
ಹುಮನಾಬಾದ್: ‘ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕಾರ್ಖಾನೆಗಳ ವಿಷಕಾರಿ ತ್ಯಾಜ್ಯವನ್ನು ತಂದು ಹುಡಗಿ ಹಳ್ಳದಲ್ಲಿ ಬಿಡುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಬಮ್ಮಾ ಆರೋಪಿಸಿದ್ದಾರೆ.ತಾಲ್ಲೂಕಿನ ಹುಡಗಿ ಗ್ರಾಮದ ಹಳ್ಳದಲ್ಲಿ ತ್ಯಾಜ್ಯ ವೀಕ್ಷಣೆ ಮಾಡಿ ಅವರು ಮಾತನಾಡಿದರು.ತ್ಯಾಜ್ಯದಿಂದಾಗಿ ಹಳ್ಳದಲ್ಲಿನ ಅನೇಕ ಮೀನುಗಳು ಮೃತಪಡುತ್ತಿವೆ. ಈ ಹಳ್ಳದ ಸುತ್ತಮುತ್ತಲೂ ರೈತರ ಹೊಲಗಳು ಹಾಗೂ ಸರ್ಕಾರಿ ಕೊಳವೆ ಬಾವಿಗಳು ಇವೆ. ತ್ಯಾಜ್ಯ ಬಿಟ್ಟಿರುವ ಕಾರಣ ಸದ್ಯ ಗ್ರಾಮಸ್ಥರು ಮತ್ತು ರೈತರು ಆತಂಕದಲ್ಲಿ ಇದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ.ಸಿದ್ದೀಕ್ ಷಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಸೈನಿರ್, ಪಿಡಿಒ ಶಿವರಾಜ, ರಾಜಕುಮಾರ್ ಮಾಶಟ್ಟಿ, ಪ್ರಭು ಮಾಳನಾಯಕ್, ಸೈಯದ್ ಮುಜಿಬ್, ಎಂ.ಡಿ.ಜಿಲಾನಿ, ಮೋಹನ್ ಬಿರನ್ನಳ್ಳಿ, ಅಕ್ಬರ್ ಗಾಲಿಬ್, ಪ್ರಕಾಶ್ ಸಿದ್ದಣ್ಣ, ಶಿವರಾಜ ವಾಡೇಕರ್, ಮುಜಿಬ್ ಎಲಗಾರ್ ಸೇರಿದಂತೆ ಇತರರು ಹಾಜರಿದ್ದರು.