• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾ ನೆಪದಲ್ಲಿ ಸರಕಾರಗಳಿಗೆ ನಮ್ಮ ಖಾಸಗಿ ಮಾಹಿತಿ ಮಾರಲು ಹೊರಟಿರುವ ಗೂಗಲ್!

by
April 16, 2020
in ದೇಶ
0
ಕರೋನಾ ನೆಪದಲ್ಲಿ ಸರಕಾರಗಳಿಗೆ ನಮ್ಮ ಖಾಸಗಿ ಮಾಹಿತಿ ಮಾರಲು ಹೊರಟಿರುವ ಗೂಗಲ್!
Share on WhatsAppShare on FacebookShare on Telegram

ಸೈಬರ್ ಪ್ರಪಂಚದ ದೈತ್ಯ ಕಂಪೆನಿಯಾಗಿರುವ ಗೂಗಲ್, ಕರೋನಾ ಹೋರಾಟದಲ್ಲಿ “ನೆರವಾಗುತ್ತಿರುವುದು”- ನೀವು ನೀಡಿದ ಮಾಹಿತಿ, ನಿಮಗೆ ಗೊತ್ತಿಲ್ಲದಂತೆ ಪಡೆದ ಮಾಹಿತಿ, ನೀವು ಇರುವ ಸ್ಥಳದ ಮಾಹಿತಿ, ನಿಮ್ಮ ಚಲನವಲನ, ಪ್ರಯಾಣಗಳ ಇತಿಹಾಸ ಇತ್ಯಾದಿ ವೈಯಕ್ತಿಕ ಮಾಹಿತಿಗಳನ್ನು ಸರಕಾರಗಳಿಗೆ ಮಾರಿ ಲಾಭ ಬಾಚಿಕೊಳ್ಳುವುದರ ಮೂಲಕ! ಇದೇ ಹೊತ್ತಿಗೆ ಗೂಗಲ್‌ಗೆ ಎಷ್ಟರ ಮಟ್ಟಿಗೆ ನಮ್ಮ ಖಾಸಗಿ ವಿಷಯಗಳು, ಗುಟ್ಟುಗಳು ಗೊತ್ತಿವೆ ಎಂಬ ಊಹೆಯನ್ನೂ ನೀವು ಮಾಡಬಹುದು.

ADVERTISEMENT

ಪಾಶ್ಚಾತ್ಯ ಪರ್ಯಾಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಹಲವಾರು ಲೇಖನಗಳಲ್ಲಿ ಅನಾವರಣಗೊಳಿಸಲಾಗುತ್ತಿರುವ ವಿಷಯಗಳನ್ನು ಓದಿದರೆ, ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆಯೇ ಭಯವಾಗುತ್ತದೆ. ಎಲ್ಲವೂ ಕಾರ್ಪೋರೇಟ್ ನಿರ್ದೇಶಿತ ಸರ್ವಾಧಿಕಾರಗಳಿಗೆ ಒಳಗಾಗಬಹುದು ಎಂಬುದು ಕೇವಲ ಕಲ್ಪನೆ ಮತ್ತು ಭಯವಾಗಿ ಉಳಿದಿಲ್ಲ.

“ಜಾಗತಿಕ ಸಮುದಾಯವು ಕೋವಿಡ್-19 ಪಿಡುಗಿಗೆ ಪ್ರತಿಕ್ರಿಯಿಸುತ್ತಿರುವಂತೆಯೇ, ನಾವು ಗೂಗಲ್ ಮ್ಯಾಪ್ಸ್‌ನಂತಹ ನಮ್ಮ ಉತ್ಪನ್ನಗಳಲ್ಲಿ ನಾವು ಬಳಸುವ ಕ್ರೋಢೀಕೃತ ಅನಾಮಿಕ ಒಳನೋಟಗಳೇ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೆರವಾಗಬಹುದು ಎಂದು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಂದ ನಾವು ಕೇಳಿದ್ದೇವೆ” ಎಂದು ತಾನು ಕಲೆಹಾಕಿರುವ ಖಾಸಗಿತನದ ಮಾಹಿತಿಗಳ ಪರ್ವತವನ್ನು ಒಂದು ಧನಾತ್ಮಕ ವಿಷಯ ಎಂಬಂತೆ ಬಿಂಬಿಸುತ್ತಾ, ಗೂಗಲ್ ಹೇಳಿಕೊಂಡಿದೆ.

“ಈ ವರದಿಗಳು ಕೋವಿಡ್-19 ಪಿಡುಗನ್ನು ಹೇಗೆ ನಿಭಾಯಿಸಬೇಕು ಎಂಬ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತವೆ ಎಂದು ಆಶಿಸುತ್ತೇವೆ” ಎಂದೂ ಅದು ಹೇಳಿದೆ. ಗ್ರಾಹಕರ ಮೊಬೈಲ್ ಫೋನ್ ಮತ್ತು ಇತರ ಇಂಟರ್ನೆಟ್ ಬಳಸುವ ಸಾಧನಗಳ ಭೌಗೋಳಿಕ ಸ್ಥಾನ ಅಥವಾ ಜಿಯೋ ಲೊಕೇಷನನ್ನು ಕರೋನಾ ಬಿಕ್ಕಟ್ಟಿನ ಬಳಿಕ ಜನರ ಚಲನವಲನ ಮತ್ತು ಸಂಚಾರದಲ್ಲಿ ಅಗಿರುವ ಬದಲಾವಣೆಗಳನ್ನು ತಿಳಿದುಕೊಂಡು, ಆ ಮಾಹಿತಿಯನ್ನು ಉದ್ಯಮಗಳಿಗೆ ಮತ್ತು ಸರಕಾರಗಳಿಗೆ ಒದಗಿಸುವುದು (ಅಂದರೆ, ಮಾರಿ ಎಂದು ಓದಿಕೊಳ್ಳಬಹುದು) ಎಂದು ಇದರ ಅರ್ಥ. ಇದರಿಂದ ಉತ್ತಮ ಸೇವೆ ಒದಗಿಸಿ, ಈ “ಭಯಾನಕ” ವೈರಸಿನ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬುದು ಇದರ ಇಂಗಿತ. ಗೂಗಲ್ ಈ ಕುರಿತು ಸಾರ್ವಜನಿಕವಾಗಿಯೇ ಹೇಳಿರುವ ಈ ವಿಷಯಗಳು ಕುತೂಹಲಕಾರಿಯಾಗಿರುವಷ್ಟೇ, ಬಹಳಷ್ಟು ಆತಂಕಕಾರಿಯೂ ಆಗಿದೆ.

ಇಲ್ಲಿ “ಮಿಂಟ್ ಪ್ರೆಸ್” ಪತ್ರಕರ್ತ ಅಲನ್ ಮೆಕ್‌ಲೌಡ್ (Alan Macleod) ಅವರು ತನ್ನ ಲೇಖನವೊಂದರಲ್ಲಿ ನೀಡಿರುವ ಮಾಹಿತಿಗಳು ಕುತೂಹಲಕಾರಿಯಾಗಿವೆ. ಸ್ಮಾರ್ಟ್ ಫೋನ್‌ಗಳಿಂದ ಸಂಗ್ರಹಿಸಲಾದ ಮಾಹಿತಿಗಳ ಪ್ರಕಾರ ಇಟಲಿಯಲ್ಲಿ ಜನರು ಮೆಡಿಕಲ್ ಸ್ಟೋರುಗಳಿಗೆ ಮತ್ತು ದಿನಸಿ ಅಂಗಡಿಗಳಿಗೆ ಎಡತಾಕುವುದು ಕಳೆದ ಫೆಬ್ರವರಿಗೆ ಹೋಲಿಸಿದಾಗ, 85 ಶೇಕಡಾದಷ್ಟು ಕಡಿಮೆಯಾಗಿದೆಯಂತೆ. ಇಟಲಿಯು ವ್ಯಾಪಕವಾದ ಲಾಕ್‌ಡೌನ್ ಜಾರಿಗೊಳಿಸಿದೆ ಮತ್ತು ಇದನ್ನು ಗೂಗಲ್ ಮಾಹಿತಿ ಸಂಗ್ರಹವು ಖಚಿತವಾಗಿ ತೋರಿಸುತ್ತದೆ. ಚಿಲ್ಲರೆ ವ್ಯಾಪಾರ ಮತ್ತು ಮನರಂಜನಾ ಕೇಂದ್ರಗಳ ಭೇಟಿಯು 94 ಶೇಕಡಾ, ಪಾರ್ಕಿಂಗ್ ಸ್ಥಳಗಳಿಗೆ 90 ಶೇಕಡಾ, ಬಸ್ ಇತ್ಯಾದಿ ಸಂಚಾರ ನಿಲ್ದಾಣಗಳಿಗೆ 80 ಶೇಕಡಾ ಭೇಟಿಗಳು ಕಡಿಮೆಯಾಗಿವೆ. ಇಟಲಿಯು ನಿಧಾನವಾಗಿಯಾದರೂ ಪರಿಸ್ಥಿತಿಯ ಮೇಲೆ ಹಿಡಿತ ಸಾಧಿಸಿರುವಂತೆ ಕಾಣುತ್ತಿದೆ.

ಇದಕ್ಕೆ ವ್ಯತಿರಿಕ್ತವಾದ ಮಾಹಿತಿಯನ್ನು ಮೆಕ್‌ಲೌಡ್ ಅವರ ಲೇಖನದಿಂದಲೇ ಪರಿಶೀಲಿಸೋಣ. ಯುಎಸ್‌ಎಯಲ್ಲಿ ಚಿಲ್ಲರೆ ವ್ಯಾಪಾರ ಮತ್ತು ಮನರಂಜನಾ ಸ್ಥಳಗಳಿಗೆ ಭೇಟಿಯ ಪ್ರಮಾಣ ಕುಗ್ಗಿರುವುದು 47 ಶೇಕಡಾ ಮಾತ್ರ. ಜೀನಸು ಅಂಗಡಿಗಳ ಭೇಟಿ 22 ಶೇಕಡಾ ಮಾತ್ರ. ಪಾರ್ಕಿಂಗ್ ಸ್ಥಳಗಳಿಗೆ 19 ಶೇಕಡಾ ಮತ್ತು ಸಂಚಾರ ನಿಲ್ದಾಣಗಳಿಗೆ 51 ಶೇಕಡಾ ಭೇಟಿ ಕಡಿಮೆಯಾಗಿದೆ. ಇದರ ಅರ್ಥವೆಂದರೆ 10,000 ಮೀರಿದ ಸಾವಿನ ಸಂಖ್ಯೆಗೆ ಹೊರತಾಗಿಯೂ, ಅಲ್ಲಿನ ಜನರು ಈ ಪಿಡುಗಿನ ನಿಯಂತ್ರಣಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಮನೆಯೊಳಗೆ ಉಳಿಯುತ್ತಿಲ್ಲ ಎಂಬುದಾಗಿದೆ. ಮೇಲ್ನೋಟಕ್ಕೆ ಇವೆಲ್ಲವೂ ಅದ್ಭುತ ಎಂಬಂತೆ ಕಾಣುತ್ತದೆ ಅಲ್ಲವೆ? ಆದರೆ, ಇದು ಭಾವಿಸಿದಷ್ಟು ನಿರುಪದ್ರವಿಯೇ?

ತನ್ನ ಹೊಸ ಧೋರಣೆಯು ಬಳಕೆದಾರರ ಖಾಸಗಿತನವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳುವ ಗೂಗಲ್, “ನಮ್ಮ ಕಠಿಣ ಖಾಸಗೀತನದ ಶಿಷ್ಟಾಚಾರಗಳು ಮತ್ತು ಜನರ ಖಾಸಗೀತನವನ್ನು ರಕ್ಷಿಸುವುದಕ್ಕೆ ಬದ್ಧರಾಗಿರುತ್ತೇವೆ ಮತ್ತು ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಒದಗಿಸುವುದಿಲ್ಲ” ಎಂದು ಭರವಸೆ ನೀಡುತ್ತದೆ. ಆದರೆ, ಇದರಿಂದ ಎಲ್ಲರಿಗೂ ಸಮಾಧಾನವಾಗಿಲ್ಲ.

“ನಿಮ್ಮ ಹೆಸರು- ನಿಮ್ಮ ವೈಯಕ್ತಿಕ ಮಾಹಿತಿಗಳಿಗೆ ಬಾಗಿಲು ಮಾತ್ರ ಅದರ ಒಳಗೆ, ನಿಮ್ಮ ವಾಸ ಎಲ್ಲಿ, ನಿಮ್ಮ ಆಸಕ್ತಿಗಳು ಯಾವುವು, ನಿಮ್ಮ ಮತ್ತು ನೀವು ಸಂಪರ್ಕದಲ್ಲಿರುವ ವ್ಯಕ್ತಿಗಳ ಖಾತೆಗಳ ವಿವರಗಳು, ನೀವು ನಿಯಮಿತವಾಗಿ ಎಲ್ಲಿಗೆಲ್ಲಾ ಹೋಗುತ್ತೀರಿ… ಇವೆಲ್ಲವೂ ಇರುವುದರಿಂದ ನಿಮ್ಮ ಹೆಸರು ಬಹಿರಂಗಪಡಿಸದೇ ಇದ್ದರೂ, ನೀವ್ಯಾರು ಎಂದು ಗುರುತಿಸುವುದು ಸುಲಭ. ನೀವು ಹೆಸರು ಹಾಕಿದರೂ ಒಂದೇ, ಹಾಕದಿದ್ದರೂ ಒಂದೇ” ಎಂದು ತಜ್ಞರನೇಕರು ಹೇಳುತ್ತಾರೆ.

ಇಲೆಕ್ಟ್ರಾನಿಕ್ ಗೌಪ್ಯತೆಯ ರಕ್ಷಣೆಗಾಗಿ ಕೆಲಸಮಾಡುವ ಅನೇಕ ಸ್ವಯಂಸೇವಾ ಲಾಭರಹಿತ ಸಂಸ್ಥೆ, ಸಂಘಟನೆಗಳು ಕರೋನಾ ನಿಯಂತ್ರಣದಲ್ಲಿ ಗೂಗಲ್ ಬಳಿ ಇರುವ ಮಾಹಿತಿಗಳು ಉಪಯುಕ್ತ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಈ ಮಾಹಿತಿ ಖಾಸಗಿಯಾಗಿರುವುದರಿಂದ, ಗ್ರಾಹಕರ ಪೂರ್ವಾನುಮತಿ ಅಗತ್ಯ ಎಂಬ ಅಭಿಪ್ರಾಯ ಅವುಗಳದ್ದು. ಖಾಸಗಿ ಕಂಪನಿಗಳಿಗೆ ಈ ಮಾಹಿತಿ ಸೋರಿಕೆಯಾಗಿ ಅವುಗಳ ದುರುಪಯೋಗ ಆಗುವುದಿಲ್ಲ ಎಂಬ ಯಾವ ಖಾತರಿಯೂ ಇಲ್ಲ. ಗೂಗಲ್‌ನ ಭರವಸೆಯ ಹೊರತಾಗಿಯೂ, ಒಂದು ಬಾರಿ ಮಾಹಿತಿಗಳು ಸರಕಾರಗಳ ಕೈಸೇರಿದ ಮೇಲೆ ಅದು ಯಾವ ರೀತಿರಲ್ಲಿ ಉಪಯೋಗ ಅಥವಾ ದುರುಪಯೋಗವಾಗುತ್ತದೆ ಎಂದು ಯಾರು ಹೇಳಲು ಸಾಧ್ಯ? ಈ ಕುರಿತು ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂಬುದು ಅವುಗಳ ಒತ್ತಾಯ.

ಯುಎಸ್‌ಎಯ ಖಾಸಗಿ ಹಕ್ಕುಗಳ ವಕೀಲ ಎಡ್ವರ್ಡ್ ಸ್ನೋಡೆನ್ ಏನು ಹೇಳುತ್ತಾರೆ ಎಂದರೆ, “ಇದು ನಿಮ್ಮ ಮೊಬೈಲ್‌ನಲ್ಲಿ ಜಿಪಿಎಸ್ ಆನ್ ಆಗಿರುವ ವಿಷಯ ಮಾತ್ರವಲ್ಲ. ಜಿಪಿಎಸ್ ಆನ್ ಮಾಡಿ ಇಲ್ಲವೇ ಆಫ್ ಮಾಡಿ, ಅದು ಏರ್‌ಪ್ಲೇನ್ ಮೋಡ್‌ನಲ್ಲಿ ಇಲ್ಲದ ಎಲ್ಲಾ ಸಮಯಗಳಲ್ಲಿ ನೀವು ಒಪ್ಪಿಗೆ ಕೊಡಿ, ಅಥವಾ ಕೊಡದಿರಿ, ನಿಮ್ಮ ಕೆಲವು ಮಾಹಿತಿಗಳನ್ನು ಪಡೆಯಲು ಸಾಧ್ಯ”.

ಮುಖ್ಯಪ್ರಶ್ನೆಯು ಕರೋನಾ ವಿರುದ್ಧ ಹೋರಾಟದಲ್ಲಿ ನೆರವಾಗುವುದು ಅಲ್ಲ. ಅದು ಸರ್ವಾಧಿಕಾರಿ ಆಡಳಿತಗಳಿಗೆ ದಮನದ ಹೊಸಹೊಸ ದಾರಿಗಳನ್ನು ಮಾಡಿಕೊಡುತ್ತದೆ ಎಂಬುದು. ಉದಾಹರಣೆಗೆ, ಇಸ್ರೇಲ್‌ನಲ್ಲಿ ಈಗ ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡರೆ ಏಳು ವರ್ಷಗಳ ಸಜೆಯಿದೆ. ಫೋನ್ ಲೊಕೇಷನ್ ಮಾಹಿತಿಯನ್ನು ವ್ಯಕ್ತಿಗಳ ವಿರುದ್ಧ ಸಾಕ್ಷಿಯಾಗಿ ಬಳಸಬಹುದು. ಜನಾಂಗವಾದ ಮತ್ತು ಕೋಮಃವಾದ ಇರುವ ದೇಶಗಳಲ್ಲಿ ಸರಕಾರ ಇಂತಹ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

ಆದರೆ, ಗೂಗಲ್‌ನ ಈ ನಡೆ ಬೇರೆಬೇರೆ ಹೈಟೆಕ್ ಕಂಪನಿಗಳನ್ನು ಸರಕಾರಗಳು ಮತ್ತು ಸರ್ವಾಧಿಕಾರಿ ಆಡಳಿತಗಳ ಜೊತೆ ಬೆಸೆಯುವ ಅದರ ಪ್ರಯತ್ನದಲ್ಲಿ ಇನ್ನೊಂದು ಹೆಜ್ಜೆ ಮಾತ್ರವಾಗಿದೆ. ಗೂಗಲ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎರಿಕ್ ಶ್ಮಿಟ್ ಮತ್ತು ಜಾರೆಡ್ ಕೋಹೆನ್, ತಮ್ಮ ಪುಸ್ತಕದಲ್ಲಿ (ದಿ ನ್ಯೂ ಡಿಜಿಟಲ್ ಏಜ್: ರಿಶೇಪಿಂಗ್ ದಿ ಫ್ಯೂಚರ್ ಆಫ್ ಪೀಪಲ್ಸ್, ನೇಷನ್ಸ್ ಎಂಡ್ ಬಿಸಿನೆಸ್) ಏನು ಬರೆಯುತ್ತಾರೆ ಎಂದರೆ, “ಇಪ್ಪತ್ತನೇ ಶತಮಾನಕ್ಕೆ ಲಾಕ್‌ಹೀಡ್ ಮಾರ್ಟೀನ್ ಏನಾಗಿತ್ತೋ, (ಗೂಗಲ್‌ನಂತಹ) ಸೈಬರ್ ಸೆಕ್ಯುರಿಟಿ ಕಂಪೆನಿಗಳು ಇಪ್ಪತ್ತೊಂದನೆಯ ಶತಮಾನಕ್ಕೆ ಆಗಲಿವೆ. ಅಂದರೆ, ಜಾಗತಿಕವಾಗಿ ಎಲ್ಲವನ್ನೂ ನಿಯಂತ್ರಿಸುವ ಪರಿಕಲ್ಪನೆಯನ್ನು ಈ ಪುಸ್ತಕ ಮುಂದಿಡುತ್ತದೆ ಎಂದಾಯಿತು.

ಇಲ್ಲಿ ಉಲ್ಲೇಖಿಸಲಾಗಿರುವ ಲಾಕ್‌ಹೀಡ್ ಮಾರ್ಟೀನ್ ಎಂಬುದು ಐದು ಬಿಲಿಯನ್ ಡಾಲರ್ ವಾರ್ಷಿಕ ಆದಾಯವಿರುವ ಕ್ಷಿಪಣಿ, ವಿಮಾನ, ಶಸ್ತ್ರಾಸ್ತ್ರ ಸೇರಿದಂತೆ ಯುದ್ಧ ಸಂಬಂಧಿ ತಂತ್ರಜ್ಞಾನದ ಕಂಪೆನಿ. (ಈ ಆದಾಯವನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿ ನೋಡಿ!). ಕಳೆದ ಶತಮಾನದಲ್ಲಿ ಯುದ್ಧ, ಸಾವುನೋವವುಗಳಿಂದಲೇ ಭರೀ ಲಾಭ ಎತ್ತಿದ ಕಂಪೆನಿ. ಅಂದರೆ, ಈ ಶತಮಾನದಲ್ಲಿ ಹೊಸ ರೀತಿಯ ಯುದ್ಧ ಆರಂಭವಾಗಲಿದೆ ಮತ್ತು ಅದರಲ್ಲಿ ನಾವು ನೀಡುವ ವೈಯಕ್ತಿಕ ಮಾಹಿತಿ ನಮ್ಮ ವಿರುದ್ಧವೇ ಬಳಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂಬುದೇ ಇದರ ಒಳಾರ್ಥ.

ಕರೋನಾ ವೈರಸ್ ಪಿಡುಗು ಹಲವಾರು ರೀತಿಯ ಆರ್ಥಿಕ, ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳಿಗೆ ಕಾರಣವಾಗಿ, ಇಡೀ ಜಗತ್ತನ್ನು ಕಾರ್ಪೊರೇಟ್ ನಿಯಂತ್ರಿತ ಸರ್ವಾಧಿಕಾರಗಳ ತೆಕ್ಕೆಗೆ ತಳ್ಳುವ ಭಯವೀಗ ಕೇವಲ ಭ್ರಮೆ ಅಥವಾ ಕಲ್ಪನೆಯಾಗಿ ಉಳಿದಿಲ್ಲ ಎಂಬುದನ್ನು ಈ ವಿದ್ಯಮಾನ ತೋರಿಸುತ್ತದೆ.

Tags: Covid 19googleIndiaಕೋವಿಡ್-19ಗೂಗಲ್‌ಭಾರತ
Previous Post

ಮೋದಿ ಪ್ರಣೀತ ಅಪನಗದೀಕರಣದ ವೈಫಲ್ಯಕ್ಕೆ ಸಾಕ್ಷಿಯಾದ ಮಿತಿಮೀರಿದ ನಗದು ಹರಿವು

Next Post

ಅಸಲಿಗೆ ಈ ‘ಹೆಲಿಕಾಪ್ಟರ್ ಮನಿ’ ಎಂದರೇನು?

Related Posts

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
0

ದೇಶದ ರಕ್ಷಣೆಗೆ ಶ್ರಮಿಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಆರೋಗ್ಯ, ಸಂತೋಷ ಸಿಗಲಿ: ಜನ್ಮದಿನ ಹಿನ್ನೆಲೆಯಲ್ಲಿ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್ ಬಿ.ವಿ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕರ್ತರಿಂದ...

Read moreDetails
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

June 15, 2025
Next Post
ಅಸಲಿಗೆ ಈ ‘ಹೆಲಿಕಾಪ್ಟರ್ ಮನಿ’ ಎಂದರೇನು?

ಅಸಲಿಗೆ ಈ ‘ಹೆಲಿಕಾಪ್ಟರ್ ಮನಿ’ ಎಂದರೇನು?

Please login to join discussion

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada