• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಅವಿಭಕ್ತ ಕುಟುಂಬಕ್ಕೆಆಸರೆಯಾದ ಕರೋನಾ ವೈರಸ್​ ಭೀತಿ!

by
April 6, 2020
in ಕರ್ನಾಟಕ
0
ಅವಿಭಕ್ತ ಕುಟುಂಬಕ್ಕೆಆಸರೆಯಾದ ಕರೋನಾ ವೈರಸ್​ ಭೀತಿ!
Share on WhatsAppShare on FacebookShare on Telegram

ಕರೋನಾ ವೈರಸ್ ವಿಶ್ವಕ್ಕೆ ಮಾರಿಯಾಗಿರುವುದು ಸರಿ. ಪ್ರಪಂಚದಾದ್ಯಂತ 12,77,962 ಜನರನ್ನು ಹೆಮ್ಮಾರಿ ವೈರಸ್ ಕಾಡುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ ಬರೋಬ್ಬರಿ 3,36,830 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಸ್ಪೇನ್ ದಾಪುಗಾಲು ಇಟ್ಟಿದ್ದು 1,31,646 ಜನರಲ್ಲಿ ವೈರಸ್ ಕಾಣಿಸಿಕೊಂಡಿದೆ. ಮೂರನೇ ಸ್ಥಾನದಲ್ಲಿರುವ ಇಟೆಲಿ 1,28,948 ರೋಗಿಗಳನ್ನು ಹೊಂದಿದೆ. ಜರ್ಮನಿ ಕೂಡ 1,00,123 ಜನರ ಕರೋನಾ ಪೀಡಿತರನ್ನು ಹೊಂದುವ ಮೂಲಕ ಈ ನಾಲ್ಕು ರಾಷ್ಟ್ರಗಳು ಸೋಂಕಿತರ ಸಂಖ್ಯೆಯಲ್ಲಿ ಲಕ್ಷದ ಗಡಿಯನ್ನು ದಾಟಿ ಹೋಗಿವೆ. ಫ್ರಾನ್ಸ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು, 92,839 ಜನ ಸೋಂಕು ಹೊಂದುವ ಮೂಲಕ ಟಾಪ್ 5 ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಆದರೆ ನಮ್ಮ ಭಾರತದಲ್ಲಿ ಕರೋನಾ ವೈರಸ್ ಎಂಬ ಮಹಾಮಾರಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗೆ ಸಹಕಾರಿ ಆದಂತಾಗಿದೆ.

ADVERTISEMENT

ಭಾರತ ಹಳ್ಳಿಗಳ ರಾಷ್ಟ್ರ. ಹಳ್ಳಿಗಳೇ ಪ್ರಮುಖವಾಗಿರುವ ಈ ದೇಶದಲ್ಲಿ ಅವಿಭಕ್ತ ಕುಟುಂಬ ಎಂಬುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ. ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದು . ಯಥೇಚ್ಛವಾದ ಹಣದ ಹರಿವು ಹೊಂದಿರುವ ಈ ನಗರ, ಪಟ್ಟಣಗಳ ಆಸೆಗೆ ಒಳಗಾದ ಯುವ ಜನಾಂಗ ಹಳ್ಳಿಗಳನ್ನು ತೊರೆದು ಪಟ್ಟಣ ಸೇರಿದ್ದಾಗಿದೆ. ಆ ಬಳಿಕ ಕ್ರಮೇಣ ತನ್ನ ಸಂಸಾರವನ್ನೂ ನಗರ, ಪಟ್ಟಣಗಳಿಗೆ ಕರೆದೊಯ್ದ ಪರಿಣಾಮ ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬ ಎನ್ನುವ ಕಲ್ಪನೆ ಕಾಲ ಕ್ರಮೇಣ ಮಾಯವಾಗಿತ್ತು. ನಗರಗಳಲ್ಲೂ ಚಿಕ್ಕ ಕುಟುಂಬ, ಹಳ್ಳಿಗಳಲ್ಲೂ ಚಿಕ್ಕ ಕುಟುಂಬಗಳು ಎನ್ನುವಂತಾಗಿತ್ತು. ಆದರೆ ಇದೀಗ ನಗರವನ್ನು ತೊರೆದು ಜನರು ಹಳ್ಳಿಗಳತ್ತ ಹೆಜ್ಜೆ ಹಾಕಿದ್ದಾರೆ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲೂ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಜನರು ಕೆಲಸ ಇಲ್ಲದ ಪರಿಣಾಮ ಊರುಗಳಲ್ಲಿ ತಮ್ಮ ಹಿರಿಯರ ಜೊತೆ ಕಾಲ ಕಳೆಯುತ್ತಿದ್ದಾರೆ. ಇದು ಅವಿಭಕ್ತ ಕುಟುಂಬದ ಪರಿಕಲ್ಪನೆಯನ್ನು ಮರು ಸೃಷ್ಟಿಸುವಂತೆ ಮಾಡಿದೆ.

ನೊಂದಿದ್ದ ಹಿರಿಯ ಮನಸ್ಸುಗಳಿಗೆ ಸತ್ತರೂ ನೆಮ್ಮದಿ!

ಮಕ್ಕಳ ಜೊತೆ ಕೊನೆಗಾಲದ ಜೀವನ ಕಳೆಯಲಾಗದ ಹಿರಿಯ ಜೀವಗಳು ಮನಸ್ಸಿನಲ್ಲೇ ನೋವು ಅನುಭವಿಸುತ್ತಿದ್ದರು. ಮಕ್ಕಳು ಒಳ್ಳೆಯವರಾಗಿದ್ದರೂ ನಗರ, ಪಟ್ಟಣಗಳ ಜೀವನಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದೆ, ಹಳ್ಳಿಗಳಲ್ಲೇ ವಾಸ ಮಾಡಬೇಕಾದರ ಪರಿಸ್ಥಿತಿ ಎದುರಾಗಿತ್ತು. ವರ್ಷಕ್ಕೊಮ್ಮೆ ಹಬ್ಬ ಹರಿದಿನಕ್ಕೆ ಬರುತ್ತಿದ್ದ ಮಕ್ಕಳು, ಮೊಮ್ಮಕ್ಕಳನ್ನು ಕಂಡು ಸಂತಸಪಡುತ್ತಿದ್ದರು. ಆದರೆ ಕರೋನಾ ಸೋಂಕಿನ ಭೀತಿ ನಗರ, ಪಟ್ಟಣ ಜನರು ಹಳ್ಳಿ ಸೇರುವಂತಾಗಿದೆ. ಹಬ್ಬಕ್ಕೆ ಎಂದು ಊರುಗಳಿಗೆ ಬರುತ್ತಿದ್ದವರು ಎರಡರಿಂದ ಮೂರು ದಿನ ತಮ್ಮ ಹುಟ್ಟೂರುಗಳಲ್ಲಿ ಇರುತ್ತಿದ್ದದ್ದೇ ಹೆಚ್ಚು. ಒಂದು ವಾರಗಳ ಕಾಲ ಕಳೆಯುವ ವ್ಯವಧಾನ ಯುವ ಜನಾಂಗದಲ್ಲಿ ಕಣ್ಮರೆಯಾಗಿತ್ತು. ಆದರೀಗ 2 ವಾರಗಳಾದರೂ ಬೆಂಗಳೂರು, ಮೈಸೂರು ಸೇರಿದಂತೆ ನಗರ, ಪಟ್ಟಣಗಳಿಂದ ಹುಟ್ಟೂರಿನ ನೆನಪು ಮಾಡಿಕೊಂಡು ಊರುಗಳಿಗೆ ಬಂದಿರುವವರು ವಾಪಾಸ್ ನಗರಗಳಿಗೆ ತೆರಳಲು ಸಾಧ್ಯವಿಲ್ಲದೆ ಊರುಗಳಲ್ಲಿಯೇ ಬೀಡುಬಿಟ್ಟಿದ್ದಾರೆ. ವಯೋವೃದ್ಧರು ಕರೋನಾ ಬಂದರೂ ಪರವಾಗಿಲ್ಲ, ಮಕ್ಕಳು, ಮೊಮ್ಮಕ್ಕಳ ಜೊತೆಯಲ್ಲಿ ಇಷ್ಟೊಂದು ದಿನಗಳ ಕಾಲ ಕಳೆಯುವಂತೆ ಆಯಿತಲ್ಲ ಅಷ್ಟೇ ಸಾಕು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಸದ್ಯಕ್ಕೆ ಹಳ್ಳಿಗಳಲ್ಲೂ ಬೇಸಿಗೆಯಾಗಿದ್ದು, ಇನ್ನೂ ಕೂಡ ಮಳೆ ಬಿದ್ದಿಲ್ಲ. ಹಾಗಾಗಿ ರೈತಾಪಿ ವರ್ಗ ಕೂಡ ವಿಶ್ರಾಂತಿಯಲ್ಲೇ ಇತ್ತು. ಇದೀಗ ಮನೆಗೆ ಮಕ್ಕಳು ಮೊಮ್ಮಕ್ಕಳು ಕೂಡ ಆಗಮಿಸಿರುವ ಕಾರಣ ಮನೆಯ ಮೂಲೆಯಲ್ಲಿದ್ದ ಅಳಿಗುಳಿ ಮನೆ, ಚೌಕಾಬಾರ, ಕಳ್ಳಪೊಲೀಸ್, ಲೂಡೋ, ಹಾವು ಏಣಿ ಆಟ ಸೇರಿದಂತೆ ಹಳ್ಳಿಗರು ಈ ಹಿಂದೆ ಆಡುತ್ತಿದ್ದ ಎಲ್ಲಾ ಆಟಗಳು ಪ್ರಚಲಿತಕ್ಕೆ ಬಂದಿವೆ. ಏಪ್ರಿಲ್ 5 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ಮನೆಯ ದೀಪಗಳನ್ನು ಆರಿಸಿ ದೀಪ ಬೆಳಗಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಕರೆಗೆ ದೇಶದೆಲ್ಲೆಡೆ ದೀಪಾವಳಿ ಹಬ್ಬ ಆಚರಣೆಯೇ ನಡೆದಿದೆ. ಇನ್ನು ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ವಾಹನ ಸಂಚಾರವಿಲ್ಲದೆ ವಾಯು ಮಾಲಿನ್ಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಮಾಲಿನ್ಯದ ಪ್ರಮಾಣದಲ್ಲಿ ಇಳಿಕೆಯಾಗಿದೆ. ನಗರ, ಪಟ್ಟಣಗಳ ಜನರು ತಮ್ಮ ಮೂಲ ಸ್ಥಾನಕ್ಕೆ ಬಂದಿರುವ ಕಾರಣ ರಸ್ತೆಗಳಿಗೆ ನವಿಲುಗಳು ಬಂದಿವೆ. ಮಾನವನ ಜಂಜಾಟವಿಲ್ಲದೆ ಪ್ರಾಣಿ ಪಕ್ಷಿಗಳು ಭಯಭೀತಿಯೂ ಇಲ್ಲದೆ ಬೆಂಗಳೂರು ನಗರಗಳಲ್ಲಿ ಸುತ್ತಾಡುವಂತಾಗಿದೆ. ಒಟ್ಟಾರೆ ಕರೋನಾ ಕಾಯಿಲೆ ಬಂದು ಬಿಟ್ಟರೆ ಎನ್ನುವ ಭಯ ಇದ್ದೇ ಇದೆ. ಆದರೆ, ನಗರದಲ್ಲಿ ಬೀಡುಬಿಟ್ಟಿದ್ದ ಜನರು ಹಳ್ಳಿಗಳಿಗೆ ತೆರಳಿದ್ದು, ಅವಿಭಕ್ತ ಕುಟುಂಬವನ್ನು ಮರುಸೃಷ್ಟಿಸಿದೆ.

Tags: Covid 19Lockdownundivided lifeಅವಿಭಕ್ತ ಕುಟುಂಬಕೋವಿಡ್-19ಹಳ್ಳಿ ಜೀವನ
Previous Post

ಹೇಳಿದ್ದೊಂದು ಮಾಡಿದ್ದೊಂದು! ದೀಪದ ಕರೆಗೆ ಅತಿರೇಕದ ಪ್ರತಿಕ್ರಿಯೆ ನೀಡಿದ ನಿದರ್ಶನಗಳಿವು

Next Post

ಪ್ರಧಾನಿ ಮೋದಿಯ ಅಚ್ಚುಮೆಚ್ಚಿನ ‘ಕಾರ್ಪೊರೆಟ್ ಕುಳ’ಗಳು ‘ಪಿಎಂ ಕೇರ್ಸ್’ಗೆ ಕೊಟ್ಟಿದ್ದೆಷ್ಟು?

Related Posts

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್
ಕರ್ನಾಟಕ

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

by ಪ್ರತಿಧ್ವನಿ
November 3, 2025
0

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್​ ಕಾಂಗ್ರೆಸ್ ಸೂಪರ್ ಅಧ್ಯಕ್ಷರಂತೆ ವರ್ತಿಸಿದರೆ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸೂಪರ್ ಸಿಎಂರಂತೆ ವರ್ತಿಸುತ್ತಿದ್ದಾರೆ ಎಂದು ರಾಜ್ಯಸಭಾ ಬಿಜೆಪಿ...

Read moreDetails

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ಪ್ರಧಾನಿ ಮೋದಿಯ ಅಚ್ಚುಮೆಚ್ಚಿನ ‘ಕಾರ್ಪೊರೆಟ್ ಕುಳ’ಗಳು ‘ಪಿಎಂ ಕೇರ್ಸ್’ಗೆ ಕೊಟ್ಟಿದ್ದೆಷ್ಟು?

ಪ್ರಧಾನಿ ಮೋದಿಯ ಅಚ್ಚುಮೆಚ್ಚಿನ ‘ಕಾರ್ಪೊರೆಟ್ ಕುಳ’ಗಳು ‘ಪಿಎಂ ಕೇರ್ಸ್’ಗೆ ಕೊಟ್ಟಿದ್ದೆಷ್ಟು?

Please login to join discussion

Recent News

Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?
Top Story

ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?

by ಪ್ರತಿಧ್ವನಿ
November 3, 2025
ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ
Top Story

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada