• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಚೀನಾದ ವುಹಾನ್ ನಗರದಂತಾಗುತ್ತಿರುವ ಗುಜರಾತಿನ ಅಹಮದಾಬಾದ್

by
May 6, 2020
in ದೇಶ
0
ಚೀನಾದ ವುಹಾನ್ ನಗರದಂತಾಗುತ್ತಿರುವ ಗುಜರಾತಿನ ಅಹಮದಾಬಾದ್
Share on WhatsAppShare on FacebookShare on Telegram

ಕರೋನಾ ವೈರಸ್ ಇಡೀ ಜಗತ್ತಿನ ಜಂಘಾಬಲವನ್ನೇ ನಡುಗಿಸಿದೆ. ದೈತ್ಯ ದೇಶಗಳೇ ಈ‌ ದುರ್ವಿಧಿಗೆ ದಣಿದುಬಿಟ್ಟಿವೆ. ಮಹಾನಗರಗಳು ಕರೋನಾ ಮಹಾಮಾರಿಯಿಂದ ನರಕಸದೃಶ್ಯವಾಗಿವೆ. ಇಂಥ ಕಡುಕಠೋರಿ ಕರೋನಾ ಈಗ ಭಾರತದ ಮುಂಚೂಣಿ ನಗರಗಳಲ್ಲಿ ಒಂದಾಗಿದ್ದ ಅಹಮದಾಬಾದ್ ಎಂಬ ಪೊಗದಸ್ತಾಗಿದ್ದ ನಗರವನ್ನು‌ ಅಕ್ಷರಶಃ ಜರ್ಝರಿತಗೊಳಿಸಿದೆ. ಗುಜರಾತಿನ ಅಹಮದಾಬಾದ್ ನಗರ ಈಗ ಕರೋನಾ ಹುಟ್ಟುರಾದ ವುಹಾನ್ ಅನ್ನು ನೆನಪಿಸುತ್ತಿದೆ.

ADVERTISEMENT

ಕಾರಣ ಏಕೆ ಗೊತ್ತಾ? ಅಹಮದಾಬಾದ್ ನಗರದಲ್ಲಿ ಕೇವಲ 5 ದಿನಗಳ ಅಂತರಲ್ಲಿ 100 ಮಂದಿ ಕಡುಪಾಪಿ ಕರೋನಾಕ್ಕೆ ಬಲಿಯಾಗಿದ್ದಾರೆ. ಅಹಮದಾಬಾದ್ ನಗರ ಅಪಾಯದ ಎಲ್ಲಾ ಎಲ್ಲೆಗಳನ್ನು ಮೀರುತ್ತಿದೆ ಎಂಬುದಕ್ಕೆ ಕೇಂದ್ರ ಮತ್ತು ಗುಜರಾತ್ ಸರ್ಕಾರದ ಆರೋಗ್ಯ ಇಲಾಖೆಗಳು ಪ್ರತಿದಿನ ಬಿಡುಗಡೆ ಮಾಡುತ್ತಿರುವ ಸತ್ತವರ ಸಂಖ್ಯೆಗಳೇ ಸಾಕ್ಷಿ.

ಈವರೆಗೆ ಗುಜರಾತ್ ರಾಜ್ಯದಲ್ಲಿ ಕರೋನಾದಿಂದ 368 ಮಂದಿ ಸಾವನ್ನಪ್ಪಿದ್ದಾರೆ. ಅ ಪೈಕಿ ಅಹಮದಾಬಾದ್ ನಗರವೊಂದರಲ್ಲಿ ಸತ್ತವರ ಸಂಖ್ಯೆ ಬರೊಬ್ಬರಿ 273. ಅಂದರೆ ಗುಜರಾತಿನ ಶೇಕಡ 80ರಷ್ಟು ಹೆಚ್ಚು ಸಾವುಗಳು ಅಹಮದಾಬಾದ್​ ನಗರವೊಂದರಲ್ಲೇ ಆಗಿವೆ. ಅಹಮದಾಬಾದ್ ನಗರ ಈಗ ಕೆಂಪು ವಲಯ. ಕಟ್ಟುನಿಟ್ಟಿನ‌ ಕ್ರಮಗಳಿವೆ. ಆದರೂ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ.‌ ಅದರ ಪರಿಣಾಮ ಕಳೆದ 10 ದಿನಗಳಲ್ಲಿ ಅಹಮದಾಬಾದ್​ ನಗರದಲ್ಲಿ 200 ಸಾವುಗಳು ಸಂಭವಿಸಿವೆ. ಶೇಕಡವಾರು ಹೇಳುವುದಾದರೆ 70ರಷ್ಟು ಹೆಚ್ಚು ಸಾವುಗಳು ಕಳೆದ 10 ದಿನಗಳಲ್ಲೇ ಘಟಿಸಿವೆ. ಸೋಮವಾರ ಒಂದೇ ದಿನ 39 ಸಾವು ಸಂಭವಿಸಿವೆ.

ಸಾವಿನ ಸರಣಿ ಇಂತಿದೆ.

  • ಏಪ್ರಿಲ್ 25 ರಂದು 4 ಸಾವು,

  • ಏಪ್ರಿಲ್ 26ರಂದು 18 ಸಾವು,

  • ಏಪ್ರಿಲ್ 27ರಂದು 5 ಸಾವು,

  • ಏಪ್ರಿಲ್ 28 ರಂದು 19 ಸಾವು,

  • ಎಪ್ರಿಲ್ 29ರಂದು 14 ಸಾವು,

  • ಏಪ್ರಿಲ್ 30ರಂದು 15 ಸಾವು,

  • ಮೇ 1ರಂದು 16 ಸಾವು,

  • ಮೇ 2 ರಂದು 20 ಸಾವು,

  • ಮೇ 3ರಂದು 23 ಸಾವು,

  • ಮೇ 4ರಂದು 26 ಸಾವು ಮತ್ತು

  • ಮೇ 5ರಂದು 39 ಸಾವು

ಕರೋನಾ ವೈರಸ್ ಹರಡಿ ಸಾವನ್ನಪ್ಪುತ್ತಿರವವರ ಸಂಖ್ಯೆ ದಿನದಿಂದ ದಿನಕ್ಕೆ ಏರುಮುಖವಾಗಿ ಸಾಗುತ್ತಿರುವುದು‌ ಅಹಮದಾಬಾದ್ ನಗರವನ್ನಷ್ಟೇಯಲ್ಲ, ಗುಜರಾತಿಗರೆಲ್ಲರನ್ನು, ಭಾರತೀಯರೆಲ್ಲರನ್ನು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಕಳೆದ ಭಾನುವಾರ ಕರೋನಾ ಅಟ್ಟಹಾಸ ಮಹಾನಗರಗಳಲ್ಲೇ ಹೆಚ್ಚು ಎಂಬ ಮಾಹಿತಿಯೊಂದು ಕೇಳಿಬಂದಿತ್ತು. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಿದಾಗ ಈ ವಿಷಯ ಚರ್ಚೆ ಆಗಿತ್ತು. ದೇಶದ 20 ನಗರಗಳಲ್ಲಿ ಶೇಕಡಾ 78ರಷ್ಟು ಕರೋನಾ ಪೀಡಿತರು ಇದ್ದಾರೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿತ್ತು.‌ ಹೀಗೆ ಕರೋನಾ ದಾಳಿಗೆ ತೀವ್ರವಾಗಿ ತುತ್ತಾಗಿರುವ ಮುಂಬೈ, ದೆಹಲಿ ಚೆನ್ನೈ ಮಹಾನಗರಗಳ ಸಾಲಿನಲ್ಲಿ ಅಹಮದಾಬಾದ್ ಹೆಸರು ಇತ್ತು. ಈಗ ಅಹಮದಾಬಾದ್ ನಗರದಲ್ಲಿ ಕರೋನಾ ಕೇವಲ 5 ದಿನಕ್ಕೆ 100 ಮಂದಿಯನ್ನು ಬಲಿ ತೆಗೆದುಕೊಂಡು ಮತ್ತೊಂದು ದಾಖಲೆ ಬರೆದಿದೆ.

ಅಹಮದಾಬಾದಿನಲ್ಲಿ ಸಾವಿನ‌‌ ಸಂಖ್ಯೆ ಶರವೇಗದಲ್ಲಿ ಸಾಗುತ್ತಿರುವುದು ಇನ್ನೊಂದು ರೀತಿಯ ಅಪಾಯವನ್ನು ನೆನಪಿಸುವಂತಿದೆ. ಇಷ್ಟು ದಿನ ಲಾಕ್‌ಡೌನ್ ಇತ್ತು. ಕಟ್ಟುನಿಟ್ಟಿನ ಕ್ರಮಗಳಿದ್ದವು. ಸಾಮಾಜಿಕ ಅಂತರದ ಪಾಲನೆ ಆಗುತ್ತಿತ್ತು. ಆ ಸಂದರ್ಭದಲ್ಲೇ ಹೀಗೆ ವ್ಯಾಪಕವಾಗಿ ಹರಡಿದೆ ಎಂದರೆ ಮೇ 17ರ ಬಳಿಕ‌ ಲಾಕ್‌ಡೌನ್ ಮುಕ್ತಾಯಗೊಂಡರೆ ಇನ್ನೆಂಥ ಗಂಡಾಂತರ ಆಗಬಹುದೆಂಬ ಆತಂಕವನ್ನು ಸೃಷ್ಟಿಸಿದೆ.

ಗುಜರಾತ್ ಅಥವಾ ಕೇಂದ್ರ ಆರೋಗ್ಯ ಇಲಾಖೆಗಳ ಮಾಹಿತಿಯ ಪ್ರಕಾರ ಅಹಮದಾಬಾದಿನಲ್ಲಿ ಕರೋನಾ ಇನ್ನು ಕೂಡ ಸಮುದಾಯಕ್ಕೆ ಹರಡಿಲ್ಲ. ಆದರೆ ಲಾಕ್‌ಡೌನ್ ನಿಯಮಗಳು ಸಡಲಿಕೆಗೊಂಡ ಬಳಿಕ ಹರಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಎಂಬ ಚರ್ಚೆಗಳು ನಡೆಯುತ್ತಿವೆ.‌ ಗುಜರಾತಿನಲ್ಲಿ ಈವರೆಗೆ ಒಟ್ಟು 6245 ಜನರು ಕರೋನಾ ಪೀಡಿತರಾಗಿದ್ದಾರೆ. ಆ ಪೈಕಿ ಅಹಮದಾಬಾದ್​ ನಗರದಲ್ಲೇ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿ ಹಲವು ಹಾಟ್​​ಸ್ಪಾಟ್​ಗಳನ್ನ ಗುರುತಿಸಿ ಕಂಟೈನ್ಮೆಂಟ್ ಜೋನ್ ಆಗಿ ಪರಿಗಣಿಸಲಾಗಿದೆ. ಇಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನೂ ಕೋವಿಡ್ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೂ ಸೋಂಕು ಪೀಡಿತರ ಮತ್ತು ಸತ್ತವರ ಸಂಖ್ಯೆ ಏರುತ್ತಲೇ ಇದೆ. ಆತಂಕವೂ ಕೂಡ…

Tags: AhmedabadChinaGujaratwuhanಅಹಮದಾಬಾದ್‌ಕರೋನಾ ವೈರಸ್‌ಚೀನಾವುಹಾನ್ ನಗರ
Previous Post

ಕರಾವಳಿಯಲ್ಲಿ ಮೂಕ ಕಾಡುಕೋಣದ ಸಾವಿಗೆ ಯಾರು ಹೊಣೆ?

Next Post

ಕರ್ನಾಟಕದಲ್ಲಿ ಮತ್ತೆ 20 ಕೋವಿಡ್-19 ಪ್ರಕರಣ ಪತ್ತೆ

Related Posts

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”
Top Story

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

by ಪ್ರತಿಧ್ವನಿ
March 4, 2026
0

ಮಾಗಡಿ :  ತಾಲೂಕಿನ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್ ಗಳನ್ನು ಈಗಾಗಲೇ ಕರೆಯಲಾಗಿದೆ” ಎಂದು ಜಲಸಂಪನ್ಮೂಲ...

Read moreDetails
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

March 4, 2026
Next Post
ಕರ್ನಾಟಕದಲ್ಲಿ ಮತ್ತೆ 20 ಕೋವಿಡ್-19 ಪ್ರಕರಣ ಪತ್ತೆ

ಕರ್ನಾಟಕದಲ್ಲಿ ಮತ್ತೆ 20 ಕೋವಿಡ್-19 ಪ್ರಕರಣ ಪತ್ತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada