• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ʼಕರೋನಿಲ್‌ʼ ಹೆಸರು ಬಳಕೆ‌: ಪತಂಜಲಿಗೆ ದಂಡ ವಿಧಿಸಿದ ಮದ್ರಾಸ್ ಕೋರ್ಟ್

by
August 7, 2020
in ದೇಶ
0
ʼಕರೋನಿಲ್‌ʼ ಹೆಸರು ಬಳಕೆ‌: ಪತಂಜಲಿಗೆ ದಂಡ ವಿಧಿಸಿದ ಮದ್ರಾಸ್ ಕೋರ್ಟ್
Share on WhatsAppShare on FacebookShare on Telegram

ಕರೋನಾ ಸೋಂಕು ಲಕ್ಷಾಂತರ ಭಾರತೀಯರ ಪಾಲಿಗೆ ಕರಾಳ ಮುಖವನ್ನು ಪ್ರದರ್ಶನ ಮಾಡಿದ್ರೆ, ಇನ್ನೂ ಕೆಲವರಿಗೆ ಖಜಾನೆ ತುಂಬಿಸುವ ಸ್ವರ್ಗ ಮಾರ್ಗವಾಗಿದೆ. ಅದರಲ್ಲಿ ಪತಂಜಲಿ ಸಂಸ್ಥೆಯೂ ಒಂದು. ಕರೋನಾ ಸೋಂಕು ಭಾರತದಾದ್ಯಂತ ವ್ಯಾಪಿಸುತ್ತಿದ್ದಂತೆ ಸಾಕಷ್ಟು ಸಂಸ್ಥೆಗಳು ಕರೋನಾ ಬಾರದಂತೆ ತಡೆಯಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಲವಾರು ರೀತಿಯ ಪದಾರ್ಥಗಳನ್ನು ಬಿಡುಗಡೆ ಮಾಡಿದವು. ಕರೋನಾ ಸೋಂಕಿಗೆ ಮದ್ದು ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡ ಪತಂಜಲಿ ಸಂಸ್ಥೆ ಕೂಡ ಕರೋನಾ ಸೋಂಕಿಗೆ ಎಂದೇ ಮಾತ್ರೆಗಳನ್ನು ಬಿಡುಗಡೆ ಮಾಡಿತ್ತು. ಜೊತೆಗೆ ಶೇಕಡ 70 ರಷ್ಟು ಕರೋನಾ ಸೋಂಕಿತರು ಇದರಿಂದ ಗುಣಮುಖ ಆಗ್ತಾರೆ ಎಂದು ಮಾಧ್ಯಮಗಳ ಎದುರು ಹೇಳಿದ್ದರು. ಆ ಬಳಿಕ ಬಾಬಾ ರಾಮದೇವ್‌ ಕರೋನಾಗೆ ಮದ್ದು ಕಂಡು ಹಿಡಿದಿದ್ದಾರೆ ಎನ್ನುವ ಸುದ್ದಿ ಹಭ್ಬಿತ್ತು. ಆ ನಂತರ ಸೃಷ್ಟಿಯಾದ ವಿವಾದದ ಬಳಿಕ ಉಲ್ಟಾ ಹೊಡೆದ ಬಾಬಾ ರಾಮದೇವ್‌ ಹಾಗೂ ಪತಂಜಲಿ ಸಂಸ್ಥೆ ಸಿಇಒ ಬಾಲಕೃಷ್ಣ ನಾವು ಕರೋನಾಗೆ ಚಿಕಿತ್ಸೆ ಎಂದಿಲ್ಲ. ಪ್ರಾಯೋಗಿಕವಾಗಿ ನಾವು ಯಶಸ್ವಿಯಾಗಿದ್ದೇವೆ ಎಂದಷ್ಟೇ ನಾವು ಹೇಳಿದ್ದೇವೆ ಎನ್ನುವ ಮೂಲಕ ಉಲ್ಟಾ ಹೊಡೆದಿದ್ದರು.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರೋನಾ ಸೋಂಕಿಗೆ ಚಿಕಿತ್ಸೆ ಇಲ್ಲ. ಹಾಗಾಗಿ ಕರೋನಾ ಸೋಂಕು ಬರುವುದನ್ನೇ ತಡೆಗಟ್ಟಬೇಕು ಎನ್ನುವ ಕಾರಣಕ್ಕೆ ಹಲವಾರು ಸಂಸ್ಥೆಗಳು ಕರೋನಾ ಇಮ್ಯುನಿಟಿ ಬೂಸ್ಟರ್‌ ಎನ್ನುವ ಮಾತ್ರೆಗಳು, ಪೌಡರ್‌, ಪೇಸ್ಟ್‌, ಟೀ ಪೌಡರ್‌ ಎಲ್ಲವೂ ಮಾರುಕಟ್ಟೆಯಲ್ಲಿ ಲಭ್ಯ. ಸರ್ಕಾರಿ ಸ್ವಾಮ್ಯದ ಆಯುಶ್‌ ಇಲಾಖೆಯೂ ಮಾತ್ರೆಯನ್ನು ಬಿಡುಗಡೆ ಮಾಡಿದೆ. ಉಳ್ಳವರು ಎಲ್ಲವನ್ನೂ ಬಳಸುತ್ತಿದ್ದಾರೆ. ಆದರೆ ಇವೆಲ್ಲಾ ಎಷ್ಟರ ಮಟ್ಟಿಗೆ ಸಹಕಾರಿ ಎನ್ನುವುದನ್ನು ಪರೀಕ್ಷೆ ಮಾಡಿದವರು ಯಾರು..? ಇದಕ್ಕೆಲ್ಲಾ ಅಧಿಕೃತ ಮುದ್ರೆ ಇದೆಯಾ ಎಂದರೆ ಇಲ್ಲ. ಇದೇ ಕಾರಣದಿಂದ ಪತಂಜಲಿ ಯೋಗ ಸಂಸ್ಥೆ ಬಿಡುಗಡೆ ಮಾಡಿದ್ದ ಕರೋನಾ ಇಮ್ಯುನಿಟಿ ಬೂಸ್ಟರ್‌ ಕಿಟ್‌ ಮಾರುಕಟ್ಟೆ ಪ್ರವೇಶ ಮಾಡಿತ್ತು. ಬಿಡುಗಡೆ ವೇಳೆಯಲ್ಲೇ ಕರೋನಾಗೆ ಚಿಕಿತ್ಸೆ ಎನ್ನುವಂತೆ ತಿರುಚಿದ ಹೇಳಿಕೆ ನೀಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥೆ 10 ಲಕ್ಷ ರೂಪಾಯಿ ದಂಡ ಕಟ್ಟುವಂತಾಗಿದೆ.

Also Read: ಪತಂಜಲಿ ಕೊರೊನಿಲ್ ಔಷಧ: ಬಾಬಾ ರಾಮ್‌ದೇವ್ ವಿರುದ್ದ FIR ದಾಖಲು

ಆಗಸ್ಟ್‌ 05, ಬುಧವಾರ ಅಷ್ಟೇ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಬಾಬಾ ರಾಮದೇವ್‌, ಪತಂಜಲಿ ಕರೋನಾ ಕಿಟ್‌ಗೆ ಭಾರೀ ಬೇಡಿಕೆ ಇದ್ದು, ಪ್ರತಿದಿನ 10 ಲಕ್ಷ ಕಿಟ್‌ಗಳಿಗೆ ಬೇಡಿಕೆ ಇದೆ. ಆದರೆ ಹರಿದ್ವಾರದಲ್ಲಿರುವ ಕಂಪನಿ ದಿನಕ್ಕೆ ಕೇವಲ 1 ಲಕ್ಷ ಕಿಟ್‌ ಉತ್ಪಾದನೆ ಮಾಡಲು ಮಾತ್ರ ಸಾಧ್ಯವಾಗ್ತಿದೆ ಎಂದಿದ್ದರು. ಇನ್ನೂ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದು ಆಯುರ್ವೇದದ ಶಕ್ತಿ, ನಾವು ಕೇವಲ 500 ರೂಪಾಯಿಗೆ ಕರೋನಿಲ್‌ ಕಿಟ್‌ ಕೊಡುತ್ತಿದ್ದೇವೆ, ಈ ಕಿಟ್‌ ಅನ್ನು 5 ಸಾವಿರಕ್ಕೂ ಬೇಕಿದ್ದರೆ ಈ ಕರೋನಾ ಸಮಯದಲ್ಲಿ ಮಾರಾಟ ಮಾಡುವ ಮೂಲಕ 5000 ಕೋಟಿ ಹಣವನ್ನು ಸಂಪಾದನೆ ಮಾಡಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ ಎಂದಿದ್ದರು. ಅದರ ಮರುದಿನವೇ ಅಂದರೆ ಆಗಸ್ಟ್‌ 6 ರಂದು ಕರೋನಿಲ್‌ ಕಿಟ್‌ ಮೇಲೆ ಟ್ರೇಡ್‌ ಮಾಕ್‌ ಬಳಸದಂತೆ ಸೂಚಿಸಿರುವ ಮದ್ರಾಸ್‌ ಹೈಕೋರ್ಟ್‌ 10 ಲಕ್ಷ ದಂಡವನ್ನೂ ಹಾಕಿದೆ.

ಪತಂಜಲಿ ಸಂಸ್ಥೆ ಕರೋನಾ ಕಿಟ್‌ ಮೇಲೆ ಬಳಸುತ್ತಿರುವ Coronil ಟ್ರೇಡ್‌ ಮಾರ್ಕನ್ನು 1993ರಿಂದಲೂ ನಾವು ಬಳಸುತ್ತಿದ್ದೇವೆ. ಇದೇ ಟ್ರೇಡ್‌ ಮಾರ್ಕ್‌ನಲ್ಲಿ ‘CORONIL-92 B ಎನ್ನುವ ವಸ್ತು ಮಾರಾಟ ಮಾಡಲಾಗ್ತಿದೆ. ದೊಡ್ಡ ದೊಡ್ಡ ಯಂತ್ರಗಳನ್ನು ಶುದ್ಧ ಮಾಡಲು ಕೆಮಿಕಲ್‌ ಕೈಗಾರಿಕೆಗಳನ್ನು ಬಳಸುವ ಕೆಮಿಕಲ್‌ ತಯಾರಿಸಲು ಬಳಸಲಾಗುತ್ತದೆ. ಹಾಗಾಗಿ ಈ ಟ್ರೇಡ್‌ ನಮ್ಮದು ಎಂದು ಚೆನ್ನೈ ಮೂಲದ ಸಂಸ್ಥಯೊಂದು ಹೈಕೋರ್ಟ್‌ ಮೆಟ್ಟಿಲೇರಿತ್ತು. ಜೊತೆಗೆ 2027ರ ತನಕವೂ ನಮ್ಮ ಸಂಸ್ಥೆಗೆ ಸೇರಿದ್ದು ಎಂದು ವಾದಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್‌, ಪತಂಜಲಿ ಸಂಸ್ಥೆಗೆ 10 ಲಕ್ಷ ದಂಡ ವಿಧಿಸಿ, ಇನ್ಮುಂದೆ ಬಳಸದಂತೆ ಸೂಚನೆ ಕೊಟ್ಟಿದೆ. ಆಗಸ್ಟ್‌ 21ರೊಳಗಾಗಿ ದಂಡದ ಮೊತ್ತವನ್ನು ಅಡ್ಯಾರ್‌ ಕ್ಯಾನ್ಸರ್‌ ಸಂಸ್ಥೆ ಹಾಗೂ ಅರುಂಬಾಕಂನಲ್ಲಿರುವ Government Yoga and Naturopathy Medical College and Hospital ಗೆ ಹಂಚಿಕೆ ಮಾಡುವಂತೆ ಸೂಚನೆ ಕೊಟ್ಟಿದೆ. ಜೊತೆಗೆ ಪತಂಜಲಿ ಸಂಸ್ಥೆ ಉತ್ಪಾದಿಸುತ್ತಿರುವ ಕರೋನಿಲ್‌ ಕಿಟ್‌ ಸೋಂಕು ನಿವಾರಕವಲ್ಲ, ಕೇವಲ ಕೆಮ್ಮು ಬಾರದಂತೆ ತಡೆಯಲು ಸಹಕಾರಿ ಎಂದು ಸ್ಪಷ್ಟನೆ ನೀಡಿದೆ.

ಕರ್ನಾಟಕದಲ್ಲೂ ನಡೀತಿದೆ ಇಂತಹದ್ದೇ ವ್ಯವಹಾರ..!

ಕರ್ನಾಟಕದಲ್ಲೂ ಆಯುರ್ವೇದ ಔಷಧಿ ತಯಾರಿಸಿದ್ದೇನೆ, ಇದರಿಂದ ಕರೋನಾ ಸೋಂಕು ನಿವಾರಣೆ ಆಗುತ್ತದೆ ಎಂದು ಆಯುರ್ವೇದ ವೈದ್ಯರೊಬ್ಬರು ಭಾರೀ ಸುದ್ದಿ ಆಗುತ್ತಿದ್ದಾರೆ. ರಾಜ್ಯ ಆರೋಗ್ಯ ಸಚಿವರ ಬಾಯಿಂದಲೂ ಯಶಸ್ವಿಯಾಗಿದೆ ಎಂದು ಹೇಳಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಮೆಡಿಸಿನ್‌ ಮಾಫಿಯಾ ಆಯುರ್ವೇದ ಔಷಧಿಯನ್ನು ಬಳಸದಂತೆ ತಡೆಯುತ್ತಿದೆ ಎಂದು ಸಾಮಾಜಿಕ ಜಾಲ ತಾಣದಲ್ಲೂ ಭಾರೀ ಪ್ರಸಿದ್ಧಿ ಪಡೆದಿತ್ತು. ಆದರೂ ಭಾರೀ ಪ್ರಚಾರ ಸಿಕ್ಕಿರುವುದಂತೂ ಸತ್ಯ. ಜನರು ಈ ರೀತಿಯ ಹಣದಾಹಿ ವಸ್ತುಗಳು ಹಾಗೂ ಸುಳ್ಳಿನ ಮಹಲು ಕಟ್ಟುವವರನ್ನು ಎಚ್ಚರಿಕೆಯಿಂದ ದೂರ ಇಡಬೇಕಿದೆ. ಇದೀಗ ಪತಂಜಲಿ ಸಂಸ್ಥೆಯ ಬಣ್ಣ ಬಯಲಾಗಿದೆ.

Also Read: ವಿವಾದಾತ್ಮಕ ಪತಂಜಲಿ ಔಷಧಿಯನ್ನು ನಿಷೇಧಿಸಿದ ಮಹಾರಾಷ್ಟ್ರ

Tags: ಕರೋನಾಕರೋನಿಲ್ಪತಂಜಲಿಬಾಬಾ ರಾಮದೇವ್‌
Previous Post

ಮುನಿಸಿಕೊಂಡ ವರುಣದೇವ: ಕೊಡಗಿನಲ್ಲಿ ಮತ್ತೆ ಪ್ರವಾಹ ಭೀತಿ

Next Post

ಕೇರಳ: ಕರಿಪುರ್ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿದ ವಿಮಾನ

Related Posts

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ
Top Story

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

by ಪ್ರತಿಧ್ವನಿ
December 18, 2025
0

ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು( Bhagavad Gita) ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು...

Read moreDetails
ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

December 17, 2025

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್..

December 17, 2025
Next Post
ಕೇರಳ: ಕರಿಪುರ್ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿದ ವಿಮಾನ

ಕೇರಳ: ಕರಿಪುರ್ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿದ ವಿಮಾನ

Please login to join discussion

Recent News

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ
Top Story

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada