ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನವೇ ರಾಜ್ಯ ರಾಜಕಾರಣ ಬಿರುಸಾಗಿದೆ. ಈಗಾಗಲೇ ಸಾಕಷ್ಟು ಕ್ಷೇತ್ರಗಳ ಬಗ್ಗೆ ಮಹತ್ತರ ಚರ್ಚೆಗಳು ಗರಿಗೆದರಿವೆ. ಹೀಗೆ ಅಭ್ಯರ್ಥಿಗಳ ವಿಚಾರಚಾಗಿ ಕೂತೂಹಲ ಕರೆಳಿಸಿರುವ ಕ್ಷೇತ್ರಗಳ ಪೈಕಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಕೂಡ ಒಂದು. ಸತತ ಎರಡು ಅವಧಿಗೆ ಜಯಭೇರಿ ಸಾಧಿಸಿ, ಈ ಬಾರಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣ್ತಿರುವ ಪ್ರತಾಪ್ ಸಿಂಹ ಗೆ ಕೊಂಚ ಅಘಾತ ಎದುರಾಗಿದೆ. ಯಾಕಂದ್ರೆ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನಲ್ಲೇ ಮೈಸೂರು ಲೋಕ ಸಭಾ ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಬಿಟ್ಟು ಉಳಿದ ಹೆಸರುಗಳೆಲ್ಲವೂ ಮುನ್ನಲೆಗೆ ಬರ್ತಿದೆ.
ತನ್ನ 10 ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಮತ್ತೊಮ್ಮೆ ಕ್ಷೇತ್ರದ ಜನರ ಮುಂದೆ ಹೋಗಿ ಮತ ಕೇಳಲು ಸಿದ್ಧವಿರುವ ಪ್ರತಾಪ್ ಸಿಂಹರಿಗೆ ಸ್ವಪಕ್ಷೀಯರೇ ಟಿಕೆಟ್ ತಪ್ಪಿಸೋ ಹುನ್ನಾರ ನಡೆಸಿದ್ದಾರೆ ಎಂಬ ಚರ್ಚೆಗಳು ಕೂಡ ವ್ಯಾಪಿಸಿದೆ. ಹೀಗಾಗಿ ಸಾಧ್ಯವಾದಷ್ಟು ಸಮರ್ಥ ಅಭ್ಯರ್ಥಿಯನ್ನ ಹುಡುಕಿ ಸಿಂಹಾಗೆ ಟಾಂಗ್ ಕೊಡಬೇಕು ಎಂಬುದು ಒಂದು ಬಣದ ಲೆಕ್ಕಾಚಾರ. ಆ ಕಾರಣಕ್ಕೆ ಸಾಕಷ್ಟು ಹೆಸರುಗಳನ್ನ ತೇಲಿಬಿಡಲಾಗ್ತಿದೆ. ಆ ಪೈಕಿ ಈಗ ಮುನ್ನಲೆಗೆ ಬಂದಿರೋ ಹೆಸರು ಸಾ.ರಾ.ಮಹೇಶ್
ಮೊದಲಿಗೆ ಮೈತ್ರಿ ಪರವಾಗಿ ಮೈಸೂರಿನ ಯುವರಾಜ ಯದುವೀರ್ ಒಡೆಯರ್ರಿಗೆ ಆಫರ್ ಹೋಗಿದ್ದು ಆದ್ರೆ ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂಬ ಮಾಹಿತಿ ಇತ್ತು. ನಂತರ ಮೈಸೂರು ಕ್ಷೇತ್ರದಿಂದ ಡಾ.ಮಂಜುನಾಥ್ ಸ್ಪರ್ಧೆ ಮಾಡಬೇಕು ಎಂಬ ಆಗ್ರಹ ಕೇಳಿಬಂತಾದ್ರೂ ಆ ಬಗ್ಗೆಯೂ ಸ್ಪಷ್ಟತೆ ಸಿಗಲಿಲ್ಲ. ಇದೀಗ ಮೈಸೂರು ಭಾಗದ ಜೆಡಿಎಸ್ ನಾಯಕ ಸಾ.ರಾ.ಮಹೇಶ್ ಹೆಸರು ಮುನ್ನೆಲೆಗೆ ಬಂದಿದ್ದು ರಾಜ್ಯ ಮಟ್ಟದ ನಾಯಕರ ಜೊತೆಗೂ ಈಗಾಗಲೇ ಈ ವಿಚಾರ ಚರ್ಚೆಯಾಗಿದ್ಯಂತೆ.
ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದಾಗ ಶತಾಯ-ಗತಾಯ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆಡಿದೆ ಎನ್ನಾಗ್ತಿದೆ. ಈ ಬಗ್ಗೆ ಪ್ರತಾಪ್ ಸಿಂಹ ಬಹಳ ಆತ್ಮವಿಶ್ವಾಸದಿಂದ ಇದ್ದು, ಇನ್ನೂ ಎಷ್ಟು ಹೆಸರುಗಳನ್ನ ಬೇಕಿದ್ರೂ ತೇಲಿಬಿಡಲಿ.. ನಾಮಿನೇಷನ್ ಪೈಲ್ ಮಾಡುವ ದಿನ ಎಲ್ಲರನ್ನೂ ಕರೆಯುತ್ತೇನೆ ಎಂದು ಈ ಹಿಂದೆ ಹೇಳಿದ್ರು. ಇದೀಗ ಸಾ,ರಾ. ಮಹೇಶ್ ಕೂಡ ಬಹಳ ಆಶಾದಾಯಕವಾಗಿ ಸ್ಪಂದಿಸಿದ್ದು, ಪಕ್ಷದ ವರಿಷ್ಠರು ಹೇಳಿದ್ರೆ ಸ್ಪರ್ಧೆ ಮಾಡಲು ಸಿದ್ಧ ಎಂದಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಮೈಸೂರು-ಕೊಡಗು ಕ್ಷೇತ್ರ ಈ ಬಾರಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.