• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಯಾಕುಬ್ ಹಾಗೂ ಪ್ರಭು ದಯಾಳ್ ನಮ್ಮ ಹೃದಯಗಳನ್ನು ಶುದ್ಧೀಕರಿಸಲಿ..!

by
May 29, 2020
in ಅಭಿಮತ
0
ಯಾಕುಬ್ ಹಾಗೂ ಪ್ರಭು ದಯಾಳ್ ನಮ್ಮ ಹೃದಯಗಳನ್ನು ಶುದ್ಧೀಕರಿಸಲಿ..!
Share on WhatsAppShare on FacebookShare on Telegram

ಇತ್ತೀಚೆಗೆ ಬಂದ ಎರಡು ಸುದ್ದಿಗಳು ನಮ್ಮೆಲ್ಲರನ್ನೂ ಕ್ಷಣ ಕಾಲ ಬೆರಗಾಗುವಂತೆ ಮಾಡಿತ್ತು. ಕಾರ್ಮಿಕರಾದ ಅಮೃತ್ ರಾಂಚರಣ್ ಹಾಗೂ ಸ್ನೇಹಿತ ಮಹಮ್ಮದ್ ಯಾಕುಬ್ ಎಂಬ ಯುವಕರ ಆತ್ಮಸಂಬಂಧವಾಗಿದೆ ಮೊದಲನೆಯದ್ದು. ಇಬ್ಬರೂ ಗುಜರಾತ್ ನ ಸೂರತ್ ನಿಂದ ಉತ್ತರಪ್ರದೇಶದ ಬಸ್ತಿಯ ಕಡೆಗೆ ಹೊರಟಿದ್ದರು. ದಾರಿ ಮಧ್ಯೆ ಅಮೃತ್ ಅನಾರೋಗ್ಯದಿಂದ ಪ್ರಜ್ಞೆ ಕಳೆದುಕೊಂಡಾಗ, ಆತನಿಗೆ ಕೋವಿಡ್ ಬಾಧಿಸಿದೆ ಎಂದು ಭಯಭೀತರಾದ ಟ್ರಕ್‍ನಲ್ಲಿದ್ದ ಜನರು, ಅಮೃತ್ ನನ್ನು ಮಧ್ಯರಾತ್ರಿ ಹೊತ್ತಲ್ಲಿ, ರಸ್ತೆಬದಿಯಲ್ಲಿಯೇ ಟ್ರಕ್ ನಿಂದ ಇಳಿಸಿಬಿಟ್ಟರು. ಸ್ನೇಹಿತನನ್ನು ಬಿಟ್ಟು ಹೋಗಲು ಮನಸ್ಸು ಕೇಳದೆ ಇದ್ದಾಗ, ಯಾಕುಬ್ ಕೂಡಾ ಟ್ರಕ್‍ನಿಂದ ಇಳಿಯುತ್ತಾನೆ. ನಂತರ, ಅಮೃತ್ ನನ್ನು ಮಡಿಲಲ್ಲಿ ಮಲಗಿಸಿ, ಅಸಹಾಯಕ ಸ್ಥಿತಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತಿದ್ದ ಯಾಕುಬ್ ನನ್ನು ನೋಡಿ ಯಾರೋ ಸ್ಥಳೀಯರು ಆಂಬುಲೆನ್ಸ್‌ ನ್ನ ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ, ಆಸ್ಪತ್ರೆ ತಲುಪುವಷ್ಟಲ್ಲಿಯೇ ಯಾಕುಬ್‍ನ ಮಡಿಲಲ್ಲಿಯೇ ಅಮೃತ್‍ನ ಪ್ರಾಣಪಕ್ಷಿ ಹಾರಿ ಹೋಗಿತ್ತು.

ADVERTISEMENT
ಮುಸ್ಲಿಂ ಗೆಳೆಯ ಯಾಕುಬ್‌ ಮಡಿಲಲ್ಲಿ ಪ್ರಾಣ ತೆತ್ತ ಸ್ನೇಹಿತ ಅಮೃತ್

Also Read: ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!

ಎರಡನೇ ಸುದ್ದಿಯೂ ಕೂಡಾ ಬಹಳ ವ್ಯಾಪಕವಾಗಿ ಶೇರ್ ಆದುದೇ ಆಗಿದೆ. ಹೃದಯಸ್ಪರ್ಶಿಯಾದ ಒಂದು ಪತ್ರದಿಂದಾಗಿ ಇದು ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿತ್ತು. ಸೈಕಲ್ ಕದ್ದ ಕಾರ್ಮಿಕನೊಬ್ಬ ಆ ಸೈಕಲ್‍ನ ಮಾಲಕನಿಗೆ ಹಿಂದಿ ಭಾಷೆಯ ಕೈಬರಹದಲ್ಲಿ ಬರೆದದ್ದಾಗಿತ್ತು ಆ ಪತ್ರ.

“ನಾನೊಬ್ಬ ಅಸಹಾಯಕನಾದ ಕಾರ್ಮಿಕನಾಗಿದ್ದೇನೆ. ತಮಗೊಂದು ತಪ್ಪೆಸಗುತ್ತಿರುವೆನು. ನಾನು ನಿಮ್ಮ ಸೈಕಲ್ ಕೊಂಡೊಯ್ಯುತ್ತಿದ್ದೇನೆ. ನನ್ನಲ್ಲಿ ಕ್ಷಮೆಯಿರಲಿ. ನನಗೆ ನನ್ನೂರು ತಲುಪಲು ಬೇರೆ ದಾರಿಯಿಲ್ಲ. ನನಗೆ ಅಂಗವೈಕಲ್ಯವಿರುವ ಮಗುವೊಂದಿದೆ. ಅಲ್ಲದೇ ದೂರದ ಬರೇಲ್ವಿ ಕಡೆಗೆ ಹೋಗಬೇಕಿದೆ.” ಹೀಗೆ ಆ ಪತ್ರದಲ್ಲಿ ಬರೆದಿತ್ತು.

ಸೈಕಲ್ ಮಾಲಿಕ ಪ್ರಭು ದಯಾಳ್‌ ಗೆ ಕಾರ್ಮಿಕ ಇಕ್ಬಾಲ್‌ ಖಾನ್ ಬರೆದಿರುವ ಪತ್ರ

ಪತ್ರವನ್ನು ಓದಿದ ಸೈಕಲ್‍ನ ಮಾಲಕ ‘ಪ್ರಭು ದಯಾಳ್’ ಪೊಲೀಸರಲ್ಲಿ ದೂರು ಕೊಡಲು ಹಿಂಜರಿಯುತ್ತಾರೆ. ಸೈಕಲ್ ಕೊಂಡು ಹೋದ ಇಕ್ಬಾಲ್ ಖಾನ್ ನ ಕೆಲಸವನ್ನು ಒಂದು ಕಳ್ಳತನವಾಗಿ ಪ್ರಭುದಯಾಳ್ ಕಾಣಲಿಲ್ಲ. ಆದರೆ, ಯಾವ ಸೈಕಲೂ ಕಳೆದುಕೊಳ್ಳದ ಮಾಧ್ಯಮದವರು ಅದನ್ನು ʼಕಳ್ಳತನʼ ಎಂದು ವರದಿ ಮಾಡಿದರು.

ಕೋವಿಡ್ ಕಾಲದ ಮೈತ್ರಿ

ಈ ಘಟನೆಗಳ ವರದಿಗಳು ಎಲ್ಲೂ ಪರಾಮರ್ಶಿಸಲ್ಪಡುವುದಿಲ್ಲವಾದರೂ, ಆ ಪತ್ರದ ಅಕ್ಷರ ಸಾಲುಗಳ ಮಧ್ಯೆ ನಮಗೆ ಓದಲು ಸಾಧ್ಯವಾಗುವ ಒಂದು ಮೌಲ್ಯವಿದೆ. ಅದೇನೆಂದರೆ, ಜೀವನದ ಅತಿ ಪ್ರಯಾಸಕರ ನಿಮಿಷಗಳಲ್ಲಿಯೂ ಕೂಡಾ ಭಾರತದ ಸೀಮಿತ ಜನಗಳ ಮಧ್ಯೆ ನೆಲೆಗೊಂಡಿರುವ ಮೈತ್ರಿಯಾಗಿದೆ ಅದು. ಮೊದಲ ಸುದ್ದಿಯಲ್ಲಿ ಮರಣ ಹೊಂದಿದ ಕಾರ್ಮಿಕ ಒಬ್ಬ ಹಿಂದುವೂ, ಅವನಿಗೆ ನೆರವಾಗಿ ಮಡಿಲಲ್ಲಿ ಮಲಗಿಸಿ, ಗೋಗರೆದ ವ್ಯಕ್ತಿ ಒಬ್ಬ ಮುಸ್ಲಿಮನಾಗಿದ್ದ. ಎರಡನೇ ಘಟನೆಯಲ್ಲಿ, ಕದ್ದು ಕೊಂಡು ಹೋದವ ಅಸಹಾಯಕನಾದ ಮುಸ್ಲಿಂ ಕಾರ್ಮಿಕನಾದರೆ, ಅನುಕಂಪ ತೋರಿದ ಮಾಲಕ ಒಬ್ಬ ಹಿಂದೂ ಆಗಿದ್ದರು. ಈ ವಾಸ್ತವ ನಮ್ಮ ಮಾಧ್ಯಮದವರ ಗಮನ ಸೆಳೆಯದೇ ಹೋದುದು ದುರ್ಭಾಗ್ಯವೆಂದೇ ಹೇಳಬೇಕು.

ಮತೀಯ ಐಕ್ಯತೆ ಮಾಧ್ಯಮಗಳಿಗೆ ಒಂದು ಸುದ್ದಿಯೇ ಅಲ್ಲ. ಅದೇ ವೇಳೆ, ಧರ್ಮದ ಹೆಸರಿನಲ್ಲಿನ ಸಂಘರ್ಷಗಳಾಗಿದ್ದರೆ ಅದು ಬೇರೆಯೇ ಸ್ವರೂಪ ಪಡೆಯುತ್ತಿತ್ತು. ಪ್ರಸ್ತುತವಿರುವ ವಿಭಾಗೀಯತೆಯನ್ನು ಇಲ್ಲವಾಗಿಸಲು ಈ ಎರಡು ಘಟನೆಗಳು ಸಾಕಾಗುತ್ತಿತ್ತು. ಆದರೆ, ಐಕ್ಯತೆಗೆ ಸುದ್ದಿ ಪ್ರಾಮುಖ್ಯತೆ ಅನ್ನೊದೇ ಇಲ್ಲವಾದರೆ..!?

ಸುದ್ದಿ ಆದರೂ, ಆಗದೇ ಹೋದರೂ ಸಾಮುದಾಯಿಕ ಸಮೈಕ್ಯತೆಯನ್ನು ಘಂಟಾಘೋಷಿಸುವಂತಹ ಸಾವಿರಾರು ಘಟನೆಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುವ ದೇಶವಾಗಿದೆ ಇದು. ಹಿಂದೂಗಳು ಮುಸ್ಲಿಮರನ್ನೂ, ಮುಸ್ಲಿಮರು ಹಿಂದೂಗಳನ್ನೂ ಸಹಾಯ ಮಾಡುತ್ತಾರೆ. ಕಷ್ಟ ಕಾರ್ಪಣ್ಯಗಳಿಗೆ ನೆರವಾಗುತ್ತಾರೆ. ಇಸ್ಲಾಂ , ಹಿಂದೂ, ಕ್ರೈಸ್ತ, ಸಿಖ್, ಅಥವಾ ನಾಸ್ತಿಕವಾದ ಮುಂತಾದ ಯಾವುದೇ ವಿಭಾಗದವರೊಂದಿಗೂ ಐಕ್ಯತೆ ಎಂಬ ಆಶಯವು ಬಹುಭಾಗ ಜನರಲ್ಲಿದೆ.

ಐಕ್ಯತೆಯ ಹಿತದೃಷ್ಟಿಯಿಂದ ಮಾಧ್ಯಮಗಳು ಸುದ್ದಿ ಕೊಡಲು ಮುಂದಾದಲ್ಲಿ, ಈ ಮತೀಯ ಸಂಘರ್ಷಗಳ ವಿಷಮಯ ವಾತಾವರಣದಿಂದ ಪಾರಾಗಲು ಕಷ್ಟಸಾಧ್ಯವೇನಲ್ಲ. ಆದರೆ, ಅವುಗಳೇ ಮತೀಯ ದ್ವೇಷವನ್ನು ಹುಟ್ಟುಹಾಕುವ ವಾಹನಗಳಾಗಿ ಬದಲಾದರೆ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುವುದರಲ್ಲಿ ಸಂಶಯವೇ ಇಲ್ಲ. ಸದ್ಯಕ್ಕೆ ಆಗುತ್ತಿರುವುದೂ ಅದೇ ಆಗಿದೆ.

ಆಸ್ಪತ್ರೆಯಲ್ಲಿ ಹಿಂದು ವಾರ್ಡ್ , ಮುಸ್ಲಿಂ ವಾರ್ಡ್…

ಕೋವಿಡ್‍ನ ಈ ಸಂಕಷ್ಟ ಕಾಲದಲ್ಲಿಯೂ ಕೆಲವೊಂದು ಮತಾಂಧ ಶಕ್ತಿಗಳು ಸಾಮುದಾಯಿಕ ಛಿದ್ರತೆಗೆ ಹೆಗಲು ಕೊಟ್ಟಿರುವುದು ನಾವೇನೂ ಮರೆಯುವಂತಿಲ್ಲ. ಪಾದ್ರಿಗಳ ಸಾನ್ನಿಧ್ಯದಲ್ಲಿ, ಸ್ವಂತ ಮನೆಯಲ್ಲಿ ಪ್ರಾರ್ಥನಾ ಯೋಗ ನಡೆಸಿದರೆಂಬ ಒಬ್ಬ ಕ್ರೈಸ್ತ ಧರ್ಮದ ಅನುಯಾಯಿಯನ್ನು ಕ್ರೂರವಾಗಿ ಥಳಿಸಿದ್ದೂ ಒಂದು ಉದಾಹರಣೆ. ಕಾಮ ಸೋಡಿ ಎಂಬ ಮೂವತ್ತರ ಹರೆಯದವನನ್ನು ಹಿಂದುತ್ವ ಶಕ್ತಿಗಳು ಸೇರಿಕೊಂಡು ಥಳಿಸಿ ಪ್ರಜ್ಞೆ ಹೋಗುವಂತೆ ಮಾಡಿರೋದು ಒಡಿಶಾದ ಮಲ್ ಕಾನ್ ಗಿರಿಯ ಕೋಡಲ್ ಮೆಟ್ಲ ಎಂಬ ಗ್ರಾಮದಲ್ಲಾಗಿತ್ತು. ಇತ್ತೀಚೆಗೆ ಮಧ್ಯಪ್ರದೇಶದ ಬೈತುಲ್ ನಲ್ಲಿ ದೀಪಕ್ ಬುಂಡೆಲೆ ಎಂಬ ಗಡ್ಡ ಬಿಟ್ಟ ಹಿಂದೂ ವಕೀಲನೊಬ್ಬನನ್ನು ಆತ ಮುಸ್ಲಿಮನೆಂದು ಭಾವಿಸಿ, ಅಲ್ಲಿನ ಪೊಲೀಸರು ಥಳಿಸಿ, ನಂತರ ಕ್ಷಮೆ ಕೋರಿದರು..!

Also Read: ಮುಸ್ಲಿಮನೆಂದು ಭಾವಿಸಿ ಹಲ್ಲೆ ನಡೆಸಿದ ಬಳಿಕ ಮಧ್ಯಪ್ರದೇಶ ಪೊಲೀಸರ ಹೈಡ್ರಾಮಾ.!

ಜಾರ್ಖಂಡ್‍ನಲ್ಲಿ ಕ್ರೈಸ್ತ ಮತದಲ್ಲಿ ನಂಬಿಕೆಯಿಟ್ಟ ಕಾರಣಕ್ಕೆ 16 ಕುಟುಂಬಗಳ ಮೇಲೆ ನಿರಂತರ ದೌರ್ಜನ್ಯವೆಸಗಲಾಯಿತು. ಕ್ರೈಸ್ತಮತವನ್ನು ತೊರೆಯಬೇಕೆಂದು ಅಲ್ಲಿನ ಪ್ರಾದೇಶಿಕ ಗೂಂಡಾಗಳಿಂದ ಅಕ್ರಮಗೊಳಪಡುತ್ತಾರೆ. ಭಾಜಪಾ ನೇತೃತ್ವದಲ್ಲಿ ಮತಾಂತರ ನಿಷೇಧವನ್ನು ಜಾರಿಗೆ ತಂದ ರಾಜ್ಯವಾಗಿದೆ ಜಾರ್ಖಂಡ್ ಎಂಬುದನ್ನು ಇಲ್ಲಿ ನೆನಪಿಸಬೇಕು.

ಮತಾಂತರ ನಿಷೇಧ ಜಾರಿಗೊಳಿಸಿದ ರಾಜ್ಯಗಳಲ್ಲಿ ದೌರ್ಜನ್ಯಗಳು ಹೆಚ್ಚು ವರದಿಯಾಗಿವೆ ಎಂದು ಈ ಘಟನೆಯನ್ನು ವರದಿ ಮಾಡಿದ ಶಿಬು ಥಾಮಸ್ ಹೇಳುತ್ತಾರೆ. ಒಡಿಶ್ಶಾ ಆಗಿತ್ತು ಮೊದಲ ಬಾರಿಗೆ ಮತಾಂತರ ನಿಷೇಧ ಕಾನೂನು ಜಾರಿಗೊಳಿಸಿದ್ದು. 2017 ರಲ್ಲಿ ಜಾರ್ಖಂಡ್ ಜಾರಿಗೊಳಿಸಿತು. ನಂತರ ಗುಜರಾತ್. ಇದೇ ಗುಜರಾತ್‌ ನಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಮುಸ್ಲಿಂ ರೋಗಿಗಳನ್ನು ಹಿಂದೂ ರೋಗಿಗಳಿಂದ ಬೇರ್ಪಡಿಸಲು ನಿರಂತರ ಶ್ರಮ ನಡೆಸಲಾಯಿತು. ಅದರ ಭಾಗವಾಗಿ ಕೋವಿಡ್ ವಾರ್ಡ್‍ಗಳನ್ನು ʼಹಿಂದೂ ವಾರ್ಡ್ʼ , ʼಮುಸ್ಲಿಂ ವಾರ್ಡ್ʼ ಎಂದು ಪ್ರತ್ಯೇಕಿಸಿ ಕರೆಯಲಾಗುತ್ತಿತ್ತು.

ಮುಸ್ಲಿಮರು ಕರೋನಾ ಹರಡುತ್ತಿದ್ದಾರೆನ್ನುವ ಹಿಂದುತ್ವದ ಪ್ರಚಾರ ಕಾರಣದಿಂದಲೇ, ಗುಜರಾತ್‍ನ ಕೆಲವು ಪ್ರದೇಶಗಳಲ್ಲಿ ಮುಸಲ್ಮಾನರಿಗೆ, ದಿನಬಳಕೆಯ ತರಕಾರಿ ಖರೀದಿಸಲು ಕೂಡಾ ಹೊರಗಿಳಿಯಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳಿದ್ದವು. ಮುಸ್ಲಿಂ ವ್ಯಾಪಾರಿಗಳಿಂದ ಹಿಂದುಗಳು ಸಾಮಾನುಗಳನ್ನು ಖರೀದಿಸಬಾರದು ಎಂದು ಹಲವು ಪ್ರದೇಶಗಳಲ್ಲಿ ಪ್ರಚಾರ ನಡೆಯಿತು, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಬೋರ್ಡ್‍ಗಳನ್ನು ತೂಗು ಹಾಕಲಾಯಿತು. ಗುಜರಾತ್‍ನ ವಂಶ ಹತ್ಯೆಗೂ ಮುನ್ನ ಹಿಂದುತ್ವವಾದಿಗಳು ಪ್ರಯೋಗಿಸಿದ ತಂತ್ರವಾಗಿತ್ತು ಮುಸ್ಲಿಮರನ್ನು ಬಹಿಷ್ಕರಿಸಿ ಎಂಬುದು.

ಆದರೆ, ಭಾರತೀಯರಿಗೆ ಇದರಲ್ಲಿ ಅಲ್ಪವೂ ತಾತ್ಪರ್ಯವಿಲ್ಲ ಎಂಬುದು ಸತ್ಯವಾಗಿದೆ. ಕಳೆದ ಒಂದು ಶತಮಾನದಲ್ಲಿ ಹಲವು ಕೋಮು ಸಂಘರ್ಷಗಳಿಗೆ ಈ ನಾಡು ಸಾಕ್ಷಿಯಾಗಿದೆ. ದಿಲ್ಲಿಯ ಸಿಖ್ ವಂಶಹತ್ಯೆ, ಮುಂಬೈ ಗಲಭೆ, ಗುಜರಾತ್ ನರಮೇಧ, ಕಂದಮಾಲ್ ಗುಂಪುಹತ್ಯೆ, ಮುಂತಾದ ಸಂಘರ್ಷಗಳಲ್ಲಿಯೂ ನಿಮಗೆ ಅಮೃತ್-ಮುಹಮ್ಮದ್ ಯಾಕುಬ್, ಹಾಗೂ ಪ್ರಭು ದಯಾಳ್- ಮುಹಮ್ಮದ್ ಇಕ್ಬಾಲ್ ರನ್ನು ಕಾಣಬಹುದು.

ಕೋಮು ರಾಜಕಾರಣದ ಕಾರಣದಿಂದ ಗಾಯಗೊಂಡ ನಮ್ಮ ನಾಗರಿಕತೆಯಲ್ಲಿ ಐಕ್ಯತೆಗಿರುವ ನಿರ್ಣಾಯಕ ಪ್ರಾಧಾನ್ಯತೆಯನ್ನು ಹೆಚ್ಚಿನ ಜನರು ಮನದಟ್ಟು ಮಾಡುವ ಸಮಯ ಬಂದಿದೆ. ಭವಿಷ್ಯದಲ್ಲಿ, ನಮ್ಮ ಹೃದಯಗಳಲ್ಲಿ ಜೀವನೋಪಾಯಕ್ಕಾಗಿ ಸೈಕಲ್‌ ಕದ್ದ ಇನ್ನಷ್ಟು ಮುಹಮ್ಮದ್ ಇಕ್ಬಾಲ್ ಗಳು, ಪ್ರಭು ದಯಾಳರು ನೆಲೆಯಾಗಿರಲಿ. ಭಾರತದಲ್ಲಿ ಐಕ್ಯತೆಯ ವಿಶ್ವ ರೂಪದರ್ಶನ ರೂಪುಗೊಳ್ಳುವುದರಲ್ಲೂ, ಅದು ಬಲಿಷ್ಟವಾಗುವುದರಲ್ಲಿಯೂ, ತಮಗಿರುವ ಪಾತ್ರವೇನೆಂಬುದನ್ನು ಮನದಟ್ಟು ಮಾಡಲು ಮಾಧ್ಯಮ ಮಿತ್ರರಿಗೂ ಸಾಧ್ಯವಾಗಲಿ ಎಂದು ಹಾರೈಸುತ್ತೇನೆ.

Tags: ‌ ಲಾಕ್‌ಡೌನ್‌ ವಲಸೆ ಕಾರ್ಮಿಕರುCommunal Harmonycovid19LockdownMigrant Workersಕೋಮು ಸೌಹಾರ್ದತೆಕೋವಿಡ್-19
Previous Post

ಕೋವಿಡ್-19 ಭಯ: ಹಿಂದೂ ಸ್ಮಶಾನದಲ್ಲಿ ಮುಸ್ಲಿಂ ವ್ಯಕ್ತಿಯ ಅಂತ್ಯ ಸಂಸ್ಕಾರ

Next Post

ಸಿಎಂ ಬದಲಾವಣೆಗೆ ವೇದಿಕೆ..! ಮತ್ತೆ ಸಕ್ಸಸ್ ಆಗುತ್ತಾ ಆಪರೇಷನ್..?

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಸಿಎಂ ಬದಲಾವಣೆಗೆ ವೇದಿಕೆ..! ಮತ್ತೆ ಸಕ್ಸಸ್ ಆಗುತ್ತಾ ಆಪರೇಷನ್..?

ಸಿಎಂ ಬದಲಾವಣೆಗೆ ವೇದಿಕೆ..! ಮತ್ತೆ ಸಕ್ಸಸ್ ಆಗುತ್ತಾ ಆಪರೇಷನ್..?

Please login to join discussion

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ
Top Story

ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ

by ಪ್ರತಿಧ್ವನಿ
June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ
Top Story

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

by ಪ್ರತಿಧ್ವನಿ
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada