• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಗೃಹ ಪ್ರವೇಶಕ್ಕೆ ಮೃತ ಪತ್ನಿಯನ್ನೇ ಕರೆತಂದ ಉದ್ಯಮಿ

by
August 11, 2020
in ಕರ್ನಾಟಕ
0
ಗೃಹ ಪ್ರವೇಶಕ್ಕೆ ಮೃತ ಪತ್ನಿಯನ್ನೇ ಕರೆತಂದ ಉದ್ಯಮಿ
Share on WhatsAppShare on FacebookShare on Telegram

ಎಲ್ಲರಿಗೂ ಮನೆ ಕಟ್ಟಿಸುವುದು ಒಂದು ಕನಸು. ಅದೇ ರೀತಿ ಕೊಪ್ಪಳದ ಈ ಮಹಿಳೆ ಮನೆ ಕಟ್ಟಿಸುವ ಆಸೆ ವ್ಯಕ್ತಪಡಿಸಿದ್ದರು. ಹೆಂಡತಿಯ ಆಸೆಯಂತೆ ಉದ್ಯಮಿ ಗಂಡ ಶ್ರೀನಿವಾಸ ಗುಪ್ತಾ ಸೈಟ್‌ ತೆಗೆದುಕೊಂಡು ಪೂಜೆ ಮಾಡಿಸಿ ಅಡಿಪಾಯವನ್ನೂ ಹಾಕಿಸಿದ್ದರು. ಅದೆಲ್ಲವೂ ಹೆಂಡತಿಯ ಇಚ್ಛೆಯಂತೆ ನಡೆದಿತ್ತು. ಆದರೆ 2017ರಲ್ಲಿ ಅದೊಂದು ದಿನ ತಿರುಪತಿಯ ವೆಂಕಟೇಶ್ವರನ ದರ್ನಕ್ಕೆ ತೆರಳುವಾಗ ನಡೆದ ಭೀಕರ ಅಪಘಾತದಲ್ಲಿ ಪತ್ನಿ ಇಹಲೋಕ ತ್ಯಜಿಸಿದ್ದರು. ಇದರಿಂದ ಮಾನಸಿಕ ಹಿಂಸೆಗೆ ಒಳಗಾದ ಶ್ರೀನಿವಾಸ ಗುಪ್ತಾ, ಹೆಂಡತಿ ಆಸೆಪಟ್ಟಿದ್ದ ಮನೆಯನ್ನು ಕಟ್ಟಿಸೋಣ ಎನ್ನುವ ತೀರ್ಮಾನಕ್ಕೆ ಬಂದು ಮನೆ ನಿರ್ಮಾಣ ಪೂರ್ತಿಗೊಳಿಸಿದ್ದಾರೆ. ಇದೀಗ ಮನೆ ಗೃಹಪ್ರವೇಶವೂ ಆಗಿದೆ. ಅಚ್ಚರಿ ಎಂದರೆ ಗೃಹ ಪ್ರವೇಶಕ್ಕೆ ಸ್ವತಃ ಸತ್ತು ದೂರವಾಗಿದ್ದ ಪತ್ನಿಯನ್ನೇ ಕರೆತಂದಿದ್ದಾರೆ.

ADVERTISEMENT

ಅಚ್ಚರಿಯಾದರೂ ಇದು ಸತ್ಯ. ಮನೆ ಕಟ್ಟಿಸುವ ಇಂಗಿತ ವ್ಯಕ್ತಪಡಿಸಿದ್ದ ವಿಚಾರ ಎಲ್ಲಾ ಬಂಧು ಬಳಗಕ್ಕೂ ಗೊತ್ತಿತ್ತು. ಆದರೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಸ್ವತಃ ಉದ್ಯಮಿ ಶ್ರೀನಿವಾಸ ಗುಪ್ತಾ ಅವರ ಪತ್ನಿ ಮಾಧವಿಯೇ ಹಜಾರದಲ್ಲಿ ಕುಳಿತಿದ್ದನ್ನು ಕಂಡು ಬಂಧು ಬಳಗದವರು ಅಚ್ಚರಿಗೆ ಒಳಗಾಗಿದ್ದರು. ಸತ್ಯಾಂಶವೇನೆಂದು ಕೇಳಿದ ಬಳಿಕ ನಿಟ್ಟುಸಿರು ಬಿಟ್ಟು ಸಂತಸ ವ್ಯಕ್ತಪಡಿಸಿದರು.

ಮನೆ ಕಟ್ಟುವ ಆಸೆಯಿಂದಲೇ ಇಹಲೋಕ ತ್ಯಜಿಸಿದ್ದ ಪತ್ನಿ ಇಲ್ಲದೆ ಗೃಹ ಪ್ರವೇಶ ಮಾಡಲು ಮನಸ್ಸಾಗದ ಉದ್ಯಮಿ ಶ್ರೀನಿವಾಸ ಗುಪ್ತಾ, ಸಾಕಷ್ಟು ಕಡೆಗಳಲ್ಲಿ ವಿಚಾರಿಸಿ ತನ್ನ ಪತ್ನಿ ಮಾಧವಿಯ ತದ್ರೂಪ ಮೂರ್ತಿಯಲ್ಲೇ ಮಾಡಿಸಿದ್ದಾರೆ. ಮನೆ ಒಳಗಡೆ ಹಜಾರದ ಮಂಚದ ಮೇಲೆ ಕುಳಿತಿರುವ ಹಸನ್ಮುಖಿ ಮೂರ್ತಿಯನ್ನು ನೋಡುತ್ತಾ ಹೆಂಡತಿ ಜೊತೆಗಿದ್ದಾಳೆ ಎಂದು ಸಂಭ್ರಮದಿಂದ ಗೃಹ ಪ್ರವೇಶ ಮಾಡಿ ಮುಗಿಸಿದ್ದಾರೆ.

ಮಕ್ಕಳೂ ಸಹ ತಾಯಿ ಇಲ್ಲದೆ ಇರುವ ಬೇಸರವನ್ನು ಈ ಮೂಲಕ ಮರೆತಿದ್ದಾರೆ. ತಾಯಿ ಜೊತೆಗೆ ಇದ್ದಾಳೆ ಎನ್ನುವಂತೆ ಅಮ್ಮನ ಜೊತೆ ಕುಳಿತು ಕಾಲ ಕಳೆದಿದ್ದಾರೆ. ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ನೆಂಟರಿಸ್ಟರು ಮಹಿಳಾ ಮೂರ್ತಿ ಜೊತೆಗೆ ಫೋಟೋ ತೆಗೆಸಿಕೊಂಡು ಹೋಗಿದ್ದಾರೆ ಒಟ್ಟಾರೆ ಬದುಕಿನಲ್ಲಿ ಸಾಕಷ್ಟು ಕನಸು ಕಟ್ಟಿಕೊಂಡಿದ್ದ ಪತ್ನಿ ಅರ್ಧ ದಾರಿಯಲ್ಲೇ ಕೈಕೊಟ್ಟು ಹೋದವರನ್ನು ಉದ್ಯಮಿ ಶ್ರೀನಿವಾಸ ಗುಪ್ತಾ ಈ ಮೂಲಕ ವಾಪಸ್‌ ಮನೆಗೆ ಕರೆತಂದಿದ್ದಾರೆ.

ಹೆಂಡತಿಯ ತದ್ರೂಪ ಪ್ರತಿಮೆ ಮಾಡಿಸಬೇಕು ಎಂದು ಹೊರಟ ಶ್ರೀನಿವಾಸ ಗುಪ್ತಾ ಅವರಿಗೆ ವರವಾಗಿ ಸಿಕ್ಕಿದ್ದು, ಬೆಂಗಳೂರಿನ ಪ್ರಸಿದ್ಧ ಬೊಂಬೆ ಮನೆ. ಕಲಾವಿದರನ್ನು ಸಂಪರ್ಕ ಮಾಡಿ, ತನ್ನ ಮನದ ಆಸೆ ಹೇಳಿಕೊಂಡಾಗ ಒಂದು ವರ್ಷದ ಸಮಯವನ್ನು ತೆಗೆದುಕೊಂಡು ಮಾಧವಿ ಅವರ ಮೂರ್ತಿಯನ್ನು ಸಿದ್ಧ ಮಾಡಿಕೊಟ್ಟರು ಎಂದು ಸಂತಸ ಪಡುತ್ತಾರೆ ಮಕ್ಕಳಾದ ಅನುಷಾ ಹಾಗೂ ಸಿಂಧುಷಾ.

ಸಿಲಿಕಾನ್ ಬಳಸಿ ಬೊಂಬೆಯನ್ನು ತಯಾರು ಮಾಡಲಾಗಿದೆ. ಮುಟ್ಟಿದರೆ ಮನುಷ್ಯರನ್ನೇ ಮುಟ್ಟುತ್ತಿದ್ದೇವೆ ಎನ್ನುವಂತೆ ಭಾಸವಾಗುವ ರೀತಿಯಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಗೆ ಮಾಧವಿ ಅವರ ಕೂದಲನ್ನೇ ಬಳಸಿರುವುದು ವಿಶೇಷ. ಅಸಲಿಗೆ ಶ್ರೀನಿವಾಸ ಗುಪ್ತಾ ಅವರು ಮಾಡುವ ಉದ್ಯಮ ಕೂದಲು ವ್ಯವಹಾರ. ಕೂದಲು ಉದುರಿದವರು ಧರಿಸುವ ಟೋಫನ್‌ಗಳನ್ನು ಮಾಡಲಾಗುತ್ತದೆ. ಮಾಧವಿ ಅವರು ತನ್ನ ಕೂದಲನ್ನು ಕತ್ತರಿಸಿ ಭಿನ್ನ ಭಿನ್ನವಾದ ಶೈಲಿಯಲ್ಲಿ ಚವಲಿ (Artificial Hair Extension) ಮಾಡಿಸಿಕೊಂಡಿದ್ದರು. ಆಕಸ್ಮಿಕ ಘಟನೆಯಲ್ಲಿ ಅಸುನೀಗಿದ ಬಳಿಕ ಅವರ ಕೂದಲನ್ನೇ ಬಳಸಿ ಜಡೆ ಹಾಕಲಾಗಿದೆ ಎನ್ನುತ್ತಾರೆ ಅವರ ಮಗಳು ಅನುಷಾ.

ಒಟ್ಟಾರೆ, ಜೀವನದಿಂದ ದೂರ ಹೋಗಿರುವ ಪತ್ನಿಯನ್ನು ಮಾನಸಿಕವಾಗಿ, ದೈಹಿಕವಾಗಿಯೂ ಮನೆಗೆ ವಾಪಸ್‌ ಕರೆತಂದಿದ್ದಾರೆ. ಈ ಮೂರ್ತಿ ಮಾಡಿಸಲು ಖರ್ಚಾದ ಹಣವೆಷ್ಟು ಎನ್ನುವ ಮಾತಿಗೆ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುತ್ತಾರೆ ಉದ್ಯಮಿ ಶ್ರೀನಿವಾಸ ಗುಪ್ತಾ. ಅದೇನೇ ಇರಲಿ ಪ್ರೀತಿಯ ಮಾಧುರಿ ಸದಾ ಅವರ ಜೊತೆಗಿರಲಿ.

Previous Post

ಕಡೆಗೂ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಬಗೆಹರಿಸಿದ ರಾಹುಲ್ ಗಾಂಧಿ

Next Post

ಹೈ ಪ್ರೊಫೈಲ್ ಪ್ರಕರಣ ಕಡತ ಕಣ್ಮರೆ ಪ್ರಧಾನಿ ಮೋದಿಯರಿಗೆ ಹೊಸದೇನಲ್ಲ!

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025
Next Post
ಹೈ ಪ್ರೊಫೈಲ್ ಪ್ರಕರಣ ಕಡತ ಕಣ್ಮರೆ ಪ್ರಧಾನಿ ಮೋದಿಯರಿಗೆ ಹೊಸದೇನಲ್ಲ!

ಹೈ ಪ್ರೊಫೈಲ್ ಪ್ರಕರಣ ಕಡತ ಕಣ್ಮರೆ ಪ್ರಧಾನಿ ಮೋದಿಯರಿಗೆ ಹೊಸದೇನಲ್ಲ!

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada