• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನರಸಿಂಹರಾಜು ಅವರ ಬಗ್ಗೆ ನನಗೆ ಅಪಾರ ಹೆಮ್ಮೆ

by
July 11, 2020
in ಕರ್ನಾಟಕ
0
ನರಸಿಂಹರಾಜು ಅವರ ಬಗ್ಗೆ ನನಗೆ ಅಪಾರ ಹೆಮ್ಮೆ
Share on WhatsAppShare on FacebookShare on Telegram

ಮದುವೆ ಆದಾಗ ನನಗೆ ಹದಿನಾಲ್ಕು ವರ್ಷ, ಅವರಿಗೆ (ನರಸಿಂಹರಾಜು) ಇಪ್ಪತ್ತೆಂಟು. ಆಗ ಅವರು ಸ್ಟಾರ್ ಕಲಾವಿದ. ಕೆಲವೊಮ್ಮೆ ನಾಟಕ, ಸಿನಿಮಾ ಶೂಟಿಂಗ್‌ಗೆಂದು ನನ್ನನ್ನೂ ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಚಿಕ್ಕ ವಯಸ್ಸು, ಮುಗ್ಧ ಮನಸ್ಸಿನ ನನಗೆ ಸಿನಿಮಾರಂಗ ಸೋಜಿಗವೆನಿಸುತ್ತಿತ್ತು. ಚಿತ್ರೀಕರಣಕ್ಕೆ ಹೋದಾಗ ಕೆಲವು ಹೆಂಗಸರು, `ರೀ… ನೋಡಿ ನಿಮ್ ಯಜಮಾನ್ರು ಎಷ್ಟೊಂದು ನಟಿಯರ ಜತೆ ನಟಿಸ್ತಾರೆ… ನಿಮಗೆ ಏನೂ ಅನ್ಸೋಲ್ವೇನ್ರೀ?’ ಅಂತ ಕಿವಿಯಲ್ಲಿ ಊದೋರು! ನಾನು ನೇರವಾಗಿ ಇವರಲ್ಲಿ ಬಂದು, `ರೀ ನೋಡ್ರಿ… ಹೀಗಂತಾರೆ..’ ಎಂದು ಹೇಳುತ್ತಿದ್ದೆ. ನನ್ನ ಮುಗ್ಧತೆಗೆ ನಗುತ್ತಿದ್ದ ಪತಿದೇವರು, `ನೋಡು, ಅವ್ರು ನನ್ ಥರಾನೇ ಹೊಟ್ಟೆಪಾಡಿಗೆ ಬಂದು ಆ್ಯಕ್ಟ್ ಮಾಡ್ತಿದಾರೆ. ಒಳ್ಳೆ ಕುಟುಂಬದಿಂದ ಬಂದಂಥವರು. ಯಾರು ಏನೇ ಹೇಳಿದ್ರೂ ನನ್ನ ಜೀವನದ ಹಿರೋಯಿನ್ ನೀನೇ. ಯಾರು ಏನು ಹೇಳಿದ್ರೂ ತಲೆ ಕೆಡಿಸಿಕೊಳ್ಬೇಡ’ ಅಂತ ಸಮಾಧಾನ ಹೇಳುತ್ತಿದ್ದರು.

ADVERTISEMENT

ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಯಜಮಾನರ ನಾಟಕವಿತ್ತು. ಆ ನಾಟಕದಲ್ಲಿ ಅವರೊಂದಿಗೆ ನಟಿ ಎಂ ಎನ್ ಲಕ್ಷ್ಮೀದೇವಮ್ಮನವರು ಪಾತ್ರ ಮಾಡಿದ್ದರು. ಆಗ ಸಿನಿಮಾ ಮತ್ತು ನಾಟಕಗಳಲ್ಲಿ ನರಸಿಂಹರಾಜು ಮತ್ತು ಲಕ್ಷ್ಮೀದೇವಮ್ಮನವರದು ಜನಪ್ರಿಯ ಜೋಡಿ. ಅಂದು ನಾಟಕ ಮುಗಿದಾಗ ನಾನು, ಅವರು ಮತ್ತು ಲಕ್ಷ್ಮಿದೇವಮ್ಮನವರು ಕಲಾಕ್ಷೇತ್ರದ ಹೊರಗೆ ನಿಂತಿದ್ದೆವು. ಆ ವೇಳೆ ಅಲ್ಲಿಗೆ ಬಂದ ನಾಲ್ಕೈದು ಅಭಿಮಾನಿ ಹೆಣ್ಣುಮಕ್ಕಳು, `ಸಾರ್ ಸಿನಿಮಾ, ನಾಟಕಗಳಲ್ಲಿ ನೀವೂ ನಿಮ್ಮ ಹೆಂಡ್ತಿ ಎಷ್ಟು ಹೊಂದಾಣಿಕೆಯಿಂದ ನಟಿಸುತ್ತೀರಿ! ಆಹಾ, ನಿಮ್ ಜೋಡಿ ನಿಜವಾಗ್ಲೂ ಅಪರೂಪ ಕಣ್ರೀ…’ ಎಂದರು.

ದ್ವಾರಕೀಶ್-ಅಂಬುಜ ದಂಪತಿ ಜೊತೆ ನರಸಿಂಹರಾಜು-ಶಾರದಮ್ಮ ದಂಪತಿ. ದ್ವಾರಕೀಶ್ ನೂರು ಸಿನಿಮಾ ಪೂರೈಸಿದ ಸಂದರ್ಭದಲ್ಲಿ ನಡೆದ ಔತಣಕೂಟದಲ್ಲಿ ತೆಗೆದ ಚಿತ್ರ

`ನೀವು ಯಾರ ಬಗ್ಗೆ ಮಾತಾಡ್ತಿದ್ದೀರಿ?’ ಎಂದರು ಪತಿ. ಆ ಹೆಣ್ಣುಮಕ್ಕಳು ಲಕ್ಷ್ಮೀದೇವಮ್ಮನವರನ್ನು ತೋರಿಸಿದರು! ಅಲ್ಲೇ ಇದ್ದ ನನಗೆ ನಗು ತಡೆಯಲಾರದೆ ಬಾಯಿಗೆ ಸೆರಗು ಮುಚ್ಚಿಕೊಂಡೆ. ಪಾಪ, ಲಕ್ಷ್ಮೀದೇವಮ್ಮನವರಿಗೂ ನಾಚಿಕೆಯಾದಂತಾಯಿತು. ಕೂಡಲೇ ಪತಿದೇವರು, `ರೀ, ನಮಸ್ಕಾರ. ಅವ್ರು ನನ್ ಜೊತೆ ನಟಿಸುವ ಸಹಕಲಾವಿದೆ ಅಷ್ಟೇ… ನೋಡಿ ನಿಂತಿದ್ದಾರಲ್ಲ, ಇವ್ರೇ ನಮ್ಮನೆಯವ್ರು’ ಎಂದು ನನ್ನ ಕೈಹಿಡಿದು ಪಕ್ಕಕ್ಕೆ ಕರೆದುಕೊಂಡರು. ಆ ಹೆಣ್ಣುಮಕ್ಕಳೂ ನಾಚಿಕೊಂಡು ಹೊರಟುಹೋದರು. ಆಗ ನರಸಿಂಹರಾಜು-ಲಕ್ಷ್ಮೀದೇವಿ ಜನಪ್ರಿಯ ಜೋಡಿಯಾದ್ದರಿಂದ ಜನರು ಇವರನ್ನು ಪತಿ-ಪತ್ನಿಯೆಂದೇ ಭಾವಿಸಿದ್ದರು! ಆತ್ಮೀಯ ಗೆಳತಿಯಾದ ಲಕ್ಷ್ಮೀದೇವಮ್ಮನವರು ಈಗಲೂ ಆ ಸನ್ನಿವೇಶ ನೆನಪು ಮಾಡಿಕೊಂಡು ನಗುತ್ತಾರೆ.

ನರಸಿಂಹರಾಜು ಅವರು ಎರಡು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. `ಚೋರಿ ಚೋರಿ’ (1956) ಮತ್ತು `ಮಿಸ್ ಮೇರಿ’ (1957) ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಮುಂದೊಮ್ಮೆ ಇವರು ಮತ್ತು ರಾಜ್ಕಪೂರ್ ಭೇಟಿಯಾದಾಗ ಆ ಘಟನೆ ನೆನಪು ಮಾಡಿಕೊಂಡು ಮನಸಾರೆ ನಕ್ಕಿದ್ದರು. `ಚೋರಿ ಚೋರಿ’ ಶೂಟಿಂಗ್ ಸಂದರ್ಭದಲ್ಲಿ ರಾಜ್‌ಕಪೂರ್, `ನರಸಿಂಹರಾಜು ಜೀ, ಆಪ್ ಚೆಲೋ ಹಮಾರೆ ಸಾಥ್… ಹಿಂದಿ ಸಿನೆಮಾ ಮೆ ಆಪ್ ಬಡೇ ಸೇ ಬಡೇ ಸ್ಟಾರ್ ಬನ್ಜಾವೋಗೆ’ ಎಂದು ಇವರನ್ನು ಮುಂಬಯಿಗೆ ಆಹ್ವಾನಿಸಿದ್ದರಂತೆ. ಆಗ ಇವರು, `ನಾನು ಕನ್ನಡ ಚಿತ್ರರಂಗದಲ್ಲೇ ಖುಷಿಯಾಗಿದ್ದೇನೆ. ತಮ್ಮ ಆಹ್ವಾನಕ್ಕೆ ಧನ್ಯವಾದ’ ಎಂದು ಹೇಳಿದ್ದರಂತೆ. ಇಂಥ ಅನೇಕ ಸಂಗತಿಗಳು ನನ್ನಲ್ಲಿ ಪತಿಯ ಬಗ್ಗೆ ಹೆಮ್ಮೆ ತಂದಿವೆ.

Tags: Kannada Film IndustryNarasimharajuಕನ್ನಡ ಚಿತ್ರರಂಗನರಸಿಂಹರಾಜು
Previous Post

ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಕರ್ನಾಟಕ ಸರ್ಕಾರ ಚಿಂತನೆ

Next Post

2021 ರವರೆಗೆ ಕೋವಿಡ್ ಲಸಿಕೆ ಇಲ್ಲ- ಸಂಸತ್ ಸ್ಥಾಯಿ ಸಮಿತಿ

Related Posts

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
0

https://youtube.com/live/MVIPvxtGf0k

Read moreDetails
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
Next Post
2021 ರವರೆಗೆ ಕೋವಿಡ್ ಲಸಿಕೆ ಇಲ್ಲ- ಸಂಸತ್ ಸ್ಥಾಯಿ ಸಮಿತಿ

2021 ರವರೆಗೆ ಕೋವಿಡ್ ಲಸಿಕೆ ಇಲ್ಲ- ಸಂಸತ್ ಸ್ಥಾಯಿ ಸಮಿತಿ

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada