ಲೋಕ ಎಲೆಕ್ಷನ್ ಸಮೀಪ ಆಗ್ತಿದ್ದಂತೆ ಪಕ್ಷಾಂತರ ಪರ್ವ ಕರ್ನಾಟಕದಲ್ಲಿ ಜೋರಾಗಿದೆ.ಇತ್ತೀಚೆಗಷ್ಟೆ ನಿಧನರಾದ ಮಾಜ ಐಎಎಸ್ ಅಧಿಕಾರಿ ಕೆ.ಶಿವರಾಂ Retd. IAS Officer K Shivaram.ಅವರ ಪತ್ನಿ ವಾಣಿ ಶಿವರಾಮ್ ಅವರು ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಹೃದಯಾಘಾತದಿಂದ ಮಾಜಿ ಐಎಎಸ್ ಅಧಿಕಾರಿ ದಿ. ಕೆ. ಶಿವರಾಮ್ ನಿಧನರಾಗಿದ್ದರು.

ಬಿಜೆಪಿ (bjp) ಮುಖಂಡರು ಆಗಿದ್ದ ಅವರು ಈ ಬಾರಿ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿತ್ತು.
ಈ ಮಧ್ಯೆ ಇದೀಗ ಕೆ. ಶಿವರಾಮ್ ಪತ್ನಿ ವಾಣಿ ಶಿವರಾಮ್ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ (Congress) ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ದಿವಂಗತ ಶಿವರಾಂ ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ರು. ಕಳೆದ 6-7 ವರ್ಷದಿಂದ ಕ್ಷೇತ್ರದಾದ್ಯಂತ ಸಂಚರಿಸಿ ತಮ್ಮದೇ ಸಂಘಟನೆ ಮಾಡಿದ್ದರು. ಈ ಬಾರಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದ್ರೆ , ದುರದೃಷ್ಟಕರ ಹೃದಯಾಘಾತದಿಂದ ಸಾವನ್ನಪ್ಪಿದ್ರು.