• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ನವಿಲಿನೊಂದಿಗೆ ಪ್ರಧಾನಿ ಫೋಟೋಶೂಟ್‌; ಇದು ಕೇವಲ ಟ್ರೋಲ್‌ ಮಾಡುವ ವಿಚಾರವಲ್ಲ

by
August 24, 2020
in ಅಭಿಮತ
0
ನವಿಲಿನೊಂದಿಗೆ ಪ್ರಧಾನಿ ಫೋಟೋಶೂಟ್‌; ಇದು ಕೇವಲ ಟ್ರೋಲ್‌ ಮಾಡುವ ವಿಚಾರವಲ್ಲ
Share on WhatsAppShare on FacebookShare on Telegram

ಪ್ರಧಾನಿ ನರೇಂದ್ರ ಮೋದಿಯವರ ಮನೆಯಲ್ಲಿ ನವಿಲು ಇರುವುದು ಕೇವಲ ಟ್ರೋಲ್ ಮಾಡುವ, ವ್ಯಂಗ್ಯ ಮಾಡುವ ವಿಚಾರವಲ್ಲ. ನವಿಲಿನ ಜೊತೆಗಿನ ಪ್ರಧಾನಿ ಮೋದಿ ಫೋಟೋ ಶೂಟ್ ಅನ್ನು ಹಲವು ಕೋನಗಳಲ್ಲಿ ಚರ್ಚೆ ಮಾಡಬೇಕಾಗುತ್ತದೆ. ಅದರಲ್ಲಿ ಅತ್ಯಂತ ಪ್ರಮುಖವೆನಿವುದು ಪರಿಸರ ದೃಷ್ಟಿಕೋನ.
ಪ್ರಧಾನಿ ನರೇಂದ್ರ ಮೋದಿಯವರು ತನ್ನ ಮನೆಯಲ್ಲಿ ನವಿಲು ಸಾಕಿದ್ದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದ ಅಪರಾಧ ಮಾಡಿದ್ದಾರೆ ಎಂದರ್ಥ. ನವಿಲು ಸಾಕಿಲ್ಲ, ಅದಾಗಿಯೇ ಬರುತ್ತದೆ ಮತ್ತು ಅದಕ್ಕೆ ರೂಢಿಯಾಗಿದೆ ಎನ್ನುವುದಾದರೆ ಅದಕ್ಕೆ ಪ್ರಧಾನಿ ಮೋದಿ ಸಹಿತ ಈವರೆಗೆ ಆಳಿದ ಎಲ್ಲಾ ಸರ್ಕಾರಗಳು ಮತ್ತು ಜನರು ತಲೆತಗ್ಗಿಸಬೇಕಾಗಿದೆ.

ADVERTISEMENT

ಪ್ರಕೃತಿ ಸರಣಿಯಲ್ಲಿ ನವಿಲು ಅತೀ ಮುಖ್ಯವಾದ ಪಕ್ಷಿ. ಗುಡ್ಡ ಬೆಟ್ಟ ಮತ್ತು ಕಾಡಿನ ಬಯಲು ಪ್ರದೇಶದಲ್ಲಿ ಇರಬೇಕಾದ ನವಿಲು ಈಗ ರಸ್ತೆ ಬದಿ, ಮನೆಗಳು, ಗದ್ದೆಗಳಲ್ಲಿ ಕಾಣಿಸಿಕೊಳ್ಳಲಾರಂಬಿಸಿದೆ. ನವಿಲುಗಳು ಈ ರೀತಿ ಅನಿವಾರ್ಯವಾಗಿ ಮಾನವ ಪ್ರದೇಶಗಳಿಗೆ ಬರಲು ಕಾರಣವಾಗಿದ್ದು ಕಾಡಿನ ಅತಿಕ್ರಮಣ ಮತ್ತು ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಗಳು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಣ ಗುಡ್ಡ ಪ್ರದೇಶಗಳಲ್ಲೂ ಬದುಕುವ ನವಿಲುಗಳ ವಾಸ ಸ್ಥಾನವನ್ನು ಕೈಗಾರಿಕೆಗಳು, ಗಣಿಗಾರಿಕೆಗಳು ಅತಿಕ್ರಮಿಸಿಕೊಂಡಿವೆ. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆಂದು ಸ್ವಾಧೀನಪಡಿಸಲಾಗಿದ್ದ ಕುತ್ತೆತ್ತೂರು, ಪೆರ್ಮುದೆ, ಬಾಳ, ಕಳವಾರು ಗುಡ್ಡಗಳು ನವಿಲುಗಳು ವಾಸಸ್ಥಾನವಾಗಿತ್ತು. ಯಾವಾಗ ಈ ಗುಡ್ಡಗಳಲ್ಲಿ ಪೆಟ್ರೋಲಿಯಂ ಕಾರ್ಖಾನೆಗಳು ಕಾರ್ಯಾಚರಿಸಲು ಆರಂಭಿಸಿದವೋ ಆಗ ನವಿಲುಗಳಿಗೆ ದಿಕ್ಕು ತೋಚದಂತಾಯಿತು. ಮನುಷ್ಯರಿಗೇನೋ ಪುನರ್ವಸತಿ ಪ್ಯಾಕೇಜ್ ನೀಡಬಹುದು, ನವಿಲುಗಳಿಗೆಲ್ಲಿ ಪುನರ್ವಸತಿ ಎಂದು ಪ್ರಶ್ನಿಸಿ ಆಗ ತಾಲೂಕು ವರದಿಗಾರನಾಗಿದ್ದ ನಾನು ಪತ್ರಿಕೆಯಲ್ಲಿ ಲೇಖನ ಬರೆದಿದ್ದೆ.

ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬೆಟ್ಟ ಗುಡ್ಡಗಳಿಲ್ಲದ ನವಿಲುಗಳು ಅಬ್ಬೇಪಾರಿಗಳಾಗಿವೆ. ರಸ್ತೆ, ಮನೆಗಳ ಛಾವಣಿಯಲ್ಲಿ ಕೂರುವ, ನಲಿಯುವ ನವಿಲುಗಳು ನಮಗೆ ಚಂದ ಕಾಣಬಹುದು. ಆದರೆ ಅದು ಸರಿಯಾದ ನಿಯಮವಲ್ಲ.
ಪ್ರಧಾನಿ ಮೋದಿಯವರ ಮನೆಗೆ ಬಂದ ನವಿಲಿನ ಕಷ್ಟ ಅದಕ್ಕೇ ಗೊತ್ತು. ಗಂಡು ನವಿಲು ತನ್ನ ಸಂಗಾತಿಯೊಂದಿಗೆ ಲೈಂಗಿಕ ಕ್ರೀಯೆ ನಡೆಸುವ ಸಲುವಾಗಿ ಗರಿ ಬಿಚ್ಚಿ ಕುಣಿಯುತ್ತದೆ. ಆ ಸಂದರ್ಭದಲ್ಲಿ ಹಚ್ಚಹಸುರಿ, ತಂಪಾದ ನಿಶ್ಯಬ್ಧ ಸ್ಥಳವೊಂದನ್ನು ನವಿಲು ಬಯಸುತ್ತದೆ. ಆದರೆ ಇಲ್ಲಿ ನವಿಲು ಗರಿ ಬಿಚ್ಚಿದಾಗ ದೂರದಲ್ಲಿ ಕಂಡ ಮೋದಿಯವರು ತಾವಿದ್ದಲ್ಲೇ ತಟಸ್ಥರಾಗೊದು ಬಿಟ್ಟು ನವಿಲಿನ ಸನಿಹದಲ್ಲೇ ಹಾದು ಫೋಟೊ, ವಿಡಿಯೋಗೆ ಪೋಸು ಕೊಡುತ್ತಾರೆ. ಪ್ರಧಾನಿ ಮೋದಿಯವರು ಪ್ರಾಣಿ ಪಕ್ಷಿ, ಪರಿಸರದ ವಿಷಯದಲ್ಲಿ ಸಂವೇದನಾರಹಿತ ಮನುಷ್ಯರ ಅಪ್ಪಟ ಪ್ರತಿನಿಧಿಯಾಗಿ ಕಾಣುತ್ತಾರೆ.

ಇಷ್ಟಕ್ಕೂ ಪ್ರಧಾನಿ ಮೋದಿಯವರ ಮನೆಗೆ ಬಂದ ನವಿಲು ಎಲ್ಲರ ಮನೆಗೂ ಬರುತ್ತದೆ. ಮೋದಿಯವರ ಮನೆಯಲ್ಲಿ ನವಿಲು ಚಂದ ಕಾಣುತ್ತದೆ. ಜಿಂಕೆ, ಕಾಡೆಮ್ಮೆ, ಕಾಡುಕೋಣಗಳು ಕಾಡಿನಿಂದ ಬಂದರೂ ಚಂದ ಕಾಣುತ್ತದೆ. ಆದರೆ ಒಬ್ಬ ಕೃಷಿಕನ ಗದ್ದೆಗೆ ಇಳಿದರೆ ಆತನ ಬದುಕು ಸರ್ವನಾಶವಾಗುತ್ತದೆ. ಕಾಡಿನಲ್ಲಿರಬೇಕಾದ ನವಿಲು ಮನೆಗಳ ಅಂಗಳ ತಲುಪಿದ್ದು ಪ್ರಧಾನಿ ಮೋದಿಯಾದಿಯಾಗಿ ಎಲ್ಲರೂ ಪಶ್ಚಾತಾಪ ಪಟ್ಟು, ವ್ಯವಸ್ಥೆಯನ್ನು ಸರಿಪಡಿಸಬೇಕಾದ ವಿಚಾರವಾಗಿದೆಯೇ ಹೊರತು ಫೋಟೊ ಶೂಟ್ ಮಾಡಿ ಹೆಮ್ಮೆಪಡುವ ವಿಷಯವಂತೂ ಅಲ್ಲವೇ ಅಲ್ಲ.

Tags: PM Modi Photoshootಪ್ರಧಾನಿ ಫೋಟೋಶೂಟ್
Previous Post

ರಾಜ್ಯ ಸರ್ಕಾರ ಕ್ವಾರಂಟೈನ್‌ನಲ್ಲಿದೆಯೇ?

Next Post

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಸ್ಪಷ್ಟವಾಗಿ ಗೋಚರಿಸುತ್ತಿದೆ ಕಾಂಗ್ರೆಸ್‌ನಲ್ಲಿನ ಆಂತರಿಕ ಬಿರುಕು..!

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಸ್ಪಷ್ಟವಾಗಿ ಗೋಚರಿಸುತ್ತಿದೆ ಕಾಂಗ್ರೆಸ್‌ನಲ್ಲಿನ ಆಂತರಿಕ ಬಿರುಕು..!

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಸ್ಪಷ್ಟವಾಗಿ ಗೋಚರಿಸುತ್ತಿದೆ ಕಾಂಗ್ರೆಸ್‌ನಲ್ಲಿನ ಆಂತರಿಕ ಬಿರುಕು..!

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada