Also Read: ಸುಶಾಂತ್ ಸಾವು-ದುಬೈ ಡಾನ್ಗಳ ನಂಟು: CBI ತನಿಖೆ ಆಗ್ರಹಕ್ಕೆ ಅಮಿತ್ ಷಾ ಪ್ರತಿಕ್ರಿಯೆ
ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ಅಸಹಜ ಮರಣ, ಭಾರತೀಯ ಚಲನಚಿತ್ರರಂಗ ಅರಗಿಸಿಕೊಳ್ಳಲಾಗದಂತಹ ಆಘಾತ ನೀಡಿತ್ತು. ನಟನ ಸಾವು ವ್ಯವಸ್ಥಿತ ಕೊಲೆಯೆಂದೇ ಅಭಿಮಾನಿಗಳು ಹುಯಿಲೆಬ್ಬಿಸಿ, ಬಾಲಿವುಡ್ ಕೆಲ ದಿಗ್ಗಜರನ್ನೇ ಕೊಲೆಯ ನೇರ ಆರೋಪಿಯನ್ನಾಗಿ ಬಿಂಬಿಸಿತ್ತಿದ್ದಾರೆ. ಸುಶಾಂತ್ ಸಾವಿನ ಹಿನ್ನಲೆಯಲ್ಲಿ ಹಲವು ವದಂತಿಗಳು ಎದ್ದ ಬೆನ್ನಲ್ಲಿ ಪ್ರಕರಣವನ್ನು ಸಿಬಿಐ ವಹಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಅಭಿಪ್ರಾಯ ಪಟ್ಟಿದ್ದಾರೆ.
Tonight…together ! Sushant ❤️ pic.twitter.com/TrOYST58CM
— Yami Gautam (@yamigautam) July 24, 2020
ಇಂದು ಸುಶಾಂತ್ ಅಭಿಯದ ದಿಲ್ ಬೆಚಾರ ಸಿನೆಮಾ ರಿಲೀಸ್ ಆಗಿದೆ. ಮೃತ ನಟನ ಅಭಿಮಾನಿಗಳು ಸಿನೆಮಾದ ಹೆಸರನ್ನೇ ಇಂದು ಟ್ರೆಂಡ್ ಮಾಡಿ, ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. #DilBechara ದಿಲ್ ಬೆಚಾರ ಇಂದು 2 ಲಕ್ಷದ 37 ಸಾವಿರಕ್ಕೂ ಹೆಚ್ಚು ಬಾರಿ ಟ್ವೀಟ್ ಆಗಿ, ಒಂದನೇ ಸ್ಥಾನ ಪಡೆದುಕೊಂಡಿದೆ. ಅದರೊಂದಿಗೆ ಬಾಲಿವುಡ್ ಬಾದ್ಷಾ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ಶಾರುಖ್ ಖಾನ್ ಕೂಡ ಟ್ವಿಟರ್ ಟ್ರೆಂಡ್ ಆಗುತ್ತಿದ್ದಾರೆ. #SRKPrideOfIndia ಎಂಬ ಹ್ಯಾಷ್ಟ್ಯಾಗ್ ಮೂಲಕ ಶಾರುಖ್ ಅಭಿಮಾನಿಗಳು ಶಾರುಖ್ ಭಾರತದ ಅಭಿಮಾನ ಎಂದು ಟ್ರೆಂಡ್ ಮಾಡುತ್ತಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ