Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹೇಮಂತ್ ಸೊರೇನ್ ಗೆಲುವಿನ ಹಿಂದಿತ್ತು ಬ್ಯಾಕ್ ರೂಂ ಹುಡುಗರ ಶ್ರಮ!

ಹೇಮಂತ್ ಸೊರೇನ್ ಗೆಲುವಿನ ಹಿಂದಿತ್ತು ಬ್ಯಾಕ್ ರೂಂ ಹುಡುಗರ ಶ್ರಮ!
ಹೇಮಂತ್ ಸೊರೇನ್ ಗೆಲುವಿನ ಹಿಂದಿತ್ತು ಬ್ಯಾಕ್ ರೂಂ ಹುಡುಗರ ಶ್ರಮ!

December 24, 2019
Share on FacebookShare on Twitter

ಜಾರ್ಖಂಡ್ ನಲ್ಲಿ ನಡೆದ ಸಂಘರ್ಷ ಯಾತ್ರೆಯು ಹೇಮಂತ್‌ ಸೊರೇನ್ ಅವರನ್ನು ಮುನ್ನೆಲೆಗೆ ತಂದು ಉತ್ತಮ ನಾಯಕನಾಗಿಸುವುದರಲ್ಲಿ ತಂಡದ ಪ್ರಯತ್ನ ಸಾಕಷ್ಟು ಕೆಲಸ ಮಾಡಿ ಯಶಸ್ವಿಯೂ ಆಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಪ್ರಧಾನಿ MODI ಮತ್ತು ಅದಾನಿ ನಡುವಿನ ಸಂಬಂಧ ಏನು? ಪ್ರಶ್ನಿಸುವುದನ್ನು ನಾನು ನಿಲ್ಲಿಸಲ್ಲ: Rahul Gandhi

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ಜೆಎಂಎಂನ ಜನಪ್ರಿಯತೆ ಹೆಚ್ಚಾಗಲು ಹೇಮಂತ್ ಸೊರೇನ್ ಅವರ ಪಾತ್ರ ಪ್ರಮುಖವಾಗಿದೆ. ಅವರಷ್ಟೇ ಪ್ರಮುಖ ಪಾತ್ರ ವಹಿಸಿದವರೆಂದರೆ ಅವರ ಬೆನ್ನಿಗೆ ನಿಂತಿದ್ದ ಪರಿಣತರು ಮತ್ತು ಯುವಕರ ಪಡೆ. ಇವರೆಲ್ಲರೂ ಸೇರಿಕೊಂಡು 2018 ರಿಂದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ಹೇಮಂತ್ ಸೊರೇನ್ ಅವರ ಕೈಬಲಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೆಹಲಿ ಮೂಲದ 12 ಯುವಕರ ಪಡೆಯು 2018 ರ ಮಾರ್ಚ್ ನಿಂದ ಹೇಮಂತ್ ಸೊರೇನ್ ರನ್ನು ಪ್ರೊಜೆಕ್ಟ್ ಮಾಡಲು ಆರಂಭಿಸಿತು. ಸೊರೇನ್ ಅವರನ್ನು ಸಾರ್ವಜನಿಕ ನಾಯಕರನ್ನಾಗಿ ಮಾಡುವುದು ಈ ತಂಡದ ಉದ್ದೇಶವಾಗಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ, ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಗಳಲ್ಲಿ ಸೊರೇನ್ ಅವರನ್ನು ಮುನ್ನಲೆಗೆ ತರುವಲ್ಲಿ ತಂಡವು ಯಶಸ್ವಿಯಾಗಿದೆ.

ಈ ತಂಡದಲ್ಲಿ ಸಂವಹನ ಮತ್ತು ಸಲಹಾ ತಜ್ಞರಿದ್ದು, ಆಕ್ಸ್ ಫರ್ಡ್, ಸಸೆಕ್ಸ್, ಎಸೆಕ್ಸ್ (ವಿಶ್ವವಿದ್ಯಾಲಯಗಳು) ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ನಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಯುವಕರು ಈ ತಂಡದಲ್ಲಿದ್ದರು. ಈ ತಂಡವು ಸಾರ್ವಜನಿಕ ನೀತಿ ನಿರೂಪಣೆ, ಸಂವಹನ ರೂಪಿಸುವಲ್ಲಿ ನಿಷ್ಣಾತವಾಗಿದೆ. ಈ ಮೂಲಕ ತಂಡವು ರಾಜ್ಯಾದ್ಯಂತ ತಿರುಗಾಟ ನಡೆಸಿ ಅಲ್ಲಿನ ಜನಸಾಮಾನ್ಯರ ಸ್ಥಿತಿಗತಿಯನ್ನು ಆಮೂಲಾಗ್ರವಾಗಿ ಅಧ್ಯಯನ ನಡೆಸಿ ಅದಕ್ಕೆ ತಕ್ಕಂತೆ ವಿಚಾರಗಳನ್ನು ಮಂಡಿಸುವ ಸಾಮರ್ಥ್ಯವನ್ನು ಸೊರೇನ್ ಅವರಿಗೆ ತುಂಬುವ ಕೆಲಸ ಮಾಡಿತು. ಈ ಮೂಲಕ 360° ಸಂವಹನ ನಡೆಸುವುದು ಮತ್ತು ಸಂಘಟನಾ ಸಾಮರ್ಥ್ಯವನ್ನು ಬಲವರ್ಧನೆಗೊಳಿಸುವಲ್ಲಿ ಯಶಸ್ವಿಯಾಯಿತು.

ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಹರಿಸುವ ಮೂಲಕ ಹೇಮಂತ್‌ ಸೊರೇನ್‌ ಅವರನ್ನು ಜಾರ್ಖಂಡ್‌ನಾದ್ಯಂತದ ನಾಯಕನನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೆವು. ಸೊರೇನ್ ಅವರನ್ನು ಕೇವಲ ಬುಡಕಟ್ಟು ಜನಾಂಗದ ನಾಯಕನನ್ನಾಗಿ ಮಾತ್ರವಲ್ಲ, ವಿನಯಶೀಲತೆ ಮತ್ತು ಸ್ನೇಹಪರತೆಯಿಂದ ಜನಪರವಾದ ನಾಯಕನನ್ನಾಗಿ ರೂಪಿಸುವ ಮೂಲಕ ಮುಖ್ಯಮಂತ್ರಿಯಾಗಿದ್ದ ರಘುಬರ್‌ ದಾಸ್‌ರ ದುರಹಂಕಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಯುದ್ಧ ಸಾರುವಂತೆ ಸೊರೇನ್ ಅವರನ್ನು ತಯಾರು ಮಾಡಿತ್ತು ಈ ಗುಂಪು.

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜೆಎಂಎಂ ಕೈಗೊಂಡಿದ್ದ ಸಂಘರ್ಷ ಯಾತ್ರೆಯಲ್ಲಿ ಸೊರೇನ್ ಅವರನ್ನು ಇಡೀ ಜಾರ್ಖಂಡ್ ನ ನಾಯಕನನ್ನಾಗಿಸುವಲ್ಲಿ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿದ್ದ ಯುವಕರ ಪಡೆಯೇ ಸೊರೇನ್ ನಿರಾಯಸವಾಗಿ ಜಯ ಸಾಧಿಸಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಸೊರೇನ್ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಕಾರಣವಾಯಿತು.

ಇದನ್ನು ಒಪ್ಪಿಕೊಳ್ಳುವ ಜೆಎಂಎಂನ ವಕ್ತಾರರಾದ ಸುಪ್ರಿಯೋ ಭಟ್ಟಾಚಾರ್ಯ ಅವರು, ನಮಗೆ ಸಂಘರ್ಷ ಯಾತ್ರೆಯು ಒಂದು ನಿರ್ಣಾಯಕ ಹಂತವಾಗಿತ್ತು. ಈ ಸಂಘರ್ಷ ಯಾತ್ರೆಯು ಜಾರ್ಖಂಡ್ ರಾಜ್ಯಾದ್ಯಂತ 2018 ರ ಸೆಪ್ಟಂಬರ್ ನಿಂದ 2019 ರ ಮಾರ್ಚ್ ವರೆಗೆ ಐದು ಹಂತಗಳಲ್ಲಿ ನಡೆಯಿತು. ಇದರಿಂದ ರಾಜ್ಯದ ಮೂಲೆಮೂಲೆಗಳಲ್ಲಿ ಹೇಮಂತ್ ಸೊರೇನ್ ಅವರನ್ನು ಪಕ್ಷದ ನಾಯಕನನ್ನಾಗಿ ಬಿಂಬಿಸಲು ಸಾಧ್ಯವಾಯಿತು.

ಈ ಯುವಕರ ಪಡೆಯು ಸಾಮಾಜಿಕ ಮಾಧ್ಯಮದಲ್ಲಿ ಪಕ್ಷದ ಉಪಸ್ಥಿತಿಯನ್ನು ಸಾಕಾರಗೊಳಿಸಿತಲ್ಲದೇ ಅದು ಆಕ್ಟೀವ್‌ ಆಗಿ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ರಾಜ್ಯದ ಯುವ ಮತದಾರರನ್ನು ತಲುಪಲು ಸಾಧ್ಯವಾಗಿದೆ.

ಸಂಘರ್ಷ ಯಾತ್ರೆಯಲ್ಲಿ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದರೆ, ಅದಕ್ಕೆ ಪರಿಹಾರ ನೀಡುವುದರ ಕುರಿತು ಚರ್ಚೆ ನಡೆಯುತ್ತಿತ್ತು. ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ನಲ್ಲಿ ಸಾರ್ವಜನಿಕ ಸಭೆಗಳು ಮತ್ತು ರ್ಯಾಲಿಗಳು ನೇರ ಪ್ರಸಾರವಾಗುತ್ತಿದ್ದವು. ರಾಜ್ಯ ನೀತಿಗಳ ಕುರಿತು ಪ್ರಭಾವಿತ ಮಂದಿಯ ಜೊತೆಗೆ ಎಲ್ಲೆಡೆ ಪ್ರತಿದಿನ ಸಂಜೆ ಸಭೆಗಳು ನಡೆಯುತ್ತಿದ್ದವು. ಅಲ್ಲದೆ, ಯುವ ಸಂವಾದದ ಮೂಲಕ ಯುವಕರೊಂದಿಗೆ ಸಭೆಗಳು ನಡೆಯುತ್ತಿದ್ದವು.

ಕಳೆದ ಲೋಕಸಭಾ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಎಂಎಂ-ಆರ್‌ಜೆಡಿ-ಜೆವಿಎಂ ಮೈತ್ರಿಕೂಟದ ಕೇವಲ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಯಿತು. ಈ ಹೊಡೆತಕ್ಕೆ ಯುವಕರ ಪಡೆ ತಕ್ಕ ಪರಿಹಾರವನ್ನೂ ಕಂಡುಕೊಂಡಿತು. ಈ ಮೂಲಕ ಹೇಮಥ್ ಸೊರೇನ್ ಅವರ ಭಾಷಣಗಳನ್ನು ಸಾರ್ವಜನಿಕ ಪರವಾದ ರೀತಿಯಲ್ಲಿ ಸಿದ್ಧಪಡಿಸಿ ಅವುಗಳನ್ನು ಸಾರ್ವಜನಿಕರ ಮನಸಿಗೆ ನಾಟುವಂತೆ ಮಾಡಿದ್ದರಲ್ಲಿ ಈ ಯುವಕರ ಪಡೆ ಯಶಸ್ವಿಯಾಗಿದೆ. ಈ ಕಾರಣದಿಂದಾಗಿಯೇ ಹೇಮಂತ್ ಸೊರೇನ್ ಜನನಾಯಕನಾಗಿ ಬೆಳೆದರು.

ಲೋಕಸಭೆ ಚುನಾವಣೆ ಆದ ಬಳಿಕ ಪ್ರಸ್ತಾಪವಾಗುತ್ತಿದ್ದ ಪ್ರತಿಯೊಂದು ಸಮಸ್ಯೆಗೂ ದೂರದೃಷ್ಟಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿತ್ತು. ಪರಿಹಾರಗಳನ್ನು ರೂಪಿಸುವಲ್ಲಿ ಈ ಬ್ಯಾಕ್ ರೂಂ ಟೀಂ ಪ್ರಮುಖ ಪಾತ್ರ ವಹಿಸಿತ್ತು.

ಲೋಕಸಭೆ ಚುನಾವಣೆ ನಂತರ ಪ್ರತಿಯೊಂದು ಸಂವಹನದಲ್ಲಿ, ನಾವು ಪ್ರತಿಯೊಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು, ಸಮಸ್ಯೆಗಳಿಗೆ ಪರಿಹಾರ ಏನೆಂಬುದನ್ನು ಉಲ್ಲೇಖಿಸಿದ್ದೆವು. ಉದಾಹರಣೆಗೆ ಪಿಎಂ ಆವಾಸ್‌ ಯೋಜನೆ ಜನರಿಗೆ ಸರ್ಮಥವಾದುದಲ್ಲ ಎಂದು ಉಲ್ಲೇಖಿಸಿದರೆ, ಹೇಮಂತ್‌ ಅವರು ವಸತಿ ವಂಚಿತರಿಗೆ 3 ಲಕ್ಷ ರೂಪಾಯಿ ಒಳಗೊಂಡ ಮನೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡುತ್ತಿದ್ದರು. ಇದರ ಜೊತೆಗೆ ನಾವು 10 ಅಂಶಗಳ ಕಾರ್ಯಸೂಚಿಗಳನ್ನು ಸಹ ಸಿದ್ಧಪಡಿಸಿದ್ದೆವು. ಈ ಯಾತ್ರೆಯು 2019 ಆಗಸ್ಟ್‌ ಅಂತ್ಯದಿಂದ, ಅಕ್ಟೋಬರ್‌ವರೆಗೆ ರಾಂಚಿಯಲ್ಲಿ ಬೃಹತ್‌ ಬದ್ಲಾವ್‌ ರ್ಯಾಲಿಯೊಂದಿಗೆ ಕೊನೆಗೊಂಡಿತು. ಇವೆಲ್ಲವೂ ಸಂಪೂರ್ಣ ಸಂವಹನ ವಿಧಾನದಿಂದ, ನಮ್ರತೆ, ಸರಳತೆ, ಎಲ್ಲರೊಂದಿಗೆ ಬೆರೆಯುವ ಸಾಮರ್ಥ್ಯದಿಂದ, ಎಲ್ಲರ ಸಮಸ್ಯೆಗಳನ್ನು ಹಂಚಿಕೊಂಡು ಮತ್ತು ಸ್ಥಳೀಯವಾಗಿ, ನೀತಿ-ಸಂಬಂಧಿತವಾಗಿ ಮಾನವೀಯ ದೃಷ್ಟಿಯಿಂದ ಕಾಣವುದಕ್ಕೆ ಈ ಯಾತ್ರೆ ದಾರಿ ಮಾಡಿ ಕೊಟ್ಟಿತು ಎನ್ನುತ್ತಾರೆ ಯುವಪಡೆಯ ಓರ್ವ ಸದಸ್ಯ.

ಜೆಎಂಎಂನ ಸಾಮಾಜಿಕ ಮಾಧ್ಯದಲ್ಲಿ ತೊಡಗಲು 2018ರಲ್ಲಿ ಸ್ವಯಂಸೇವಕ ತಂಡವನ್ನು ರಚಿಸಿ ತರಬೇತಿ ನೀಡಲಾಯಿತು. ಮತ್ತು ಆಧಾರಗಳನ್ನಿಟ್ಟುಕೊಂಡು ಜಿಲ್ಲೆಗಳಲ್ಲಿನ ಸ್ಥಳೀಯ ಬಿಜೆಪಿ ಸಂಘಟನೆಗಳನ್ನು ಎದುರಿಸಲು ಸಾಧ್ಯವಾಯಿತು.

ಈ ಯುವಪಡೆಯ ಪ್ರೇರಣೆಯಿಂದಲೇ ಹೇಮಂತ್ ಸೊರೇನ್ ಅವರು 28 ದಿನಗಳಲ್ಲಿ 165 ರ್ಯಾಲಿಗಳನ್ನು ರಾಜ್ಯಾದ್ಯಂತ ಮಾಡಿದರು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಎರಡೆರಡು ಬಾರಿ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು ಮತ್ತು ರ್ಯಾಲಿಯ ನಂತರದಲ್ಲಿ ಹಲವಾರು ಸ್ಥಳೀಯ ಮಟ್ಟದ ಸಭೆಗಳನ್ನು ನಡೆಸಲಾಗಿತ್ತು.

ತಂಡವು ಹಲವಾರು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ, ಕಾರ್ಯಕರ್ತರೊಂದಿಗೆ, ಸರ್ಕಾರಿ, ಕಾರ್ಮಿಕ ಸಂಘಗಳೊಂದಿಗೆ ಮತ್ತು ಇನ್ನಿತರ ಸಂಘಗಳೊಂದಿಗೆ ಸಭೆಗಳನ್ನು ಆಯೋಜಿಸಿದ್ದೆವು. ಅವರ ಬೇಡಿಕೆಗಳನ್ನೆಲ್ಲಾ ಪಟ್ಟಿ ಮಾಡಿ, ಪರಿಷ್ಕರಿಸಿ, ಚರ್ಚಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಜೆಎಂಎಂನ ನಾಯಕರ ಭಾಷಣಗಳು ಇಡೀ ಚುನಾವಣಾ ಪ್ರಚಾರದಲ್ಲಿ ಹೇಮಂತ್ ಸೊರೇನ್ ಅವರ ಭಾಷಣಗಳು ಜಾರ್ಖಂಡ್‌ನ ಸ್ಥಳೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿದ್ದದ್ದು ಜೆಎಂಎಂಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿತು.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಸಿದ್ದರಾಮಯ್ಯರನ್ನು ಸೇಫ್​ ಮಾಡಲು ಬಿಡುಗಡೆಯಾಗಿದೆ ಈ ಮೊದಲ ಪಟ್ಟಿ : ಎಐಸಿಸಿ ಪ್ಲಾನ್​ ಏನು ಗೊತ್ತೇ..?
Top Story

ಸಿದ್ದರಾಮಯ್ಯರನ್ನು ಸೇಫ್​ ಮಾಡಲು ಬಿಡುಗಡೆಯಾಗಿದೆ ಈ ಮೊದಲ ಪಟ್ಟಿ : ಎಐಸಿಸಿ ಪ್ಲಾನ್​ ಏನು ಗೊತ್ತೇ..?

by ಮಂಜುನಾಥ ಬಿ
March 25, 2023
ಇನ್ನೂ ಕ್ಷೇತ್ರದ ಗುಟ್ಟು ಬಿಟ್ಟುಕೊಡದ ಮಾಜಿ ಸಿಎಂ ಸಿದ್ದರಾಮಯ್ಯ..! : Siddaramaiah Still Not Giving Up The Secret Of The Constituency
Top Story

ಇನ್ನೂ ಕ್ಷೇತ್ರದ ಗುಟ್ಟು ಬಿಟ್ಟುಕೊಡದ ಮಾಜಿ ಸಿಎಂ ಸಿದ್ದರಾಮಯ್ಯ..! : Siddaramaiah Still Not Giving Up The Secret Of The Constituency

by ಪ್ರತಿಧ್ವನಿ
March 21, 2023
ರಾಹುಲ್ ಗಾಂಧಿ ಭೇಟಿ : ಯಾವುದೇ ಪರಿಣಾಮ ಬೀರಿಲ್ಲ..! Rahul Gandhi’s visit: No effect..!
Top Story

ರಾಹುಲ್ ಗಾಂಧಿ ಭೇಟಿ : ಯಾವುದೇ ಪರಿಣಾಮ ಬೀರಿಲ್ಲ..! Rahul Gandhi’s visit: No effect..!

by ಪ್ರತಿಧ್ವನಿ
March 21, 2023
PRIYANK GANDHI : ಮೋದಿ ಸರ್ಕಾರ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಮುಗಿಸಲು ಮುಂದಾಗಿದೆ..! #Pratidhvani
ಇದೀಗ

PRIYANK GANDHI : ಮೋದಿ ಸರ್ಕಾರ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಮುಗಿಸಲು ಮುಂದಾಗಿದೆ..! #Pratidhvani

by ಪ್ರತಿಧ್ವನಿ
March 26, 2023
ಒಕ್ಕಲಿಗ-ಮುಸ್ಲಿಮರನ್ನು ಎತ್ತಿ ಕಟ್ಟುವ ಹುನ್ನಾರವೇ? ನಟ ಕಿಶೋರ್‌ ಪ್ರಶ್ನೆ
Top Story

ಒಕ್ಕಲಿಗ-ಮುಸ್ಲಿಮರನ್ನು ಎತ್ತಿ ಕಟ್ಟುವ ಹುನ್ನಾರವೇ? ನಟ ಕಿಶೋರ್‌ ಪ್ರಶ್ನೆ

by ಪ್ರತಿಧ್ವನಿ
March 22, 2023
Next Post
ಮರಾಠಿಗರನ್ನು ತೃಪ್ತಿಪಡಿಸಲು ಬೆಳಗಾವಿ ವಿವಾದ ಕೆದಕಿದ ಉದ್ಧವ್ ಠಾಕ್ರೆ

ಮರಾಠಿಗರನ್ನು ತೃಪ್ತಿಪಡಿಸಲು ಬೆಳಗಾವಿ ವಿವಾದ ಕೆದಕಿದ ಉದ್ಧವ್ ಠಾಕ್ರೆ

ಸರಣಿ ತಪ್ಪುಗಳ ಮೂಲಕ ಹಿಮ್ಮುಖ ಚಲನೆ ಆರಂಭಿಸಿತೇ ಮೋದಿ-ಶಾ ಜೋಡಿ?

ಸರಣಿ ತಪ್ಪುಗಳ ಮೂಲಕ ಹಿಮ್ಮುಖ ಚಲನೆ ಆರಂಭಿಸಿತೇ ಮೋದಿ-ಶಾ ಜೋಡಿ?

NRC ಗುಮ್ಮಬಿಟ್ಟು ಚೆಲ್ಲಾಟವಾಡಿದ ಬಿಜೆಪಿ!

NRC ಗುಮ್ಮಬಿಟ್ಟು ಚೆಲ್ಲಾಟವಾಡಿದ ಬಿಜೆಪಿ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist