ರೈತರೊಂದಿಗೆ ಪೊಲೀಸ್ ಮುಖಾಮುಖಿಯ ಬಗ್ಗೆ ಅವರು ತೀವ್ರ ಸಂಕಟ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಮತ್ತು ಜೆಡಿ (ಎಸ್) ಮುಖ್ಯಸ್ಥ ಎಚ್ ಡಿ ದೇವೇಗೌಡ ಅವರು ರೈತರನ್ನು ಗೌರವದಿಂದ ಕಾಣುವಂತೆ ಮತ್ತು ಅವರೊಂದಿಗೆ ತೊಡಗಿಸಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ತಮ್ಮ ‘ದೆಹಲಿ ಚಲೋ’ ಮೆರವಣಿಗೆ ನಡೆಸಿದ ಪಂಜಾಬ್ನ ರೈತರ ಮೇಲೆ ಜಲ ಫಿರಂಗಿಗಳನ್ನು ಹಾಗೂ ಆಶ್ರವಾಯು ಪ್ರಯೋಗಿಸಿದ ಘಟನೆಯನ್ನು ದೇವೇಗೌಡರು ಖಂಡಿಸಿದ್ದಾರೆ.
I am extremely distressed seeing the images of confrontation with farmers near Delhi. I request the Union Government to treat farmers with dignity. Please engage with them. Listen to them. Police force cannot solve the problem. #FarmersProtest
— H D Devegowda (@H_D_Devegowda) November 26, 2020
“ದೆಹಲಿ ಬಳಿ ರೈತರೊಂದಿಗೆ ಪೊಲೀಸರು ಮುಖಾಮುಖಿಯಾದ ರೀತಿಯನ್ನು ನೋಡಿ ನಾನು ತುಂಬಾ ದುಃಖಿತನಾಗಿದ್ದೇನೆ. ರೈತರನ್ನು ಗೌರವದಿಂದ ಕಾಣುವಂತೆ ನಾನು ಕೇಂದ್ರ ಸರ್ಕಾರವನ್ನು ಕೋರುತ್ತೇನೆ. ದಯವಿಟ್ಟು ಅವರೊಂದಿಗೆ ತೊಡಗಿಸಿಕೊಳ್ಳಿ. ಅವರ ಮಾತುಗಳನ್ನು ಕೇಳಿ. ಪೊಲೀಸ್ ಪಡೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ” ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.