• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಜಾಜ್ ಆಪೆಯಲ್ಲಿ ಸಂಚಾರಿ ಮನೆ ನಿರ್ಮಾಣ; ತಮಿಳುನಾಡು ಯುವಕನ ಆವಿಷ್ಕಾರ

by
October 25, 2020
in ದೇಶ
0
ಬಜಾಜ್ ಆಪೆಯಲ್ಲಿ ಸಂಚಾರಿ ಮನೆ ನಿರ್ಮಾಣ; ತಮಿಳುನಾಡು ಯುವಕನ ಆವಿಷ್ಕಾರ
Share on WhatsAppShare on FacebookShare on Telegram

ಸಂಚರಿಸುವ ಮನೆ, ಕೇಳುವಾಗಲೇ ಕುತೂಹಲ ಮೂಡಿಸುವ ಈ ಮಾದರಿ ಮನೆಗಳು ಆವಿಷ್ಕಾರಗೊಂಡು ಹಲವು ವರ್ಷಗಳೇ ಆಗಿವೆ. ಪ್ರಯಾಣದ ಕುರಿತು ತೀವ್ರ ಆಸಕ್ತಿ ಉಳ್ಳವರಲ್ಲಿ ಬಹುಪಾಲು ಮಂದಿ ಇಂತಹದ್ದೊಂದು ಸ್ವಂತ ಚಲಿಸುವ ಮನೆಯನ್ನು ಹೊಂದಲು ತೀವ್ರವಾಗಿ ಬಯಸುತ್ತಿರುತ್ತಾರೆ. ಸಂಚಾರದ ನಡುವೆ ತಂಗಲು, ತಮ್ಮ ಊಟವನ್ನು ತಾವೇ ಅಡುಗೆ ಮಾಡಿ ತಿನ್ನಲು ʼಸಂಚಾರ ಬದುಕುʼ ನಡೆಸುವವರಿಗೆ ಚಲಿಸುವ ಮೋಟಾರ್‌ ಮನೆಗಳು ಒಂದೇ ಆಯ್ಕೆ.

ADVERTISEMENT

ಜನರ ಇಂತಹ ಬಯಕೆಗಳನ್ನು ಪೂರೈಸಲು ಹಲವಾರು ವಾಹನ ಕಂಪೆನಿಗಳು ತಾವೇ ಸಂಚಾರ ಮನೆಯನ್ನು ನಿರ್ಮಿಸಿ ಗ್ರಾಹಕರಿಗೆ ನೀಡುತ್ತವೆ. ಗ್ರಾಹಕರ ಬೇಡಿಕೆ ತಕ್ಕಂತೆ ವಾಹನಗಳನ್ನು ಮನೆಯನ್ನಾಗಿ ವಿನ್ಯಾಸಗೊಳಿಸುವ ನುರಿತ ವಿನ್ಯಾಸಕರೂ ಇದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂತಹದ್ದೇ ಸಂಚಾರ ಮನೆಯೊಂದನ್ನು ತಮಿಳುನಾಡಿನ ಯುವ ಆರ್ಕಿಟೆಕ್ಟ್‌ ಅರುಣ ಪ್ರಭು ಎನ್‌ ಜಿ ಸರಕು ಸಾಗಿಸುವ ಬಜಾಜ್‌ ರಿಕ್ಷಾವೊಂದನ್ನು ಸಂಚಾರ ಮನೆಯನ್ನಾಗಿ ಮಾರ್ಪಡಿಸಿ ಎಲ್ಲರ ಹುಬ್ಬೇರಿಸಿದ್ದಾನೆ.

ಈತ ವಿನ್ಯಾಸದಲ್ಲಿ ಮನೆಯಾಗಿ ರೂಪಾಂತರಗೊಂಡಿರುವ ಗೂಡ್ಸ್‌ ರಿಕ್ಷಾದಲ್ಲಿ ಕಿಚನ್‌ ಇದೆ, ಟಾಯ್ಲೆಟ್-ಬಾತ್ರೂಮ್‌ ಇದೆ, ಮಲಗಲು ಅವಕಾಶವಿದೆ, ಗಾಳಿ ಆಸ್ವಾದಿಸಲು ಬಾಲ್ಕನಿಯೂ ಇದೆ.

ಈತನಿಗೆ ಇಂತಹದ್ದೊಂದು ಯೋಚನೆ ಹೊಳೆದ ಕತೆ ಕುತೂಹಲ. ಜನರು ತಮ್ಮ ಸಣ್ಣ ನಿವೇಶನದಲ್ಲಿ ಸರಿಯಾಗಿ ಮನೆ ಕಟ್ಟದೆ, ಸ್ಥಳವನ್ನು ಅನುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅರುಣ್‌ ಕುಮಾರ್‌ ಹೇಳುತ್ತಾರೆ.

ಮುಖ್ಯವಾಗಿ, ಸ್ಲಮ್‌ ಗಳಲ್ಲಿ ಹೇಗೆ ಸ್ಥಳವನ್ನು ಸದುಪಯೋಗ ಪಡಿಸಬೇಕೆಂದು ಅಧ್ಯಯನ ಮಾಡಿರುವ ಅರುಣ್‌ ಕುಮಾರ್‌, ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಜನರಿಗೆ ಮನದಟ್ಟು ಮಾಡಿಸಲು ಈ ಯೋಜನೆಯನ್ನು ಪೂರ್ತಿಗೊಳಿಸಿದ್ದಾರೆ ಎನ್ನುತ್ತಾರೆ ಅರುಣ್‌.

ಚೆನ್ನೈ ಹಾಗೂ ಮುಂಬೈ ಕೊಳೆಗೇರಿ ನಿವಾಸಿಗಳ ಮನೆಗಳನ್ನು ಅಭ್ಯಸಿಸಿರುವ ಅರುಣ್‌, ಯೋಜನಾಬದ್ಧವಾದ ಕ್ರಮದಿಂದ ಇರುವ ಸಣ್ಣ ಸ್ಥಳವನ್ನು ಪ್ರಯೋಜನಕಾರಿಯಾಗಿ ಬಳಸಬಹುದೆಂದು ಸಾಬೀತುಪಡಿಸಿ ತೋರಿಸಿದ್ದಾರೆ.

ಹಾಗೇ ನಿರ್ಮಿಸಿದ ಸಂಚಾರಿ ಮನೆಗೆ ಅವರು ಸೋಲೋ 01 ಎಂದು ಹೆಸರಿಟ್ಟಿದ್ದಾರೆ. ಇದರ ವೆಚ್ಚ ಬರೀ ಒಂದು ಲಕ್ಷದೊಳಗೆ ಮುಗಿಸಿದ್ದಾರೆ. 36 ಚದರ ಅಡಿ ವಿಸ್ತೀರ್ಣದ ರಿಕ್ಷಾದಲ್ಲಿ ಬೆಡ್ರೂಮ್‌, ಲಿವಿಂಗ್‌ ರೂಮ್‌, ಕಿಚನ್‌, ಕೆಲಸ ಮಾಡುವ ಸ್ಥಳ, ಟಾಯ್ಲೆಟ್‌ ಬಾತ್ರೂಮ್‌, ಮಾತ್ರವಲ್ಲದೆ 250 ಲೀಟರ್‌ ನೀರಿನ ಟ್ಯಾಂಕ್‌ ಇದೆ, 600 ವ್ಯಾಟ್‌ ನ ಸೋಲಾರ್‌ ಪ್ಯಾನೆಲ್‌ ಇದೆ, ಬ್ಯಾಟರಿ, ಕಪ್‌ ಬೋರ್ಡ್‌, ಹ್ಯಾಂಗರ್‌, ಮೆಟ್ಟಿಲು ಎಲ್ಲವನ್ನೂ ಯೋಜನಾಬದ್ಧವಾಗಿ ಜೋಡಿಸಲಾಗಿದೆ.

ಅರುಣ್‌ ರ ಈ ಆವಿಷ್ಕಾರಕ್ಕೆ ಇದೀಗ ಬಜಾಜ್‌ ಆಟೋ ಲಿಮಿಟೆಡ್‌ ಭೇಷ್‌ ಎಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಿಂದ ಆತನ ಕತೆಯನ್ನು ಹಂಚಿಕೊಂಡಿದೆ.

Tags: portable houseTamil Naduಸಂಚಾರಿ ಮನೆ
Previous Post

ಯುವಕರಿಗೆ ಉದ್ಯೋಗ ದೊರಕದಿದ್ದರೆ ಅವರು ಬೀದಿಗಿಳಿಯುತ್ತಾರೆ– ರಘುರಾಮ್‌ ರಾಜನ್‌ ಎಚ್ಚರಿಕೆ

Next Post

ಮತ್ತೊಂದು ಸುತ್ತಿನ ನ್ಯಾಯಾಂಗ ನಿಂದನೆ ವಾಗ್ವಾದಕ್ಕೆ ಈಡಾದ ಪ್ರಶಾಂತ್ ಭೂಷಣ್ ಟ್ವೀಟ್!

Related Posts

Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
0

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಇಂದು ಸೆಷನ್ಸ್‌ ಕೋರ್ಟ್‌ನಲ್ಲಿ ಆರೋಪ ನಿಗದಿ ಮಾಡಲಾಯಿತು. ಈ ವೇಳೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ನಾವು ಹತ್ಯೆ ಮಾಡಿಲ್ಲ ಎಂದು...

Read moreDetails

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

November 3, 2025
Next Post
ಮತ್ತೊಂದು ಸುತ್ತಿನ ನ್ಯಾಯಾಂಗ ನಿಂದನೆ ವಾಗ್ವಾದಕ್ಕೆ ಈಡಾದ ಪ್ರಶಾಂತ್ ಭೂಷಣ್ ಟ್ವೀಟ್!

ಮತ್ತೊಂದು ಸುತ್ತಿನ ನ್ಯಾಯಾಂಗ ನಿಂದನೆ ವಾಗ್ವಾದಕ್ಕೆ ಈಡಾದ ಪ್ರಶಾಂತ್ ಭೂಷಣ್ ಟ್ವೀಟ್!

Please login to join discussion

Recent News

Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?
Top Story

ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada