ಸತತ 3 ದಿನಗಳ ಸಾರಿಗೆ ನೌಕರರರ ಪ್ರತಿಭಟನೆ ಇಂದು ಅಂತ್ಯಗೊಂಡಿದೆ. 10 ಬೇಡಿಕೆಗಳನ್ನು ಮುಂದಿಟ್ಟಿರುವ ಸರ್ಕಾರ ಇದೀಗ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ರೂಪದ ಭರವಸೆ ನೀಡಿದೆ.
ಸರ್ಕಾರಕ್ಕೆ ಮೂರು ತಿಂಗಳ ಗಡುವು ನೀಡಿ ಪ್ರತಿಭಟನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿಕೊಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನೌಕರರು ಆಂತಂಕ ಭಯ ಪಡುವ ಅವಶ್ಯಕತೆಯಿಲ್ಲ ಸಮಾಧಾನವಾಗಿರಿ ನಾವು ನಿಮ್ಮ ಜೊತೆಯಿದ್ದೇವೆ. ನಾನು ನಂಬಿಕೆ ಕಳೆದುಕೊಳ್ಳುವುದಿಲ್ಲ ಬೇಡಿಕೆ ಈಡೇರಿಕೆಗೆ ಸ್ವಲ್ಪ ಸಮಯ ಕೊಟ್ಟು ನೋಡೋಣ. ನ್ಯಾಯಬದ್ಧವಾಗಿ ಕೇಳಿದ್ದೇವೆ ಇದೀಗ ನ್ಯಾಯಬದ್ಧವಾಗಿ ಕಾದುನೋಡೋಣ, ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಈ ಸಮಸ್ಯೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಜನವರಿ 10 ರಿಂದ 30 ರೊಳಗೆ ತಂಡವೊಂದನ್ನು ನೇಮಕ ಮಾಡಲಾಗುತ್ತದೆ. ಅಲ್ಲದೆ ಮಹಿಳಾ ಸಿಬ್ಬಂದಿಗಳಿಗೆ ಕೆಲಸದ ವೇಳೆ ಕಿರುಕುಳವಾದ ಮಾಹಿತಿ ಕೂಡ ತಿಳಿದು ಬಂದಿದ್ದು, ಈ ಬಗ್ಗೆ ಪರಿಗಣಿಸಿ ಭದ್ರತೆ ಒದಗಿಸುವುದರ ಜೊತೆಗೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು. 10 ಭರವಸೆಗಳ ಬೇಡಿಕೆ ಈಡೇರಿಕೆಗೆ ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ. ಹಾಗೆಯೇ ಪ್ರತಿಭಟನೆಯ ಸಂದರ್ಭದಲ್ಲಿ ಬಂಧನಕ್ಕೊಳಗಾದವರ ಕೇಸ್ಗಳನ್ನು ಮುಕ್ತಗೊಳಿಸುವುದು ನಮ್ಮ ಜವಾಬ್ದಾರಿ ಎಂಬ ಭರವಸೆಯನ್ನು ನೀಡಿದ್ದಾರೆ,” ಎಂದಿದ್ದಾರೆ.
ಒಟ್ಟಿನಲ್ಲಿ, ಇದೀಗ ರಾಜ್ಯಾದ್ಯಂತ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ಸಂಚಾರವನ್ನು ಮುಂದುವರೆಸಿದ್ದು, ರಾಜ್ಯಸರ್ಕಾರಕ್ಕೆ ಭರವಸೆಯ ಈಡೇರಿಕೆಗೆ 03 ತಿಂಗಳ ಗಡುವು ನೀಡಿ, ಕೆಲವು ವಿರೋಧಗಳ ನಡುವೆಯೇ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.