• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಕರೋನಾ ಸಂಕಷ್ಟದಲ್ಲೂ ಬಂಗಾಳದಲ್ಲಿ ʼಭಯಂಕರʼ ರಾಜಕೀಯ..!

by
May 17, 2020
in ರಾಜಕೀಯ
0
ಕರೋನಾ ಸಂಕಷ್ಟದಲ್ಲೂ ಬಂಗಾಳದಲ್ಲಿ ʼಭಯಂಕರʼ ರಾಜಕೀಯ..!
Share on WhatsAppShare on FacebookShare on Telegram

ದೇಶದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಸಿಗದ ಹುಚ್ಚು ಕುದುರೆಯಂತೆ ಓಡುತ್ತಿದೆ. ಕರೋನಾವನ್ನು ಸಂಪೂರ್ಣವಾಗಿ ಮನಿಸಿ ನಿಲ್ಲಿಸುವುದು ಅಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಕೊಟ್ಟ ಬಳಿಕ ಇಡೀ ಪ್ರಪಂಚವೇ ವ್ಯಥ್ಯೆಗೆ ಸಿಲುಕಿದಂತಾಗಿದೆ. ಅದರಲ್ಲೂ ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕರೋನಾ ಲಾಕ್‌ಡೌನ್‌ ಮಾಡಿಕೊಂಡು ಇದ್ದರೆ, ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿಯುತ್ತದೆ ಎನ್ನುವ ಜೊತೆಗೆ ಕರೋನಾ ನಿಯಂತ್ರಣ ಕಷ್ಟ ಸಾಧ್ಯ ಎನ್ನುವುದನ್ನು ಅರಿತು ಕೈಚೆಲ್ಲಿ ಆಗಿದೆ. ಕರೋನಾ ಸೋಂಕಿನ ನಿಯಂತ್ರಣಕ್ಕೆ ಕರೋನಾ ಜೊತೆಗೆ ಹೇಗೆ ಬದುಕಬೇಕು ಎಂಬುದನ್ನು ಕಲಿತುಕೊಳ್ಳಿ ಎಂದು ಜನರಿಗೇ ಬಿಟ್ಟು ಬಿಡುವ ಮೂಲಕ ನಿಧಾನವಾಗಿ ತಮ್ಮ ಮೇಲಿನ ಜವಾಬ್ದಾರಿ ಕಳಚಿಕೊಳ್ಳುವ ಕೆಲಸ ಶುರು ಮಾಡಿವೆ. ಹೀಗಾಗಿ ಕರೋನಾ ಲಾಕ್‌ಡೌನ್‌ ಹೆಸರಲ್ಲೇ ಎಲ್ಲಾ ವಿನಾಯ್ತಿಗಳನ್ನು ಕೊಡುವ ಮೂಲಕ ಕರೋನಾ ವೈರಾಣು ರಾಜಾರೋಷವಾಗಿ ಹರಡಲು ಕಾರಣಕರ್ತರಾಗುತ್ತಿದ್ದಾರೆ. ಆದರೆ ಇದರ ಜೊತೆಗೆ ರಾಜಕಾರಣಿಗಳು ಕರೋನಾ ಕಾಲದಲ್ಲೂ ತಮ್ಮ ಸ್ವಹಿತಾಸಕ್ತಿಯ ಚುನಾವಣೆಗೆ ರೂಪುರೇಷೆಗಳನ್ನೂ ನಿರ್ಮಿಸಿಕೊಳ್ಳುತ್ತಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಗೆಲ್ಲುವ ಕನಸು ಕಮಲ ಪಾಳಯದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಇದಕ್ಕೆ ಕಾರಣ ಕಳೆದ ವರ್ಷ ನಡೆದ ಲೋಕಸಭಾ ಚುನಾವಣಾ ಫಲಿತಾಂಶ. ಒಟ್ಟು 42 ಸ್ಥಾನಗಳ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ 22 ಸ್ಥಾನಗಳನ್ನೂ ಕೇಸರಿ ಪಡೆ 18 ಸ್ಥಾನಗಳನ್ನು ಹಾಗೂ ಕಾಂಗ್ರೆಸ್‌ ಕೇವಲ ಎರಡು ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಇನ್ನೊಂದು ವಿಶೇಷ ಎಂದರೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಶೇಕಡವಾರು 43.28 ರಷ್ಟು ಮತಗಳನ್ನು ಬಾಚಿಕೊಂಡರೆ ಬಿಜೆಪಿ ಕೂಡ ಭಾರೀ ಪೈಪೋಟಿಯೊಂದಿಗೆ 40.25 ಕಬಳಿಸಿತ್ತು. ಕಾಂಗ್ರೆಸ್‌ ಮತ್ತೆ ಮತಗಳಿಕೆಯಲ್ಲೂ ಹೀನಾಯ ಪ್ರದರ್ಶನ ನಡೆಸಿ ಕೇವಲ 5.61ರಷ್ಟು ಮತ ಪಡೆಯಲು ಶಕ್ತವಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಕನಸಿಗೆ ಕರೋನಾ ಸಮಯದಿಂದಲೇ ನೀರುಣಿಸಲು ಸಿದ್ಧತೆ ನಡೆಸುತ್ತಿದೆ. ಬಿಜೆಪಿಯ ಮತಚಿಂತನೆಗೆ ಮಮತಾ ಬ್ಯಾನರ್ಜಿ ಬಂಗಾಳಿ ಅಸ್ತ್ರ ಪ್ರಯೋಗ ಮಾಡ್ತಿದ್ದಾರೆ.

294 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಲು 147ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವುದು ಅನಿವಾರ್ಯ. ಈಗಿನ ಲೆಕ್ಕಾಚಾರದಂತೆ ತೃಣಮೂಲ ಕಾಂಗ್ರೆಸ್‌ 224, ರಾಷ್ಟ್ರೀಯ ಕಾಂಗ್ರೆಸ್‌ 25, ಸಿಪಿಐಎಂ 21, ಭಾರತೀಯ ಜನತಾ ಪಾರ್ಟಿ 16 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಆದರೆ ಬಿಜೆಪಿ ಲೋಕಸಭಾ ಗೆಲುವಿನ ಹುರುಪಿನಲ್ಲಿದ್ದು, ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ದೀದಿ ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಇಳಿಸಿ ಗಂಟು ಮೂಟೆ ಕಟ್ಟಿಸುವ ಎಲ್ಲಾ ಲೆಕ್ಕಾಚಾರಗಳು ಸಾಗಿವೆ. ಇದೇ ಕಾರಣಕ್ಕಾಗಿ ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಘಟಕ ಸಾಕಷ್ಟು ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದು, ಕರೋನಾ ನಿಯಂತ್ರಣ ಮಾಡುವಲ್ಲಿ ದೀದಿ ಸೋತಿದ್ದಾರೆ. ವಲಸೆ ಕಾರ್ಮಿಕರ ಹಿತ ಕಾಯುವಲ್ಲಿಯೂ ವಿಫಲ ಆಗಿದ್ದಾರೆ ಎಂದು ದಿನನಿತ್ಯ ವಾಗ್ದಾಳಿಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇದರಿಂದ ಕುಪಿತಗೊಂದಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ನೇರವಾಗಿ ಪ್ರಧಾನಿಯನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಇದು ಕರೋನಾ ಸೋಂಕಿನ ವಿರುದ್ಧ ಹೋರಾಟ ಮಾಡಬೇಕಾದ ಸಮಯ ರಾಜಕಾರಣ ಮಾಡುವ ಸಮಯವಲ್ಲ ಎಂದು ಚುಚ್ಚಿದ್ದರು.

ಬಿಜೆಪಿ ಅಖಾಡಕ್ಕೆ ಇಳಿದ ಬಳಿಕ ಮಮತಾ ಬ್ಯಾನರ್ಜಿ ಸುಮ್ಮನಿರಲು ಸಾಧ್ಯವೇ? ನೋ ವೇ.. ಮಮತಾ ಬ್ಯಾನರ್ಜಿ ಕೂಡ ತನ್ನ ರಾಜ್ಯದ ಜನರ ಮನಸ್ಸನ್ನು ಗೆಲ್ಲಲು ಏನೇನು ಬೇಕು ಎಲ್ಲಾ ಸಿದ್ಧತೆಗಳನ್ನು ಶುರು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿದ್ದ ಮಮತಾ ಬ್ಯಾನರ್ಜಿ ದೇಶದ ಮೂಲೆ ಮೂಲೆಯಲ್ಲಿರುವ ಬಂಗಾಳಿ ಜನರನ್ನು ವಾಪಸ್‌ ರಾಜ್ಯಕ್ಕೆ ಕರೆತರಲು ರಾಜ್ಯ ಸರ್ಕಾರ ಒಂದು ತಿಂಗಳ ಕಾಲ 105 ರೈಲುಗಳ ವ್ಯವಸ್ಥೆ ಮಾಡಿದೆ. ದೇಶದ ವಿವಿಧ ಮೂಲೆಗಳಲ್ಲಿರುವ ಜನರು ತವರು ರಾಜ್ಯ ಪಶ್ಚಿಮ ಬಂಗಾಳಕ್ಕೆ ಬರಬಹುದು ಎಂದು ಟ್ವೀಟರ್‌ನಲ್ಲೂ ಮಾಹಿತಿ ಹಂಚಿಕೊಂಡಿದ್ದರು. ಟ್ವೀಟ್‌ನಲ್ಲೇ ಉತ್ತರ ಕೊಟ್ಟ ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌, ಪಶ್ಚಿಮ ಬಂಗಾಳಕ್ಕೆ ದಿನನಿತ್ಯ 105 ರೈಲುಗಳಲ್ಲಿ ಜನರು ಬರಲು ಸಿದ್ಧರಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ 1 ತಿಂಗಳಿಗೆ 105 ರೈಲುಗಳು ಆಗಮಿಸಲು ಅವಕಾಶ ಕೊಟ್ಟಿದೆ. ಇದು ಬಂಗಾಳದ ಸಹೋದರ ಸಹೋದರಿಯರನ್ನು ಅವರ ಸ್ವಂತ ಊರುಗಳಿಗೆ ತಲುಪಿಸಲು ಅಡ್ಡಿಯಾಗಿದೆ. ಇದು ಬೇಸರದ ಸಂಗತಿ ಎಂದು ಟ್ವೀಟ್‌ ಮಾಡಿ ಕೌಂಟರ್‌ ಕೊಟ್ಟಿದ್ದರು.

ರಾಜ್ಯ ಸರ್ಕಾರ ವಲಸೆ ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳುವಲ್ಲಿ ಎಡವಿದೆ. ಕಾರ್ಮಿಕರನ್ನು ವಾಪಸ್‌ ಕರೆಸಿಕೊಳ್ಳುವಲ್ಲಿ ಉದಾಸೀನತೆ ತೋರಿಸುತ್ತಿದೆ ಎಂದೆಲ್ಲಾ ಟೀಕೆಗಳಿಗೆ ಉತ್ತರಿಸಿರುವ ಮಮತಾ ಬ್ಯಾನರ್ಜಿ, ನಾನು ಬಂಗಾಳಿ ಎನ್ನುವುದಕ್ಕೆ ಹೆಮ್ಮೆ ಆಗುತ್ತದೆ. ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೆ ಕೇಂದ್ರ ಸರ್ಕಾರ ಯಾಕೆ ನಮ್ಮನ್ನೇ ಮಾತ್ರ ಯಾವಾಗಲು ಟಾರ್ಗೆಟ್‌ ಮಾಡುತ್ತಿದೆ. ನಾವು ಬಂಗಾಳಿಗಳು ಪುಟಿದೇಳುತ್ತೇವೆ ಎಂದು ಗುಡುಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಹಿಂದೆ ಗುಜರಾತ್‌ ಆಸ್ಮಿತೆ ಎಂದು ಹೇಳುತ್ತಿದ್ದರು. ಇದೀಗ ಮಮತಾ ಬ್ಯಾನರ್ಜಿ ಬೆಂಗಾಳಿ ಪ್ರೈಡ್‌ ಎಂದು ಗುಡುಗುತ್ತಿದ್ದಾರೆ. ವಿಷಯ ಏನಂದ್ರೆ ಪ್ರಧಾನಿ ತವರು ರಾಜ್ಯ ಗುಜರಾತ್‌ನಲ್ಲಿ ಇಲ್ಲಿ ತನಕ ಸೋಂಕಿತರ ಸಂಖ್ಯೆ 11ಸಾವಿರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸೋಂಕಿತರ ಸಂಖ್ಯೆ 2500 ರ ಗಡಿ ದಾಟಿದೆ. ಆದರೆ ಮುಂದಿನ ವರ್ಷದ ಚುನಾವಣೆಗಾಗಿ ವಲಸೆ ಕಾರ್ಮಿಕರನ್ನು ಓಲೈಸಿಕೊಳ್ಳುವ ಸಲುವಾಗಿ ಎರಡು ಪ್ರಬಲ ಪಕ್ಷಗಳ ನಡುವೆ ಬಲಾಬಲದ ಹೋರಾಟ ನಡೀತಿದೆ ಎನ್ನುವುದು ಮಾತ್ರ ಸತ್ಯ.

Tags: ‌ ಲಾಕ್‌ಡೌನ್‌ ವಲಸೆ ಕಾರ್ಮಿಕರುCovid 19Lockdownmamata benerjeeMigrant WorkersPM ModiWest Bengalಕೋವಿಡ್-19ಪಶ್ಚಿಮ ಬಂಗಾಳಪ್ರಧಾನಿ ಮೋದಿಮಮತಾ ಬ್ಯಾನರ್ಜಿ
Previous Post

ಕೇಂದ್ರದ ಅಸಹಕಾರದ ನಡುವೆ BSY ಕರ್ನಾಟಕವನ್ನು ಮುನ್ನಡೆಸಿದ್ದೇಗೆ.!?

Next Post

ಜಾಗತಿಕ ರಾಜಕಾರಣ ಸ್ಥಿತ್ಯಂತರಕ್ಕೆ ನಾಂದಿ ಹಾಡಿತೆ ಕರೋನಾ?

Related Posts

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?
Top Story

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

by ಪ್ರತಿಧ್ವನಿ
April 9, 2026
0

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ 4 ಎಕರೆ 12 ಗುಂಟೆ ಜಮೀನಿನ ವಿಚಾರದಲ್ಲಿ ಅಕ್ರಮವಾಗಿ ಖಾತೆ ಹಾಗೂ ಪಹಣಿ ತಯಾರಿಸಿ...

Read moreDetails
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ

ಸಿದ್ದರಾಮಯ್ಯ  ಸಿಎಂ ಮುಂದುವರಿಕೆ ಬಗ್ಗೆ  ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದೇನು ?

April 7, 2026
Next Post
ಜಾಗತಿಕ ರಾಜಕಾರಣ ಸ್ಥಿತ್ಯಂತರಕ್ಕೆ ನಾಂದಿ ಹಾಡಿತೆ ಕರೋನಾ?

ಜಾಗತಿಕ ರಾಜಕಾರಣ ಸ್ಥಿತ್ಯಂತರಕ್ಕೆ ನಾಂದಿ ಹಾಡಿತೆ ಕರೋನಾ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada