• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೆಹಲಿ ಗಲಭೆಗೆ ಕಪಿಲ್‌ ಮಿಶ್ರಾ ಹೇಳಿಕೆ ಕಾರಣ : ಮಾರ್ಕ್‌ ಝುಕರ್‌ ಬರ್ಗ್‌

by
June 7, 2020
in ದೇಶ
0
ದೆಹಲಿ ಗಲಭೆಗೆ ಕಪಿಲ್‌ ಮಿಶ್ರಾ ಹೇಳಿಕೆ ಕಾರಣ : ಮಾರ್ಕ್‌ ಝುಕರ್‌ ಬರ್ಗ್‌
Share on WhatsAppShare on FacebookShare on Telegram

ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ನೀಡಿದ್ದ ವಿವಾದಾತ್ಮಕ ಹೇಳಿಕೆಯೇ ದೆಹಲಿ ಗಲಭೆ ಪ್ರಚೋದನೆ ನೀಡಿತ್ತು ಅನ್ನೋದನ್ನ ಫೇಸ್ಬುಕ್‌ ಸಿಇಓ ಮಾರ್ಕ್‌ ಝುಕರ್‌ಬರ್ಗ್‌ ತಿಳಿಸಿರುವ ಆಡಿಯೋವೊಂದು ವೈರಲ್‌ ಆಗಿದೆ. ತನ್ನ ಸಂಸ್ಥೆಯ ಸಹೋದ್ಯೋಗಿಗಳ ಜೊತೆ ಮಾತನಾಡುವ ಸಮಯದಲ್ಲಿ ಇಂತಹ ಹೇಳಿಕೆಯೊಂದನ್ನ ನೀಡಿರೋದಾಗಿ ವೈರಲ್‌ ಆದ ಆಡಿಯೋದಿಂದಾಗಿ ಗೊತ್ತಾಗಿದೆ. ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ಪರವಹಿಸಿ ಮಾತನಾಡಿದ್ದ ಹಾಗೂ ಅವರ ಹೇಳಿಕೆಯನ್ನ ತೆಗೆದು ಹಾಕದಿರಲು ನಿರ್ಧರಿಸಿದ್ದ ಮಾರ್ಕ್‌ ಝುಕರ್‌ಬರ್ಗ್‌ ನಡೆಯಿಂದ ಅವರ ಕಂಪೆನಿ ಉದ್ಯೋಗಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ADVERTISEMENT

ಮೇ 28 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಫೇಸ್ಬುಕ್‌ ನಲ್ಲಿ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಸಂಬಂಧ “ಲೂಟಿ ಆರಂಭಗೊಂಡಾಗ ಶೂಟಿಂಗ್‌ ಆರಂಭವಾಗುತ್ತದೆ” ಎನ್ನುವ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಇದು ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ಆಗಿರುವ ಕಾರಣ, ಅದು ಫೇಸ್ಬುಕ್‌ ನಿಯಮಕ್ಕೆ ವಿರುದ್ಧವಾಗಿತ್ತು. ಆದರೂ ಮಾರ್ಕ್‌ ಝುಕರ್‌ಬರ್ಗ್‌ ಅದನ್ನ ತೆಗೆದು ಹಾಕದಿರಲು ನಿರ್ಧರಿಸಿದ್ದರು. ಆ ಬಳಿಕ ಅದr ಸ್ಪಷ್ಟನೆಗಾಗಿ ಉದ್ಯೋಗಿಗಳ ಜೊತೆ ವೀಡಿಯೋ ಕಾನ್ಫರೆನ್ಸ್‌ ನಡೆಸಿದ್ದರು. ಸುಮಾರು ಒಂದೂವರೆ ಗಂಟೆ ಕಾಲ ನಡೆದ ವೀಡಿಯೋ ಸಂವಾದದಲ್ಲಿ ಅವರು ಡೊನಾಲ್ಡ್‌ ಟ್ರಂಪ್‌ ಹೇಳಿಕೆ ಫೇಸ್ಬುಕ್‌ ನೀತಿ ನಿಯಮಾವಳಿಗೆ ವಿರುದ್ಧವಾಗಿಲ್ಲ ಮತ್ತು ಹಿಂಸೆಗೆ ಪ್ರಚೋದನೆ ನೀಡಿರಲಿಲ್ಲ ಎಂದು ಹೇಳಿದ್ದರು. ಇದಕ್ಕೆ ವೀಡಿಯೋ ಸಂವಾದದಲ್ಲಿಯೇ ಕೆಲವು ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜೀನಾಮೆಯನ್ನೂ ಸಲ್ಲಿಸಿದ್ದರು.

ಹೀಗೆ ನಡೆದ ವೀಡಿಯೋ ಸಂವಾದದಲ್ಲಿಯೇ ಮಾರ್ಕ್‌ ಝುಕರ್‌ಬರ್ಗ್‌ ಕಪಿಲ್‌ ಮಿಶ್ರಾ ವಿರುದ್ಧವೂ ಹೇಳಿಕೆ ನೀಡಿದ್ದಾರೆ ಅನ್ನೋ ಆಡಿಯೋವೊಂದು ವೈರಲ್‌ ಆಗಿದೆ. ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಗೆ ಅನುಗುಣವಾಗಿ ಉದಾಹರಿಸುತ್ತಾ ಅವರು ಕಪಿಲ್‌ ಮಿಶ್ರಾ ಹೇಳಿಕೆಯನ್ನ ಉಲ್ಲೇಖಿಸಿದ್ದಾರೆ. ಕಪಿಲ್‌ ಮಿಶ್ರಾ ದ್ವೇಷಪೂರಿತ ಹೇಳಿಕೆ ನೀಡಿದ್ದೇ ಕಾರಣವಾಗಿತ್ತು ಅಂತಾ ತಿಳಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್‌ ನಲ್ಲಿ ಈ ಆಡಿಯೋ ಸದ್ಯ ವೈರಲ್‌ ಆಗಿದೆ.

ಆದರೆ ಅವರು ಎಲ್ಲೂ ಕಪಿಲ್‌ ಮಿಶ್ರಾ ಹೆಸರನ್ನ ನೇರವಾಗಿ ಉಲ್ಲೇಖಿಸದೇ, ಅವರ ಹೇಳಿಕೆಯನ್ನಷ್ಟೇ ಉಲ್ಲೇಖಿಸುವ ಮೂಲಕ ಪರೋಕ್ಷವಾಗಿ ತಿಳಿಸಿದ್ದಾರೆ. ದೆಹಲಿಯ ಶಾಹಿನ್‌ ಬಾಗ್‌ ನಂತಹ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯುದ್ದನ್ನ ಉದ್ದೇಶಿಸಿ ಮಾತನಾಡಿದ್ದ ಬಿಜೆಪಿ ನಾಯಕ ಮಿಶ್ರಾ, “ಪೊಲೀಸರು ಪ್ರತಿಭಟನಾಕಾರರ ಬಳಿ ಇಲ್ಲದೇ ಹೋಗಿದ್ದರೆ, ನಮ್ಮ ಕಾರ್ಯಕರ್ತರು ಅಲ್ಲಿಗೆ ಹೋಗಿ ತೆರವುಗೊಳಿಸುತ್ತಿದ್ದರು” ಎಂದಿದ್ದರು. ಡೊನಾಲ್ಡ್‌ ಟ್ರಂಪ್‌ ಭಾರತ ಭೇಟಿಗೂ ಮುನ್ನ ಈ ಹೇಳಿಕೆಯನ್ನ ನೀಡಿದ್ದರು. ಈ ಹೇಳಿಕೆಯನ್ನೇ ಸುಮಾರು 25 ಸಾವಿರ ಮಂದಿ ಪಾಲ್ಗೊಂಡಿದ್ದ ವೀಡಿಯೋ ಕಾನ್ಫರೆನ್ಸ್‌ ನಲ್ಲಿ ಮಾರ್ಕ್‌ ಝುಕರ್‌ಬರ್ಗ್‌ ಉಲ್ಲೇಖಿಸಿದ್ದಾರೆ.

ಅಲ್ಲದೇ ಅಂದು ಮುಂದುವರಿದು ಕಪಿಲ್‌ ಮಿಶ್ರಾ “ ಅಮೆರಿಕಾ ಅಧ್ಯಕ್ಷರು ಎಲ್ಲಿತನಕ ಭಾರತದಲ್ಲಿ ಇರುವರೋ ಅಲ್ಲಿ ತನಕ ನಾವು ಶಾಂತರಾಗಿರುವೆವು. ನಂತರ ನಾವು ಪೊಲೀಸರ ಮಾತನ್ನೂ ಆಲಿಸಲಾರೆವು, ಎಲ್ಲರನ್ನೂ ತೆರವುಗೊಳಿಸುವೆವು” ಎಂದಿದ್ದರು. ಆನಂತರದ ಕ್ಷಣದಲ್ಲಿ ದೆಹಲಿ ಈಶಾನ್ಯ ಭಾಗದಲ್ಲಿ ಗಲಭೆ ತಾರಕಕ್ಕೇರಿ, ಕೋಮು ಗಲಭೆಯೇ ನಡೆದಿತ್ತು. ಗುಪ್ತಚರ ಅಧಿಕಾರಿ ಸಹಿತ ಸುಮಾರು 54 ಮಂದಿಯ ಹತ್ಯೆ ನಡೆದಿತ್ತು.

Also Read: ಯಾವುದು ಪ್ರಚೋದನೆ? ಯಾವುದು ದೇಶದ್ರೋಹ? ದೇಶದಲ್ಲಿ ಶುರುವಾಯ್ತಾ ಭಯದ ವಾತಾವರಣ?

ಆದ್ದರಿಂದ ಇಂತಹ ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಯನ್ನ ಫೇಸ್ಬುಕ್‌ ಸಹಿಸುವುದಿಲ್ಲ ಎಂದಿದ್ದಾರೆ. ಆದರೆ ಅಮೆರಿಕಾ ಗಲಭೆಗೆ ಸಾಕಷ್ಟು ದುಪ್ಪ್ರೇರಣೆ ನೀಡಿದ್ದ ಅಮೆರಿಕಾ ಅಧ್ಯಕ್ಷರ ಹೇಳಿಕೆಯನ್ನ ಮಾತ್ರ ಝುಕರ್‌ಬರ್ಗ್‌ ಖಂಡಿಸದೇ ಇರೋದು ಹಾಗೂ ಅದಕ್ಕಿಂತಲೂ ಜಾಸ್ತಿ ಅದನ್ನ ಅಳಿಸಿ ಹಾಕದೇ ಇರೋದು ಚರ್ಚೆಗೆ ಕಾರಣವಾಗಿದೆ.

ಆದರೆ ಕಪಿಲ್‌ ಮಿಶ್ರಾ ದೆಹಲಿ ಪೊಲೀಸರಿಂದ ಹೆಚ್ಚಿನ ವಿಚಾರಣೆ ಎದುರಿಸದೇ, ನ್ಯಾಯಾಲಯದಲ್ಲೂ ಸುಲಭವಾಗಿ ಜಾಮೀನು ಪಡೆಯುತ್ತಾರೆ. ಆದರೆ ಗಲಭೆಯಲ್ಲಿ ಭಾಗಿ ಅನ್ನೋ ಆರೋಪ ಹೊರಿಸಿ ವಿದ್ಯಾರ್ಥಿನಿ ಸಫೂರಾ ಝರ್ಗಾರ್‌ ಅಂತಹವರನ್ನ ಇಂದಿಗೂ ತಿಹಾರ್‌ ಜೈಲಿನಲ್ಲಿ ಬಂಧಿಸಿಡಲಾಗಿದೆ. ಒಟ್ಟಿನಲ್ಲಿ ಫೇಸ್ಬುಕ್‌ ಸಿಇಓ ಇಂತಹ ಹೇಳಿಕೆ ನೀಡಿರೋದು ಒಂದರ್ಥದಲ್ಲಿ ಜಾಗತಿಕ ಮಟ್ಟದಲ್ಲಿಯೇ ದೆಹಲಿ ಗಲಭೆಗೆ ಬಿಜೆಪಿ ನಾಯಕರೇ ಕಾರಣ ಅನ್ನೋದನ್ನ ಬೊಟ್ಟು ಮಾಡಿ ತೋರಿಸಿದೆ.

Tags: delhi riot 2020Donald TrumpKapil MishraMark Zuckerbergಕಪಿಲ್ ಮಿಶ್ರಾಡೊನಾಲ್ಡ್ ಟ್ರಂಪ್ದೆಹಲಿ ಗಲಭೆ 2020ಮಾರ್ಕ್‌ ಝುಕರ್‌ ಬರ್ಗ್
Previous Post

ಭಾರತದಲ್ಲಿ 1 ಲಕ್ಷದ 19 ಸಾವಿರ ಮಂದಿ ಸೋಂಕಿನಿಂದ ಚೇತರಿಕೆ

Next Post

ದೇವರಿಗೇ ಕರೋನಾ ಭಯ..? ಜನರಿಗೆ ಜೀವ ಭಯ..!

Related Posts

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
0

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಸಾಕ್ಷಿ ಗುಡ್ಡೆಯನ್ನು ಬಿಟ್ಟುಹೋಗಿದ್ದಾರೆ? :ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ...

Read moreDetails
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
Next Post
ದೇವರಿಗೇ ಕರೋನಾ ಭಯ..? ಜನರಿಗೆ ಜೀವ ಭಯ..!

ದೇವರಿಗೇ ಕರೋನಾ ಭಯ..? ಜನರಿಗೆ ಜೀವ ಭಯ..!

Please login to join discussion

Recent News

Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

July 2, 2025

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada