• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತನ್ನ ಸ್ಟಾರ್‌ ಪ್ರಚಾರಕ ಸ್ಥಾನಮಾನ ರದ್ದತಿ ವಿರುದ್ಧ ಸುಪ್ರೀಂ‌ ಮೆಟ್ಟಿಲೇರಿದ ಕಮಲ್‌ ನಾಥ್

by
October 31, 2020
in ದೇಶ
0
ತನ್ನ ಸ್ಟಾರ್‌ ಪ್ರಚಾರಕ ಸ್ಥಾನಮಾನ ರದ್ದತಿ ವಿರುದ್ಧ ಸುಪ್ರೀಂ‌ ಮೆಟ್ಟಿಲೇರಿದ ಕಮಲ್‌ ನಾಥ್
Share on WhatsAppShare on FacebookShare on Telegram

ಮಧ್ಯಪ್ರದೇಶ ಉಪಚುನಾವಣೆಗಳಿಗೆ ತನ್ನ “ಸ್ಟಾರ್ ಪ್ರಚಾರಕ” ಸ್ಥಾನಮಾನವನ್ನು ಭಾರತ ಚುನಾವಣಾ ಆಯೋಗ (ECI) ರದ್ದುಪಡಿಸಿದ ಆದೇಶವನ್ನು ಪ್ರಶ್ನಿಸಿ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ

ADVERTISEMENT

ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ವಿವೇಕ್ ತಂಖಾ ಅವರು, ಕಮಲ್‌ ನಾಥ್‌ ಚುನಾವಣಾ ಆಯೋಗ ನಿರ್ಧಾರವನ್ನು ಪ್ರಶ್ನಿಸಿದ್ದಾರೆ ಮತ್ತು ಮನವಿಯ ಬಗ್ಗೆ ತುರ್ತು ವಿಚಾರಣೆಯನ್ನು ಕೋರಲಾಗುವುದು ಎಂದು ಸುದ್ದಿ ಸಂಸ್ಥೆ ಪಿಟಿಐ ಗೆ ಹೇಳಿದ್ದಾರೆ.

ಶುಕ್ರವಾರ, ಮಾದರಿ ನೀತಿ ಸಂಹಿತೆ (MCC) ಯ ಪುನರಾವರ್ತಿತ ಉಲ್ಲಂಘನೆಗಳನ್ನು ಉಲ್ಲೇಖಿಸಿ, ಆಯೋಗವು ಹೊರಡಿಸಿದ ಆದೇಶದಲ್ಲಿ, “ಮಾದರಿ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಮತ್ತು ಅವರಿಗೆ ನೀಡಲಾದ ಸಲಹೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕಾಗಿ, ಆಯೋಗವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸ್ಟಾರ್‌ ಪ್ರಚಾರಕ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುತ್ತದೆ” ಎಂದು ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಕ್ಟೋಬರ್ 13 ರಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅವರನ್ನು “ಮಾಫಿಯಾ” ಮತ್ತು “ಮಿಲವತ್ ಖೋರ್” ಎಂದು ಕರೆದಿದ್ದಕ್ಕಾಗಿ ಕಮಲ್‌ ನಾಥ್ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕಾಂಗ್ರೆಸ್ ಅಭ್ಯರ್ಥಿಗಾಗಿ ಪ್ರಚಾರ ಮಾಡುವಾಗ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಅವರನ್ನು “ಐಟಂ” ಎಂದು ಕರೆದಿದ್ದಕ್ಕಾಗಿ ಆಯೋಗವು ಅಕ್ಟೋಬರ್ 26 ರಂದು ಎಚ್ಚರಿಕೆ ನೀಡಿತ್ತು.

ನವೆಂಬರ್ 3 ರಂದು 28 ಮಧ್ಯಪ್ರದೇಶ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಮಾತನಾಡಿದ ಕಮಲ್‌ ನಾಥ್ “ಈ ಸ್ಟಾರ್ ಪ್ರಚಾರಕರು ಯಾವ ಹುದ್ದೆಯನ್ನು ಹೊಂದಿದ್ದಾರೆ? ಚುನಾವಣಾ ಆಯೋಗ ನನಗೆ ಯಾವುದೇ ಸೂಚನೆ ನೀಡಿಲ್ಲ, ಅಥವಾ ಅದರ ಬಗ್ಗೆ ನನ್ನನ್ನು ಏನು ಕೇಳಲಿಲ್ಲ. ಆದರೆ ಪ್ರಚಾರದ ಕೊನೆಯ ಎರಡು ದಿನಗಳಲ್ಲಿ ಇದನ್ನು ಏಕೆ ಮಾಡುತ್ತಿದ್ದಾರೆ ಎಂಬುದು ಅವರಿಗೆ ಮಾತ್ರ ತಿಳಿದಿದೆ.” ಎಂದು ಹೇಳಿದ್ದಾರೆ.

ಆದಾಗ್ಯೂ, “ಐಟಂ” ಪದವನ್ನು ಬಳಸುವುದನ್ನು ಸಮರ್ಥಿಸಿಕೊಂಡ ಕಮಲ್‌ ನಾಥ್ “ನಾನು ಲೋಕಸಭೆಯಲ್ಲಿ ಇಷ್ಟು ವರ್ಷಗಳ ಕಾಲ ಇದ್ದೆ. ಅಲ್ಲಿ ಅದನ್ನು ಅಜೆಂಡಾ ಶೀಟ್, ಐಟಂ ನಂಬರ್ 1, ಐಟಂ ನಂಬರ್ 2 ನಲ್ಲಿ ಉಲ್ಲೇಖಿಸಲಾಗಿದೆ… ಅದು ನನ್ನ ಮನಸ್ಸಿನಲ್ಲಿತ್ತು. ಯಾರನ್ನೂ ಅಗೌರವಗೊಳಿಸುವಂತೆ ನಾನು ಇದನ್ನು ಹೇಳಲಿಲ್ಲ ”ಎಂದು ನಾಥ್ ಪಿಟಿಐ ಹೇಳಿದ್ದಾರೆ. “ಆದರೂ, ಯಾರಾದರೂ ಅವಮಾನಕ್ಕೊಳಗಾಗಿದ್ದರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ, 22 ಶಾಸಕರೊಂದಿಗೆ ಕಮಲ್‌ ನಾಥ್‌ ವಿರುದ್ಧ ಬಂಡಾಯ ಎದ್ದ ನಂತರ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕುಸಿದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ದಾರಿ ಮಾಡಿಕೊಟ್ಟಿತು.

Tags: ಕಮಲ್ ನಾಥ್ಚುನಾವಣಾ ಆಯೋಗಮಧ್ಯಪ್ರದೇಶ
Previous Post

ಉತ್ತಮ ಆಡಳಿತ ಪಟ್ಟಿಯಲ್ಲಿ ಕೇರಳ ಪ್ರಥಮ, ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ

Next Post

ಕರ್ನಾಟಕ: 3014 ಹೊಸ ಕರೋನಾ ಪ್ರಕರಣಗಳು ಪತ್ತೆ

Related Posts

ಕಾಮನ್‌ ವೆಲ್ತ್‌ ಗೇಮ್‌ನಲ್ಲಿ ಕನ್ನಡತಿಯ ಅಭೂತಪೂರ್ವ ಸಾಧನೆ : ಶುಭಹಾರೈಸಿದ ಸಿಎಂ ಡಿಕೆ ಶಿವಕುಮಾರ್
Top Story

ಕಾಮನ್‌ ವೆಲ್ತ್‌ ಗೇಮ್‌ನಲ್ಲಿ ಕನ್ನಡತಿಯ ಅಭೂತಪೂರ್ವ ಸಾಧನೆ : ಶುಭಹಾರೈಸಿದ ಸಿಎಂ ಡಿಕೆ ಶಿವಕುಮಾರ್

by ಪ್ರತಿಧ್ವನಿ
July 28, 2026
0

ಬೆಂಗಳೂರು : 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ F57 ಶಾಟ್ ಪುಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಕರ್ನಾಟಕದ ಶಿಲ್ಪಾ ಕೆ. ಶೈಲಾ ಅವರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್...

Read moreDetails
ಮೋದಿಗೆ ಅವಮಾನಿಸಿದ ಫೇಸ್‌ ಬುಕ್‌ : ಭಾರತದ ಪ್ರಧಾನಿಗೂ ಬಿತ್ತಾ ಅಂಕುಶ..?

ಮೋದಿಗೆ ಅವಮಾನಿಸಿದ ಫೇಸ್‌ ಬುಕ್‌ : ಭಾರತದ ಪ್ರಧಾನಿಗೂ ಬಿತ್ತಾ ಅಂಕುಶ..?

July 28, 2026
ಅಸ್ಸಾಂ ಮೆಟಲ್ ಕಾರ್ಖಾನೆಯಲ್ಲಿ ಭಾರೀ ಸ್ಫೋ**: ಕಾರ್ಮಿಕರ ದಾರುಣ ಸಾ**

ಅಸ್ಸಾಂ ಮೆಟಲ್ ಕಾರ್ಖಾನೆಯಲ್ಲಿ ಭಾರೀ ಸ್ಫೋ**: ಕಾರ್ಮಿಕರ ದಾರುಣ ಸಾ**

July 28, 2026
ಹೈಕಮಾಂಡ್‌ ಅಂಗಳದಲ್ಲಿ ಸಂಪುಟ ವಿಸ್ತರಣೆಯ ಚೆಂಡು : ಯಾರಿಗೆಲ್ಲ ಒಲಿಯಲಿದೆ ಮಂತ್ರಿಗಿರಿ?

ಹೈಕಮಾಂಡ್‌ ಅಂಗಳದಲ್ಲಿ ಸಂಪುಟ ವಿಸ್ತರಣೆಯ ಚೆಂಡು : ಯಾರಿಗೆಲ್ಲ ಒಲಿಯಲಿದೆ ಮಂತ್ರಿಗಿರಿ?

July 28, 2026
ದಸರಾ ಉದ್ಘಾಟಕರನ್ನು ಸಿಎಂ ಡಿಕೆಶಿ ತೀರ್ಮಾನಿಸುತ್ತಾರೆ : ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ..

ದಸರಾ ಉದ್ಘಾಟಕರನ್ನು ಸಿಎಂ ಡಿಕೆಶಿ ತೀರ್ಮಾನಿಸುತ್ತಾರೆ : ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ..

July 27, 2026
Next Post
ಕರ್ನಾಟಕ: 3014 ಹೊಸ ಕರೋನಾ ಪ್ರಕರಣಗಳು ಪತ್ತೆ

ಕರ್ನಾಟಕ: 3014 ಹೊಸ ಕರೋನಾ ಪ್ರಕರಣಗಳು ಪತ್ತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada