• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತೀಯ ಯೋಧರು ಬಂದೂಕು ಬಳಸದೆ ಇರುವುದಕ್ಕೆ ಕಾರಣವೇನು?

by
June 19, 2020
in ದೇಶ
0
ಭಾರತೀಯ ಯೋಧರು ಬಂದೂಕು ಬಳಸದೆ ಇರುವುದಕ್ಕೆ ಕಾರಣವೇನು?
Share on WhatsAppShare on FacebookShare on Telegram

ಗಡಿ ವಿವಾದಗಳನ್ನು ಮುಂದಿಟ್ಟು ಭಾರತದೊಂದಿಗೆ ಜಗಳಕ್ಕೆ ನಿಲ್ಲುವ ಚೀನಾ, ಈ ಬಾರಿ ಇನ್ನೂ ಮುಂದೆ ಹೋಗಿ ಭಾರತದ 20 ಯೋಧರನ್ನು ಬಲಿ ಪಡೆದುಕೊಂಡಿದೆ. ಉಭಯ ಸೈನ್ಯದ ಮುಖಾಮುಖಿ ಸಂಘರ್ಷದಲ್ಲಿ ಚೈನಾದ 43 ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದ್ದರೂ ಚೀನಾ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ADVERTISEMENT

ಕುತೂಹಲಕಾರಿ ಸಂಗತಿ ಏನೆಂದರೆ ಉಭಯ ರಾಷ್ಟ್ರಗಳ ಸೈನಿಕರ ನೇರ ಸಂಘರ್ಷದಲ್ಲಿ ಬಂದೂಕು ಅಥವಾ ಯಾವುದೇ ಮಿಲಿಟರಿ ಆಯುಧಗಳನ್ನು ಬಳಸದಿರುವುದು. ಬರೀ ಕೈ, ಕಲ್ಲುಗಳಿಂದ ಹೊಡೆದಾಡಿ ಭಾರತದ 20 ಮಂದಿ ಯೋಧರನ್ನು ಬಲಿ ತೆಗೆದಿರುವಾಗ ಯಾಕೆ ಬಂದೂಕುಗಳನ್ನು ಬಳಸಿಲ್ಲ ಎಂದು ಭಾರತೀಯ ನಾಗರೀಕರು ಗೊಂದಲಕ್ಕೀಡಾಗಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಬಳಿ ಗಸ್ತು ತಿರುಗುವಾಗ ಬಂದೂಕುಗಳೊಂದಿಗೆ ತಿರುಗಾಡುವ ಭಾರತೀಯ ಸೈನ್ಯ ಚೈನಾ ಯೋಧರೊಂದಿಗೆ ಮಾತನಾಡಲು ಮುಂದಾಗುವಾಗ ಒಪ್ಪಂದದಂತೆ ನಿರಾಯುಧರಾಗುತ್ತಾರೆ. 1993 ಹಾಗೂ 1996 ರಲ್ಲಿ ಭಾರತ ಹಾಗೂ ಚೀನಾ ನಡುವೆ ಒಪ್ಪಂದ ನಡೆದಿದ್ದು, ಅದರಂತೆ ಭಾರತೀಯ ಯೋಧರು ಒಪ್ಪಂದ ಮುರಿಯದೆ ಕಾದಾಡಿದ್ದಾರೆ.

1993 ರ ಒಪ್ಪಂದದ ಪ್ರಕಾರ, ಯಾರೇ ಗಡಿ ದಾಟಿ ಬಂದರೂ ಅವರಿಗೆ ಎಚ್ಚರಿಕೆಯನ್ನ ನೀಡಿ ಹಿಂದೆ ಕಳುಹಿಸಬೇಕು. 1996 ರಲ್ಲಿ ನಡೆದ ಒಪ್ಪಂದ ಪ್ರಕಾರ ಗಡಿಯ 2 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಸ್ಫೋಟಕ ಬಳಸಿ ದಾಳಿ ಮಾಡುವಂತಿಲ್ಲ. ಈ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಾರತೀಯ ಯೋಧರಿಗೆ ನಿರ್ದೇಶಿಸಲಾಗಿದೆ.

ಗಲ್ವಾನ್‌ ಕಣಿವೆಯಲ್ಲಿ ಕಲ್ಲು ಮತ್ತು ಕೈಗಳಿಂದ ನಡೆದ ಜಗಳಗಳಲ್ಲಿ ಕರ್ನಲ್‌ ಸಂತೋಷ್‌ ಬಾಬು ಸೇರಿದಂತೆ ಇಪ್ಪತ್ತು ಮಂದಿ ಯೋಧರು ಹುತಾತ್ಮರಾದ ಬಳಿಕ ಭಾರತೀಯ ಸೇನೆ ಈ ಒಪ್ಪಂದವನ್ನು ಪುನರ್ವಿಮರ್ಶಿಸಲು ಮುಂದಾಗಿದೆ.

ಭಾರತೀಯ ಯೋಧರ ಬಲಿದಾನದ ಬಳಿಕ ಇದು ದೊಡ್ಡ ವಿವಾದವನ್ನು ಹುಟ್ಟು ಹಾಕಿದೆ. ಮಾರಣಾಂತಿಕ ಆಕ್ರಮಣ ಎದುರಾಗುವಾಗಲೂ ಭಾರತೀಯ ಸೇನೆ ಏಕೆ ಆಯುಧಗಳನ್ನು ಬಳಸಿಕೊಂಡಿಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ. ಸೇನಾ ತುಕಡಿಯು ಬಂದೂಕುಗಳನ್ನು ಹೊಂದಿದೆ. ಆದರೆ ಉಭಯ ಪಕ್ಷೀಯ ಒಪ್ಪಂದದಂತೆ ಗುಂಡು ಚಲಾಯಿಸುವಂತಿಲ್ಲ, ಹಾಗಾಗಿ ಬಂದೂಕು ಬಳಸಿಲ್ಲ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಹೇಳಿದ್ದಾರೆ.

ವಿದೇಶಾಂಗ ಸಚಿವರ ಹೇಳಿಕೆಯನ್ನು ಹಲವು ಮಿಲಿಟರಿ ಮಾಜಿ ಅಧಿಕಾರಿಗಳು ವಿರೋಧಿಸಿದ್ದಾರೆ.

ಈ ಒಪ್ಪಂದಗಳು ಗಡಿ ನಿರ್ವಹಣೆಗೆ ಮಾತ್ರ ಅನ್ವಯಿಸಬೇಕು. ಯುದ್ಧ ತಂತ್ರದಂತಹ ಪರಿಸ್ಥಿತಿಗಳನ್ನು ಎದುರಿಸುವಾಗ ಅಲ್ಲ, ಸೈನಿಕರ ಜೀವಕ್ಕೆ ಕುತ್ತು ಬರುವಾಗ ಫಿರಂಗಿಯೂ ಸೇರಿದಂತೆ ಎಲ್ಲಾ ಆಯುಧಗಳನ್ನು ಬಳಸಬೇಕೆಂದು ಮಾಜಿ ಕಮಾಂಡರ್‌ ಲೆ. ಜನರಲ್‌ ಎಚ್‌ ಎಸ್‌ ಪಾನಂಗ್‌ ಟ್ವೀಟ್‌ ಮಾಡಿದ್ದಾರೆ.

ನಿಮ್ಮ ಕರ್ನಲ್‌ ನಿಮ್ಮೆದುರೇ ಸಾಯುತ್ತಿರುವಾಗ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಬೇಕು. ಶತ್ರುಗಳು ಪ್ರೋಟೊಕಾಲ್‌ ಮುರಿದು ಆಕ್ರಮಣ ಮಾಡುವಾಗ ಒಪ್ಪಂದಗಳನ್ನು ಏಕೆ ಮುಂದುವರೆಸಬೇಕೆಂದು ನಿವೃತ್ತ ಬ್ರಿಗೇಡಿಯರ್‌ ಸಂದೀಪ್‌ ಥಾಪರ್‌ ಹೇಳಿದ್ದಾರೆ.

Tags: ಅಂತರಾಷ್ಟ್ರೀಯ ಒಪ್ಪಂದಚೀನಾ-ಭಾರತ ಗಡಿ ಸಂಘರ್ಷಭಾರತೀಯ ಸೇನೆ
Previous Post

ಮೂರು ದಿನಗಳ ಕಾಲ ಭಾರತೀಯ ಯೋಧರು ಚೀನಾ ವಶದಲ್ಲಿದ್ದರೇ!?

Next Post

ಪಿಯು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಕರೋನಾ ಸೋಂಕು ಧೃಢ

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025
Next Post
ಪಿಯು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಕರೋನಾ ಸೋಂಕು ಧೃಢ

ಪಿಯು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಕರೋನಾ ಸೋಂಕು ಧೃಢ

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada