ಬೆಂಗಳೂರು: ನಾನು ಹೇಳಿದಂತೆ ಕಾರ್ಪೋರೇಷನ್ (Corporation)ಅಧಿಕಾರಿಗಳು ಹಗಲು (night)ರಾತ್ರಿಯನ್ನದೆ ಕೆಲಸ ಮಾಡುತ್ತಿದ್ದಾರೆ. ರಾಜಧಾನಿಯಲ್ಲಿ ಎಷ್ಟು ರಸ್ತೆ ಗುಂಡಿ (Road pothole)ಬಿದ್ದಿದೆ ಎಂಬ ಲೆಕ್ಕ ನನ್ನ ಹತ್ತಿರ ಇದೆ.ಅಧಿಕಾರಿಗಳು ಯಾವ ರೀತಿ ಕೆಲಸ ಮಾಡಿದ್ದಾರೆ ಎಂದು ತಿಳಿಯಲು ರಾತ್ರಿ ಸಿಟಿ ರೌಂಡ್ಸ್ (City rounds at night)ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್( DCM DK Sivakumar)ಹೇಳಿದ್ದಾರೆ.
ರಸ್ತೆ ಗುಂಡಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ನನ್ನ ದೊಡ್ಡ ಸಾಧನೆ ಎಂದು ನಾನು ಹೇಳಿಕೊಳ್ಳುವುದಿಲ್ಲ. ನನ್ನ ಕೈಲಾದ ಪ್ರಯತ್ನವನ್ನು ನಾನು ಮಾಡಿದ್ದೇನೆ. ಅಧಿಕಾರಿಗಳಿಗೆ ಸರಿಯಾಗಿ ಕೆಲಸ ಮಾಡಲು ಹೇಳಿದ್ದೇನೆ. ಅವರು ಯಾವ ರೀತಿ ಗುಣಮಟ್ಟದ ಕೆಲಸ ಮಾಡಿದ್ದಾರೆ ಎಂದು ತಿಳಿಯಲು ನಾನೇ ಖುದ್ದಾಗಿ ಸ್ಪಾಟ್ಗೆ ಹೋಗುತ್ತೇನೆ. ಆಗ ನಿಮ್ಮನ್ನು ಕರೆಯುತ್ತೇನೆ ಎಂದು ತಿಳಿಸಿದರು.
ನಾಡಿನ ಜನತೆಗಾಗಿ ನಾನು ಒಳ್ಳೆಯ ಕೆಲಸ ಮಾಡುತ್ತೇನೆ. ಅವರು ಖುಷಿಯಿಂದ ಇರಬೇಕು. ಹಾಗಾಗಿ ಜನಗಳಿಗೆ ಅನುಕೂಲವಾಗುವಂತ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದರು.
ತದನಂತರ ಮುನಿರತ್ನ ಪ್ರಕರಣಗಳ ಬಗ್ಗೆ ಮಾತನಾಡುತ್ತಾ, ನಾನು ಹಾಗೂ ಸುರೇಶ್ ಮುನಿರತ್ನ ಸಿಕ್ಕಿಸಲು ಷಡ್ಯಂತರ ನಡೆಸುತ್ತಿದ್ದೇವೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಹೇಳುವವರು ಹೇಳಲಿ ನನಗೆ ತೊಂದರೆ ಇಲ್ಲ. ಮೊದಲು ಅವರು ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುವುದನ್ನು ಬಿಡಲಿ. ನನಗೆ ಮುನಿರತ್ನ ಕೇಸ್ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಕೆಲ ದಿನಗಳಿಂದ ಪತ್ರಿಕೆಗಳನ್ನು ಓದುತ್ತಿಲ್ಲ. ಹಾಗಾಗಿ ಸರಿಯಾದ ಮಾಹಿತಿ ನನಗಿಲ್ಲ. ಈ ಕುರಿತು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರತಿಕ್ರಿಯೆ ನೀಡಬೇಕು ಎಂದು ಡಿಕೆಶಿ ಹೇಳಿದರು.