• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ನಿಜಕ್ಕೂ ಕರೋನಾ ವಿರುದ್ಧ ಜಯಗಳಿಸಿದೆಯೇ ಭಾರತ?

by
August 16, 2020
in ಅಭಿಮತ
0
ನಿಜಕ್ಕೂ ಕರೋನಾ ವಿರುದ್ಧ ಜಯಗಳಿಸಿದೆಯೇ ಭಾರತ?
Share on WhatsAppShare on FacebookShare on Telegram

ತಾವು ಘನತೆವೆತ್ತ ಸಂಸತ್ತನ್ನು ಉದ್ದೇಶಿಸಿ ಆಡುವ ಮಾತುಗಳಿಗೂ, ದೇಶದ ಹೆಮ್ಮೆಯ ಪ್ರತೀಕವೆಂಬಂತೆ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ವೇಳೆ ದೇಶ ಉದ್ದೇಶಿಸಿ ಮಾಡುವ ಭಾಷಣಕ್ಕೂ ಹಾಗೂ ಚುನಾವಣಾ ವೇದಿಕೆಗಳಲ್ಲಿ ಅಬ್ಬರಿಸಿ, ಬೊಬ್ಬರಿಯುವುದಕ್ಕೂ ಯಾವ್ಯಾವ ವ್ಯತ್ಯಾಸವೂ ಇಲ್ಲ ಎನ್ನುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 74ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಮೋದಿ ಬರೊಬ್ಬರಿ 86 ನಿಮಿಷ ಭಾಷಣ ಮಾಡಿದರು. ಅನಗತ್ಯವಾಗಿ ಚೀನಾ ವಿಷಯ ಪ್ರಸ್ತಾಪಿಸಿದರು. ದೇಶದ ಆರ್ಥಿಕ ಬೆಳವಣಿಗೆಗಳ ಬಗ್ಗೆ ಅರ್ಧಸತ್ಯಗಳನ್ನು ಹೇಳಿದರು. ಅದೇ ರೀತಿ ‘ಭಾರತ ಕರೋನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿ ಸಾಧಿಸಿದೆ’ ಎಂಬ ಹಸಿ ಸುಳ್ಳನ್ನು ಹೇಳಿದರು.

ADVERTISEMENT

ನಿಜಕ್ಕೂ ಭಾರತ ಕರೋನಾ ವಿರುದ್ಧ ಜಯಗಳಿಸಿದೆಯಾ?

ಮೋದಿ ಭಾಷಣ ಮಾಡಿ ಮುಗಿಸಿದ ಕೆಲವೇ ನಿಮಿಷಗಳ ಬಳಿಕ ಕೇಂದ್ರ ಆರೋಗ್ಯ ಇಲಾಖೆ ‘ಆಗಸ್ಟ್ 14ರವರೆಗೆ ದೇಶದಲ್ಲಿ 25,26,193 ಜನರು ಕರೋನಾ ಸೋಂಕು ಪೀಡಿತರಾಗಿದ್ದಾರೆ’ ಎಂದು ಅಧಿಕೃತವಾಗಿ ಪ್ರಕಟಿಸಿತು. ಅಂದರೆ ‘ಕಾಲು ಕೋಟಿಗೂ ಹೆಚ್ಚು ಜನ. ಈ ಪೈಕಿ ಇನ್ನೂ 6,68,200 ಪ್ರಕರಣಗಳು ಸಕ್ರೀಯವಾಗಿವೆ. 49,036 ಜನ ಮೃತಪಟ್ಟಿದ್ದಾರೆ. ಇದು ಯಶಸ್ಸೆ?

ಇನ್ನೊಂದೆಡೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಐಸಿಎಂಆರ್ ಆಗಸ್ಟ್ 14ರವರೆಗೆ 2,85,63,095 ಜನರಿಗೆ ಕರೋನಾ ಪರೀಕ್ಷೆ ಮಾಡಿರುವುದಾಗಿ ಪ್ರಕಟಿಸಿದೆ. 136 ಕೋಟಿ ಜನ ಸಂಖ್ಯೆಯುಳ್ಳ ದೇಶದಲ್ಲಿ ಸುಮಾರು 3 ಕೋಟಿ (ಅಷ್ಟೂ ಇಲ್ಲ) ಜನರಿಗೆ ಪರೀಕ್ಷೆ ನಡೆಸಿ ಅದರ ಆಧಾರದ ಮೇಲೆ ಕರೋನಾ ವಿರುದ್ಧ ಜಯಸಿರುವುದಾಗಿ ಘೋಷಿಸಿಕೊಳ್ಳಬಹುದೇ? ‘ಪರೀಕ್ಷೆಗಳನ್ನು ಹೆಚ್ಚು ಮಾಡಿದಷ್ಟು ಹೆಚ್ಚೆಚ್ಚು ಪ್ರಕರಣಗಳು ಪತ್ತೆಯಾಗುತ್ತವೆ. ಅದರಿಂದ ಸೋಂಕು ಪತ್ತೆಯಾದವರನ್ನು ಪ್ರತ್ಯೇಕಿಸಿ ರೋಗ ಹರಡುವುದನ್ನು ತಡೆಯಬಹುದು. ತಕ್ಷಣಕ್ಕೆ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಯಿತು ಎಂಬ ಆತಂಕ ನಿರ್ಮಾಣವಾದರೂ ಕ್ರಮೇಣ ರೋಗ ನಿಯಂತ್ರಣಕ್ಕೆ ಬರುತ್ತದೆ’ ಎನ್ನುವುದು ಕೇಂದ್ರಾಡಳಿತ ಪ್ರದೇಶವೇ ಆಗಿರುವ ದೆಹಲಿಯಲ್ಲಿ ಸಾಬೀತಾದ ಸಂಗತಿಯಾಗಿದೆ.

ಆದರೆ, ಕೇಂದ್ರ ಸರ್ಕಾರ ದೇಶಾದ್ಯಂತ ಕರೋನಾ ಪರೀಕ್ಷೆಯನ್ನು ಹೆಚ್ಚಿಸಲು ಸಿದ್ದವಿಲ್ಲ. ಕೇಂದ್ರಾಡಳಿತ ಪ್ರದೇಶ ಮತ್ತು ರಾಷ್ಟç ರಾಜಧಾನಿಯಾಗಿರುವ ದೆಹಲಿಯಲ್ಲಿ ಕರೋನಾ ಪರೀಕ್ಷೆಗಳನ್ನು ಹೆಚ್ಚಿಸಿ ಅದರ ಶ್ರೇಯ ಪಡೆಯಲು ಕಸರತ್ತು ನಡೆಸಿದ ಕೇಂದ್ರ ಸರ್ಕಾರ ಅದೇ ಉತ್ಸಾಹವನ್ನು ಬೇರೆ ರಾಜ್ಯಗಳ ವಿಷಯದಲ್ಲಿ ತೋರಲಿಲ್ಲ. ಉದಾಹರಣೆಗೆ ಇಡೀ ದೇಶದಲ್ಲಿರುವ ಕರೋನಾ ಪ್ರಕರಣಗಳ ಪೈಕಿ ಮಹಾರಾಷ್ಟçದಲ್ಲೇ ಕಾಲು ಭಾಗ ಇದೆ. ಮಹಾರಾಷ್ಟçಕ್ಕೆ ನೆರವು ನೀಡಲು ಮನಸ್ಸು ಮಾಡುತ್ತಿಲ್ಲ. ನಂತರದ ಸ್ಥಾನದಲ್ಲಿರುವ ತಮಿಳುನಾಡಿಗೂ ಅಗತ್ಯ ನೆರವು ನೀಡುತ್ತಿಲ್ಲ. ‘ಹೇಗೂ ಭಾರತದಲ್ಲಿ ಜನರ ರೋಗನಿರೋಧಕ ಶಕ್ತಿಯ ಪ್ರಮಾಣ ಹೆಚ್ಚಾಗಿದೆ. ಈಗಾಗಲೇ ಎಷ್ಟೋ ಜನಕ್ಕೆ ಕರೋನಾ ಬಂದು ಹೋಗಿರುವ ಸಾಧ್ಯತೆಯೂ ಇದೆ. ಈ ನಡುವೆ ಪರೀಕ್ಷೆ ನಡೆಸಿ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಳ್ಳುವ ಉಸುಬಾರಿ ಏಕೆ’ ಎಂದು ಕೇಂದ್ರ ಸರ್ಕಾರ ಎದುರುತ್ತಿರಬಹುದು.

ಇಡೀ ವಿಶ್ವದಲ್ಲಿ ಅತಿಹೆಚ್ಚು ಕರೋನಾ ಪೀಡಿತರರಿರುವ ಪಟ್ಟಿಯಲ್ಲಿ ಅಮೇರಿಕಾ ಮತ್ತು ಬ್ರೆಜಿಲ್ ಬಳಿಕ ಭಾರತ ಮೂರನೇ ಸ್ಥಾನದಲ್ಲಿದೆ. ಕರೋನಾ ತವರು ಎಂದೇ ಹೇಳಲಾಗುವ ಚೀನಾ, ಕರೋನಾದಿಂದ ತತ್ತರಿಸಿದ್ದ ಇರಾನ್, ಸ್ಪೇನ್, ರಷ್ಯಾಗಳೆಲ್ಲವನ್ನೂ ಹಿಂದಿಕ್ಕಿದೆ. ಈಗ ದೇಶದಲ್ಲಿ ಪ್ರತಿದಿನ ಸುಮಾರು 65 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು (ಆಗಸ್ಟ್ 14ರಂದು 65,002 ಪ್ರಕರಣಗಳು) ಕೆಲವೇ ದಿನಗಳಲ್ಲಿ ಬ್ರೆಜಿಲ್ ದೇಶವನ್ನು ಹಿಂದೆ ದೂಡುವ ಸಾಧ್ಯತೆ ಇದೆ. ಆದರೂ ಇದನ್ನು ‘ಯಶಸ್ಸು’ ಎನ್ನಬೇಕೆ?

ಹಿಂದೆ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ‘ದೇಶದಲ್ಲಿ ಕರೋನಾ ಸಮುದಾಯಕ್ಕೆ ಹರಡಿದೆ. ಆದರೆ ಈ ವಿಷಯವನ್ನು ರಾಜ್ಯ ಸರ್ಕಾರಗಳು ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ಸತ್ಯ ಸಂಗತಯನ್ನು ಒಪ್ಪಿಕೊಳ್ಳಲಿ. ಜೊತೆಗೆ ಮುಂದೇನು ಮಾಡಬೇಕೆಂಬ ಕ್ರಮ ಕೈಗೊಳ್ಳಲಿ’ ಎಂದು ಹೇಳಿದ್ದರು. ಆದರೆ ಈ ಕ್ಷಣದವರೆಗೂ ಪ್ರಧನಿ ಮೋದಿ ಅವರಾಗಲಿ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಾಗಲಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಗಲಿ ಈ ವಿಷಯವನ್ನು ಒಪ್ಪಿಕೊಂಡಿಲ್ಲ. ಸಮಸ್ಯೆಯನ್ನು ಒಪ್ಪಿಕೊಂಡರೆ ಪರಿಹರಿಸಬೇಕಾಗುತ್ತದೆ. ‘ಸಮಸ್ಯೆಯೇ ಇಲ್ಲ’ ಎಂದು ಬಿಂಬಿಸಿಬಿಟ್ಟರೆ… ಈಗ ಸ್ವಾತಂತ್ರ್ಯ ದಿನಾಚರಣೆ ವೇಳೆ ಮೋದಿ ಮಾಡಿರುವುದು ಅದೇ ಕೆಲಸವನ್ನು; ಸಮಸ್ಯೆ ಇಲ್ಲ ಎಂದು ಬಿಂಬಿಸುವುದನ್ನು, ಭಾರತ ಕರೋನಾ ವಿರುದ್ಧ ಜಯಸಿದೆ ಎಂದು ಬಿಂಬಿಸುವುದನ್ನು.

ಆರಂಭದಲ್ಲಿ ಕೆಂಪುಕೋಟೆಯ ಭಾಷಣವನ್ನು ಚುನಾವಣಾ ಭಾಷಣಕ್ಕೆ ಹೋಲಿಸಿದ್ದು ಇದೇ ಕಾರಣಕ್ಕೆ. ಚುನಾವಣಾ ಭಾಷಣಗಳಲ್ಲಿ ಗಾಂಭರ‍್ಯತೆ ಇರುವುದಿಲ್ಲ. ಅವು ಸತ್ಯವೇ ಇರಬೇಕು ಎಂದೇನಿಲ್ಲ. ಅರ್ಧಸತ್ಯವನ್ನೇ ಗಟ್ಟಿದನಿಯಲ್ಲಿ ಹೇಳಲಾಗುತ್ತದೆ. ಎಲ್ಲಾ ಪಕ್ಷಗಳ ಎಲ್ಲಾ ರಾಜಕಾರಣಿಗಳು ಹಾಗೆ ಮಾಡುತ್ತಾರೆ. ಅದು ಒಂದು ರೀತಿಯಲ್ಲಿ ‘ಒಪ್ಪಿತ’ವಾಗಿದೆ. ಆದರೆ ಸಂಸತ್ತಿನಲ್ಲಿ ಆಡುವ ಮಾತು ಬೇರೆ ರೀತಿ ಇರಬೇಕು. ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡುವ ಭಾಷಣ ಭಿನ್ನವಾಗಿರಬೇಕು. ಅದರಲ್ಲೂ ತಮ್ಮ ಸರ್ಕಾರದ ಲೋಪ ಮುಚ್ಚಿಕೊಳ್ಳುವ, ಸಮಸ್ಯೆಗಳಿಂದ ಪಲಾಯನ ಮಾಡುವ, ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಬಳಸಿಕೊಳ್ಳುವ, ಅಸತ್ಯ ನುಡಿಯುವ ಪರಿಪಾಠಕ್ಕೆ ಮುನ್ನುಡಿ ಬರೆದರೆ…

Tags: coronavirusCovid 19Modi speechಕೆಂಪುಕೋಟೆ
Previous Post

ಮುಟ್ಟಿನ ರಜೆ; ಜವಾಬ್ದಾರಿ ಸರ್ಕಾರದ್ದು ಮಾತ್ರವೇ?

Next Post

ಅತಿ ಶೀಘ್ರದಲ್ಲೇ ಏರಲಿದೆ ಮೊಬೈಲ್ ಕಾಲ್ ಮತ್ತು ಡೇಟಾ ದರ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಅತಿ ಶೀಘ್ರದಲ್ಲೇ ಏರಲಿದೆ ಮೊಬೈಲ್ ಕಾಲ್ ಮತ್ತು ಡೇಟಾ ದರ

ಅತಿ ಶೀಘ್ರದಲ್ಲೇ ಏರಲಿದೆ ಮೊಬೈಲ್ ಕಾಲ್ ಮತ್ತು ಡೇಟಾ ದರ

Please login to join discussion

Recent News

Top Story

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 20, 2025
ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 20, 2025
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada