತ್ತಿದೆ. ರೈತ ವಿರೋಧಿ ಕಾನೂನು ಹಿಂದೆಗೆಯುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ರೈತ ಮುಖಂಡರು ಘೋಷಿಸಿದ್ದಾರೆ. ಈ ಮಧ್ಯೆ ಗೃಹ ಸಚಿವ ಅಮಿತ್ ಶಾ ಸರಕಾರ ನಿಗದಿ ಪಡಿಸಿರುವ ಸ್ಥಳದಲ್ಲೇ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ಕೇಂದ್ರ ಗೃಹ ಸಚಿವರ ಮನವಿಗೆ ಸ್ಪಂದಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ರೈತ ಮುಖಂಡರು ಅಮಿತ್ ಶಾ ಮತ್ತು ಅಮರಿಂದರ್ ಸಿಂಗ್ ಅವರ ಮನವಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದು ಸರಕಾರ ಯಾವುದೇ ಷರತ್ತುಗಳನ್ನು ವಿಧಿಸದೆ ಮಾತಕತೆಗೆ ಕರೆದರೆ ಮಾತ್ರ ಮಾತಕತೆಗೆ ಬರುತ್ತೇವೆ ಅಂದಿದ್ದಾರೆ.

“ಓಪನ್ ಜೈಲಿನಂತಿರುವ ಬುರಾರಿ ಪಾರ್ಕ್‌(ಸರಕಾರ ನಿಗದಿಪಡಿಸಿದ ಪ್ರತಿಭಟನಾ ಸ್ಥಳ)ಗೆ ನಾವು ಪ್ರತಿಭಟನೆಗಾಗಿ ಹೋಗುವುದಿಲ್ಲವೆಂದು ನಿರ್ಧರಿಸಿದ್ದೇವೆ. ದೆಹಲಿ‌ ಪೊಲೀಸರು ಉತ್ತರಾಖಂಡದ ರೈತ ಮುಖಂಡರಿಗೆ ಜಂತರ್‌ಮಂತರ್‌ಗೆ ಕರೆದೊಯ್ಯುವ ಭರವಸೆ ನೀಡಿ ಬುರಾರಿ ಪಾರ್ಕ್‌ನಲ್ಲಿ ಬಂಧಿಸಿರುವ ಉದಾಹರಣೆ ಈಗಾಗಲೇ‌‌ ನಮ್ಮ ಕಣ್ಣ ಮುಂದಿದೆ” ಎಂದು ‘ಭಾರತೀಯ ಕಿಸಾನ್ ಯೂನಿಯನ್’ನ ಅಧ್ಯಕ್ಷ ಸುರ್ಜಿತ್ ಫುಲ್ ಹೇಳಿದ್ದಾರೆ.

Also Read: ಕೈಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ; ಇದು ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು

ಕಳೆದ ಎಪ್ಪತ್ತು ವರ್ಷಗಳಲ್ಲಿ ಇದು ಅತ್ಯಂತ ಚಳಿಯ ವರ್ಷವಾಗಿದ್ದು, ದೆಹಲಿಯ ಗಡಿಯಾಗಿರುವ ಟಿಕ್ರಿಯಲ್ಲಿ ಭಾನುವಾರ ರಾತ್ರಿ ಲುಧಿಯಾನದ ರೈತ ಗಜ್ಜನ್ ಸಿಂಗ್ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿಪರೀತ ಚಳಿಯಿಂದ ಅವರ ಆರೋಗ್ಯ ಬಿಗಡಾಯಿಸಿತು ಎಂದು ವರದಿಗಳು ತಿಳಿಸಿವೆ. ಈ ಮಧ್ಯೆ ಶಾಹಿನ್ ಭಾಗ್‌ನ ಕೆಲ ಮಹಿಳೆಯರೂ ರೈತ ಚಳವಳಿಗೆ ಬೆಂಬಲ ಸೂಚಿಸಿದ್ದಾರೆ. ಜಲಫಿರಂಗಿ, ಅಶ್ರುವಾಯು ದಾಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿರುವ ತಮ್ಮ ಪ್ರತಿಭಟನೆಗೆ ಸರಕಾರ ಜಗ್ಗದೇ ಇರುವುದನ್ನು ಮನಗಂಡು ದೆಹಲಿಯ ಐದು ಗಡಿಗಳಾದ ಸೋನಿಪತ್, ರೋಹ್ಟಕ್, ಜೈಪುರ್, ಗಾಜಿಯಾಬಾದ್- ಹಾಪುರ್ ಮತ್ತು ಮಥುರಾಗಳನ್ನು ಬ್ಲಾಕ್ ಮಾಡುವುದಾಗಿ ಘೋಷಿಸಿದ್ದಾರೆ.

ಕಳೆದ ಮೂರು ತಿಂಗಳುಗಳಿಂದ ರೈತ ಸಂಘಗಳು ಸರಕಾರ ತರಲಿಚ್ಛಿಸಿರುವ ಕಾನೂನಿನ ವಿರುದ್ಧದ ನಿಲುವುಗಳನ್ನು ಹೊಂದಿದೆ. ರೈತರ ಪ್ರಕಾರ ಹೊಸ ಕಾನೂನು ಅವರನ್ನು ಕಾರ್ಪೋರೆಟ್ ಕಂಪೆನಿಗಳ ಅಡಿಯಾಳಾಗಿಸುತ್ತವೆ ಮತ್ತು ಬೆಳೆಗಳನ್ನು ಖಾಸಗಿ ಕಂಪೆನಿಗಳ ಮೂಲಕ ವ್ಯಾಪಾರ ಮಾಡಿದರೆ ಕನಿಷ್ಠ ಖಾತರಿ ಬೆಲೆ ದೊರೆಯುವ ಯಾವ ಭರವಸೆಯೂ ಇಲ್ಲ.

Also Read: ಪ್ರಧಾನಿ ಮೋದಿಯ ರೈತ ವಿರೋಧಿ ನಿಲುವು ಮೂರ್ಖತನವೋ? ಉದ್ಧಟತನವೋ?

ಇಡೀ ದೇಶ ಅನ್ನದಾತನ ಅಳಲಿಗೆ ಕಿವಿಯಾಗಿ ಬೆಂಬಲಕ್ಕೆ ನಿಂತಿದ್ದರೆ, ಬೃಹತ್ ಕಂಪೆನಿಗಳ ತಾಳಕ್ಕೆ ಕುಣಿಯುತ್ತಿರುವ ಸರಕಾರ ಮಾತ್ರ ರೈತರ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕುವ ದಮನಕಾರಿ ನೀತಿ ಅನುಸರಿಸುತ್ತಿದೆ.

ದೇಶದ ವಿವಿಧ ಮೂಲಗಳಿಂದ ದೆಹಲಿಯತ್ತ ಹೊರಟಿದ್ದ ಪ್ರತಿಭಟನಾಕಾರರು ಮೊದಲು ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಕೊರೋನಾದ ಕಾರಣ ನೀಡಿ ಅನುಮತಿ ಹಿಂಪಡೆದುಕೊಂಡಿದ್ದರು. ಅಲ್ಲದೆ ರೈತರು ದೆಹಲಿ‌ ಪ್ರವೇಶಿಸದಂತೆ ಗಡಿಯಲ್ಲೇ ತಡೆದಿದ್ದರು. ಧೃತಿಗೆಡದ ರೈತರು ತಾವಿದಲ್ಲಿಂದಲೇ ಪ್ರತಿಭಟನೆ ಮುಂದುವರೆಸಿದರು.

Also Read: ತಮ್ಮನ್ನು ಹಿಂಸಿಸಿದ ಪೊಲೀಸರಿಗೇ ಆಹಾರ, ನೀರು ನೀಡಿದ ಪ್ರತಿಭಟನಾನಿರತ ರೈತರು

ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯ ಮೇಲೆ ಸರಕಾರದ ನಿರ್ದೇಶನದಂತೆ ಪೊಲೀಸ್ ಧಾಳಿ ನಡೆದಿದ್ದು, ಇಡೀ ಹೋರಾಟವನ್ನು ಹತ್ತಿಕ್ಕಲು ಸರಕಾರ ಹಿಡಿದ ದಾರಿ ಅಕ್ಷಮ್ಯ. ಹರ್ಯಾಣ, ಪಂಜಾಬ್, ರಾಜಸ್ಥಾನ ಮತ್ತಿತರ ರಾಜ್ಯಗಳ ರೈತರು ರಾಜಧಾನಿಗೆ ಬರದಂತೆ ತಡೆಯಲು ಸರಕಾರ ಹೆದ್ದಾರಿಗಳನ್ನೇ ಅಗೆಯಿಸಿತು. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಭುತ್ವ ತನ್ನ ಪ್ರಜೆಗಳ ಪ್ರತಿಭಟಿಸುವ ಮೂಲಭೂತ ಹಕ್ಕನ್ನು ತಡೆಯಲು ಈ ರೀತಿಯ ದಾರ್ಷ್ಟ್ಯದ ಕ್ರಮವನ್ನು ಅನುಸರಿಸಿದ್ದು ಇದೇ ಮೊದಲ ಬಾರಿ‌. ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿ ಅದನ್ನು ತಡೆಯಲು‌ ಪ್ರಯತ್ನಿಸಿದ ಯುವಕನ ಮೇಲೆ ‘ಆತ್ಮಹತ್ಯಾ ಯತ್ನ’ ಪ್ರಕರಣ ದಾಖಲಿಸಿದ್ದು ಸರಕಾರದ ನಿರ್ಲಜ್ಜತನಕ್ಕೆ ಮತ್ತೊಂದು ಸಾಕ್ಷಿ.

ಇಡೀ ರೈತ ಸಮುದಾಯ ಆಡಳಿತ ಪಕ್ಷದ, ಅಧಿಕಾರ ವರ್ಗದ ಆತ್ಮಸಾಕ್ಷಿಗೆ ಸವಾಲೆಸೆಯುವಂತೆ ತಮ್ಮನ್ನು ಹಿಂಸಿಸಿದ ಪೊಲೀಸ್ ಮತ್ತು ರಕ್ಷಣಾ ಪಡೆಗಳ ಸಿಬ್ಬಂದಿಗೆ ನೀರು ಆಹಾರ ನೀಡಿ ಮಾನವೀಯತೆ ಮೆರೆದದ್ದು, ಧರ್ಮಗಳ ಎಲ್ಲೆಗಳನ್ನು ಮೀರಿ ಪರಸ್ಪರ ಸಹಕಾರ ನೀಡುತ್ತಿರುವುದು ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.

Also Read: ರೈತ ಪ್ರತಿಭಟನೆ ಸುತ್ತ ಸುಳ್ಳು ಮಾಹಿತಿ ಬಿತ್ತರಿಸಿದ ಬಿಜೆಪಿ ಐಟಿ ಸೆಲ್

ರೈತರು ತಮ್ಮ ಯಾವ ಬೆದರಿಕೆಗಳಿಗೂ ಜಗ್ಗದೇ ಇದ್ದಾಗ ಹತಾಶ ಸರಕಾರ ತಾನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ಒಡೆದು ಆಳುವ ನೀತಿಯನ್ನು ಇಲ್ಲೂ ಪ್ರಯೋಗಿಸಿತು. ಚಳಿ ಗಾಳಿಯ ಹೊಡೆತವನ್ನು ಮೀರಿ ಪ್ರತಿಭಟನೆಗಾಗಿ ಸೇರಿರುವ ಇಡೀ ರೈತ ಸಮುದಾಯದ ಮೇಲೆ ‘ಭಯೋತ್ಪಾದನೆ’ಯ ಆರೋಪ ಹೊರಿಸಿತು.

ದೇಶದ ಗಡಿಗಳನ್ನು ರಕ್ಷಿಸುವಲ್ಲಿ, ದೇಶದೊಳಗಿನ ವಿಪತ್ತಿನ ಸಂದರ್ಭದಲ್ಲಿನ ಹೋರಾಟದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಪಂಜಾಬಿಗರನ್ನು ಮತ್ತು ಹರ್ಯಾಣಿಗರನ್ನು ಕೇವಲ ತಮ್ಮ ಹಕ್ಕಿಗಾಗಿ ಹೋರಾಡಿದರು ಎನ್ನುವ ಕಾರಣಕ್ಕಾಗಿ ಖಾಲಿಸ್ತಾನಿಗಳು ಎಂದು ಬಿಂಬಿಸುವ ಪ್ರಯತ್ನವನ್ನೂ ಬಿಜೆಪಿ ಮತ್ತದರ ಐಟಿ ಸೆಲ್ ಮಾಡಿತು. ಈ ಮೂಲಕ ತನ್ನ ಅಜೆಂಡಾಗಳನ್ನು ಒಪ್ಪದಿರುವವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಕೆಟ್ಟ ಅಭ್ಯಾಸವನ್ನು ಮತ್ತೊಮ್ಮೆ ದೇಶದ ಮುಂದಿರಿಸಿತು.

Also Read: ʼರೈತರನ್ನು ಭಯೋತ್ಪಾದಕರಂತೆ ಕಾಣಬೇಡಿʼ; ಬಿಜೆಪಿಯೇತರ ನಾಯಕರ ಆಗ್ರಹ

ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಕೃಷಿಯ ಪಾಲು ಗಣನೀಯ, ಉದ್ಯೋಗ ಸೃಷ್ಟಿಯಲ್ಲಿ ಶೇಕಡಾ 60ಕ್ಕಿಂತಲೂ ಹೆಚ್ಚಿನ ಪಾಲನ್ನು ಕೃಷಿ ಕ್ಷೇತ್ರ ಒದಗಿಸುತ್ತಿದೆ.‌ ಕರೋನಾದ ಸಂಕಷ್ಟ ಕಾಲದಲ್ಲಿ ಉಳಿದ ಎಲ್ಲಾ ವಲಯಗಳು ನಷ್ಟ ಅನುಭವಿಸಿದರೂ ಒಂದಿಷ್ಟು ಚೇತರಿಕೆ ಕಂಡುಬಂದದ್ದು ಕೃಷಿಯಲ್ಲಿ ಮಾತ್ರ ಎಂಬುವುದನ್ನು ಸರಕಾರ ಮರೆಯದಿರಲಿ. ಕಾರು ಹೊಂದಿರುವವ, ವಾಚು ಧರಿಸಿರುವವ ರೈತನೇ ಅಲ್ಲ ಎಂದು ನಿರ್ಧರಿಸುವ ಮುನ್ನ ರೈತನ ಬೆನ್ನು ಮೂಳೆ ಗಟ್ಟಿಯಿದ್ದರಷ್ಟೇ ದೇಶದ ಬೆನ್ನುಮೂಳೆ ನೇರವಾಗಿರುತ್ತದೆ ಎಂಬ ಅರಿವು ಸರಕಾರಕ್ಕೂ, ಸರಕಾರದ ಸಲಹೆಗಾರರಿಗೂ ಬೇಗ ಆಗಲಿ.

Tags: BJP Governmentdelhi chaloFarmers protestNarendra Modiರೈತ ಚಳವಳಿ
Previous Post

CM ರಾಜಕೀಯ ಕಾರ್ಯದರ್ಶಿಯಾಗಿ NR ಸಂತೋಷ್ ನೇಮಕ ಕುರಿತು‌ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್

Next Post

ಕಾಂಗ್ರೆಸ್ ರೈತ ಹೋರಾಟಗಾರರ ಹಿಂದೆ ಇಲ್ಲ, ಅವರ ಜೊತೆಯಲ್ಲಿದೆ -ಸಿದ್ದರಾಮಯ್ಯ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಕಾಂಗ್ರೆಸ್ ರೈತ ಹೋರಾಟಗಾರರ ಹಿಂದೆ ಇಲ್ಲ

ಕಾಂಗ್ರೆಸ್ ರೈತ ಹೋರಾಟಗಾರರ ಹಿಂದೆ ಇಲ್ಲ, ಅವರ ಜೊತೆಯಲ್ಲಿದೆ -ಸಿದ್ದರಾಮಯ್ಯ

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada